ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ ಸೆಟೆದು ನಿಲ್ಲುತಿದೆ ಸ್ವಾಭಿಮಾನವು ತಾಯ ಸ್ಮರಣೆಯಿಂದ || ಪ || ಶುಭವ ಅರುಹುತಿದೆ ಶುಭ್ರ ಮುಂಜಾವು ಭಾಸ್ಕರನ ಕಿರಣ ಭಾಷ್ಯ ಹಬ್ಬಿ ಹರಡುತಿದೆ ವಿಶ್ವದೆಲ್ಲೆಡೆಯು ಭಾರತಿಯ ಕೀರ್ತಿ ಲಾಸ್ಯ ಅಣು ಅಣುವಿನಲ್ಲೂ ಮಾರ್ದನಿಸುತಿದೆ ದೇಶಭಕ್ತಿಯ ಘೋಷ ಅನುರಣಿಸುತಿದೆ ಮೈಯ ಕಣಕಣವು ಸಂಘಮಂತ್ರ ದೀಕ್ಷ || 1 || ಯಶವು ನಿಶ್ಚಯವು ಯತ್ನ ಬೇಕಿಹುದು ಶ್ರಮಕೆ ಫಲವು ಸತ್ಯ ಕ್ಲೇಶ ಕಳೆದ ಅವಕಾಶವೀಗಲೇ ಹಿಂದುತ್ವ ಭದ್ರ ಕವಚ ದುಷ್ಟ ಕೂಟಗಳ ಹುಟ್ಟನಡಗಿಸಲು ಐಕ್ಯತೆಯ ಸ್ನೇಹ ಸೂತ್ರ […]
ಅಬ್ಬರದ ಜೀವನದ ಕಾರ್ಮೋಡ ಕವಿದಿರಲು ವಿಸ್ಮೃತಿಯು ಹೆಗಲೇರಿ ನಾಳೆಗಳು ನಲುಗಿರಲು ಮಬ್ಬಡರಿ ಬರಿದಾದ ಕುರುಡು ಮನಗಳಲೀಗ ಅಸ್ಮಿತೆಯ ಜಾಗರಣ ನಡೆಯಬೇಕು || ಪ || ಸ್ವಂತ ಜೀವನ ಮರೆತು ನಿತ್ಯ ಶುದ್ಧತೆ ಬಯಸಿ ವಿಶ್ವಗುರು ಭಾರತಕೆ ಸತತ ಕಾಯವ ಸವೆಸಿ ಸತ್ಯದರಿವಿಗೆ ತಪಿಸಿ ಸಂತ ಜೀವನ ನಡೆಸಿ ಸ್ವಾರ್ಥವರಿಯದ ಬದುಕ ಬಾಳಬೇಕು || 1 || ಸ್ವಸ್ಥ ದೇಶಕೆ ಇಲ್ಲಿ ಸ್ವಸ್ಥ ವ್ಯಕ್ತಿಯ ಸೃಷ್ಟಿ ವೇದ ಯೋಗದ ಮಾರ್ಗ ಕಲೆಯ ಸಮ್ಮಾನ ವಿಜ್ಞಾನ ಭೂಸೇವೆ ಲೋಕಹಿತದೆಡೆ ದೃಷ್ಟಿ […]
ಭರವಸೆಗಳ ನವನೇಸರ ತಾನುದಿಸುತ ಬರಲು ಸುಖಶಾಂತಿಯ ಸೌಗಂಧವ ತರುತಿದೆ ತಂಪೆರಲು ಜಗದೊಡತಿಯ ಪದತಲದಲಿ ಪೊಡಮಡುತಿದೆ ಜಗವು ಅಭಯಾಶಿಷ ಸಂಕೇತವು ಮಾತೆಯ ನಗುಮೊಗವು || ಪ || ಹಳೆಸೂತ್ರಕೆ ಹೊಸಭಾಷ್ಯವ ಬರೆಯುವ ಗುರುಭಾರ ಪರಿಮಾರ್ಜನೆ ಪರಿವರ್ತನೆ ಗೆಳಸುವ ಶುಭಕಾಲ ಹೊಸ ತಾಂತ್ರಿಕ ಬಲದಿಂದಲೇ ಹಳೆಯೊಳಿತನು ಮಥಿಸಿ ನವನೀತವ ಸಂಸ್ಕರಿಸುತ ನವಘೃತವನು