ನಿನ್ನೊಲವಿನಲಿ ನಲಿವ

ನಿನ್ನೊಲವಿನಲಿ ನಲಿವ ಭಾಗ್ಯವೆಮ್ಮದು ತಾಯೆ ಬಣ್ಣನೆಗೆ ನಿಲುಕದಿಹ ಭವ್ಯ ಸಂಸ್ಕೃತಿ ಪ್ರಭೆಯೆ || ಪ || ಸರ್ವರಲು ಸಮಭಾವ ಹಿಂದುತ್ವದೌನ್ನತ್ಯ ಅಸ್ಮಿತೆಗೆ ಕುಂದಿರದ ಸ್ವಂತಿಕೆಯ ಸಾಂಗತ್ಯ ವಿಧವಿಧದ ಭಾಷೆಮತ ಒಮ್ಮತದ ವೈವಿಧ್ಯ ತ್ಯಾಗದೆಲೆ ಅತಿಹಿತವು ಜಗದಗಲ ಬಾಂಧವ್ಯ || 1 || ಅತಿಸಹನೆ ಒಳಿತಲ್ಲ ಸ್ವಾಭಿಮಾನಕೆ ಧಕ್ಕೆ ಜನನಿಯಾದೆಯೆ ದುರ್ಗೆ ದುಷ್ಟ ಸಂಹಾರಿಣಿಯೆ ಮರೆತುಬಿಟ್ಟೆವು ಚರಿತೆ ಮನ್ನಿಸೆಮ್ಮನು ತಾಯೆ ಪಾಪಿಗಳ ದುಷ್ಕೃತಿಯು ಸುತರಿಗಿಲ್ಲವೆ ನೆಲೆಯೆ || 2 || ದೋಷಗಳನರಿತಿಹೆವು ಎಚ್ಚರಾಗಿಹೆವಿಂದು ಹಿಂದುಪಡೆ ಭೊರ್ಗೆರೆವ ಶರಧಿಯಾಗಿಹುದಿಂದು ಸ್ವಾರ್ಥ […]

Read More

ನಾಡಸೇವೆಯೆ ನಮ್ಮ ಜೀವನದ ಉಸಿರು

ನಾಡಸೇವೆಯೆ ನಮ್ಮ ಜೀವನದ ಉಸಿರು ಧನ್ಯತೆಯೆ ಬಹುಮಾನ ಬೇಡೆಮಗೆ ಹೆಸರು || ಪ || ಮೂರು ದಿನ ಬಾಳ್ವೆಯದು ಸಾರ್ಥಕವು ಆಗುವುದು ಆದರ್ಶದಮೃತವ ಸ್ವೀಕರಿಸಿದಾಗ ಪತಿತರುದ್ಧಾರದ ಪುಣ್ಯತಮ ಕಾಯಕದಿ ಒಮ್ಮನದಿ ಒಗ್ಗೂಡಿ ಸಹಕರಿಸಿದಾಗ || 1 || ಬರಿಯ ಬೋಧನೆಗಿಲ್ಲಿ ಕಿಂಚಿತ್ತು ಬೆಲೆಯಿಲ್ಲ ವಚನ ಶೂರರಿಗೆಂದು ಶಾಶ್ವತದ ನೆಲೆಯಿಲ್ಲ ಕಣ್ಣ ಮುಂದಿರೆ ನಾಕ ಬೆನ್ನ ಹಿಂದೆಯೆ ನರಕ ಮುನ್ನಡೆದು ಶ್ರಮಿಸುವವಗೆಂದಿಗೂ ಸೋಲಿಲ್ಲ || 2 || ನುಡಿವ ಮಾತಿಗೆ ಶೋಭೆ ನಮ್ಮದೊಂದೊಂದು ಕೃತಿ ನೀಡಬೇಕಿಹುದಿಂದು ಕಾಯಕಕೆ ಶೀಘ್ರಗತಿ […]

Read More

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ

ಧ್ಯೇಯ ಶಿಖರವೇರಲು ಕಾಯಲೇಕೆ ಸಾಧಕ ಸಾಧಿಸುವುದು ನಿನ್ನ ಕಾಯಕ ಎತ್ತರ ಎತ್ತರ ಇನ್ನು ಎತ್ತರ ಕೆಚ್ಚೆದೆಯ ಸಾಧನೆಯೇ ನಿನ್ನ ಉತ್ತರ ಉತ್ತರ ಉತ್ತರ ಒಂದೇ ಉತ್ತರ || ಪ || ಕವಿದ ಕಾರ್ಮೋಡವೆಂದೂ ಉಳಿಯುವುದೇ ಅನುದಿನ ಭವದ ಆಸೆ ಆಕಾಂಕ್ಷೆ ತೊರೆದು ಬಿಡು ಈ ಕ್ಷಣ ಬಾಳ ಬವಣೆ ಕಳೆದು ಸಂಘ ಸೂತ್ರ ಹಿಡಿದು ಸೋಲಿಗೆದುರು ನಿಲ್ಲುವುದೇ ನಿನ್ನ ಉತ್ತರ || 1 || ಸುತ್ತುವರಿದ ಮೌಢ್ಯತೆಯ ಸುತ್ತ ಯುದ್ಧವಾಡುತ ಸತ್ವಭರಿತ ಕಾರ್ಯ ತತ್ವ ಎಂಬ ಅಸ್ತ್ರ […]

