ನಿಶೆಯು ಸರಿದಿದೆ ಜಡತೆ ನೀಗಿದೆ

ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ || ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 || ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 || ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ ಸ್ವಾರ್ಥ ಸುಳಿಯದ […]

Read More

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು

ಜಗತ್ತಿಗೆ ಜಗದ್ಗುರು ಅನಿಸಿಕೊಂಡ ಭೂಮಿ ಇದು ರಾಮಾ ಕೃಷ್ಣ ಇಲ್ಲಿ ಅವತಾರ ತಾಳಿ ಹೋಗ್ಯಾರ್‍ರೀ| ಅವತಾರ ತಾಳಿ ಹೋಗ್ಯಾರ್‍ರೀ ಸ್ನೇಹ ತುಂಬಿದ್ ಆಚರಣೆ ಸಂಪದ್ಭರಿತ ದೇಶ ನಮದು ಮುತ್ತು ರತ್ನ ಬಜಾರದಾಗ ಮಾರುತ್ತಿದ್ದರ್‍ರೀ || ಪ || ಹೂಣ ಶಕ ಮೊಘಲರು ಡಚ್ ಫ್ರೆಂಚ್ ಆ೦ಗ್ಲಾರು ದೇಶ ಕೋಶ ನಾಶ ಮಾಡಿ ಜೀವ ತಗದಾರ್‍ರೀ| ನಮ್ಮ ಜೀವ ತಗದಾರ್‍ರೀ ಲಕ್ಷ ಲಕ್ಷ ಜನ ತಮ್ಮ ಮನಿ ಮಠ ಸುಟಗೊಂಡ್ರು ಸ್ವಾತಂತ್ರ ಇದು ನಮಗೆ ಹಂಗೆ ಸಿಕ್ಕಿಲ್ಲರ್‍ರೀ || […]

Read More

ಮಾಘ ಮಾಸದ ಚಳಿಯದು

ಮಾಘ ಮಾಸದ ಚಳಿಯದು ಮಾಗುತ ಬರುತಿದೆ ಸಂಕ್ರಮಣ ಉತ್ತರದೆಡೆಗೆ ಅರುಣನ ಪಯಣ ಕಿರಣದ ಸಂಚಲನ ಇರುಳನು ಸರಿಸುತ ಬೆಳಕನು ಹರಿಸುತ ಜ್ಞಾನದ ಅನುರಣನ ವ್ಯಕ್ತಿ ವ್ಯಕ್ತಿಯೊಳು ಮೊಳಗಿದೆ ಗಾನ ಹಿಂದೂ ಜಾಗರಣ || ಪ || ಬೆಲ್ಲದ ಸಿಹಿಯೊಳು ಎಳ್ಳಿನ ಜಿಡ್ಡೊಳು ಅಡಗಿದೆ ಗೆಲ್ಲುವ ಜಿದ್ದು ಜ್ಯೋತಿರ್ವರ್ಷದ ವೇಗದಿ ಹರಡಿದೆ ರಾಷ್ಟ್ರ ಭಕ್ತಿಯ ಸದ್ದು ಧರ್ಮದ ರಕ್ಷೆಯೆ ರಾಷ್ಟ್ರ ರಕ್ಷೆಯು ಬಾ ಹಿಂದುವೆ ಸಿಡಿದೆದ್ದು ಶತ್ರುವಿನೆದೆಯನು ಸೀಳುವ ಛಲವಿರೆ ಭದ್ರವು ಸರಹದ್ದು || 1 || ತಾಯಿ […]

Read More

ವ್ರತವ ತೊಡುವ ಬನ್ನಿ

ವ್ರತವ ತೊಡುವ ಬನ್ನಿ ಸೇವಾ ವ್ರತವ ತೊಡುವ ಬನ್ನಿ || ಪ || ಹೃದಯ ಹೃದಯಕೆ ಬೆಸುಗೆಯ ಹಾಕುವ ಅಸ್ಥಿರ ಬದುಕನು ಸಾರ್ಥಕಗೊಳಿಸುವ ನೊಂದು ಬೆಂದವರ ತೊಂದರೆ ನೀಗುವ ಎಲ್ಲೆಡೆ ಸ್ನೇಹದ ಲತೆಯನು ಬೆಳೆಸುವ || 1 || ಉನ್ನತ ಪದವಿಯ ಗೊಂದಲವಿಲ್ಲ ಧನಕನಕವೇ ಇಲ್ಲಿ ಪ್ರಧಾನವಲ್ಲ ಜಾತಿ ವರ್ಣವನು ಕೇಳುವುದಿಲ್ಲ ರೂಪಕೆ ಧೂಪವ ಹಾಕುವುದಿಲ್ಲ || 2 || ಅಂತರಂಗದಾ ಸಿರಿ ಹೊಂದಿರಬೇಕು ಅಂತರ ತೋರದ ಆಂತರ್ಯ ಬೇಕು ನಾನೆಂಬುದನು ಕಡೆಗಾಣ ಸಬೇಕು ತನುಮನದಲಿ ಬಲವುಕ್ಕಲೇ […]

