ಭಾರತ ತಾಯ್ನೆಲವೆನ್ನಲು ಭಯವೇತಕೆ ನಮಗೆ ?
ಒಂದಾಗಲು ಪಣವಿಂದೇ ತೊಡುವೆವು ಕಾಯದೆ ಕಡೆ ಘಳಿಗೆ || ಪ ||
ಬರಿ ಕಚ್ಚಾಟದಿ ಕರೆಸುವುದುಂಟೇ ಆ ಘಜನೀ ಘೋರಿ ?
ಪಾವನ ನೆಲದಲಿ ಬಾಳುವುದುಂಟೇ ಅಭಿಮಾನವ ಮಾರಿ ? || 1 ||
ನೆನೆಯುವ ಹಿಂದಿನ ವೈಭವ, ಜಗವನೆ ಆಳಿದ ಇತಿಹಾಸ
ಮರೆಯುವ ಸೋಲನು ಗೆಲ್ಲುವ ಛಲದಲಿ ಮೂಡಲಿ ಆವೇಶ || 2 ||
ತುಂಬಲಿ ನದಿಗಳು, ಗಿರಿಕಾನನಗಳು ಎಲ್ಲೆಲ್ಲೂ ಹಸಿರು
ನಿಲಲಿ ಮತಾಂತರ ಸೊಗಸಿನ ಜೀವನ ತಂದಿರೆ ಹೊಸ ಉಸಿರು || 3 ||
ಮೊಳಗಲಿ ಓಂಕಾರದ ವರನಾದವು ಗಗನವನೂ ಮೀರಿ
ಭಾವೈಕ್ಯದ ಜನಜಗೃತಿಯಾಗಲು ಸಂದೇಶವ ಸಾರಿ || 4 ||
ಹರಿಯಲಿ ವೇದಪುರಾಣದ ಸಂಸ್ಕೃತಿ ರಕ್ತದ ಕಣಕಣದಿ
ಮೆರೆಯಲಿ ವೀರ ಮಹಾತ್ಮರ ತೇಜವು ಹೊರಹೊಮ್ಮುತ ಭರದಿ || 5 ||
ಅರಳಲಿ ಕೇತನ, ನೀಡುತ ಚೇತನ ಧಾರೆ ನಿರಂತರವೂ
ಬಾಳಲಿ ಧರ್ಮಸನಾತನ ಭಾರತ ಭಾಗ್ಯ ಚಿರಂತನವೂ || 6 ||