ಕೇಶವನ ಬಾಳೆಮಗೆ ಪ್ರೇರಣೆಯ ದೀಪ

ಕೇಶವನ ಬಾಳೆಮಗೆ ಪ್ರೇರಣೆಯ ದೀಪ ಮಾಧವನ ಸಾಧನೆಯು ಆದರ್ಶ ರೂಪ        || ಪ || ಈಶ್ವರೀಯವು ನಮ್ಮ ದೇಶಧರ್ಮದ ಕಾರ್ಯ ಜನಮನವ ಜೋಡಿಸುವ ಸವಿನುಡಿಯು ವಿನಯ ವ್ಯಕ್ತಿತ್ವ ಕರ್ತೃತ್ವ ಅರ್ಪಿತವು ಸರ್ವಸ್ವ ‘ಯಾಚಿ ದೇಹೀ ಯಾಚಿ ಡೋಳ’ ಸಂಕಲ್ಪ     || 1 || ಶುದ್ಧ ಜಂಗಮ ಸ್ನೇಹಿ ಲೌಕಿಕದಿ ನಿರ್ಮೋಹಿ ಆಧ್ಯಾತ್ಮದಲಿ ರಕ್ತಿ ಅತುಲ ಧೀ ಶಕ್ತಿ ಹೆಜ್ಜೆ ಗುರುತುಗಳೆಲ್ಲ ಯುಗದೃಷ್ಟಿ ನವಸೃಷ್ಟಿ ಸದ್ದಿರದೆ ಸರಿವ ಬಗೆ ‘ಮೈ ನಹೀಂ ತೂ ಹೀ’   || […]

Read More

ದೇಶ ಒಂದೆ ಧ್ಯೇಯ ಒಂದೆ ಭಾಷೆ ನೂರು ಭಾವ ಒಂದೆ

ದೇಶ ಒಂದೆ ಧ್ಯೇಯ ಒಂದೆ ಭಾಷೆ ನೂರು ಭಾವ ಒಂದೆ ನನ್ನ ಹೆಮ್ಮೆಯ ನಾಡಿದು ಮನ ತಣಿಸೆ ಚೆಲುವ ಬೀಡಿದು                          || ಪ ||   ಸಿಂಧೂನದಿಯ ಮಣ್ಣಿನಿಂದ ಹಿಮಾಲಯದ ತಪ್ಪಲಲ್ಲೂ ಕಾಶ್ಮೀರದ ಕಣಿವೆಯಿಂದ ಕನ್ಯಾಕುಮಾರಿಯಲ್ಲೂ ಸೇವೆಯೆಂಬ ಯಜ್ಞದಲ್ಲಿ ಭಾರತಾಂಬೆಯ ಗೆಲುವಿಗಾಗಿ ಪ್ರಾಣರಾಷ್ಟ್ರಕೆ ಅರ್ಪಿತ ಬದುಕು ದೇಶಕೆ ಸಮರ್ಪಿತ                               || 1 ||   ಕೆಂಪು ಕಪ್ಪು ಮಣ್ಣಿದು ಹಸಿರು ಹೊತ್ತ ನಾಡಿದು ಗೌರಿ ಶಂಕರ ಶಿಖರವಿಹುದು ನೂರು ನದಿಯ ಭುವಿಯಿದು ಕೋಟಿ ದೇವರಿರುವರು […]

Read More

ಹೇ ಗುರುವೇ ನಿನ್ನಡಿಗೆ

ಹೇ ಗುರುವೇ ನಿನ್ನಡಿಗೆ ಅನುದಿನವು ಮಣಿಯುವೆನು ಎದೆಗೊತ್ತಿ ಶಿರಸವರಿ ನೀನೆನ್ನ ಹರಸು        || ಪ || ನನ್ನಿರವ ತಿಳಿಸಿಕೊಡು ನನ್ನರಿವು ನನಗೆ ಕೊಡು ಒಳಗಿನರಿಗಳ ತರಿವ ಪರಿಯೆನಗೆ ಕಲಿಸು      || 1 || ಜಗವ ರಂಜಿಸಬಲ್ಲ ಸಪ್ತ ಸ್ವರಗಳನುಲಿಸು ಎನ್ನೆದೆಯ ವೀಣೆಯನು ಸಿದ್ಧಗೊಳಿಸು          || 2 || ಭಾರತಿಯ ಜೊತೆಗೆನ್ನ ಹೃದಯಶ್ರುತಿ ಮೇಳವಿಸು ಸಮರಸದ ಸಂಗೀತ ಸೃಷ್ಟಿಗೊಳಿಸು         || 3 || ಕೀರ್ತಿ ಕಾಂಚನಗಳಿಗೆ ಅಲೆವ ಮನವನು ನಿಲಿಸು ಮರೆವಿನಾ ತೆರೆ ಸರಿಸು ಬೆಳಕ ಹರಿಸು         || 4 || ಸ್ವಚ್ಛಂದ ಮನಕಿಂದು […]

