ಮಬ್ಬು ಕಳೆದು ಎಚ್ಚರಾಗಿ

ಮಬ್ಬು ಕಳೆದು ಎಚ್ಚರಾಗಿ ಕೆಚ್ಚಿನಿಂದ ಮುಂದೆ ಸಾಗಿ
ಕೊಚ್ಚಿ ಹಾಕಿ ಪಾಪಿಗಳನು ಭರತ ಮಾತೆ ಪುತ್ರರಾಗಿ || ಪ ||

ಹಿಂದು ಅವನೇ ಕರ್ಮಯೋಗಿ, ಪರರ ಹಿತಕೆ ಅವನು ತ್ಯಾಗಿ
ಎಲ್ಲರೊಂದು ಎನುವ ಬಂಧು, ದುಡಿಯುವವನು ಲೋಕಕಾಗಿ
ರಣವ ಬಯಸದಂಥ ಗುಣವು ಆದನಲ್ಲ ಅವನು ಹೇಡಿ
ಶಾಂತಿ ಕದಡಿ ರಾಡಿಯಿನ್ನು ಸಹಿಸಿ ಸಾಕು ಸಿದ್ಧರಾಗಿ || 1 ||

ಉಗ್ರಗಾಮಿ ಒಳಗೆ ಹೊರಗೆ, ನಗುತಲಿಹನು ಅಳುವ ನೋಡಿ
ಬಗ್ಗು ಬಡಿಯಬೇಕು ಕ್ರೌರ್ಯ, ಶೀಘ್ರ ಅವರ ಅಂತ್ಯ ಹಾಡಿ
ನುಗ್ಗುತಿಹರು ಗಡಿಯ ದಾಟಿ, ಗಳಿಗೆ ಕೂಡ ಕಾಯಬೇಡಿ
ಧೀರಮಾತೆ ಒನಕೆ ಹಿಡಿದು, ಹೊಡೆದ ಪರಿಯೆ ರಾಶಿ ಮಾಡಿ || 2 ||

ಹಿಂದುಸ್ಥಾನದಲ್ಲೆ ಹಿಂದು, ಈಗ ಆತ ನೆಲೆಯು ಹೋಗಿ
ಮತಾಂಧರಿಂದ ಭ್ರಾಂತನಾಗಿ, ಮೊರೆ ಈಗ ಸುರಕ್ಷೆಗಾಗಿ
ಸಂಘಶಕ್ತಿ ಶರಧಿಯಾಗಿ, ಸ್ವಾಭಿಮಾನ ಸುಮೇರುವಾಗಿ
ಭಂಗ ಖಚಿತ ಜಿಹಾದಿಗೆ, ವಿಜಯ ಭರತ ಮಾತೆಗೆ || 3 ||

Leave a Reply

Your email address will not be published. Required fields are marked *