ನಡೆದು ಬಾ ಸಾಧಕನೆ ನಡೆದು ಬಾ ನಡೆದು ಬಾ ಸಾಧಕನೆ ಮುನ್ನಡೆದು ಬಾ || ಪ || ನೆತ್ತರಿನ ಕಣಕಣದ ಸಂಘರ್ಷ ಪ್ರೇರಣೆಯು ದಹಿಸುತಿರೆ ಸಹಿಸುವುದು ನಿನಗಾಗದು ಸಾಹಸವು ಬಾಯ್ದೆರೆದು ಪೌರುಷವು ಹಸಿದಿರಲು ಸ್ಪರ್ಧೆ ಆಹಾರವಾಗಿಹುದು ಇಹುದು || 1 || ಧ್ಯಾನದಲಿ ಮುಳುಗಿಹವು ಧವಳಗಿರಿ ಶಿಖರಗಳು ಪ್ರಹರಿಗಳು ಮೇಲೇರಿ ನಿಲ್ಲಲೆಂದು ಸ್ವಾತಂತ್ರ್ಯ ಯೋಧರಿಗೆ ಸ್ವಾಗತದ ಸಂಗೀತ ಕೇಳುತಿದೆ – ಬರುವಿರಾ ಗೆಲ್ಲಲೆಂದು || 2 || ಮಾತೆಯದೆ ಮಡಿಲಿನೊಳು ಕುಟುಕುತಿಹ ವೃಶ್ಚಿಕದ ವಿಷವ ನುಂಗುವ ಹಸಿದ […]
ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು | ಎಂದೆಂದಿಗೂ ಸೂರ್ಯ ಚಂದ್ರರಿರುವ ತನಕ ಮಂದಿರದೊಳು ಬೆಳಕೀಯುವುದು || ಪ || ಘನತಮವನು ಹರಿಸೀ | ಪ್ರತಿಕ್ಷಣ, ತನುವನುರಿಸಿ ಜ್ವಲಿಸೀ | ತನುವಿದು ನಶ್ವರವೆನುತರಿಯುತ, ಜೀವನ ಸಾರ್ಥಕಗೈದು || 1 || ಮುಕ್ತಿಯನಿಚ್ಛಿಸದು | ದಣಿದು ವಿರಕ್ತಿಯ ತಳೆಯದದು | ಭಕ್ತಿಗೆ ಮಾತೆಯ ವ್ಯಕ್ತ ಸ್ವರೂಪವ ವ್ಯಕ್ತೀಕರಿಸುವುದು || 2 || ಬೆಳಗುವುದೀ ಜ್ಯೋತಿ | ಇತರರ ಬೆಳಗಿಸುವುದು ಜ್ಯೋತಿ | ಬೆಳಗಿಸಿ ದಶದಿಶೆಗಳ ಧ್ಯೇಯದ ಪಥದೊಳು ಮುಂದರಿಯುವುದು || […]
ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ || ಪ || ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ || 1 || ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ […]
ಧ್ಯೇಯ ಮಹಾದೇವನೆ ವಂದನೆ ನೀ ಹರಸುತಲಿರು ಸ್ವೀಕರಿಸುತಲಿರು ವಿಕಸಿತ ಜೀವನವಿರಿಸುತ ತಲೆ ಬಾಗುವೆನು || ಪ || ನಿನ್ನ ಹಿಮಾಲಯದುನ್ನತ ನೆಲೆಗೆ, ಹಬ್ಬಲು ಹೊರಟಿಹ ಬಾಳಿನ ಲತೆಗೆ ಎಲೆಗೊಂದೊಂದರಳಿಸು ಗುಣ ಮಲ್ಲಿಗೆ, ನಾ ಪೂರ್ಣ ಸಮರ್ಪಿತನು || 1 || ಕರಗಿಸು ಮೋಹದ ಮಂಜಿನ ಮಾಯೆ, ಕಳಚಿ ಬಿಡುವೆ ಭಯಭೀತಿಯ ಛಾಯೆ ವಾಮನನು ತ್ರಿವಿಕ್ರಮನಾಗೇಳುವೆ, ಅಳೆಯುವೆ ನೆಲಗಗನವನು || 2 || ಮೆರೆದಾಡುವ ಜನ ಕಂಟಕ ಬಲಿಯ, ಮದವೇರಿದ ಅಧಿಕಾರದ ತಲೆಯ ಮೆಟ್ಟಲು ಬಿಡದರಸುವೆ ಪದವೆತ್ತುತ, ಕಾಣಿಸೆ […]
ಧ್ಯೇಯಪಥದಿ ದಿಟ್ಟತನದಿ ಹರುಷದಿಂದ ಸಾಗುವಾ ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ || ಪ || ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವಾ ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವಾ ವಿಶುದ್ಧ ರಾಷ್ಟ್ರಪ್ರೇಮದಿಂದ ಕಾರ್ಯರಂಗಕಿಳಿಯುವಾ || 1 || ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ || 2 || ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವಾ ಪ್ರೇಮ ಪಾಶದಿಂದ ಎಲ್ಲ ಬಂಧುಗಳನು […]
ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]
ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]
ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ || ಪ || ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ || 1 || ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ ಕುರುಬರ […]
ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ || ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 || ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ ಯುವಜನಕೆ ಯುವ ಮನವ ಜೋಡಿಸಿ ಮನದಿ […]
ತಾಯೆ ಭಾರತಿ ನಿನ್ನ ಮೂರುತಿ ಎದೆಯ ಗುಡಿಯೊಳಿಟ್ಟು ಭಜಿಸಿ ಜ್ವಲಿಪೆನಾರತಿ || ಪ || ಜಗಕೆ ಮೊದಲ ಜ್ಞಾನ ಕಿರಣದಾತ್ರಿ ಎಂಬ ಕೀರುತಿ ಪ್ರೇಮ ಶಾಂತಿ ಸ್ನೇಹಗಳಲಿ ಸದಾ ನಿನ್ನ ಅನುರತಿ ಆತ್ಮದೀಕ್ಷೆ ನೀಡಿ ಜನರ ತಮವ ಕಳೆವ ಸತ್ಕೃತಿ ಮರ್ಮವರುಹಿ ವಿಶ್ವಕ್ಕೆಲ್ಲ ಮಾರ್ಗ ತೋರುತಿ || 1 || ತಾಯೆ ನಿನ್ನ ಉದರದಲ್ಲಿ ಬಂದ ರಾಮ ರಘುಪತಿ ಪಾಂಚಜನ್ಯ ಮೊಳಗಿ ಗೀತೆಯೊರೆದ ಪಾರ್ಥಸಾರಥಿ ವ್ಯಾಸ ಬುದ್ಧ ಮಧ್ವ ಬಸವ ಶಂಕರಾದಿ ಋಷಿಯತಿ ಶಿವ ಪ್ರತಾಪರೆಮಗೆ ವಂದ್ಯ […]