ಹಿಂದುಸ್ಥಾನದಿ ಹಿಂದೂ ಎನ್ನಲು ಭಯವೇತಕೆ ನಮಗೆ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆಗಳಿಗೆ || ಪ || ಬರಿಕಚ್ಚಾಟದಿ ಕರೆಸುವುದುಂಟೇ ಈ ಘಜನೀ ಘೋರೀ ಪಾವನನೆಲದಿ ಬಾಳುವುದುಂಟೇ ಅಭಿಮಾನದ ಮಾರಿ? ನೆನೆಯುವ ಹಿಂದಿನ ವೈಭವ ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 1 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ ಭಾವೈಕ್ಯದ […]
ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]
ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]
ಇಂದು ನಿನ್ನಯ ಸರ್ವ ದೇವರು ಹಿಂದು ಹೆಸರಿನ ಬಂಧು ಜನರು || ಪ || ಚರಿತೆ ಮರೆಯುತಲಂಧರಾಗಿಹ ಅವರೆ ಇಂದಿನ ಮಾತ ಪಿತರು ಸ್ವಾರ್ಥ ಕಲಹದಿ ರಾಷ್ಟ್ರ ಮರೆಯುತ ಪೂರ್ಣ ವೈಭವದಿಂದಲುರುಳಿ ಕಣ್ಣ ತೆರೆಸುವ ನೀತಿ ಕಲಿಸುವ ಜ್ವಾನದಾತರು ಗುರುವರ್ಯರು ಕಣ್ಗೆ ಕಾಣುವುದೊಂದೆ ದೇವರು ಭವ್ಯ ಜಾತಿಯ ದಿವ್ಯ ನರರು || 1 || ಶಾಲಿವಾಹನ ಶ್ವೇತವಾಹನ ಭೀಮ ಭೀಷ್ಮರ ಸಂಜಾತರು ಬಾಣ ಚದುರರ ದಾನಶೂರರ ದ್ರೋಣ ಕರ್ಣರ ಸಂತಾನರು ಪತಿತ ಪಾಮರ ದೀನ ಹೀನರ ನಿನ್ನ […]
ಆ ಹಿಂದು ಮಹೋದಧಿಯೆದೆಯಾಳದ ಒಳಗೆ ಅಪಮಾನದ ಜ್ವಾಲಾಮುಖಿ ಧಗಧಗಿಸುತಿದೆ ಸಾಗರದೊಳಗೇರಿಳಿಯುವ ಹೆದ್ದೆರೆಗಳಲಿ ಅಲೆಯಲೆಯೊಳಗೂ ತುಂಬಿಹುದಾಕ್ರಂದನವು || ಪ || ಗಂಗಾಧರೆಯು ಪ್ರಶ್ನೆಯನೆಸೆಯುತಲಿಹುದು ಸಗರನ ಸುತರನು ಮೀರಿಸಿ ಮೃತವಾಯಿತೆ ಧರ್ಮದ ಕರ್ಮದ ನೆಲೆಮನೆ ಭಾರತವಿಂದು ? ಸಿಂಧೂಧಾರೆಯು ಬಿಸುಸುಯ್ಯುತಲಿಹುದು ತನ್ನನು ಭಂಗಿಸಿದವರಜ್ಞಾನಕೆ ನೊಂದು || 1 || ಜನನಿಯ ಶೋಕವ ಪರಿಹರಿಸದೆ ಬದುಕಿದ ಪುತ್ರರ ಬಾಳಿಗೆ ಶತಶಾಪಗಳಿರಲೆಂದು ಸುಖ ಸವಿಭೋಗದ ಮೋಹದಿ ನಿದ್ರಿಸುತಿಹ ಜನರಾಯುಷ್ಯವು ಸಾರ್ಥಕರಹಿತವದೆಂದು ಶಪಿಸುತಲಿದೆ ಭೂಗಗನಳಿಂದು || 2 || ಗತ ವಿಭವಂಗಳೊಳಭಿಮಾನವ ತಳೆದು ಭವ್ಯ […]
