ಧ್ಯೇಯದಾ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ || ಪ || ಕರದಿ ಸಂಘಸೂತ್ರ ಹಿಡಿದು ಭರದಿ ಹಿಂದುತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘಮಂತ್ರ ಜಪಿಸುತಾ ಬಂಧುಭಾವ ಬೆಳೆಸುತಾ || 1 || ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯಸೇವೆಗೆ ಉರಿಸಿ ಕಾಯ ದೀವಿಗೆ || 2 || ವ್ಯಕ್ತಿ ವ್ಯಕ್ತಿಗಳನು […]
ಜೀವನ ತುಂಬಿದೆ ವಿಫಲತೆಗಳ ರಾಶಿ ಸಫಲತೆ ಹತ್ತಿರ ಹತ್ತಿರವಾಗುತ್ತಲೆ ದಾರಿಯಿಂದ ದೂರಕೆ ಬಿಟ್ಟೆನು ನೂಕಿ; ಏನಿದು, ಮೂರ್ಖತನಯೇನಿದು? …. ಅಲ್ಲಲ್ಲ! ಸಫಲತೆ ವಿಫಲತೆಗಳ ನೀತಿ ನಾನರಿಹುದೇ ಬೇರೆಯ ರೀತಿ ಕ್ರಾಂತಿಯ ಶೋಧಕ ನಾ ಮನಸಾರೆ ಮೆಚ್ಚುವುದಿಚ್ಛಿಸುವುದೇ ಬೇರೆ ಅವಿರತ ಸೇವೆಯ, ತ್ಯಾಗದ ನವನಿರ್ಮಾಣದ ದಾರಿ ನಾ ಸಮಗ್ರ ಕ್ರಾಂತಿಯ, ಸಂಘರ್ಷದ ಪಥ ಸಂಚಾರಿ ಜಗವಾವುದ ವಿಫಲತೆಯೆನ್ನುವುದೋ ಅದೆ ಶೋಧಕನೇರಿದ ಮಜಲುಗಳು ಗಗನದವರೆಗೂ ಎಣಿಕೆಗೆ ನಿಲುಕದ ಮಹಲುಗಳು ಏರಲು ಬೇಕೆನಿಸಿತೋ ಗುರಿ ಸೇರಲು ಸೋಪಾನಗಳು ಎದುರಾಗುವ ತೊಡಕಿಗೆ, ದಣಿವಿಗೆ […]
ಮಗೂ ! ನೀನು ಪುಸ್ತಕದಲ್ಲಷ್ಟೇ ಓದಿದೆ ನಾನೊ-ಕಣ್ಣಾರೆ ಕಂಡಿದ್ದೆ, ತಂದೆ ಮಗ ಹೊತ್ತು ತರುವುದನು, ದೂರದ ಪಯಣ, ಅರಿಯದ ಹಾದಿ, ಕಲ್ಲುಮುಳ್ಳಿನ ನಡೆ, ಬನ್ನ ಬವಣೆಯ ದಿನ, ಇಳಿವ ಬೆವರು, ಸುರಿವ ರಕುತ ಬಾಗಲಿಲ್ಲ ದೇಹ, ಸೋಲಲಿಲ್ಲ ಜೀವ, ತಂದೆ ಮಗ ಹೊತ್ತು ಹೊತ್ತು ತಂದಿದ್ದರು ಕತ್ತೆ, ಮಗೂ!, ನಾನೊ, ಪಡುವಲದಂಚಿನ ಸವೆದ ಚಂದಿರ ನೀನೊ ಉದಯಗಿರಿಯಲಿ ಕಣ್ತೆರವ ನೇಸರು ಉತ್ಸಾಹ ಸಾಹಸದ ಉರಿವ ನಾಲಗೆ ನಿನ್ನೆದೆಯನಾಳಿದೆ. ಕಾಲ ಬೆತ್ತಲಾಗಿ ನೀಡಿ ನಿಂತಿದೆ. ನಿನಗೆ ಬೇಕೇ ಬೇಕಣ್ಣ […]