ಉಣಿಸಿ || 1 || ಅಸ್ಪೃಷ್ಯತೆ, ದುರ್ವ್ಯಸನದ, ಕೊಳೆ ಕಿಲುಬನು ಅಳಿಸಿ ರಾಷ್ಟ್ರೀಯತೆ, ಸಂಪನ್ನತೆ, ಬಂಧುತ್ವವ ಬೆಳೆಸಿ ಶಾಸ್ತ್ರಾರ್ಥದ ಶ್ರೀ ರಕ್ಷೆಗೆ ಶಸ್ತ್ರಾಸ್ತ್ರವ ಗಳಿಸಿ ಮನುಜತ್ವದ ನಿಜಧರ್ಮಕೆ […]
ಧರ್ಮತಳಹದಿ ಮೇಲೆ ಭವ್ಯ ಭಾರತಭವನ ಜ್ಞಾನ ಸ್ತನ್ಯದಿ ಜಗವ ಪೊರೆದ ತಾಣ ಕುಸಿದಿರುವ ಸ್ತಂಭಗಳ, ಮತ್ತೆ ಸರಿ ಪಡಿಸೋಣ ತೊಡಗೋಣ ಮತ್ತೊಮ್ಮೆ ವಿಜಯ ಯಾನ || ಪ || ಮೇಘಸ್ಫೋಟವದಾಯ್ತು ಭುವಿ ಬಿರಿದು ಕುಸಿದಾಯ್ತು ಗಿರಿ ಜರಿದು ಕಂಪಿಸಿತು ಅರಿವಾಗಲಿಲ್ಲ ಅತಿ ಗಳಿಕೆ ಬಯಕೆಗಳ ಪ್ರಲಯ ಝಂಝಾವಾತ ಸರಳತೆಯ ಸಂದೇಶ ಕೇಳಲಿಲ್ಲ || 1 || ಹೊನ್ನಗಳಿಕೆಯ ಬಯಕೆಗೆನ್ನ ವಿಕ್ರಮವಾಯ್ತು ಔಷಧವೂ ಶಿಕ್ಷಣವೂ ಬಿಕರಿಯಾಯ್ತು ಅನ್ಯೋನ್ಯ ಅನುಕೂಲ ಭಾವನೆಯು ಬರಿದಾಯ್ತು ಹಕ್ಕುಗಳು ಸೊಕ್ಕೇರಿ ಮೆರೆದುದಾಯ್ತು […]
ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]
ಮನಸಿನ ಪ್ರಶಮನ ಸದ್ಗುಣ ವಿಕಸನ ಸೃಷ್ಟಿಯ ಏಳ್ಗೆಯ ಬಯಕೆ ಶತಶತಮಾನದ ಶ್ರುತಿ ಸ್ಮೃತಿ-ಸಂಸ್ಕೃತಿ ಹರಿದಿದೆ ಜ್ಞಾನದ ಸರಿತೆ || ಪ || ಗೆಳೆಯನ ಸಲುಗೆಯು, ಮಡದಿಯ ಅನುನಯ ಪ್ರಭುವಾಜ್ಞೆಯ ಬಲ ಅದಕಿಹುದು ಉಭಯ ತಟಗಳಲು ಮನುಜನ ಬದುಕಿಗೆ ಭದ್ರ ಬುನಾದಿಯ ಬಲಿದಿಹುದು […]
ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ ಜಗದ ಹಿತದಾಕಾಂಕ್ಷೆ ಬೀಜ ಬಿತ್ತಿ ಧನ್ಯಗೊಳಿಸಿದೆ ಬದುಕು ಪುಣ್ಯವಂತನು ನಾನು ಕಣ್ತೆರೆಸಿದ ತಾಯೇ ನಿನಗೆ ನಮನ || ಪ || ಭೋಗಕಿರಲೊಂದು ಮಿತಿ ತ್ಯಾಗದಿಂದಮೃತತ್ವ ಸ್ವಂತ ಸುಖವನು ಮರೆತ ಸಂತವಾಣಿ ಸ್ವಾರ್ಥ ಚಿಂತನೆ ತ್ಯಜಿಸಿ ತನು-ಧನಗಳನರ್ಪಿಸಿದೆ ಮನವೆಲ್ಲಿ ಕಾಣಿಸದು ನಿನ್ನೊಳಗೆ ಲೀನ || 1 || ಘನ ಪರಂಪರೆ ಇಹುದು ಶೌರ್ಯ-ಸಾಹಸಕಿಲ್ಲಿ ಪಾರ್ಥನಿಗೆ ಸಾರ್ಥಕತೆ ರಣದ ಕಣದೀ ಛತ್ರಪತಿಯ ಕಥನ ರಾಣ ನಡೆಸಿದ ಕದನ ವಿಜಯನಗರದ ಸ್ಮರಣ ಹೃದಯ ಸ್ಫುರಣ || 2 […]
ಭರತ ಮಾತೆ ಪುತ್ರರೇ ಒಂದು ಗೂಡುವ ದೇಶಕ್ಕಾಗಿ ಸ್ವಾರ್ಥ ಬಿಟ್ಟು ಸೇವೆಗೈಯುವ || ಪ || ಹಿಂದೂ ಹಿಂದೂ ಕೂಡಿ ನಾವು ರಾಮಲಕ್ಷ್ಮಣರಾಗುವ ವಾಯುಪುತ್ರ ಭೀಮನಂತೆ ಧೈರ್ಯವಾಗಿ ನಿಲ್ಲುವ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ (ಒಂದು ಗೂಡುವ) 2 || 1 || ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವ ದ್ವೇಷ ಬಿಟ್ಟು ಅರಿತು […]
ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ || || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ || || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ || || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]
ಭರತ ಮಾತೆಯ ಮಮತೆಯುಡುಗೊರೆ ಯೋಗವೆಂಬ ವಿಸ್ಮಯ ಅರಿತು ಜಗವು ಅಪ್ಪಿಕೊಂಡಿದೆ ಫಲವು ಅಮಿತವು ಅಕ್ಷಯ ಇರದು ಇತಿಮಿತಿ ಗುರುಪತಂಜಲಿ ತೋರಿಕೊಟ್ಟರು ಹಾದಿಯ ನೂರು ಜಂಜಡ ಭರದಿ ಕಳೆಯಲು ಮಾಡಬೇಕಿದೆ ಯೋಗವ || ಪ || ಯೋಗ ಕೊಟ್ಟಿಹ ಸ್ವಸ್ಥ ಬದುಕನು ನುಂಗದಿರಲಿ ಮಲಿನತೆ ನಾಗರೀಕತೆ ಮೆರಗು ತರಲಿ ನಗರದಲ್ಲಿನ ಶುಭ್ರತೆ ಬಡವ ಬಲ್ಲಿದ ಭೇದ ತೊಡೆದಿಹ ಯೋಗದಿಂದಲೇ ಧನ್ಯತೇ ಬೆಂಗಳೂರಿಗೆ ಭಂಗತಾರದೇ ಕೂಡಿ ಮಾಡುವ ಸ್ವಚ್ಛತೆ || 1 || ಸಾಮರಸ್ಯವು ಸ್ನೇಹ ಪ್ರೀತಿಯು […]