ಶತಮಾನದ ಶುಭ ಆಶಯದೆಡೆಗೆ ದಶಮಾನದ ಅಭಿಮಾನದ ನಡಿಗೆ ಉರುಳಿತು ಭರದಲಿ ಕಾಲಚಕ್ರ ಮೊಳಗಿತು ಎಲ್ಲೆಡೆ ಸೇವೆಯ ಮಂತ್ರ ಲೋಕಹಿತಂ ಮಮ ಕರಣೀಯಮ್ || ಪ || ಪಶ್ಚಿಮ ಜಲಧಿಯ ಲಕ್ಷಲಹರಿಗಳು ನಿಶ್ಚಲವಾಗುವುದುಂಟೇನು ? ಅಕ್ಷಯ ಸ್ಪೂರ್ತಿಯ ಯುವಜನಶಕ್ತಿಯು ನಿಷ್ಪಲವಾಗುವುದುಂಟೇನು ? ಮೊರೆಯಿತು ಧ್ಯೇಯದ ಭವ್ಯ ಸಮುದ್ರ ಮೊಳಗಿತು ಎಲ್ಲೆಡೆ… || 1 || ತೊಟ್ಟಿಲ ತೂಗುವ ಕೋಮಲಕರಗಳು ಕಟ್ಟಲು ಬಲ್ಲವು ರಾಷ್ಟ್ರವನು ಕಟ್ಟಿದ ಅಬಲೆಯ ಪಟ್ಟವ ಕಳಚಿ ಮುಟ್ಟಲು ಬಲ್ಲವು ಲಕ್ಷ್ಯವನು ಸಾರುತ ನಾರಿಯ ನೂತನ ಪಾತ್ರ […]
ಸರಿದರೇನು ತೆರೆಯ ಮರೆಗೆ ನಿನ್ನ ಮರೆಯಲಾರೆವು ನೀನು ತೋರಿದಂಥ ಪಥವ ಎಂದೂ ತೊರೆಯಲಾರೆವು ಮಧುರ ಸ್ವರದ ವಾದಕ .. ನಮನ ಅಮರ ಸಾಧಕ || ಪ || ಶತ ಸಹಸ್ರ ವಂಶಿಯಿಂದ ಮೊಳಗಿ ವೀರ ಸುಸ್ವರ ಹೊಳೆವ ಶಂಖದೊಡಲಿನಿಂದ ದಿವ್ಯನಾದ ಸುಮಧುರ ಅರಿಗಳೆದೆಯ ನಡುಗಿಸಿದ್ದೆ ಗುಡುಗಿ ಪಣವ ರೂಪದಿ ಆನಕಗಳ ರಣರಣನದಿ ಝಲ್ಲರಿಗಳ ತಾಳದಿ || 1 || ಸಂಘಟನೆಗೆ ರಂಗು ತುಂಬುವಂಥ ಸಂಚಲನದಲಿ ಸಂಚಲನಕೆ ಶೋಭೆ ತರುವ ದಿವ್ಯ ವಾದ್ಯಗಣದಲಿ ಮೆರೆಯುತಿರುವ ಘೋಷದಂಡ ಅದುವೆ ನಿನಗೆ […]
ಮೂಕವಾಯಿತು ವಂಶಿ ಶೋಕ ತಳೆಯಿತು ಶಂಖ ಸ್ತಬ್ಧವಾಯಿತು ಪಣವ ಆನಕದ ರಣನ ವಾದ್ಯಗಳ ಭೋರ್ಗರೆತ ತಾಳಿಹುದು ಮೌನ, ಸುಬ್ಬಣ್ಣನಾ ಸ್ಮೃತಿಗೆ ಕಣ್ಣೀರ ನಮನ || ಪ || ಶುಭ್ರ ಮೈಕಾಂತಿಗೆ ಧವಳ ಶೀಲದ ಮೆರಗು ಎಳೆಯ ಗೆಳೆಯರ ಸೆಳೆದೆ ಬೆಳೆವ ಪಥಕೆ ಮೊಳಗಿ ಶಂಖೋದ್ಘೋಷ ಪಾರ್ಥಸಾರಥಿಯಾದೆ ಅಶ್ವಗಳು ನಾವೆಲ್ಲ ನಾಡ ರಥಕೆ || 1 || ಲಯಬದ್ಧ ಸಂಚಲನ ಸ್ವರ ಶುದ್ಧ ಸಂಕಲನ ಮೇಲೆತ್ತಿ ಪಿಡಿದಿದ್ದೆ ಧ್ಯೇಯದಂಡ ನಿತ್ಯ ನೂತನ ವಾದ್ಯ ಏನದರ ವೈವಿಧ್ಯ ಪುಳಕಗೊಂಡಿತು ಸಕಲ […]
ಯುಗಯುಗದ ಚಿಂತನದ ಗರ್ಭದೊಳಗಿಂದ ಮೈತಳೆದ ಮೂರ್ತರೂಪ ನೀಗಿಸಲು ಈ ನೆಲದ ಸಂಕಷ್ಟ ಸಂತಾಪ ನೀನೆಮಗೆ ದಾರಿದೀಪ || ಪ || ಅಸಮಾನ ಪಾಂಡಿತ್ಯ ನುಡಿಗಳಲಿ ಲಾಲಿತ್ಯ ಕಣ್ಸೆಳೆವ ಕೇಶಲಾಸ್ಯ ಭಾರತದ ಸಂಸ್ಕೃತಿಗೆ ಹಿಂದುತ್ವದಾ ಶೃತಿಗೆ ನೀ ಬರೆದೆ ನವ್ಯ ಭಾಷ್ಯ ಶತನಮನ ಯತಿ ಸ್ವರೂಪ… ನೀನೆಮಗೆ ದಾರಿದೀಪ || 1 || ಕೇಶವನು ಕಂಡಿದ್ದ ಕನಸ ನನಸಾಗಿಸುವ ಕಠಿಣತಮ ಹೊಣೆಯ ವಹಿಸಿ ಮೂರು ದಶಕವ ಮೀರಿ ತೋರಿ ನಾಡಿಗೆ ದಾರಿ ಬೆವರಧಾರೆಯನು ಹರಿಸಿ ಕಳೆದೆಯೈ ಮೌಢ್ಯಶಾಪ… ನೀನೆಮಗೆ […]
ಪರಮ ವೈಭವ ಸಾಧನೆ ನಿನಗದೇ ಅಭಿನಂದನೆ || ಪ || ಸ್ವಾರ್ಥತೆಯು ಲವಲೇಶವಿಲ್ಲದ ವಿಮಲಧ್ಯೇಯದ ಮೂರ್ತಿ ನೀನು ಭರತಭೂಮಿಯ ಭಾಗ್ಯಭಾಸ್ಕರ ಯುವಜನಾಂಗದ ಸ್ಫೂರ್ತಿ ನೀನು || 1 || ಕಾಯವದು ಕಾಷಾಯರಹಿತ ಜೀವನವು ಘನತ್ಯಾಗಭರಿತ ಶಿಷ್ಟ ಉಡುಗೆಯ ಸಂತ ನೀನು, ಕರ್ಮಯೋಗಿ ಮಹಂತ ನೀನು || 2 || ದಿವ್ಯಧ್ಯೇಯದ ಪಥದಿ ಕ್ರಮಿಸಿದೆ ಅರೆಕ್ಷಣವು ವಿಶ್ರಮಿಸದೆ ಪತನಗೊಂಡಿಹ ನಾಡನೆತ್ತಲು ಬಾಳಿನುದ್ದಕು ಶ್ರಮಿಸಿದೆ || 3 || ಮನಮನದ ಕಿರುದೆರೆಯ ಮೇಲೆ ಮೂಡಿರಲು ತವ ಭಾವಚಿತ್ರ ಅನ್ಯಸ್ಮಾರಕವೇಕೆ ನಿನಗೆ […]
