ಒಂದು ದಿನ ಸಂಜೆಯ ಸಮಯ

ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]

Read More

ಒಂದುಗೂಡುವಾ ಮುಂದೆ ಸಾಗುವಾ

ಒಂದುಗೂಡುವಾ ಮುಂದೆ ಸಾಗುವಾ ಬಂಧು ಭಾವದಿಂದ ಸೇರುವಾ ಹಿಂದುಭೂಮಿ ಸೇವೆ ಗೈಯ್ಯುವಾ || ಪ || ಅಂದು ತುಂಬಿ ತುಳುಕುತಿದ್ದ ಧನ ಧಾನ್ಯವೆತ್ತ ಸಾಗಿದೆ ಇಂದು ಜನತೆ ಅರ್ಧ ನಗ್ನವಾಗಿ ಬಡವಾಗಿದೆ ದುಡಿದು ಬೇಗ ಫಲವ ಗಳಿಸುವಾ ತಾಯಿನಾಡನು ಸಮೃದ್ಧಿಗೊಳಿಸುವಾ || 1 || ವಿಮಲ ಶೀಲ ದಿವ್ಯ ವಿದ್ಯೆ ಕಲೆಗಳೆಲ್ಲಿ ಪೋದವೂ ? ಭ್ರಮೆಯ ಹೊಂದಿ ಪರರ ಬಲೆಗೆ ಸಿಲುಕಿ ದೀನರಾದೆವೂ ಮರಳಿ ಜ್ಞಾನವನ್ನು ಪಡೆಯುವಾ ನಾವ್ ಧರೆಯ ಜನಕೆ ನಯದಿ ನೀಡುವಾ || 2 […]

Read More

ಏಳಿ ಎದ್ದೇಳಿ ನಿಲ್ಲದಿರಿ ಗುರಿಮುಟ್ಟುವ ತನಕ

ಏಳಿ ಎದ್ದೇಳಿ, ನಿಲ್ಲದಿರಿ ಗುರಿಮುಟ್ಟುವ ತನಕ ಏಳಿ ಎದ್ದೇಳಿ || ಪ || ಭಾರತಮಾತೆಯ ಪ್ರೀತಿಯ ಮಕ್ಕಳು ನಿದ್ರಾಪರವಶರಾಗಿಹರು ನಿದ್ರಿಸುತಿರುವೀ ಬಂಧುವನೆಲ್ಲಾ ನಾವೆ ಎಚ್ಚರಗೊಳಿಸಲೇಬೇಕು || 1 || ಮಾತೃಭೂಮಿಯ, ದೇಶಧರ್ಮದ ಭ್ರಾತೃಭಾವವ ಕ್ಷಾತ್ರ ತೇಜವ ಮರೆತು ನಿದ್ರಿಸುತಿರುವೀ ಬಂಧುವ ನಾವೇ ಎಚ್ಚರಗೊಳಿಸಲೇಬೇಕು || 2 || ಪ್ರಾಂತ ಭೇದದಿ, ಪಕ್ಷ ಭೇದದಿ, ಜಾತಿ ಭೇದದಿ ಭಾಷಾ ಭೇದದಿ ಜಗಳವನಾಡುತಲಿರುವೀ ಜನರನು ನಾವೇ ಎಚ್ಚರಗೊಳಿಸಲೇಬೇಕು || 3 || ನಿದ್ದೆಯ ಮಾಡುವ, ಸಮಯವಿದಲ್ಲವು ಜಾಗೃತಿಗೈಯುವ ಪರ್ವಕಾಲವಿದು ಹಿಂದುಬಂಧುಗಳೆಲ್ಲರನು […]

Read More

ಏಳಿ ಎದ್ದೇಳಿ ಅಮೃತಾತ್ಮರಾದವರೆ

ಏಳಿ ಎದ್ದೇಳಿ ಅಮೃತಾತ್ಮರಾದವರೆ || ಪ || ಏಳಿ ಜಾಗೃತಗೊಳ್ಳಿ ಚೈತನ್ಯಶಾಲಿಗಳೆ || ಅ.ಪ || ಹಿಮಗಿರಿಯ ಮಡುವಿನಲಿ ಘನವಿಷದ ಹೆಬ್ಬಾವು ಬುಸುಗುಟ್ಟಿ ಬಾಯ್ಬಿಟ್ಟು ತಲೆ ಎತ್ತಿದೆ ಕಾಶ್ಮೀರ ಸರಹದ್ದಿನಲ್ಲಿ ಕಾರ್ಕೋಟಕವು ವಿಷಕಾರುತಾ ತಲೆಯ ಮೇಲೆತ್ತಿದೆ ಆ ಫಣಿಗಳ ಫಣಿ ತುಳಿದು ನರ್ತನವನಾಡೋಣ ಕಾಳಿಂದ ಮರ್ದನನ ಕುಲಜರಾವು || 1 || ಭರತವಂಶದ ಪುತ್ರರಾವು ಕೇಸರಿ ಇರಲಿ ಹಲ್ಲುಗಳನೆಣಿಸೇವು ಭಯವಿಲ್ಲದೆ ವಿಷದ ಲಡ್ಡುಗೆಯನ್ನು ತಿಂದು ಕರಗಿಸಿದಂತ ಭೀಮಬಲರಾವೆನ್ನಿ ಭಯವಿಲ್ಲದೆ ಬನ್ನಿ ಹೋರಾಟಕ್ಕೆ ದೇಶದೇಳ್ಗೆಯ ನಡೆಸಿ ನಿತ್ಯಕರ್ಮದ ಚಕ್ರ […]

Read More

ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ

ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಕಲಿಗಳೇ ನೆತ್ತರೋಕುಳಿಯಲ್ಲಿ ನಾಟ್ಯವಾಡೆ ತಾಯೆದೆಯ ರಂಗದಲಿ ಬಾಳನೆತ್ತವನಾಡಿ ಹಗೆಯ ತಲೆ ನಗ್ಗೊತ್ತಿ ಮೆಟ್ಟಲಿಂದೇ || ಪ || ಎತ್ತಿಹಿಡಿ ಹೊಸಕಹಳೆ ಒತ್ತೊತ್ತಿ ಊದಿಬಿಡಿ ನಾಡನಾಡಿಯನೆಲ್ಲ ಮಿಡಿಯುವಂತೆ ನೂತ್ನ ಚೇತನ ವಹ್ನಿ ಪ್ರಜ್ವಲಿಸಿ ಪಸರಿಸಲಿ ಸತ್ತಮನ ಮೈವೊದರಿ ಸಿಡಿಯುವಂತೆ || 1 || ವೈರಿ ಸಾಗರವಿರಲಿ ನೀನಗಸ್ತ್ಯನೆ ಆಗು ಆಪೋಶನಂ ಗೈಯ್ಯೆ ಚುಳಕದಲ್ಲೇ ತೂಗು ಪುರುಷವನಿಂದೆ ಹೆರರ ದಬ್ಬಾಳಿಕೆಗೆ ಏಣಿಗಣ್ಚಾಸಿರಂ ಉರುಳಲಿಲ್ಲೇ || 2 || ಹಿಮವಂತನುನ್ನತಿಯ ತುಂಗಶೃಂಗದ ಮುಕುಟ ಸಿಡಿದೊಡೆದು ಹುಡಿಗೊಂಬ ಕಾಲವಿಂದು […]

Read More

ಏ ಹಿಂದು ವೀರಾ ಭಿನ್ನಭಾವ ಬಿಟ್ಟು ಬಾರಯ್ಯ

ಏ ಹಿಂದು ವೀರಾ ! ಭಿನ್ನ ಭಾವ ಬಿಟ್ಟು ಬಾರಯ್ಯ ನೀ ಭಾರತಾಂಬೆ ಸೇವೆಗಾಗಿ ಕೂಡಿ ಸೇರಯ್ಯ || ಪ || ಹಿಂದುಜನತೆ ಸಂಘಟನೆಯೊಳಿರುವುದು ಶಕ್ತಿ ಆ ಶಕ್ತಿಯಿಂದ ಲಭಿಸುವುದು ಬಂಧವಿಮುಕ್ತಿ ಆ ಶಕ್ತಿಗಾಗಿ ಹಗಲಿರುಳು ದುಡಿಯಬೇಕಯ್ಯ ನೀ ಅದಕೆ ಸಂಘಕಿಂದು ಬಂದು ಸೇರಬೇಕಯ್ಯ || 1 || ಹಕ್ಕ ಬುಕ್ಕ ವೀರರಿಂದ ಸ್ಫೂರ್ತಿಯ ಗಳಿಸಿ ಪ್ರತಾಪ ಪೃಥ್ವಿರಾಜರಿಂದ ಧೈರ್ಯವ ಗಳಿಸಿ ನೀ ಛತ್ರಸಾಲ ಶಿವರ ಕೀರ್ತಿ ಉಳಿಸಬೇಕಯ್ಯ ಸ್ವಾತಂತ್ರ್ಯ ಸಮರ ಸ್ಮರಣೆಯ ನೀ ಮಾಡಬೇಕಯ್ಯ || […]

Read More

ಎದ್ದಿದೆ ಮೇಲೆದ್ದಿದೆ

ಎದ್ದಿದೆ ಮೇಲೆದ್ದಿದೆ ಹಿಂದುವಿನಭಿಮಾನದ ಅಲೆ ನಭಕೆ ಬಿದ್ದಿದೆ ಮುಗ್ಗರಿಸಿದೆ ರಾಷ್ಟ್ರದ ಅಪಮಾನದ ಹೊರೆ ನೆಲಕೆ || ಪ || ಧ್ಯೇಯನಿಷ್ಠ ದುಡಿವ ಪಡೆ ತಾಯ ಮೊಗದಿ ನಲಿವ ನಗೆ ಮುಕ್ತಳೀಗ ಮರೆತು ಆಕೆ ನೂರು ನೋವು ಚಿಂತೆ ಜನನಿಯಾಕೆ ಭುವನಕೆ ಪ್ರೀತಿಧಾರೆ ಲೋಕಕೆ ಅವಳೆ ಜ್ಞಾನದೀವಿಗೆ ಬಯಸಿ ವಿಶ್ವದೇಳಿಗೆ || 1 || ವೇದಘೋಷ ಮೊರೆದ ನೆಲ ಸರ್ವಹಿತವ ಮೆರೆದ ಬಲ ಇತಿಹಾಸವು ಮರುಕಳಿಸಿದೆ ಬೆಳ್ಳಿ ಬೆಳಕು ಚೆಲ್ಲಿದೆ ಚಾಣಕ್ಯರ ದರ್ಶನ ಅರಿಗಳಿಗದು ತಲ್ಲಣ ವಿಜಯವೊಂದೇ ಚಿಂತನ […]

