ಹೇ ಗುರುವೇ ನಿನ್ನಡಿಗೆ ಅನುದಿನವು ಮಣಿಯುವೆನು ಎದೆಗೊತ್ತಿ ಶಿರಸವರಿ ನೀನೆನ್ನ ಹರಸು || ಪ || ನನ್ನಿರವ ತಿಳಿಸಿಕೊಡು ನನ್ನರಿವು ನನಗೆ ಕೊಡು ಒಳಗಿನರಿಗಳ ತರಿವ ಪರಿಯೆನಗೆ ಕಲಿಸು || 1 || ಜಗವ ರಂಜಿಸಬಲ್ಲ ಸಪ್ತ ಸ್ವರಗಳನುಲಿಸು ಎನ್ನೆದೆಯ ವೀಣೆಯನು ಸಿದ್ಧಗೊಳಿಸು || 2 || ಭಾರತಿಯ ಜೊತೆಗೆನ್ನ ಹೃದಯಶ್ರುತಿ ಮೇಳವಿಸು ಸಮರಸದ ಸಂಗೀತ ಸೃಷ್ಟಿಗೊಳಿಸು || 3 || ಕೀರ್ತಿ ಕಾಂಚನಗಳಿಗೆ ಅಲೆವ ಮನವನು ನಿಲಿಸು ಮರೆವಿನಾ ತೆರೆ ಸರಿಸು ಬೆಳಕ ಹರಿಸು || 4 || ಸ್ವಚ್ಛಂದ ಮನಕಿಂದು […]
ಜೋ…..ಜೋಜೋಜೋ……. ಜೋಜೋ…….ಜೋಜೋಜೋ……… || ಪ || ಉಣ್ಣುವ ಅನ್ನಕೂ ಪಾವನ ಮಣ್ಣಿಗೂ ನಿತ್ಯ ನಮಿಸಬೇಕು ಮಗುವೇ ನಿತ್ಯ ನಮಿಸಬೇಕು.. || 1 || ನಂಬಿದ ದೇವರ ಬಿಂಬದ ಇದಿರು ಹಣತೆ ಹಚ್ಚಬೇಕು ಮಗುವೇ ಹಣತೆ ಹಚ್ಚಬೇಕು.. || 2 || ಗತ ಇತಿಹಾಸದ ಪುಟಗಳ ತಿರುವಲು ಬೆಳೆಯಬೇಕು ಮಗುವೇ ನೀನು ಬೆಳೆಯಬೇಕು.. || 3 || ಸ್ವಾತಂತ್ರ್ಯಕಾಗಿ ಮಡಿದ ಕಲಿಗಳ ಕಥೆಯ ಓದಬೇಕು ಮಗುವೇ ಕಥೆಯ ಓದಬೇಕು.. || 4 || […]
ಮನದ ಮೂಲೆಯಲ್ಲಿ ಮೊಳೆತ ಮಧುರ ಭಾವ ಸುಂದರ ಮಾತೆ ನಿನ್ನ ಮೂರ್ತಿಗೆನ್ನ ಹೃದಯವಾಯ್ತು ಮಂದಿರ || ಪ || ನಿನ್ನ ಹಿರಿಮೆಯರಿಮೆ ಎನ್ನ ಹೃದಯ ಹಸನುಗೊಳಿಸಿತು ಪ್ರೇಮದೊಡನೆ ಪೂಜ್ಯಭಾವ ಬೆರೆತು ಭಕ್ತಿ ಸ್ಫುರಿಸಿತು || 1 || ‘ನಾನು’ ಏನು ಎಂಬ ಅರಿವು ನನ್ನ ಒಳಗೆ ಉದಿಸಿತು ನಿನ್ನ ಜೊತೆಗೆ ಲೀನಗೊಳುವ ಭಾವವೊಂದು ಬೆಳೆಯಿತು || 2 || ನಮ್ಮೊಳಗಿನ ಭಾವ ಬೆಸುಗೆ ಗುರು ಭಗವೆಯೇ ಪ್ರೇರಕ ಮೇಲರಿಮೆಯ ಮೌಢ್ಯ ತೊಡೆದ ಮಹಾ ಮಾರ್ಗದರ್ಶಕ || 3 || ‘ನಾನು’ ಲೀನನಾದ […]
ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು || ಅ.ಪ || ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ || 1 || ರಾಜಕೀಯ ನೆಪಕೆ […]
ಯುಗದ ಆಹ್ವಾನವಿದು ಕೇಳಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ || ಪ || ಹೂಣ ಗ್ರೀಕರ ಗೆಲಿದು ಶಕಕುಶಾನರನುಲಿದು ಆಂಗ್ಲ ಮೋಘಲರ ಹಣಿದ ಹಿರಿಮೆಯಿರಲು ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ ವಿಶ್ವ ವಿಜಯಧ್ವಜವ ಮೆರೆಸಬನ್ನಿ || 1 || ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ ಎಮ್ಮ ಹಿರಿಯರ ಬಾಳು ದೀಪವಾಗಿ ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ ನಾಡರಕ್ಷಾಕವಚ ಆಗಬನ್ನಿ || 2 || ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು ರಾಹು ಕೇತು ಗ್ರಹಣ ಮುಕ್ತವಾಗಿ ಬೆಳಗಲಿದೆ ಹಿಂದುತ್ವದಾ ಪ್ರಭೆಯು […]