Read More

ತಾಯಿಯ ಕರೆಯಿದು ಕಂದಾ

ತಾಯಿಯ ಕರೆಯಿದು ಕಂದಾ ಓಗೊಡು ಮೃದು ಬಿಡಲಿಂದ ಸಂಘರ್ಷದ ಕಡು ಮಾತೇಕೆ ನಾಡಿನ ಸೇವೆಗೆ ತಡವೇಕೆ……? || ಪ || ಸೋಲಿನ ಹಿಂದೆ ಗೆಲುವಿಹುದು ನೋವಿನ ಹಿಂದೆ ನಲಿವಿಹುದು ದುಃಖದ ಹಿಂದೆ ಸುಖವಿಹುದು ಕಲಿಯುವ ಮನದಲಿ ಛಲವಿಹುದು ಆಲಸ್ಯದ ಕಡು ಮಾತೇಕೆ ನಾಡಿನ ಸೇವೆಗೆ ತಡವೇಕೆ…….. || 1 || ಗೀತೆಯ ನೀತಿಯ ಬೆಳಕಿಹುದು ವೇದದ ಸಾರದ ನೆರಳಿಹುದು ಆಧ್ಯಾತ್ಮದ ಕಂಪಿನ ತಂಪಿಹುದು ದಾಸರ ಶ್ರೇಷ್ಠರ ನುಡಿಯಿಹುದು ಆತ್ಮವಿಶ್ವಾಸಕೆ ಬರವೇಕೆ ನಾಡಿನ ಸೇವೆಗೆ ತಡವೇಕೆ……. || 2 […]

Read More

ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ

ಎಚ್ಚರಾಗು ಎಚ್ಚರಾಗು ಎಚ್ಚರಾಗು ಧೀರ ಭರತಮಾತೆ ಕರೆಯುತಿಹಳು ಓಗೊಡುತ ಬಾರಾ ಎಲ್ಲಿ ನಿನ್ನ ಕ್ಷಾತ್ರತೇಜ ಮೆರೆದು ನಿಂತ ಶೌರ್ಯ? ತಾಯ ಬಂಧ ಬಿಡಿಸುವಂದು ತೋರಿದಂಥ ಧೈರ್ಯ? || ಪ || ಚಲಿಸಲಿಲ್ಲ ಹಿಮದಗಿರಿಯ ಅಚಲ ನಿಂತ ನಿಲುವು ನಿಲ್ಲಲಿಲ್ಲ ಕಡಲ ಮೊರೆತ, ಕ್ಷಣವು ಇಲ್ಲ ಬಿಡುವು ದಣಿಯಲಿಲ್ಲ ಗಂಗೆ ತುಂಗೆ ನಿನಗೆ ಅನ್ನ ನೀಡಿ ನಿನ್ನ ಮನವದೇಕೆ ಬದಲು – ಯಾರ ಮಂತ್ರ ಮೋಡಿ? || 1 || ಅನ್ಯರೆಲ್ಲ ತುಳಿವರಲ್ಲ ನಮ್ಮ ನೆಲದ ಮೇಲೆ ದರ್ಪ […]

Read More

ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ

ಸಾಗು ಮುಂದೆ ಸಾಗು ಮುಂದೆ ಭಾರತದ ಸಿಪಾಯಿಯೇ ಧೈರ್ಯ ಶೌರ್ಯ ಮೂಡಿಬರಲಿ, ಹರಸಿ ಕಳುಹು ತಾಯಿಯೇ || ಪ || ಅಡಿಯ ಮುಂದೆ ಇಡಲು ಸ್ವರ್ಗ, ಹಿಂದೆ ಘೋರ ನರಕವು ಹೆತ್ತ ಒಡಲ ಋಣವ ಸಲಿಸಲಿಂದು ಬಂದ ಭಾಗ್ಯವು ಹಾಡು ಸಮರಗೀತೆಯ ನೆನೆಯೊ ವೀರಗಾಥೆಯ ಭಾರತಿಗೆ ಜೈ, ಭಾರತಿಗೆ ಆರತಿಯು ಜೈ ಜೈ ಜೈ         || 1 || ದೇಶಭಕ್ತಿ ಉಕ್ಕಿ ಹರಿದು ರಕ್ತ ಬೆಚ್ಚಗಾಗಲಿ ಕೊರೆವ ಹಿಮದ ರಾಶಿಯಲ್ಲು ಮೈಯ ಛಳಿಯು […]

