ಕರ್ಮಯೋಗಿ ಧೀಮಂತ ಸಂತ ನಿನ್ನ ನೆನಪಿಗೆ ಅನಂತದಲ್ಲಿ ಲೀನವಾದ ನಿನ್ನ ಬಾಳಜ್ಯೋತಿಗೆ ಅಶ್ರುಪೂರ್ಣ ತರ್ಪಣ ಭಾವಸುಮಗಳರ್ಪಣ ತರುಣ ಹೃದಯ ಸ್ಪಂದನ ಕೋಟಿಕೋಟಿ ವಂದನಾ || ಪ || ಸ್ವಾರ್ಥವನ್ನು ಮೆಟ್ಟಿ ನೀ ಧ್ಯೇಯಪಥದಿ ಸಾಗಿದೆ ಸಾರ್ಥಕತೆಯ ಗುರಿಯೆಡೆ ಕೀರ್ತಿಯನ್ನು ಬಯಸದೆ ಪದವಿ ಪದಕವೆಲ್ಲವ ಮಾತೆಯಡಿಗೆ ಚೆಲ್ಲಿದೆ ನಾಡಿಗಾಗಿ ಶ್ರಮಿಸಿದೆ ಕ್ಷಣವಿರಾಮವಿಲ್ಲದೆ || 1 || ಗಟ್ಟಿನೆಲದಿ ಸೇವೆಯ ಪುಟ್ಟಸಸಿಯ ನೆಟ್ಟಿಹೆ ಬೆವರು ರಕ್ತ ಹರಿಸುತಾ ದಿಟ್ಟತನದಿ ಬೆಳೆಸಿದೆ ವರುಷ ಹತ್ತು ಉರುಳಿದೆ ಸುಮನರಾಶಿ ಅರಳಿದೆ ಕಂಪು ಸೂಸುತಿರಲು […]
ಕರವ ಜೋಡಿಸಬನ್ನಿ ಈ ರಾಷ್ಟ್ರ ಕಾರ್ಯದಲಿ ಸ್ವರವ ಕೂಡಿಸಬನ್ನಿ ಒಕ್ಕೊರಲ ಘೋಷದಲಿ ನವಯುಗದ ನಿರ್ಮಾಣ ಗೈವ ಶುಭ ಆಶಯಕೆ ಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು || ಪ || ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದು ತಾಯ್ನೆಲದ ಉನ್ನತಿಯ ಆದರ್ಶ ಗುರಿ ಇಹುದು ಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದು ವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು || 1 || ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲ ಆಳುವರಸರ ಕೃಪೆಯ ಆಸರೆಯ ಹಂಗಿಲ್ಲ ಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವು ಮರಣ ಕೂಪದಿ […]
ಕಟ್ಟಬನ್ನಿ ತರುಣರೇ ನವಭಾರತ ದೇಶವ ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ || ಪ || ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು ಬಿತ್ತಿ ಬೆಳೆದು ತನ್ನತನದ ಹೊನ್ನಿನಂಥ ಬೆಳಯನು ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ || 1 || ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯವು ನಮಗಿರೆ ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ | ಬೆವರು ಸುರಿಸಿ ಸಾಧಿಸೋಣ […]