ಭಯವಿರದ ಭಾರತವ ಕಟ್ಟಲೋಸುಗ ಬನ್ನಿ ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ || ಪ || ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ ಮುಂದಾಗಿ ಎದುರಿಸುವ ಕ್ಷಾತ್ರಯೋಧ || 1 || ದೈನ್ಯವೇತಕೆ ನಿನಗೆ ಮಾನ್ಯ ಭಾರತಿ ಪುತ್ರ ಕಪಿಸೈನ್ಯ ಸಾಗರವ ದಾಟಿಲ್ಲವೇನು ? ವೈನತೇಯನು ತಂದ ಪೀಯೂಷವಿರುವಾಗ ಸಾವೆಂಬ ವಿಷಸರ್ಪಕಂಜಲೇನು ? || 2 || ಭಾರತದ ಬಹುಳತೆಗೆ ಹಿಂದುತ್ವವಡಿಪಾಯ ಮರೆಯದಿರು ಮುರಿಯದಿರು ಸೇತುಬಂಧ ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ ಉರುಳಾಗದಿರಲಿ ದಯೆ […]
ನಾಡಿಗೆ ಸೇವೆಯ ಸಲ್ಲಿಸಲು ಬಾಡಿದ ಮನಗಳ ಅರಳಿಸಲು ವೀರ ಪ್ರತಿಜ್ಞೆಯ ತೊಟ್ಟಿಹೆವು…. ಹೊಸನಾಡೊಂದನು ಕಟ್ಟುವೆವು || ಪ || ರೂಢಿಯ ಮೌಢ್ಯದ ಗೋಡೆಯ ಕೆಡವಿ ಗುಡಿಸಲುವಾಸಿಗಳಾ ಮೈದಡವಿ ಒಲವಿನ ಧಾರೆಯ ಹರಿಸುವೆವು………. ಅರಿವಿನ ದೀಪವನುರಿಸುವೆವು || 1 || ನಮ್ಮ ಪರಂಪರೆಯನು ಸ್ಮರಿಸುತಲಿ ಘನ ಆದರ್ಶವ ಅನುಸರಿಸುತಲಿ ಮುಚ್ಚಿದ ಕಂಗಳ ತೆರೆಸುವೆವು………. ಕೆಚ್ಚೆದೆ ಸಾಹಸ ಮೆರೆಸುವೆವು || 2 || ವಿಘ್ನ ವಿರೋಧದ ಭೀತಿಯ ತ್ಯಜಿಸಿ ಕೀರ್ತಿ ಪ್ರಶಂಸೆಯ ಮೋಹವ ದಹಿಸಿ […]
ನಾವು ನೀವು ಒಂದಾಗಿ ನಡೆಯುವಾ ಮಾವಿದ್ವಿಷಾವಹೈ ಐಕ್ಯಮಂತ್ರದಾ ಸೂತ್ರ ಹಿಡಿಯುವಾ ಸಹವೀರ್ಯಂ ಕರವಾವಹೈ || ಪ || ಬಲಾ ಚ ಪೃಥಿವೀ ಎನ್ನುವರು ಜನ ಆಡಕೊಂದು ಹುಲಿಗಂಜುವರು ದೇವನು ದುರ್ಬಲ ಘಾತಕನೆಂದುsss ಹಿರಿಯರು ಅನುಭವ ನುಡಿದಿಹರು ನಿಜವನು ತಿಳಿದು ಅಜೇಯರಾಗುವ ಮಾವಿದ್ವಿಷಾವಹೈ ಐಕ್ಯಮಂತ್ರದಾ …. […]
ನಿನ್ನನೆಂತು ಅರ್ಚಿಸಲಿ ನಿನ್ನನೇನು ಬೇಡಲಿ ನಿನ್ನ ಸೊಬಗ ನಾನೆಂತು ಬಣ್ಣಿಪೆ ತಾಯೆ ? || ಪ || ತುಂಬಿ ಹರಿವ ನದಿಗಳು ಒಡಲೊಳಗಿನ ಗಣಿಗಳು ಸಾಲು ಸಾಲು ಬೆಟ್ಟಗಳಲಿ ತೇಗ ಗಂಧ ತರುಗಳು ಮುಕುಟದಲಿ ಹಿಮರಾಶಿ ಪದತಲದಲಿ ಜಲರಾಶಿ ನಿನ್ನೊಡಲ ಸಂಪದವ ನನ್ನಾಣೆ ಅರಿಯೆ ತಾಯೆ || 1 || ನಿನ್ನ ಸುತರು ಕೋಟಿ ಕೋಟಿ ನಿನ್ನ ಗರ್ಭಕಿಲ್ಲ ಸಾಟಿ ನಿನ್ನ ಮಡಿಲ ಧರ್ಮವ ಒಯ್ದರವರು ಕಡಲ ದಾಟಿ ದುಃಖ ದೈನ್ಯ ಕಷ್ಟಗಳ […]