Read More

ಪ್ರೇರಣಾ ಪಥವನು ತುಳಿಯೋಣ

Read More

ಜೋ…..ಜೋಜೋಜೋ……. ನಿತ್ಯ ನಮಿಸಬೇಕು

ಜೋ…..ಜೋಜೋಜೋ……. ಜೋಜೋ…….ಜೋಜೋಜೋ………  || ಪ ||   ಉಣ್ಣುವ ಅನ್ನಕೂ ಪಾವನ ಮಣ್ಣಿಗೂ ನಿತ್ಯ ನಮಿಸಬೇಕು ಮಗುವೇ ನಿತ್ಯ ನಮಿಸಬೇಕು..               || 1 ||   ನಂಬಿದ ದೇವರ ಬಿಂಬದ ಇದಿರು ಹಣತೆ ಹಚ್ಚಬೇಕು ಮಗುವೇ ಹಣತೆ ಹಚ್ಚಬೇಕು..                || 2 ||   ಗತ ಇತಿಹಾಸದ ಪುಟಗಳ ತಿರುವಲು ಬೆಳೆಯಬೇಕು ಮಗುವೇ ನೀನು ಬೆಳೆಯಬೇಕು..                           || 3 ||   ಸ್ವಾತಂತ್ರ್ಯಕಾಗಿ ಮಡಿದ ಕಲಿಗಳ ಕಥೆಯ ಓದಬೇಕು ಮಗುವೇ ಕಥೆಯ ಓದಬೇಕು..                || 4 || […]

Read More

ಮನದ ಮೂಲೆಯಲ್ಲಿ ಮೊಳೆತ

ಮನದ ಮೂಲೆಯಲ್ಲಿ ಮೊಳೆತ ಮಧುರ ಭಾವ ಸುಂದರ ಮಾತೆ ನಿನ್ನ ಮೂರ್ತಿಗೆನ್ನ ಹೃದಯವಾಯ್ತು ಮಂದಿರ     || ಪ || ನಿನ್ನ ಹಿರಿಮೆಯರಿಮೆ ಎನ್ನ ಹೃದಯ ಹಸನುಗೊಳಿಸಿತು ಪ್ರೇಮದೊಡನೆ ಪೂಜ್ಯಭಾವ ಬೆರೆತು ಭಕ್ತಿ ಸ್ಫುರಿಸಿತು        || 1 || ‘ನಾನು’ ಏನು ಎಂಬ ಅರಿವು ನನ್ನ ಒಳಗೆ ಉದಿಸಿತು ನಿನ್ನ ಜೊತೆಗೆ ಲೀನಗೊಳುವ ಭಾವವೊಂದು ಬೆಳೆಯಿತು      || 2 || ನಮ್ಮೊಳಗಿನ ಭಾವ ಬೆಸುಗೆ ಗುರು ಭಗವೆಯೇ ಪ್ರೇರಕ ಮೇಲರಿಮೆಯ ಮೌಢ್ಯ ತೊಡೆದ ಮಹಾ ಮಾರ್ಗದರ್ಶಕ         || 3 || ‘ನಾನು’ ಲೀನನಾದ […]

Read More

ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ

ಸಾಟಿ ಇಲ್ಲದ ಸಂತ ನಿನಗೆ ಕೋಟಿ ಕೋಟಿ ವಂದನೆ ಹುಟ್ಟಿ ಬಾರೊ ಮತ್ತೆ ನೀನು ಸಕಲ ವಿಶ್ವವಂದ್ಯನೆ ನೋವ ಸಹಿಸಲಾರೆವು… ನಿನ್ನ ಮರೆಯಲಾರೆವು                     || ಅ.ಪ ||   ಪ್ರಾಂತಜಾತಿ ಪಂಥ ಪಕ್ಷ ಸೀಮೆಗಳನು ದಾಟಿದೆ ಭಾರತೀಯರೆದೆಯ ಹೃದಯ ತಂತಿಗಳನು ಮೀಟಿದೆ ಸಂಕುಚಿತತೆ ಮೀರಿ ನಿಂತ ತ್ಯಾಗಭರಿತ ಜೀವನ ಕಾರ್ಯನಿರತ ಸ್ಫೂರ್ತಿಭರಿತ ನಿನ್ನ ಬದುಕು ಪಾವನ                || 1 ||   ರಾಜಕೀಯ ನೆಪಕೆ […]