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು, ಬೇಕಾದದ್ದು ಬಿತ್ತಿ ಬೆಳೆದುಕೋ ಬಂಧು ಬೆನ್ಮೂಳೆ ಮುರಿದು ಬಳಿಕ ಬಡಕೊಳ್ಳುತ್ತೇನೆ ಬಾನುಲಿ ; ಎರಡೂ ಕಾಲಿನ ಮೆಲೆ ನಿಲ್ಲಲೇ ಬೇಕೆಂಬ ತೊದಲುಲಿ ಆನತಾ ವಿರೋಧಿದಳಗಳ ಪಿತೂರಿ. ಕಾನೂನು ಮನ್ನಿಸುವ ಜನ ನಾಲ್ಕೂ ಕಾಲಲ್ಲಿ ನಡೆದರೇ ಚಂದ, ಬೀಳುವಪಾಯ ಕಮ್ಮಿ, ಸರ್ವದಾ ಸಾಷ್ಟಾಂಗ ಪ್ರಣಾಮದ್ದೇ ಭಂಗಿ. ಹೇಳಿದ ಹಾಗೆ ಕೇಳಿ ಬಾಲ ಮುದುರಿ ಕುಳಿತರೇನೇ ಲಾಭ : ಹೊಟ್ಟೆಗಿಷ್ಟು ಹಿಟ್ಟು ಜುಟ್ಟಿಗೆ ಪ್ಲಾಸ್ಟಿಕ್ ಮಲ್ಲಿಗೆ ಸಿಗುತ್ತದೆ ಹೆದರಬೇಡಿ ನಾಳೆಗೆ. ಸ್ವಾತಂತ್ರೋತ್ಸವಕ್ಕೆ […]
ಸಾವಿರದಳ ಕಮಲಿನಿ ಓ ಭಾರತಿ ತಾಯೆ ನಿನಗೆ ಇದೋ ಜೀವದಾರತಿ || ಪ || ನೂರು ನುಡಿಗಳಿಂದ ಕಂದರನ್ನು ಕರೆವ ವಾಗ್ವಿದೆ ಹಲವು ರೀತಿ ಹಾಡಿ ಹಾಲನೂಡಿ ಪೊರೆವ ಶಾರದೆ ಕೈಯ ಹಿಡಿದು ಅಡಿಯನಿರಿಸಿ ಮುನ್ನಡೆಸುವಧಾರಿಣಿ ತೊದಲ ನುಡಿಸಿ ಕೇಳಿ ಹರ್ಷ ತಾಳಿ ನಲಿವ ತಾರಿಣಿ… || 1 || ತಪ್ಪಿದಾಗ ಮಕ್ಕಳು ರಣ ಚಂಡಿಯಾಗಿ ಖಂಡಿಸಿ ಮತ್ತೆ ಕರೆದು ಲಲ್ಲೆಗರೆದು ಕಣ್ಣನೊರೆಸಿ ಮುದ್ದಿಸಿ ನಮ್ಮ ಸೋದರತ್ವವನ್ನು ನಮಗೆ ಮನನಗೊಳಿಸುತ ಮನೆಯ ನಿಲ್ಲಿಸಮ್ಮ ತಾಯೆ ನಮ್ಮನ್ನೆಲ್ಲ ಒಲಿಸುತಾ […]
ಯೋಗೇಶ್ವರ ಕೃಷ್ಣನಂತೆ ರಾಷ್ಟ್ರಶಕ್ತಿ ಎದ್ದಿದೆ ಧನುರ್ಧಾರಿ ಪಾರ್ಥನಂತೆ ವೀರ ಘೋಷ ಗೈದಿದೆ || ಪ || ಏಕಪುರುಷನಂತೆ ದೇಶ ತಲೆಯನೆತ್ತಿ ನಿಂತಿದೆ ವೈರಿಗದು ಕಾಲಪಾಶವಾಗಿ ಕತ್ತು ಸುತ್ತಿದೆ || 1 || ಧರ್ಮವನ್ನೆ ಹಿಡಿದು, ತನ್ನ ಶೌರ್ಯಮೆರೆದ ವೈರಿಯು ನಾಶವನ್ನು ಕರೆದು ಕರಗಿದಂತೆ ಆಯ್ತು ಕೃತ್ಯವು || 2 || ಜಗದ ಜನಸ್ತೋಮವೆಲ್ಲ ನಮ್ಮ ಹಿಂದೆ ನಿಂತಿದೆ ಸತ್ಯಧರ್ಮ ಶಾಂತಿ ಪ್ರೀತಿ ನಮಗೆ ಶಕ್ತಿ ಇತ್ತಿದೆ || 3 || ದೇಶಕ್ಕಾಗಿ ಸರ್ವತ್ಯಾಗಗೈಯೆ ಜನರು ಸಿದ್ಧರು ಅಂತಿಮ […]
ಸರಸ್ವತೀ…….. ಸಮಿತಿಯ ಸಾರಥಿ ಮಮತಾಮಯಿ ನೀವ್ ಮಧುರ ಸ್ಮೃತಿ || ಪ || ಲಕ್ಷ್ಮೀಯನಂದು ಸಂಧಿಸಿದಾ ದಿನ ಗಂಗಾಯಮುನೆಯರ ಅದ್ಭುತ ಮಿಲನ ರಾಷ್ಟ್ರಚಿಂತನೆಗರ್ಪಿತ ಜೀವನ ಸಾರ್ಥಕ ಭಾವದಿ ಸರ್ವ ಸಮರ್ಪಣ || 1 || ಶಿಸ್ತಿನ ಬದುಕಿಗೆ ನಿರ್ಮೋಹದ ಬೆಡಗು ಕ್ರಿಯಾಶೀಲೆಗೆ ಮೃದುವಾಣಿಯ ಸೊಬಗು ಆತ್ಮೀಯತೆಯ ಅನುಪಮ ಪುನುಗು ಕಷ್ಟನಷ್ಟದಿ ಧೈರ್ಯದ ಮೆರುಗು || 2 || ಏನಿದು ತಾಯೇ ನಿಮ್ಮಯ ಮೋಡಿಯು ಹೃನ್ಮನ ಸೆಳೆಯುವ ಸರಳ ಸ್ವಭಾವವು ಮಾತಿಗೆ ನಿಲುಕದ ಮಾತೃತ್ವದ ಸುಧೆಯು ಸುಮದಲಿ ಬೆರೆತ […]
