ಧ್ಯೇಯಪಥದಿ ದಿಟ್ಟತನದಿ ಹರುಷದಿಂದ ಸಾಗುವಾ ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ || ಪ || ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವಾ ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವಾ ವಿಶುದ್ಧ ರಾಷ್ಟ್ರಪ್ರೇಮದಿಂದ ಕಾರ್ಯರಂಗಕಿಳಿಯುವಾ || 1 || ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ || 2 || ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವಾ ಪ್ರೇಮ ಪಾಶದಿಂದ ಎಲ್ಲ ಬಂಧುಗಳನು […]
ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]
ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]
ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ || ಪ || ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ || 1 || ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ ಕುರುಬರ […]
ದಿವ್ಯದರ್ಶನ ಭಾಗ್ಯ ಬೆಳಗಿದೆ ಸಿಂಧು ಕಡಲಿನ ತೀರದಲ್ಲಿ || ಪ || ಗಂಗೆ ನಿಲ್ಲದು ತುಂಗೆ ನಿಲ್ಲದು ಸಾಗರದ ಗುರಿ ಸೇರುವನಕ ಜೀವನದ ನದಿ ನಿಲ್ಲಲಾಗದು ಗುರಿಯ ಸಾಗರ ಸೇರುವನಕ ಜೀವತಳೆದೇಳೇಳಿ ಧಾವಿಸಿ ಕಾರ್ಯ ಸಫಲತೆ ಕಾಣುವನಕ ಸ್ಥೈರ್ಯ ಸ್ಫೂರ್ತಿಯ ಅಮರಧಾರೆಯ ಸೃಜಿಸಿ ಪ್ರವಹಿಸಿ ನಾಡಲಿ || 1 || ಜಡ ಸಮಾಜಕೆ ಜೀವ ನೀಡುವ ಜಾಗೃತಿಯ ಹೂಂಕಾರ ಹೊರಡಿಸಿ ಮುನ್ನಡೆವ ವಿಜಗೀಷು ವೃತ್ತಿಯ ಕಹಳೆ ಎತ್ತುತೆ ನಭಕೆ ಮೊಳಗಿಸಿ ಯುವಜನಕೆ ಯುವ ಮನವ ಜೋಡಿಸಿ ಮನದಿ […]
ತಾಯೆ ಭಾರತಿ ನಿನ್ನ ಮೂರುತಿ ಎದೆಯ ಗುಡಿಯೊಳಿಟ್ಟು ಭಜಿಸಿ ಜ್ವಲಿಪೆನಾರತಿ || ಪ || ಜಗಕೆ ಮೊದಲ ಜ್ಞಾನ ಕಿರಣದಾತ್ರಿ ಎಂಬ ಕೀರುತಿ ಪ್ರೇಮ ಶಾಂತಿ ಸ್ನೇಹಗಳಲಿ ಸದಾ ನಿನ್ನ ಅನುರತಿ ಆತ್ಮದೀಕ್ಷೆ ನೀಡಿ ಜನರ ತಮವ ಕಳೆವ ಸತ್ಕೃತಿ ಮರ್ಮವರುಹಿ ವಿಶ್ವಕ್ಕೆಲ್ಲ ಮಾರ್ಗ ತೋರುತಿ || 1 || ತಾಯೆ ನಿನ್ನ ಉದರದಲ್ಲಿ ಬಂದ ರಾಮ ರಘುಪತಿ ಪಾಂಚಜನ್ಯ ಮೊಳಗಿ ಗೀತೆಯೊರೆದ ಪಾರ್ಥಸಾರಥಿ ವ್ಯಾಸ ಬುದ್ಧ ಮಧ್ವ ಬಸವ ಶಂಕರಾದಿ ಋಷಿಯತಿ ಶಿವ ಪ್ರತಾಪರೆಮಗೆ ವಂದ್ಯ […]
ಜೈ ಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ ವಿಶ್ವಧರ್ಮಕೆ ಜೈ ಎನುತಾ ಬನ್ನಿರಿ ಬೆಳಗುವ ಸಂಘಜ್ಯೋತಿಯ ಮನೆ ಮನೆಗಳಿಗೀಗ || ಪ || ನಮ್ಮ ನಾಡಿದು ನಮ್ಮ ಹೊನ್ನಿನ ಬೀಡಿದು ನಮ್ಮ ಹೃದಯವ ಕರೆದಿಹುದು ಜಗವನು ಬೆಳಗಿದ ಋಷಿಗಳ ಆಧ್ಯಾತ್ಮದ ತವರೂರು ಶೌರ್ಯದಿ ಕೆಚ್ಚದಿ ಕಾದಿಹ ವೀರರ ಸ್ಮರಿಸುತ ಸಾಗುವೆವು || 1 || ಪುಣ್ಯಭೂಮಿಯು ಇದುವೆ ಮೋಕ್ಷಭೂಮಿಯು ಶ್ರೇಷ್ಠ ಜೀವನಪದ್ಧತಿಯು ಜಗವನು ಶ್ರೇಷ್ಠತೆಗೊಯ್ಯಲು ನಾವು ಶಪಥವ ಮಾಡುವೆವು ಪವಿತ್ರ ಕಾರ್ಯದ ಸಾಧನೆಗಾಗಿ ತನು ಮನ […]
ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]
ಜಯ ಜಯ ಭಾರತ ದೇಶ || ಪ || ಮುಗಿಲನು ನಿಲುಕಿದ ಚೆಲುವು ಹಿಮಾಚಲ ಸಿಂಧು ಸುರನದಿ ಸದಮಲ ಸಲಿಲ ಎಡಬಿಡದೆಲೆ ನಿನ್ನಡಿ ತೊಳೆಯುತಲಿ ತುಂಬಿದೆ ಹಿಂದು ಮಹಾಸಾಗರ ಜಲ ನಿನ್ನಯ ಮೇಲ್ಮೆಯ ಗೆಲುವಿನ ಗುಡಿಯು ಮೆರೆಯಲಿ ದೇಶ ವಿದೇಶ || 1 || ಮಾ ಸ್ವತಂತ್ರ ನೀ ಸುತರಿಗೆ ಸತತ ನೀಡಿದೆ ಸದ್ಧರ್ಮದ ಜಯ ಪಂಥ ಅದರಿಂದಾಗಲಿ ಈ ಜಗ ಶಾಂತ ಸೌಖ್ಯ ಸಮೃದ್ಧ ಸ್ವತಂತ್ರವನಂತ ಮೈ ತಾಳುತ ಪುನಃ ಕೇಳ್ಬರಲಿಂದು ಗೀತೆಯ ಮಹದುಪದೇಶ || […]
ಜಯ ಜಯ ಜನ್ಮಭೂಮಿ ಜಯ ಜಯ ಜಯ ಭಾರತ ಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅಪ || ಸ್ನೇಹದಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯ ಭೂಮಿ ಭಾರತ ಭೂಮಿ ಭಾಸುರ ಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತ ಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತ ಭೂಮಿ ಭಾಸುರ […]