ಮುನಿಸು ತೊರೆದು ಹರುಷ ತೋರು ನಮ್ಮ ತಾಯಿ ಭಾರತೀ ಹರಸು ನಮ್ಮ ಶಿರವ ಪಿಡಿದು ತರುವೆವಮ್ಮ ಕೀರುತಿ || ಪ || ಹೊಂಚು ಹಾಕಿ ಹಿರಿಯಲೆಂದು ಅಡಗಿ ಕುಳಿತ ಅರಿಗಳು ಬಿಡುವೆವೇನು ಕಡಿವೆವಲ್ಲೆ ನಾವು ಧೀರ ಮಕ್ಕಳು ಚೆನ್ನಮ್ಮ ಲಕ್ಷ್ಮೀ ನಾವೇ ಕ್ಷಾತ್ರ ತೇಜ ಕುಡಿಗಳು || 1 || ಪ್ರತಿ ಗೃಹದ ಒಳಗಿನಿಂದ ಕೇಳುತ್ತಿದೆ ಮೊಳಗು ಭೈರವಿಯ ಶಕ್ತಿಧರಿಸಿ, ತರುವೆವು ಬೆಳಗು ಬೇಡವೆಮಗೆ ಸ್ವತ್ವವಿರದ ವಿದೇಶೀಯರ ಬೆಡಗು ಸ್ವದೇಶ ಭಾಷೆ ವಸ್ತ್ರವೆಮಗೆ ಎಂದೆಂದೂ ಸೊಬಗು || […]
ದೂರ ತೀರದ ಶ್ವೇತ ಕುವರಿಗೆ ಏನು ಇಲ್ಲಿಯ ಚಿಂತನೆ ವೀರ ಸಂತ ವಿವೇಕ ಶೋಧನೆ ಎಂಥ ಅದ್ಭುತ ಕಲ್ಪನೆ || ಪ || ಹಿಂದು ಸಂಸ್ಕೃತಿಯವಳ ಉಸಿರು ಭರತ ಖಂಡಕೆ ಸೋದರಿ ದೀನ ದಲಿತರ ನೋಡುವಾ ಪರಿ ಎನಿತು ಕಾರ್ಯದ ವೈಖರಿ ಪುಟ್ಟ ಬಾಲೆಯರವಳಿಗಕ್ಕರೆ ಜ್ಞಾನ ಬೆಳಗಿದ ಭವ್ಯ ತಾರೆ ಸ್ತ್ರೀಗೆ ಶಿಕ್ಷಣ, ಸ್ವಾಭಿಮಾನವ ಸಾರಿ ಹೇಳಿದ ಶ್ವೇತ ಧಾರೆ || 1 || ಪ್ಲೇಗು ಮಾರಿ ಕಾಡಲಾಗ ಅಕ್ಕ ಆ ಕ್ಷಣ ಹಾಜರಿ ದುಃಖತಪ್ತರ ಕಣ್ಣ […]
ನಾಗಪುರದ ಮಹಲಲಾಯಿತು ನಾರೀರತ್ನದ ಜನನವು ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಕಿ ಈಕೆ ಸ್ತ್ರೀಯರ ಭಾಗ್ಯವು ಕಮಲ ಕೋಮಲೆ ವಾತ್ಸಲ್ಯಮಯಿಗೆ ಶಾಂತ ಸ್ನೇಹದ ಭಾವವು ರಾಷ್ಟ್ರ ಚಿಂತನೆ ಸ್ತ್ರೀಯ ರಕ್ಷಣೆಯಂಥ ಉನ್ನತ ಧ್ಯೇಯವು || ಪ || ಬಾಲ್ಯದಲ್ಲಿಯೆ ಯೋಗ್ಯ ಶಿಕ್ಷಣ ರಾಷ್ಟ್ರಭಕ್ತಿಯ ಸೇಚನ ಕೇಳ್ಕರೊಡನೆ ವಿವಾಹ ಬಂಧನ ಲಕ್ಷ್ಮಿಯಾಗಿ ವಾರ್ಧಾ ಜೀವನ ಗೃಹಿಣಿಯಾಗಿ ಗೃಹಬಂಧನ ಲಕ್ಷ್ಮೀ ಎದೆಯಲಿ ತಲ್ಲಣ ಮುದ್ದು ಮಕ್ಕಳ ಮಾತೆಯಾ ಮನ ನಿರತ ವಿಚಾರ ಮಂಥನ || 1 || ಸಾರ್ವಜನಿಕ ಜೀವನಕೆ ಲಕ್ಷ್ಮೀಬಾಯಿಯ […]
ನಮ್ಮ ತಾಯಿ ಭಾರತಿ ನಮ್ಮ ಹಿಂದು ಸಂಸ್ಕೃತಿ ನಮ್ಮ ದೇಶ ಭಾರತ ನಮಗೆ ಸದಾ ಪೂಜಿತ ನಾವು ಭಾರತೀಯರೂ ನಾವು ಬಂಧು ಬಾಂಧವರು || ಪ || ಭಾಷೆ ಬೇರೆ ವೇಷ ಬೇರೆ ದೇಶ ಮಾತ್ರ ಒಂದೇ ಜಾತಿ ಬೇರೆ ರೀತಿ ಬೇರೆ ನೀತಿ ಮಾತ್ರ ಒಂದೇ ಭಿನ್ನಮತೀಯರಾದರೂ ನಾವು ಭಾರತೀಯರು || 1 || ಗಂಗೆ ತುಂಗೆ ಯಮನೆಯರು ಹರಿವ ಪುಣ್ಯನಾಡಿದು ಹಿರಿಮೆ ಗರಿಮೆ ಪ್ರಕೃತಿ ಸಿರಿಯು ಇರುವ ಗಣ್ಯ ಬೀಡಿದು ನಮ್ಮ ತಾಯಿ ನಾಡಿದು […]
ಜಯ ಜಯ ಭಾರತ ಜನನಿ ನಮೋ ಭಾರತ ಜನನಿ ನಮೋ ನಮೋ || ಪ || ಆರ್ಯ ಭೂಮಿ ಋಷಿಯತಿಗಳ ನಾಡು ದೇವ ವಾಣಿ ಧರೆಗಳಿದಿಹ ಬೀಡು ಸರಸಜಲದ ಮನಮೋಹಕ ಕಾಡು ಧವಲ ಹಿಮಾಲಯ ಪುಣ್ಯ ಮಯೀ || 1 || ಸಕಲ ಧರ್ಮಗಳಿಗಾಶ್ರಯದಾತೆ ಆದ್ಯ ಸನಾತನ ಸಂಸ್ಕೃತಿ ಜಾತೆ ವೇದ ಘೋಷ ಓಂಕಾರ ಪುನೀತೆ ತವನಿಧಿ ಭಾರತ ಹೇ ಜನನೀ || 2 || ಕೋಟಿ ಕೋಟಿ ಭಾರತ ಜನಸ್ಫೂರ್ತಿ ಜನಮನ ಬೆಳಗುವ ಮಂಗಳಮೂರ್ತಿ ಸರ್ವತ್ಯಾಗವಿದು […]
ನಮನ ನಮನ ನಮನ ನಮನ ನಮನ ನಮನ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿಗಿದೋ ನಮನ ಭಾರತ ಮಾತೆಗಿದೋ ನಮನ ಸುತ್ತಲು ಸಾಗರ ವಸ್ತ್ರವ ಧರಿಸಿದ ಮಾತೆಗಿದೋ ನಮನ ನಮನ ಮಾತೆಗಿದೋ ನಮನ || ಪ || ಕೋಟಿ ಕೋಟಿ ಕಣ್ ಕೋಟಿ ಕೋಟಿ ಕೈ ತಾಳಿ ನಿಂತರೇನು? ಸಾಟಿಯಿಲ್ಲದ ಏಕರೂಪದ ತಾಯಿಗಿದೋ ನಮನ ಮರಗಿಡ ಆಡಿ ತೂಗುವ ಗಾಳಿಯ ಪರಿಮಳ ನಿನ್ನುಸಿರು ನೀ ಧರಿಸಿರುವ ಪೀತಾಂಬರಗಳು ಶಾಲಿ ವನದ ಹಸಿರು ಹಗಲಲಿ […]
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು ! ದೂರದಡವಿಯೊಳೆಲ್ಲಿ ಲೌಕಿಕ ವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೋ, – ಮೇಣ್ ಎಲ್ಲಿ ಜೀವವು ತಿಳಿಯದೋ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ, ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ […]