Read More

ತಂದೆನಯ್ಯಾ ತಮ್ಮಾ ತಂದೆನಯ್ಯಾ

ತಂದೆನಯ್ಯಾ ತಮ್ಮಾ ತಂದೆನಯ್ಯಾ ಸ್ನೇಹದ ಹಸ್ತವ ಪ್ರೀತಿಯ ಹೃದಯವ || ಪ || ಮಾರು ದೂರ ಇದ್ದುಕೊಂಡು ಸಂಘವನ್ನು ಹಳಿಯಬೇಡ ತನ್ನನ್ನೇ ತಿದ್ದಿಕೊಂಡು ಓಡಿಬಂದು ಕರ್ಮವ ನೋಡ ನೋಡಿದಲ್ಲಿ ಮರೆವೀ ನೀನು ತಂತನವನು ತಮ್ಮಾ || 1 || ಹೆದರಿ ಹೆದರಿ ಸರಿಯಬ್ಯಾಡ ಉದುರಿ ಉದುರಿ ಹೋಗಲು ಬ್ಯಾಡ ಹೇಡಿತನವ ಬಿಟ್ಟು ತಮ್ಮಾ ಧೈರ್ಯತನವ ತಂದು ಮುಂದು ವೀರಭದ್ರನಾಗು ತಮ್ಮಾ ಭದ್ರನಾಗಿರು || 2 || ಮನಸ್ಸಿನ ಭೇದವ ಬಿಟ್ಟು ಕನಸಿನ ರೋಷವ ಕಟ್ಟು ಕನಸು ಮನಸು […]

Read More

ಜಯ ಜಯ ಜಯ ಜನ್ಮಭೂಮಿ

ಜಯ ಜಯ ಜಯ ಜನ್ಮಭೂಮಿ ಜಯ ಜಯ ಜಯ ಮಾತೃಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ || ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 2 ||

Read More

ಭಾರತಿಯು ಇರಬೇಕು ಅನುದಿನ

ಭಾರತಿಯು ಇರಬೇಕು ಅನುದಿನ ಸಸ್ಯಸ್ಯಾಮಲೆಯಾಗುತ ಹಸಿರು ಹೊನ್ನಿನ ಬೆಲೆಯನರಿಯಲಿ ಜನತೆಯಾಗಲಿ ಜಾಗೃತ || ಪ || ತುಂಬಿ ನಿಲ್ಲಲಿ ತುಂಬ ಗಿಡಮರ ಬಿಂಬಿಸಲಿ ವನಸಿರಿಯನು ಕಂಪನೊಯ್ಯಲು ಪವನ, ಮಳೆಹನಿ ತಂಪುಗೈಯಲಿ ನೆಲವನು || 1 || ಬೆಳೆಯು ಬೆಳೆಯಲಿ ಇಳೆಯು ಬೆಳಗಲಿ ಕಳೆಯ ನಗುಮೊಗ ತೋರಲಿ ಒಸರು ಹೊರಡಲಿ ಹಸಿರು ಹರಡಲಿ ಹೊಸತು ಉಸಿರಲಿ ಹಾಡಲಿ || 2 || ಮರುಳು ಮಾಡುತ ವನವ ಕೆಡವುತ ಮರಳುಗಾಡನು ತರುವರೇ? ಮರಳಿಬಾರದು ಭೂಮಿ, ಅರಳದು ತಿರುಳು ತೀರಲು, ತಿಳಿಯರೇ? […]

