ಬೆಳಕನು ಬೀರುವ ಜ್ಯೋತಿಗಳಂತೆ

ಬೆಳಕನು ಬೀರುವ ಜ್ಯೋತಿಗಳಂತೆ ಕಂಪನು ಸೂಸುವ ಪುಷ್ಪಗಳಂತೆ ಸಾರ್ಥಕ ಜೀವನ ಬಾಳೋಣ ನಾಡಿನ ಸೇವೆಯ ಮಾಡೋಣ || ಪ || ಹುಟ್ಟು – ಸಾವು ದಡಗಳ ನಡುವೆ ಹರಿಯುವ ಪಾವನ ಜೀವನದಿ ನೀರುಣಿಸುತ ಬಾಯಾರಿದ ಧರೆಗೆ ಸೇರಲಿ ಧ್ಯೇಯದ ಸಾಗರದಿ || 1 || ಕಂಬನಿಯೊರೆಸುವ ಕಾಯಕವೆಮದು ಬೆಂಬಲಕಿದೆ ದೃಢ ಸಂಕಲ್ಪ ಆದರ್ಶದ ಅಡಿಗಲ್ಲಿನ ಮೇಲೆ ಅರಳಲಿ ನವಭಾರತ ಶಿಲ್ಪ || 2 || ಅಕ್ಷಯ ಸ್ಫೂರ್ತಿಯ ಅಮಿತೋತ್ಸಾಹದ ಕರ್ಮಯೋಗಿ ಅಜಿತರ ತೆರದಿ ಪೂರ್ಣ ಸಮರ್ಪಿತ ಭಾವನೆಯಿಂದ […]

Read More

ಪಡುವಣ ತೆಂಕಣ ಮೂಡಣದಂಚಿನ

ಪಡುವಣ ತೆಂಕಣ ಮೂಡಣದಂಚಿನ ದಿವ್ಯಾಂಬುಧಿ ಸಂಗಮವು ಶಕ್ತ ಸಾಗರವು ಭಕ್ತಿಯಾಗರವು ಉಕ್ಕೇರುತಲಿದೆ ಜನಮನವು || ಪ || ಆ ಪ್ರಲಯಂಕರ ರುದ್ರಭಯಂಕರ ಹರಮಂದಿರ ಹೈಮಾದ್ರಿ ಜೀವನದಿಯುಗಮ ಭಾವನಿಧಿ ಪರಮ | ಮಹಿಮಾನ್ವಿತ ವರಗಂಗೋತ್ರಿ || 1 || ಗಿರಿಝರಿ ಕಂದರ ವನಸಿರಿ ಸುಂದರ ಗುಡಿಗೋಪುರದುದ್ಯಾನ ಗಂಗೆ ತುಂಗೆಯರ ಸಿಂಧು ಯಮುನೆಯರ | ಮಂಜುಳ ಮಂಗಳ ಅಭಿಯಾನ || 2 || ಗುರುಗೋವಿಂದರ ಪಂಚನದೀ ತಟ ವಿದ್ರೋಹದ ಸೆಲೆಯಾಯ್ತೇ ಭದ್ರಭಾರತವು ಛಿದ್ರಗೊಳ್ಳುತಲಿ | ಧರ್ಮ ಭಂಜಕರ ನೆಲೆಯಾಯ್ತೆ || […]

Read More

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿಮೆರೆವ ಅರಿಗಳ ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ || ಪ || ತಡೆವರಾರು ನಿನ್ನನು, ಧೈರ್ಯ ನಿನ್ನೊಳಿದ್ದರೆ ಬಡಿವರಾರು ನಿನ್ನನು ಬಲವು ನಿನ್ನೊಳಿದ್ದರೆ ಹೇಡಿಯಲ್ಲ ಭಾರತ ಶಕ್ತಿವಂತವೀಧರೆ ಎಂದು ಜಗಕೆ ಸಾರುವ ಸಮಯವಿಂದು ಬಂದಿದೆ || 1 || ಬೆಟ್ಟ ಗುಡ್ಡ ಪರ್ವತ ಅಡ್ಡಿಯಾಗದೆಂದಿಗೂ ಕಲ್ಲುಮುಳ್ಳು ಕಾನನ ತಡೆಯನೊಡ್ಡದೆಂದಿಗೂ ಹೆಜ್ಜೆ ಹೆಜ್ಜೆ ತುಳಿತಕೆ ಭೂಮಿಯೆಲ್ಲ ನಡುಗಲಿ ನಿನ್ನ ವೀರ ಘೋಷಕೆ ಅರಿಯ ಸದ್ದು ಅಡಗಲಿ […]