Read More

ಆರತಿ ಬೆಳಗಲು ಬಾರೋ ಗೆಳೆಯ

ಆರತಿ ಬೆಳಗಲು ಬಾರೋ ಗೆಳೆಯ ಭಾರತಿ ಎನ್ನಲು ನಲಿಯಲಿ ಹೃದಯ ಮಮತೆಯ ಮೂರುತಿ ಮಾತೆಯ ಕೀರುತಿ ಅನುದಿನ ಹಾಡಲು ಬಾ ಬಾ ಸದಯ || ಪ || ಕೋಟಿ ಕೋಟಿ ಜನರೆದೆಯನು ಮೀಟುತ ಪುಲಕಿತಗೊಳಿಸುತ ಮನ ಅರಳಿಸುತ ಮಾತೃಪ್ರೇಮದಾ ಅಮೃತ ನೀಡುವ ಈ ಶುಭಮಂಗಳೆಗಿದೊ ಪೊಡಮಡುವ || 1 || ಲಕ್ಷಲಕ್ಷ ನರಜನ್ಮವನೆತ್ತಿ ಸಾವಿರ ಸಲ ಭೂಮಂಡಲ ಸುತ್ತಿ ಬಂದರೆ ಸಿಗುವುದೆ ಇಂತಹ ನೆಲವು ? ಪುಣ್ಯ ಪ್ರಸಾದವು – ಈ ತಾಯೊಲವು || 2 || […]

Read More

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ? ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ    || ಪ || ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ? ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ?     || 1 || ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ   || 2 || ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು ನಿಲಲಿ ಮತಾಂತರ ಸೊಗಸಿನ […]

Read More

ಹಾರದಿರು ಮನ ಕಡಲಾಚೆ

ಹಾರದಿರು ಮನ ಕಡಲಾಚೆ ಯೋಚಿಸದಿರು ನೀ ತೊಡು ಭಾಷೆ ಮಮತೆಯ ಹೆತ್ತ ಒಡಲಲ್ಲಿರಲು ಏತಕೆ ಪರತಾಯಿಯ ಮಡಿಲು? || ಪ || ಹಾರದಿರು ಮನ ಹಾರದಿರು ಹಾರದಿರು ಮನ ಕಡಲಾಚೆ || ಅ.ಪ.|| ಈ ತಾಯಿಯ ಮನೆ, ಮನ ಬಂಗಾರ ಮೆರೆಯುವ ಗಿರಿ ವನ ಸಿರಿ ಸಿಂಗಾರ ಗಂಗೆಯ ತುಂಗೆಯ ಸಂಗೀತದಲಿ ಅರಳದೆ ಮನ ನೆಲೆ ನಿಲ್ಲದೆ ಇಲ್ಲಿ? || 1 || ಭಕ್ತಿಯು ಬರದೆ ವಿರಕ್ತಿಯದೇಕೆ ? ಹೊಣೆಯರಿಯದೆ ಹೊರ ಜಾರುವುದೇಕೆ? ವೀರರ ಸಂತ ಮಹಾತ್ಮರ […]

Read More

ಹಚ್ವುವೆವು ದೀಪ

ಹಚ್ಚುವೆವು ದೀಪ, ಹಚ್ಚುವೆವು ದೀಪ ಎಚ್ಚೆತ್ತ ಹಿಂದುಗಳ ಭಾವೈಕ್ಯ ರೂಪ ವಾದಗಳ ಭೇದಗಳ ಎಲ್ಲ ಬದಿಗಿಟ್ಟು ದೇಶಸೇವೆಗೆ ಬದ್ಧಕಂಕಣವ ತೊಟ್ಟು || ಪ || ನಮ್ಮದೇ ನೆಲವೆಂದು, ಜಲವೆಂದು, ಫಲವೆಂದು ಛಲದಿಂದ ಬೆಳೆಸಿ ಭುವಿ ಬಂಗಾರ ಬಂಧು ಹೊಟ್ಟೆ ತುಂಬಾ ಅನ್ನ ಬಟ್ಟೆ ಬರೆ ಗಿರೆ ಬನ್ನ ಯಾವ ಆಮಿಷಕಿಲ್ಲ ಇನ್ನು ಬಲಿಯಿಂದು || 1 || ಧರ್ಮಕಲೆ ಸಂಸ್ಕೃತಿಯ ಜಾಗೃತಿಯಗೊಳಿಸುವೆವು ನಮ್ಮ ಗತ ಇತಿಹಾಸ ಮರಳಿ ಬರಲಿಹುದು ‘ಐಕ್ಯವೊಂದೇ ಮಂತ್ರ ಐಕ್ಯದಿಂದಲೇ ಸ್ವತಂತ್ರ’ ಒಕ್ಕೊರಲ ಉದ್ಘೋಷ […]

Read More