Read More

ಒಂದ ದಿನ ಸಂಜೆಯ ಹೊತ್ತಿನಲಿ

ಒಂದ ದಿನ ಸಂಜೆಯ ಹೊತ್ತಿನಲಿ ಹೊರಬಿದ್ದೆನು ನಮ್ಮೂರ ಹಾದಿಯಲಿ ನಮ್ಮೂರ ಶಾಲೆಯ ಅಂಗಳದಲ್ಲಿ ಕಂಡರು ಕೆಲ ಬಾಲಕರು ಕಾವಿಧ್ವಜದಡಿ || ಪ || ಬಾಲಕರು ಆಡುತ್ತಿದ್ದ ಆಟದ ಮೋಡಿ ನಿಲ್ಲಿಸಿತು ನನ್ನ ಅಲ್ಲೇ ಗೆಳೆಯರ ಕೂಡಿ ಹಾಡುತ್ತಿದ್ದ ದೇಶಭಕ್ತಿ ಹಾಡಿನ ಹೊನಲು ಕೇಳುತಲಿ ನಿಂತೆ ಕಡೆಗೆ ಪ್ರಾರ್ಥನೆ ಸಾಲು || 1 || ಹೊರಬಿದ್ದ ಹುಡುಗರ ಆ ಗುಂಪಿನ ಗೆಳೆಯ ನನ್ನ ಬಳಿ ಬಂದು ಕೇಳಲೆನ್ನ ಪರಿಚಯ ಎನಗವರ ಅವರಿಗೆನ್ನ ಪರಿಚಯವಾಗೆ ದಿನನಿತ್ಯ ಹೋಗುತ್ತಿದ್ದೆ ಶಾಖೆಯ ಕಡೆಗೆ […]

Read More

ಶಾರದೆಯ ಸದನವಿದು

ಶಾರದೆಯ ಸದನವಿದು ರಾಷ್ಟ್ರದೀಕ್ಷೆಯ ಭವನ ಪೂರ್ಣತೆಯ ಪಥಿಕನಿಗೆ ದೀಪಗಂಬ ತನ್ನರಿವ ತಾ ಗಳಿಸಿ ರಾಷ್ಟ್ರದುನ್ನತಿ ಬಯಸಿ ಮುನ್ನಡೆವ ಸಾಧಕನ ಸ್ಫೂರ್ತಿ ಬಿಂಬ || ಪ || ಲೋಕ ಹಿತದಾಶಯದ ಋಷಿತುಲ್ಯ ಸಾಧಕರ ಕಲ್ಪನೆಯ ಕುಸುಮಗಳು ಅರಳಿಹವು ಇಲ್ಲಿ. ಕಾಯಿಗಳು ಮಾಗಿಹವು, ಸಫಲತೆಯ ಪಡೆದಿಹವು ದಶದಿಶೆಗೆ ಏಕತೆಯ ಬೀಜ ಚೆಲ್ಲಿ || 1 || ಶೈಶವದ ತೊದಲ್ನುಡಿಗೆ, ಬಾಲ್ಯದಾಟದ ಮನಕೆ ಹೊಸ ಶೋಧ ಕೆಳಸುತಿಹ ಯುವ ಮನಸಿಗೆ ದೇಶವೇ ಮೊದಲೆಂಬ ಸಂಸ್ಕಾರ ಕ್ಷಣಕ್ಷಣವು ಹೊಸ ದೃಷ್ಟಿ, ಹೊಸ ದಿಕ್ಕು […]

Read More

ಮೇರುಸದೃಶ ಜ್ಞಾನಿ

ಮೇರುಸದೃಶ ಜ್ಞಾನಿ ರಾಷ್ಟ್ರಯುಗ ದ್ರಷ್ಟಾರ ಯುಗಪುರುಷ ನೀನಾದೆ ಹೇ ಮಾಧವ || ಪ || ಅಡಿಗಡಿಗೆ ಭಾರತದ ಕೀರ್ತಿಯನು ಪಸರಿಸುವ ಯೋಜನೆಯ ರೂಪಿಸಿದ ಓ ಯೋಜಕ ಪರಮವೈಭವ ಪದಕೆ ಭಾರತಿಯನೆತ್ತರಿಪ ಮಾರ್ಗದರ್ಶಕನಾದೆ ನೀ ಮಾಧವ || 1 || ಜನಮನವನೆಚ್ಚರಿಸಿ ರಾಷ್ಟ್ರವೇ ಮೊದಲೆಂದೆ ನಾನಲ್ಲ ನೀನೆಂಬ ಕರೆ ನೀಡಿದೆ ಸ್ವಾರ್ಥವಿಲ್ಲದ ತ್ಯಾಗ ಸಾರ್ಥಕವು ಎಂದೆಂಬ ಮೌಲ್ಯವನು ಜೀವನದಿ ನೀ ತೋರಿದೆ || 2 || ಮಾತೃಋಣ ತೀರಿಸುವ ಋಣಭಾರ ಎಮಗಿಹುದು ನಿತ್ಯಸಾಧನೆಯೊಂದೆ ಸನ್ಮಾರ್ಗವೆಂದೆ ಏಕಾತ್ಮಭಾವದಲೆ ಭಾರತವ ನಿರ್ಮಿಸುವ […]

Read More