ಹಿಂದುತ್ವದರಮನೆಯ ತೋರಣ ಬಂಧುತ್ವದೆದೆದನಿಯ ಶ್ರವಣಾ ಶ್ರಾವಣದ ಪೂರ್ಣಿಮೆಯ ದಿನದ ರಕ್ಷಾಬಂಧನ || ಪ || ಸಂಸ್ಕೃತಿಯ ಸೌಧದಲಿ ಗೈದು ವೀರವ್ರತ ಸತ್ಕೃತಿಯ ಶಪಥ ಭಕ್ತಿಯಲಿ ಮುನ್ನಡೆದು ಬುವಿ ಬಾನ್ಗೆ ಕೈಮುಗಿದು ಹರಕೆ ಪಡೆದು ಪೌರುಷವನುರೆ ಮೆರೆಸಿ ತಾಯ್ನೆಲದ ಕಣಕಣದ ಋಣವ ಹರಿಸಿ ಮನುಜತೆಗೆ ದಿವ್ಯತೆಯ ತರಲಿದುವೆ ತೊಡಿರೈ ಅಮರ ಸೂತ್ರ || 1 || ಹಿಂದುಹಿಂದುವಿನೆದೆಯ ಒಂದುಗೂಡಿಸುವ ಈ ಸ್ನೇಹಸೂತ್ರ ಜನ್ಮಭೂಮಿಯ ಜನರ ರಕ್ಷಣಾಕವಚ ಕಾವಲಿನ ಶಸ್ತ್ರ ಅರಿಗೆಲ್ಲಿ ಇನ್ನುಳಿವು ಪಟುಭಟರೆ ನೀಡಿರೈ ಖಡ್ಗ ಹಸ್ತ ನೆಲದೊಲವನಿದೊ […]
ಹಿಂದುತ್ವಕಾವರಿಸಿದೆಲ್ಲ ಕಿಲ್ಬಿಷ ಸುಟ್ಟು ಸ್ವತ್ವ, ಸಿಂಹತ್ವ ಮೆರೆಯಿಸಲು ಬನ್ನಿ ಸ್ವಾರ್ಥ ಜಡತೆಯ ತೊರೆದು ಸ್ವಾಭಿಮಾನವ ತಳೆದು ಮರೆತ ಬಂಧುತ್ವ ಗುರುತಿಸಲು ಬನ್ನಿ || ಪ || ಹೋಳುಹೋಳಾಗಿಸಿದ ಕೀಳರಿಮೆಗೀಳುಗಳ ಸಾಕಿದ್ದು ಸಾಕಿನ್ನು ಭೇದಭಾವ ಎಲ್ಲರದು ಕೈಹಿಡಿದು ಒಲ್ಲದರ ಕಾಲ್ವಿಡಿದು ದುಡಿದುಡಿದು ಬೆಸೆಯೋಣ ನಾಡ ಜೀವ || 1 || ನವ ಪ್ರಾಣದಾಯಿನಿಯೆ ಚೈತನ್ಯವಾಹಿನಿಯೆ ಧ್ಯೇಯಭಾಗೀರಥಿಯೆ ಬಾರ ಬಾರ ಚಕ್ರಗಳ ಸಂಚಾರ ವಕ್ರಗಳ ಸಂಹಾರ ಉದ್ಘಾಟಿಸಲಿ ನಿನ್ನ ಹೊನಲುದಾರ || 2 || ಬೆಳೆಬೆಳೆಯಲಿಂದಿಲ್ಲಿ ಜನಮನದ ಹೊಲದಲ್ಲಿ ಧರ್ಮದನುರಾಗ […]
ಹೊಕ್ಕವರುಂಟು ಸಿಂಹದ ಗುಹೆಯ ಬಂದವರೆಷ್ಟು ಹೇಳೋ ಗೆಳೆಯ? || ಪ || ಹೇಳುವೆ ಕೇಳು ಧೈರ್ಯವ ತಾಳು ಅಂಥಾ ಧೀರನ ಕಥೆಯ ಹೊಕ್ಕು ಗುಹೆಯೊಳು ಹಿಡಿದು ದಾಡಿಯ ಎಳೆದಾಡಿದಂಥ ವಿಷಯ || 1 || ಭಾರತ ಪುತ್ರ ಯುವಜನಮಿತ್ರ ಕ್ರಾಂತಿಯ ಕಡುಗಲಿ ನೇತ ಶಸ್ತ್ರಸಮರಕೆ ಕಟ್ಟಿ ಸಂಸ್ಥೆಯ ಹೆಣೆದನು ಹಿಡಿದನು ಸೂತ್ರ || 2 || ಬಾಲ್ಯದಿ ಗೈದ ವೀರ ಪ್ರತಿಜ್ಞೆ ಮರೆಯದೆ ಜೀವನ ಪೂರ್ತಿ ಕಾಲ ದೇಶದ ಎಲ್ಲೆಯಾಚೆಗು ಹಬ್ಬಿ ಹೋದಂಥ ಕೀರ್ತಿ || 3 […]