ನಿಶೆಯು ಸರಿದಿದೆ ಜಡತೆ ನೀಗಿದೆ

ನಿಶೆಯು ಸರಿದಿದೆ ಜಡತೆ ನೀಗಿದೆ ಉಷೆಯು ಗಾರುಡಿ ಬೀಸಿದೆ
ಕ್ಲೇಶ ಕಳೆದಿದೆ ಆಸೆ ಫಲಿಸಿದೆ ಯಶವು ನಾಡಿಗೆ ಕಾದಿದೆ || ಪ ||

ಸಂದ ಜಯವಿದು ಶುಭದ ಸೂಚನೆ ನನಸು ಸಾವಿರ ಕಲ್ಪನೆ
ಕುಂದು ಕೊರತೆಯ ನೀಗಿ ವಿಶ್ವಕೆ ವಂದ್ಯರೆನಿಸಲು ಪ್ರೇರಣೆ || 1 ||

ಅಂದು ಯಜ್ಞಕೆ ಸಮಿಧೆಯಾದರು ದಾಸ ಶರಣರು ಸಂತರು
ಇಂದು ಸೇವೆಯ ವ್ರತದಿ ಬದ್ಧರು ಕರ್ಮರಂಗದ ಧೀರರು || 2 ||

ಬಂಧುಭಾವವು ಐಕ್ಯ ತಂದಿದೆ ಜಾತಿಗೋಡೆಯ ಕೆಡವಿದೆ
ಸ್ವಾರ್ಥ ಸುಳಿಯದ ಕಾರ್ಯಸಾಧನೆ ಹೃದಯ ಹೃದಯವ ಬೆಸೆದಿದೆ || 3 ||

ನೆಲೆಯನರಸಿದೆ ಅಂತರಾತ್ಮವು ಕುಲದ ತರತಮ ತೊಲಗಿದೆ
ರಾಮಗುಹರ ಸುಧಾಮ ಕೃಷ್ಣರ ಸ್ನೇಹ ಸತ್ಯವ ತಿಳಿಸಿದೆ || 4 ||

ಒಂದೆ ಮನುಕುಲವೆಂಬ ಸೂತ್ರಕೆ ಹೊಸತು ಭಾಷ್ಯವು ಮೂಡಿದೆ
ಮಂದಹಾಸದಿ ನಲಿವ ಮಾತೆಗೆ ಜಗವೇ ನಮನವ ಸಲಿಸಿದೆ || 5 ||

Leave a Reply

Your email address will not be published. Required fields are marked *

*

code