ಸಾವಧಾನ ಸಾವಧಾನ ದಕ್ಷಳಾಗಿ ನೀನಿರೂ ದಕ್ಷಸೇವಿಕಾ ಇರು ಸದಾ ನೀ ದಕ್ಷಳಾಗಿರು || ಪ || ಅಮರವಲ್ಲತನುವಿದು ಸ್ಥೈರ್ಯವಿರುವ ಮನಕಿದೂ ಶೀಲಸತ್ವರಕ್ಷೆಗೆ ಸದಾ ನೀ ಸಿದ್ಧಳಾಗಿರೂ ಪೂರ್ತಿಗೂಳಿಸಿ ಸಾಧನೆ ಆತ್ಮತೇಜ ಬೆಳಗಿಸು || 1 || ಮಾರ್ಗಕಿರಿದು ದಾರಿ ಕಡಿದು ಧ್ಯೇಯ ಶಿಖರವೆತ್ತಲೂ ಸ್ವಾರ್ಥ ಮೋಹ ಭಯ ವಿಪತ್ತು ಇಹುದು ಹೆಜ್ಜೆ ಹೆಜ್ಜೆಗೂ ಸರ್ವಶಕ್ತಿಕೂಡಿಸುತ್ತ ಮೇರು ಶಿಖರವೆತ್ತಲೂ || 2 || ತ್ಯಾಗ ಧೈರ್ಯ ಪ್ರೇಮ ಸಹನೆ ಗುಣವ ಬೆಳೆಸಿಕೊಳ್ಳುವುದು ಮಾತೃಭೂಮಿ ಪದಗಳಲ್ಲಿ ಅಚಲಭಕ್ತಿ ಇರಿಸುತಾ ಉನ್ನತಿಯನು […]
ವಿನಮ್ರ ಭಾವದಿ ಮಾಡುವೆ ವಂದನೆ ಗೈಯುವೆ ಶ್ರೀ ಗುರು ಪೂಜೆಯನೀ ದಿನ || ಪ || ಉಜ್ವಲವೆಮ್ಮದು ಆರ್ಯ ಸಂಸ್ಕೃತಿ ಗುಂಜಿಸುತಿದೆ ಈ ಧ್ವಜದಾ ಕೀರುತಿ ಭಗವಾಧ್ವಜವಿದು ಎಮ್ಮಯ ಗುರು ಸುಂದರ ಭೂಷಣ ಭಾರತ ಜನತೆಗೆ || 1 || ಕ್ರಾಂತಿ ಕ್ರಾಂತಿ ಸಂಗಮ ಬೇಕೆನುತಿದೆ ವಿಜಯ ವಿಕ್ರಮ ಜಗಕೆ ಸಾರುತ ತ್ಯಾಗ ತಪಗಳ ವೈಭವ ತೋರುವ ಭಗವಾಧ್ವಜದಲಿ ವರ್ಣದ ಮಿಲನವು || 2 || ತ್ಯಾಗವನೆಸಗುತೆ ನಾಡನುಳಿಸುತೆ ವೈಭವ ಶಿಖರಕೆ ರಾಷ್ಟ್ರವನೊಯ್ಯುವ ನಭದಲಿ ನರ್ತಿಸುತಿರಲಾ ಭಗವಾ […]
ರಾಷ್ಟ್ರೋನ್ನತಿಯೊಂದೇ ಧ್ಯಾನ ಧ್ಯಾನಿಸಲಿ ಸದಾಮನ ರಾಷ್ಟ್ರಜೀವನದಲ್ಲೆ ಜೀವ ಜೀವನಾಂತವ ಕಾಣಲಿ || ಪ || ಭೋಗಮೋಹ ಸ್ವಾರ್ಥ ತೊರೆದು ನವೆಯಲಿ ತನು ಪರಾರ್ಥಕ್ಕಾಗಿ ಶ್ರೀಗಂಧದ ಮೇಲು ಸುಗಂಧ ದಶದಿಶೆಗಳ ತುಂಬಲಿ || 1 || ಮನದಲಿಹ ಕಾರ್ಯಭಾವ ಕ್ರಿಯಾಶೀಲವಾಗಲಿಲ್ಲಿ ಕೃತಿಯ ಕೀರ್ತಿ ಗುಡಿಯ ನಾಡ ಎಲ್ಲೆಡೆಯಲಿ ಹರಡಲಿ || 2 || ಅನ್ಯ ಯಜ್ಞಯಾಗವೇಕೆ ಜೀವನದಿ ಯಜ್ಞ ತ್ಯಾಗ ಬಂಧಿ ವಾನ ಆತ್ಮತೇಜ ಇಂದು ಮುಕ್ತವೆನಿಸಲಿ || 3 ||