ಯುಗಯುಗದ ಚಿಂತನದ

ಯುಗಯುಗದ ಚಿಂತನದ ಗರ್ಭದೊಳಗಿಂದ
ಮೈತಳೆದ ಮೂರ್ತರೂಪ
ನೀಗಿಸಲು ಈ ನೆಲದ ಸಂಕಷ್ಟ ಸಂತಾಪ
ನೀನೆಮಗೆ ದಾರಿದೀಪ || ಪ ||

ಅಸಮಾನ ಪಾಂಡಿತ್ಯ ನುಡಿಗಳಲಿ ಲಾಲಿತ್ಯ
ಕಣ್‍ಸೆಳೆವ ಕೇಶಲಾಸ್ಯ
ಭಾರತದ ಸಂಸ್ಕೃತಿಗೆ ಹಿಂದುತ್ವದಾ ಶೃತಿಗೆ
ನೀ ಬರೆದೆ ನವ್ಯ ಭಾಷ್ಯ
ಶತನಮನ ಯತಿ ಸ್ವರೂಪ… ನೀನೆಮಗೆ ದಾರಿದೀಪ || 1 ||

ಕೇಶವನು ಕಂಡಿದ್ದ ಕನಸ ನನಸಾಗಿಸುವ
ಕಠಿಣತಮ ಹೊಣೆಯ ವಹಿಸಿ
ಮೂರು ದಶಕವ ಮೀರಿ ತೋರಿ ನಾಡಿಗೆ ದಾರಿ
ಬೆವರಧಾರೆಯನು ಹರಿಸಿ
ಕಳೆದೆಯೈ ಮೌಢ್ಯಶಾಪ… ನೀನೆಮಗೆ ದಾರಿದೀಪ || 2 ||

ಸಾಮರಸ್ಯದ ದನಿಗೆ ರಾಷ್ಟ್ರೀಯತೆಯ ಖನಿಗೆ
ಹಾನಿಗೈವವರ ತಡೆದು
ವಂಚಕರನೊತ್ತರಿಸಿ ಚಿಂತನೆಯೆನೆತ್ತರಿಸಿ
ನೀತುಳಿದ ಪಥದಿ ನಡೆದು
ಪ್ರಕಟಿಸಲು ಬಲಪ್ರತಾಪ… ನೀನೆಮಗೆ ದಾರಿದೀಪ || 3 ||

ಶತಮಾನ ಕಳೆದಂತೆ ಅಭಿಮಾನ ವೃದ್ಧಿಸಿದೆ
ಅವಸಾನ ಸಾರಿ ನಿಶೆಗೆ
ಅಳಿಸುತಲಿ ಅವಮಾನ ಪ್ರಗತಿಯೆಡೆ ಪ್ರಸ್ಥಾನ
ಸ್ವಾಗತವ ಕೋರಿ ಉಷೆಗೆ
ಧರಿಸಿಹೆವು ಧ್ಯೇಯಲೇಪ… ನೀನೆಮಗೆ ದಾರಿದೀಪ || 4 ||

Leave a Reply

Your email address will not be published. Required fields are marked *