ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?

ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?
ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ    || ಪ ||

ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ?
ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ?     || 1 ||

ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ
ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ   || 2 ||

ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು
ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು || 3 ||

ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ
ಭಾವೈಕ್ಯದ ಜನಜಗೃತಿಯಾಗಲು ಸಂದೇಶವ ಸಾರಿ            || 4 ||

ಹರಿಯಲಿ ವೇದಪುರಾಣದ ಸಂಸ್ಕೃತಿ ರಕ್ತದ ಕಣಕಣದಿ
ಮೆರೆಯಲಿ ವೀರ ಮಹಾತ್ಮರ ತೇಜವು ಹೊರಹೊಮ್ಮುತ ಭರದಿ || 5 ||

ಅರಳಲಿ ಕೇತನ, ನೀಡುತ ಚೇತನ ಧಾರೆ ನಿರಂತರವೂ
ಬಾಳಲಿ ಧರ್ಮಸನಾತನ ಭಾರತ ಭಾಗ್ಯ ಚಿರಂತನವೂ        || 6 ||

Leave a Reply

Your email address will not be published. Required fields are marked *