ಅಂತ್ಯವಿಲ್ಲದ ಸಂತ ನಿನ್ನಯ ಚಿಂತನೆಯದು ಚಿರಂತನ ಅಖಿಲವಿಶ್ವದ ಸಕಲ ಮನುಕುಲ ನೀಡಿತದಕೆ ಸ್ಪಂದನ ನಿನ್ನಡಿಗೆ ಶತವಂದನ || ಪ || ವೇಷಭೂಷಣ ಸಡಿಲ ಸರಳ ಧ್ಯೇಯನಿಷ್ಠೆಯು ಮಾತ್ರ ಅಚಲ ತನ್ನ ಮೋಕ್ಷದ ವಾಂಛೆ ತ್ಯಜಿಸಿ ಗೈದ ಕಾರ್ಯ ಅಗಾಧ ಅತುಲ || 1 || ಭರತಭೂಮಿಯ ಅಗಲ ಉದ್ದಕು ಚಲಿಸಿದ ಪರಿವ್ರಾಜಕ ಸಾಧಕರ ಸಂತತಿಯ ಬೆಳೆಸಿದ ಸಂತ ಜನರಧಿನಾಯಕ || 2 || ಯತಿಯೆ ನಿನ್ನಯ ಸ್ಮೃತಿಯು ನಮಗೆ ರಾಷ್ಟ್ರಕಾರ್ಯಕೆ ಪ್ರೇರಣೆ ನೀನು ತೋರಿದ ಪಥದಿ ಚಲಿಸಿ […]
ಜಯಜಯ ಅಭಿನವ ಋಷಿವರ ಮಾಧವ ನಿನ್ನಯ ಚರಣಕೆ ನಮೋ ನಮೋ || ಪ || ಜನ್ಮಜಾತ ಅನುಪಮ ಪ್ರತಿಭಾನ್ವಿತ ಧೀಮಂತಿಕೆಯ ಪ್ರತಿರೂಪ ಪೂರ್ಣ ಜೀವನವ ಮುಡಿಪಾಗಿರಿಸಿದೆ ಅಳಿಸಲು ಮಾತೆಯ ಸಂತಾಪ || 1 || ಭುಜಗಳ ಗಡಿಯನು ದಾಟಿದ ಸೊಂಪಿನ ಕೇಶರಾಶಿಯ ಲಾಸ್ಯದಲಿ ದೇಶವಿದಕೆ ಹೊಸ ದಿಶೆಯನು ತೋರಿದೆ ಹಿಂದುತ್ವದ ನವಭಾಷ್ಯದಲಿ || 2 || ಸರಳ ಜೀವನ ಉದಾತ್ತ ಚಿಂತನ ನಿನ್ನಯ ಬಾಳ ವಿಶೇಷತೆಯು ನವಭಾರತ ನಿರ್ಮಾಣದ ಕಾರ್ಯದಿ ಸಾಧಕ ಜನಕದು ಪ್ರೇರಣೆಯು || 3 […]
ಕ್ರೋಧನದ ದಶಮಿಯಿದು ಎಂದಿನಂತಲ್ಲ ಸಂಭ್ರಮದ ಪರ್ವವಿದು ಪಾಲ್ಗೊಳ್ಳಿರೆಲ್ಲ ದಿಗ್ವಿಜಯಗೈಯಲಿದು ನೀಡುತಿದೆ ಸ್ಫೂರ್ತಿ ಮುನ್ನುಗ್ಗಿ ಸಾಧಿಸಲು ಘನಧ್ಯೇಯ ಪೂರ್ತಿ || ಪ || ಶೂನ್ಯದೊಳು ಸೃಷ್ಟಿಯನು ಗೈದ ಮಾಂತ್ರಿಕನಾರು ? ಮಸಣದೊಳು ನಂದನವ ನಿರ್ಮಿಸಿದ ಕಲಿ ಯಾರು ? ಜನಮನದಿ ನಾಡೊಲವ ಬಿತ್ತಿದನು ಕೇಶವನು ಅವನತಿಯ ಸುಳಿಯಿಂದ ಎತ್ತಿದನು