Read More

ಎತ್ತ ಹೋದರು ನನ್ನ ತೃಷೆ ನೀಗದಾಯಿತು

ಎತ್ತ ಹೋದರು ನನ್ನ ತೃಷೆ ನೀಗದಾಯಿತು ಬತ್ತದಂಥ ಸಂಘಸುಧೆ ನನ್ನದಾಯಿತು ಕೊನೆಗು ನನ್ನದಾಯಿತು || ಪ || ಮಧುರ ಮಧುರ ಅದರ ಪಾನ ಅಮೃತ ಸಮಾನ ಇದರ ಸ್ಫೂರ್ತಿ ನಮಗೆ ಎಂದು ನಿತ್ಯ ನೂತನ ಬೆಳಕು ಮೂಡಿತು ಕಣ್ಣು ತೆರೆಯಿತು ದೃಷ್ಟಿ ಬೆಳೆಯಿತು ಬತ್ತದಂಥ…|| 1 || ನಾನು ಮಾತ್ರ ಇದನು ಕುಡಿದು ಸ್ವಾರ್ಥಿಯಾಗೆನು ತೃಪ್ತಿ ಹೊಂದಿ ದೇವನಲ್ಲಿ ಮುಕ್ತಿ ಬೇಡೆನು ಜಾಡ್ಯ ಕಳೆಯಿತು ಮೌಢ್ಯ ಸರಿಯಿತು ನಿಚ್ಚಳಾಯಿತು ಬತ್ತದಂಥ… || 2 || ತಿಲಕ ಧರಿಸಿ […]

Read More

ಎಂಥ ಬಲು ಸೊಬಗಿನದು ನಮ್ಮ ದೇಶ

ಎಂಥ ಬಲು ಸೊಬಗಿನದು ನಮ್ಮ ದೇಶ ! ಈ ನಮ್ಮ ತಾಯ್ನೆಲ                              || ಪ || ಉತ್ತರಕೆ ನೋಡಲ್ಲಿ ಯಾರಿಹನು? ಕಿರೀಟದಂತೆ ಶೋಭಿಸುವ ಹಿಮರಾಜ ತಾನಿಹನು ದಕ್ಷಿಣದ ಕಡೆ ನೋಡಲಲ್ಲಿ, ವಿಶಾಲ ಸಾಗರ ತಾನು ಮಾತೆಯ ಪಾದವನ್ನು ತೊಳೆಯುತಾಲಿರುವಾ, ವೈಭವದ ನಾಡು                        […]

Read More

ಉದಯವಾಗಲಿ ನಮ್ಮ ವೈಭವದ ಸಿರಿನಾಡು

ಉದಯವಾಗಲಿ ನಮ್ಮ ವೈಭವದ ಸಿರಿನಾಡು ಮುದದಿ ಸೌಭಾಗ್ಯದಾ ರಾಮರಾಜ್ಯದ ಬೀಡು || ಪ || ಪರಿಪರಿಯ ವಿಜ್ಞಾನ ಫಲಪುಷ್ಪ ಧನ ಧಾನ್ಯ ಆರೋಗ್ಯ ದೀರ್ಘಾಯು ಸತ್ಯಶಾಂತಿಯ ನಾಡು ವರಶಿಲ್ಪ ಚಿತ್ರಕಲೆ ಸಾಹಿತ್ಯ ಸಂಗೀತ ನೆಲೆ ನಿರುತವಧ್ಯಾತ್ಮ ಸುಖ ಸೌಖ್ಯದಾ ನೆಲೆವೀಡು || 1 || ತ್ಯಾಗಮಯ ಜೀವನವೇ ರಾಗಾರುಣೋದಯ ಸೌಗುಣ್ಯ ತಂಗಾಳಿ ತೀಡುತಿಹ ಶುಭಕಾಲ ಬೇಗ ಮುಸುಕುವ ನಿಶೆಯ ತೆರದೊಳವಿವೇಕವ ನೀಗಾಡಿ ಸುಜ್ಞಾನ ರವಿಯ ಮೂಡುವ ಕಾಲ || 2 || ಗೀತೆಯೆಂಬಾಮೃತವನುಣಿಸಿದಾ ಮಾಧವನ ಇತಿಹಾಸ ಬೆಳಗಿದಾ […]

Read More