ಒಂದಾಗಿ ಹೇಳುವೆವು ನಾವೆಲ್ಲ ಹಿಂದು ನಮ್ದೇಶ ಹಿಂದು, ನಾವೆಲ್ಲ ಹಿಂದು ಹಿಂದೂ ಇಂದೂ ಮುಂದೂ, ನಾವೆಲ್ಲ ಹಿಂದು || ಪ || ಹಿಂದುಗಳು ನಾವೆಂದು ಹೇಳೋಕೆ ಭಯವೇ ಹಿಂದುಗಳೆ ನಾವಿರಲು ಹೇಳಿದರೆ ನೋವೇ ಯಾರಣ್ಣ ಹೇಳೋರು ಹೇಳದಿರೆ ನಾವೇ ಮತ್ತೇನು ಬೇಕಣ್ಣ ಹೇಳದೆಯೆ ಸಾವೆ || 1 || ದಕ್ಷಿಣದ ಸಾಗರದ ಘೋಷಣೆಯು ಹಿಂದು ಹೈಮಾದ್ರಿ ಮಾರ್ದನಿಯ ನೀಡುತಿದೆ ಹಿಂದು ಬಂಗಾಳ ಹುಚ್ಚೆದ್ದು ಸಾರುತಿದೆ ಹಿಂದು ನವ ಜೀವ ಮಂತ್ರವಿದು ನಾವೆಲ್ಲ ಹಿಂದು || 2 || […]
ಅರಳಿಹುದೋ ಕೆರಳಿಹುದೋ ಹಿಂದೂ ಜಾಗೃತಿ ಮರಳಿಹುದೋ || ಪ || ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು ಶತಮಾನದ ಶೃಂಖಲೆಗಳ ಕಳೆದ ಹೊಸಮಾನದ ಹಿಂದೂ ಅಲೆ ಭುಗಿಲೋ || 1 || ಶಾಂತಿ ಸಮನ್ವಯ ಮಂತ್ರವ ಪಠಿಸಿದ ಸಂತರ ಪಾದಕೆ ಮಣಿದು ವಿಶ್ರಾಂತಿ ಮೈಮನಸಿಗೆ ವಿಕೃತಿಗೆ ಅಂತಿಮ ಕ್ರಿಯೆಗಳು ನಡೆದು ಮನುಕೋಟಿಗೆ ಸಂಕ್ರಾಂತಿಯ ಬಯಸಿದ ಹೂಂಕೃತಿಯೋ ಝೇಂಕೃತಿಯೋ ಹಿಂದೂ ಹೃದಯಗಳ ಸಂಸ್ಕೃತಿಯೋ || 2 || ವಾನರಸೇನೆಯ ಸಂಘಟಿಸಿದ ಶ್ರೀರಾಮನು ತ್ರೇತಾ ಯುಗದಿ ಗೋಪಾಲಕರನು ತಾ […]
ವಸುಂಧರಾ ಪರಿವಾರ ಹಮಾರಾ ಹಿಂದು ಕಾ ಯಹ ವಿಶಾಲ ಚಿಂತನ ಇಸ ವೈಶ್ವಿಕ ಜೀವನ ದರ್ಶನ ಸೇ ಮಾನವ ಜಾತೀ ಹೋಗೀ ಪಾವನ || ಪ || ಅಖಿಲ ವಿಶ್ವ ಕೇ ಪಥದರ್ಶನ ಕೀ ಮುನಿಜನ ಸಂತೋ ಕೀ ಅಭಿಲಾಷಾ ಬಂಧುಭಾವ ಸೇ ಸಬ ಜಗ ಜೋಡೇ ವೇದ ಔರ ಗೀತಾ ಕೀ ಭಾಷಾ ಸಮರಸತಾ ಮಂತ್ರ ಕೇ ನಾದ ಸೇ ಹಮ ಭರ ದೇಂಗೇ ಸಾರಾ ತ್ರಿಭುವನ || 1 || ಜಡ ಇಹವಾದೀ ತತ್ವಜ್ಞಾನ […]