ದೇಶವನು || 1 || ಗಾಢಾಂಧಕಾರದಲಿ ಮುಳುಗಿರಲು ಯುವಜನತೆ ಭರವಸೆಯ ಬೆಳಕನ್ನು ಬೀರಿಹುದು ಈ ಹಣತೆ ಧ್ಯೇಯದುಜ್ವಲ ಪ್ರಭೆಯ ಮನಮನದಿ ಪಸರಿಸುತ ದಿವ್ಯಸಂಘದ ಜ್ಯೋತಿ ಉರಿಯುತಿದೆ ಅನವರತ || […]
ಭಾರತದೇಕತೆ ಏಳಿಗೆಗಾಗಿ ದೃಢಸಂಕಲ್ಪವ ತೊಟ್ಟಿಹೆವು ಭೇದವ ಮರೆತು ಐಕ್ಯದಿ ಬೆರೆತು ಹೊಸನಾಡೊಂದನು ಕಟ್ಟುವೆವು || ಪ || ತೆಂಕಣ ಜಲಧಿಯ ಅಲೆಗಳ ಮೊರೆತ ಉಕ್ಕಿಸಿದೆ ನವ ಉತ್ಸಾಹ ಉತ್ತರದಳಲಿಗೆ ಉತ್ತರ ನೀಡಲು ಕಿತ್ತೊಗೆಯಿರಿ ಭಯ ಸಂದೇಹ || 1 || ಗಿರಿನದಿಗಳು ವನಸಿರಿಯಾಭರಣ ಪ್ರಕೃತಿಯು ನೀಡಿದ ವರದಾನ ನಾಡಿನ ಗೌರವ ರಕ್ಷಣೆಗಾಗಿ ಅರ್ಪಿಸಿ ತನುಮನಧನ ಪ್ರಾಣ || 2 || ಕಳಚಿರಿ ಉಗ್ರರ ಗೋಮುಖವ್ಯಾಘ್ರರ ಭೀಕರ ದ್ರೋಹದ ಮುಖವಾಡ ಮೊಳಗಲಿ ಹಿಂದುತ್ವದ ಜಯಘೋಷ ಚದುರಲಿ ಭೀತಿಯ ಕಾರ್ಮೋಡ […]
ನವಭಾರತವನು ಕಟ್ಟಲು ಬನ್ನಿ ನವದಿಗಂತವನು ಮುಟ್ಟಲು ಬನ್ನಿ ಅರಿಗಳ ಪಡೆಯನು ಮೆಟ್ಟಲು ಬನ್ನಿ ದ್ರೋಹಿಗಳನು ಹೊರಗಟ್ಟಲು ಬನ್ನಿ || ಪ || ತಾಯ್ನೆಲದಿತಿಹಾಸದ ಗರ್ಭದಲಿ ಹುದುಗಿದೆ ಸ್ಫೂರ್ತಿಯ ಹೊಂಬೆಳಕು ಜಗವನೆ ಜಯಿಸಿದ ಸಾಹಸವೀರರ ಶೌರ್ಯಪರಾಕ್ರಮಯುತ ಬದುಕು || 1 || ನಾಡಿನ ಐಕ್ಯ ಸಮಗ್ರತೆಯು ಭೇದದಿ ಛೇದಿತಗೊಳದಿರಲಿ ಹಿಂದುತ್ವದ ಬಂಧುತ್ವದ ಮಂತ್ರವು ಎಲ್ಲೆಡೆ ಮಾರ್ದನಿಗೊಳುತಿರಲಿ || 2 || ಹೊಂಚನು ಹಾಕಿಹ ವಂಚಕರಿಪುಗಳ ಸಂಚುಗಳೆಲ್ಲವನೆದುರಿಸಲು ಮಿಂಚಿನ ವೇಗದಿ ಮುನ್ನಡೆಯೋಣ ನಾಡಿನ ಗಡಿಗಳ ರಕ್ಷಿಸಲು || 3 ||