ಓಗೊಡುತ ಉತ್ತುಂಗ ಸಾಧನೆಯ ಕರೆಗೆ ನಡೆದಿಹರು ಸಾಸಿರದ ಸಾಧಕರು ಇಲ್ಲಿ ಸಂಘಶಕ್ತಿಯ ಭವ್ಯ ಸಾಗರದ ಕಡೆಗೆ ಹರಿದಿಹರು ಸಾವಿರದ ಸರಿತೆಯರು ಇಲ್ಲಿ || ಪ || ಹನಿಹನಿಯು ಝರಿಯಾಗಿ ತೊರೆಯಾಗಿ ನದಿಯಾಗಿ ಜಲಧಿರೂಪವ ತಳೆವ ರಮ್ಯನೋಟ ಅಣುಅಣುವು ಒಂದಾಗಿ ಶಕ್ತಿ ಪರ್ವತವಾಗಿ ಏಕತೆಗೆ ಲಭಿಸಿಹುದು ಅಗ್ರಪೀಠ || 1 || ಅಡಿಗಡಿಗೆ ನಡುಗಿಸಿದ ಕೇಡುಗಳ ಸೇಡುಗಳ ಜಾಡಝಾಡಿಸಿ ನಾಡಗುಡಿಯ ಕಟ್ಟಿ ರೂಢಿಯೊಳಗೂಡಿರುವ ಮೌಢ್ಯವನು ಸದೆಬಡಿದು ನಡೆದಿಹರು ಸಾಹಸದ ಪಡೆಯ ಕಟ್ಟಿ || 2 || ಬೆಟ್ಟದೆತ್ತರ ಬೆಳೆದ […]
ಒಂದುಗೂಡಿ ಬನ್ನಿ ನಾಡಸೇವೆಗೆ ಶುದ್ಧಮನದಿ ಶ್ರದ್ಧೆಯಿಂದ ಗೈವಪೂಜೆಗೆ ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ || ಪ || ನಮ್ಮ ಬೆವರು ರಕ್ತವ ತೈಲದಂತೆ ಎರೆಯುವಾ ನಾಡಗುಡಿಯ ಬೆಳಗಲು ಬತ್ತಿಯಂತೆ ಉರಿಯುವಾ ಕತ್ತಲನ್ನು ಕರಗಿಸಿ, ಸುತ್ತ ಬೆಳಕ ಮೂಡಿಸಿ ಮನದಿ ಮನೆಯ ಮಾಡಿದಂಥ ಮೌಢ್ಯವನ್ನು ತೊಲಗಿಸಿ || 1 || ಸುಮ್ಮನಿರದೆ ಕಾರ್ಯಕಾಗಿ ಸತತಕಾಯ ಸವೆಸುವಾ ಹೆಮ್ಮೆಯಿಂದ ಒಮ್ಮನದಲಿ ಗುರಿಯ ಕಡೆಗೆ ಚಲಿಸುವಾ ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ ವಿರೋಧಕೆಂದೂ ಬಗ್ಗದಂಥ ಗಟ್ಟಿತನವ ಗಳಿಸುವಾ || […]
ಏಳಿ ಎಚ್ಚರಗೊಳ್ಳಿ, ಭಾರತದ ನವಯುವತಿಯರೆ, ಜಡತೆಯ ತೊರೆದು ಹೊಣೆಯನು ಅರಿತು ಮುನ್ನಡೆಯೊಣ ಗೆಳತಿಯರೆ ಜೈ ಭಾರತಿ, ಜೈ ಭಾರತಿ, ಜೈ ಭಾರತಿ, ಯುವ ಭಾರತಿ || ಪ || ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || 1 || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 2 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ […]
ಎತ್ತರಕೇರಿಸಿ ಭಗವಾದ್ವಜವ ಧರ್ಮದ ಮಹಿಮೆಯ ಮೆರೆಯಿಸುವಾ | ಉತ್ತರವೀಯುತ ಯುಗದ ಸವಾಲಿಗೆ ನವ ಇತಿಹಾಸವ ನಿರ್ಮಿಸುವಾ || ಪ || ಅಂಕೆಯ ಮೀರಿದ ದುರಹಂಕಾರದಿ ಮೆರೆದಿರಲಂದು ರಾವಣನು ಬೆಂಕಿಯ ಬಲೆಯೊಳು ಲಂಕಾ ನಗರಿಯ ಉರಿಸಿದ ಅಂಜನಿ ನಂದನನು ಪಟ್ಟವ ಕಟ್ಟಿ ವಿಭೀಷಣಗಂದು ಧರ್ಮವ ಮೆರೆಸಿದ ರಾಘವನು ತ್ಯಜಿಸುತ ಸುರವೈಭೋಗವನು || 1 || ದುಷ್ಟಕೌರವರ ಅಕ್ಷೋಹಿಣಿಬಲ ಪಡೆದಿರೆ ಸಜ್ಜನರಾಹುತಿಯ ಸೃಷ್ಟಿಯ ಭಾರವ ನೀಗಿದ ಕೃಷ್ಣನು ತೊಡೆಯುತ ದುರ್ಜನ ಸಂತತಿಯ ವಿಜಯದ ಶಂಖೋದ್ಘೋಷವು ಮೊಳಗಿತು ಸಾರುತ ಧರ್ಮದ ಉನ್ನತಿಯ […]