Read More

ಯುಗದ ಆಹ್ವಾನವಿದು ಕೇಳಬನ್ನಿ

ಯುಗದ ಆಹ್ವಾನವಿದು ಕೇಳಬನ್ನಿ ತಾಯ್ನೆಲದ ಕರೆಗೆ ಓಗೊಡುತ ಬನ್ನಿ       || ಪ || ಹೂಣ ಗ್ರೀಕರ ಗೆಲಿದು ಶಕಕುಶಾನರನುಲಿದು ಆಂಗ್ಲ ಮೋಘಲರ ಹಣಿದ ಹಿರಿಮೆಯಿರಲು ತಡೆಯುವರಾರಿನ್ನು ಬಿಡದೆ ಮುಂದಡಿಯಿಡುತ ವಿಶ್ವ ವಿಜಯಧ್ವಜವ ಮೆರೆಸಬನ್ನಿ       || 1 || ಸಾವಿರದ ಇತಿಹಾಸ ನಿತ್ಯ ಪ್ರೇರಕವಾಗಿ ಎಮ್ಮ ಹಿರಿಯರ ಬಾಳು ದೀಪವಾಗಿ ನವಿರುಗೊಳ್ಳಲಿ ತ್ರಾಣ ಕ್ಷಾತ್ರ ಶಕ್ತಿಯ ಸ್ಫುರಣ ನಾಡರಕ್ಷಾಕವಚ ಆಗಬನ್ನಿ              || 2 || ಆತ್ಮವಿಸ್ಮೃತಿಯೊಂದು ಸ್ವಾರ್ಥ ಚಿಂತನೆಯೊಂದು ರಾಹು ಕೇತು ಗ್ರಹಣ ಮುಕ್ತವಾಗಿ ಬೆಳಗಲಿದೆ ಹಿಂದುತ್ವದಾ ಪ್ರಭೆಯು […]

Read More

ಭಯವಿರದ ಭಾರತವ ಕಟ್ಟಲೋಸುಗ ಬನ್ನಿ

ಭಯವಿರದ ಭಾರತವ ಕಟ್ಟಲೋಸುಗ ಬನ್ನಿ ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ    || ಪ || ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ ಮುಂದಾಗಿ ಎದುರಿಸುವ ಕ್ಷಾತ್ರಯೋಧ          || 1 || ದೈನ್ಯವೇತಕೆ ನಿನಗೆ ಮಾನ್ಯ ಭಾರತಿ ಪುತ್ರ ಕಪಿಸೈನ್ಯ ಸಾಗರವ ದಾಟಿಲ್ಲವೇನು ? ವೈನತೇಯನು ತಂದ ಪೀಯೂಷವಿರುವಾಗ ಸಾವೆಂಬ ವಿಷಸರ್ಪಕಂಜಲೇನು ?              || 2 || ಭಾರತದ ಬಹುಳತೆಗೆ ಹಿಂದುತ್ವವಡಿಪಾಯ ಮರೆಯದಿರು ಮುರಿಯದಿರು ಸೇತುಬಂಧ ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ ಉರುಳಾಗದಿರಲಿ ದಯೆ […]

Read More

ನಾಡಿಗೆ ಸೇವೆಯ ಸಲ್ಲಿಸಲು

ನಾಡಿಗೆ ಸೇವೆಯ ಸಲ್ಲಿಸಲು ಬಾಡಿದ ಮನಗಳ ಅರಳಿಸಲು ವೀರ ಪ್ರತಿಜ್ಞೆಯ ತೊಟ್ಟಿಹೆವು…. ಹೊಸನಾಡೊಂದನು ಕಟ್ಟುವೆವು            || ಪ || ರೂಢಿಯ ಮೌಢ್ಯದ ಗೋಡೆಯ ಕೆಡವಿ ಗುಡಿಸಲುವಾಸಿಗಳಾ ಮೈದಡವಿ ಒಲವಿನ ಧಾರೆಯ ಹರಿಸುವೆವು………. ಅರಿವಿನ ದೀಪವನುರಿಸುವೆವು              || 1 || ನಮ್ಮ ಪರಂಪರೆಯನು ಸ್ಮರಿಸುತಲಿ ಘನ ಆದರ್ಶವ ಅನುಸರಿಸುತಲಿ ಮುಚ್ಚಿದ ಕಂಗಳ ತೆರೆಸುವೆವು………. ಕೆಚ್ಚೆದೆ ಸಾಹಸ ಮೆರೆಸುವೆವು              || 2 || ವಿಘ್ನ ವಿರೋಧದ ಭೀತಿಯ ತ್ಯಜಿಸಿ ಕೀರ್ತಿ ಪ್ರಶಂಸೆಯ ಮೋಹವ ದಹಿಸಿ […]

Read More