ಎಚ್ಚರಗೊಳ್ಳಿ ಯುವಜನರೆ, ನಾsಡರಕ್ಷಣೆ ನಮ್ಮ ಹೊಣೆ | ಜಡತೆಯ ತೊರೆದು ಭ್ರಮೆಯನು ಹರಿದು ಬದಲಿಸಬನ್ನಿ ವಿಶ್ವವನೇ ಕದಲಿಸ ಬನ್ನಿ ಪೃಥ್ವಿಯನೇ || ಪ || ಜಗವನೆ ಜಯಿಸಿದ ಸಂಸ್ಕೃತಿ ಎಮ್ಮದು ಎಂಬುದನೆಂದಿಗು ಮರೆಯದಿರಿ ಪಶ್ಚಿಮದಿಕ್ಕಿನ ಭೋಗಜಗತ್ತಿನ ಥಳುಕಿಗೆ ನೀವ್ ಬಲಿಯಾಗದಿರಿ ಅಂಧಾನುಕರಣೆಯ ಮಾಡದಿರಿ ನಾsಡರಕ್ಷಣೆ ನಮ್ಮ ಹೊಣೆ, ಬದಲಿಸಬನ್ನಿ ವಿಶ್ವವನೇ || 1 || ಐಕ್ಯವ ಮರೆತು ಸ್ವಾರ್ಥದಿ ಮೆರೆದು ನಾಡಿದು ದಾಸ್ಯಕೆ ಒಳಗಾಯ್ತು ಅರಿಗಳ ಕುಹಕದ ಸಂಚಿಗೆ ಸಿಲುಕಿ ತಾಯ್ನೆಲವೆಮ್ಮದು ಹೋಳಾಯ್ತು ಭಾರತಮಾತೆಗೆ ಗೋಳಾಯ್ತು ನಾಡರಕ್ಷಣೆ […]
ಎಂಥ ಸುಮಧುರ ಬಂಧನ ಸಂಘಕಿಂದು ಬಂದೆನಾ ನಾಡ ಕೀರ್ತಿಯ ಉಳಿಸಿ ಬೆಳೆಸಲು ಐಕ್ಯವೊಂದೇ ಸಾಧನಾ || ಪ || ನಡೆಯಲಾರದೆ ತೆವಳುತಿದ್ದೆನು ನಡಿಗೆ ಕಲಿಸಿತು ಸಂಘವು ನುಡಿಯಲಾರದೆ ತೊದಲುತಿದ್ದೆನು ನುಡಿಯ ಉಲಿಸಿತು ಸಂಘವು ಪಡೆದೆ ಉನ್ನತ ಜ್ಞಾನ ಸದ್ಗುಣ ಲಭಿಸಿ ಸಜ್ಜನ ಸಂಗವು || 1 || ಗುರಿಯ ಅರಿಯದೆ ತಿರುಗುತಿದ್ದೆನು ಮರೆತು ತನುವಿನ ಪರಿವೆಯ ಗುರುವು ದೊರೆಯದೆ ಮರುಗುತಿದ್ದೆನು ಪಡೆದೆ ಸದ್ಗುರು ಭಗವೆಯ ದಾರಿ ದೀಪದ […]
ಉಚ್ಚಕಂಠದೊಳು ಉಚ್ಚರಿಸಿ ಸಜ್ಜನಶಕ್ತಿಯನೆಚ್ಚರಿಸಿ ದಿವ್ಯಮಂತ್ರವ ಘೋಷಿಸುವಾss ‘ಕೃಣ್ವಂತೋ ವಿಶ್ವಮಾರ್ಯಂ’ || ಪ || ಜಗದ ಆದಿ ಪ್ರಾಚೀನ ಸಮಯದಿಂ ಮಂತ್ರವೆಮಗೆ ಸಂಗಾತಿ ದೂರದೂರಕೂ ಕಂಪು ತುಂಬಿರುವ ಆರ್ಯಧರ್ಮದಾ ಖ್ಯಾತಿ ಕಾಲಚಕ್ರವದು ತಿರುಗಿರೆ ಭರದಿ ಮರೆಯಾಯಿತು ಆದರ್ಶ ನವ ಸೂರ್ಯೋದಯ ತಂದಿಹುದಿಂದು ಪ್ರಭಾತದುಜ್ವಲ ಸ್ಪರ್ಶ ಯುಗದ ಸವಾಲನು ಉತ್ತರಿಸಿ ಸಜ್ಜನಶಕ್ತಿಯನೆಚ್ಚರಿಸಿ || 1 || ವೇದಕಾವ್ಯ ಉಪನಿಷದ್ವಾಕ್ಯಗಳು ತೋರಿವೆ ಬಾಳಿನ ಗುರಿಯಾ ರಾಮಾಯಣ ಪಾವನ ಗೀತಾಮೃತ ಹರಿಸಿವೆ ಜ್ಞಾನದ ಝರಿಯಾ ಜಗದುದ್ದಗಲದಿ ಕಂಗೊಳಿಸುತಲಿಹ ಸಂಸ್ಕೃತಿಯಾ ಅವಶೇಷಗಳು ನವನಿರ್ಮಾಣಕೆ ಪ್ರೇರಣೆ […]