Read More

ದೇಹವೆ ದೇಗುಲ ಆತ್ಮನೇ ದೇವರು

ದೇಹವೆ ದೇಗುಲ ಆತ್ಮನೆ ದೇವರು ಆಸನವೇ ಆರಾಧನೆಯು ಈ ಅನುಬಂಧದ ಆಧಾರದಲಿ ಅರಳಲಿ ನಿನ್ನಯ ಸಾಧನೆಯು ಅಳಿಯಲಿ ಅಸುರೀ ಭಾವನೆಯು || ಪ || ಅಮೃತಪುತ್ರನು ಸುಮನಸಮಿತ್ರನು ಪರಮಪವಿತ್ರನು ನೀನಯ್ಯಾ ಮೇಲೇಳೈ ಕೀಳರಿಮೆಯ ತ್ಯಜಿಸಿ ಕಾದಿದೆ ಉಜ್ವಲ ಭವಿತವ್ಯ || 1 || ದುಡಿದರು ದಣಿಯದ ತಡೆದರು ತಣಿಯದ ಮಡಿದರು ಮಣಿಯದ ಭೀಮಬಲ ಅಡಗಿದೆ ನಿನ್ನೊಡಲಿನ ಕಣಕಣದಲಿ ನೀ ಮೃತ್ಯುಂಜಯ ಆತ್ಮನೆಲಾ || 2 || ಕಾಯವ ನೋಯಿಸಿ ಬೆವರನು ಹಾಯಿಸಿ ಬಾಳಿನ ಸಸಿಯನು ಬೆಳೆಸಯ್ಯಾ ಜಡತೆಯ […]

Read More

ದುಃಖಿತ ಜನತೆಯ ಕಂಬನಿಯೊರೆಸಿ

ದುಃಖಿತ ಜನತೆಯ ಕಂಬನಿಯೊರೆಸಿ ಮುಚ್ಚಿದಹಂಕಾರದ ಕದ ಸರಿಸಿ ಸಾಗುವ ಬಾ ವರ ವೈಭವದೆಡೆಗೆ, ಸಾಧನೆಯಾ ಉತ್ತುಂಗದ ಕಡೆಗೆ ಉನ್ನತಿಯಾ ಗುರಿ ಸೇರುವವರೆಗೆ || ಪ || ಎತ್ತರ ನಿಂತಿಹ ಧವಳ ಹಿಮಾಚಲ ಧೈರ್ಯವ ತುಂಬಿಸಲಿ ಉನ್ನತ ಭಗವೆಯ ಮಂಗಳಲಾಸ್ಯವ ಜಲಧಿಯು ಬಿಂಬಿಸಲಿ ಜೀವಜಲಂಗಳ ಮಂಜುಳಧಾರೆಯು ಸ್ಫೂರ್ತಿಯ ಉಕ್ಕಿಸಲಿ ಉಜ್ವಲ ಚರಿತೆಯ ಪ್ರಜ್ವಲ ದೀಪವು ದಾರಿಯ ತೋರಿಸಲಿ || 1 || ದೈನ್ಯ ನಿರಾಶೆಯ ಕಾಲವು ಕಳೆಯಿತು ಇದು ಗೆಲುವಿನ ಯುಗವು ಶೌರ್ಯ ಪರಾಕ್ರಮ ಹೊಮ್ಮಲಿ ಇಂದು ತಲೆಬಾಗಲಿ […]

Read More

ದಶದಿಶೆಗಳಿಗೂ ವ್ಯಾಪಿಸುತಿಹುದು

ದಶದಿಶೆಗಳಿಗೂ ವ್ಯಾಪಿಸುತಿಹುದು ಹಿಂದೂ ಸೂರ್ಯನ ಹೊಂಗಿರಣ ಹೊಸ ದಾಖಲೆಯನು ಸ್ಥಾಪಿಸಲಿಹುದು ಹಿಂದೂ ವೀರರ ಸಂಚಲನ ಹೊಸದಿಗಂತದೆಡೆಗೀ ಪಯಣ || ಪ || ನಮ್ಮ ಪುರಾತನ ತತ್ವಬುನಾದಿಯು ಮನುಜತ್ವದ ಮೂಲಾಧಾರ ಮೃತ್ಯುಂಜಯವೀ ಪಾವನ ಸಂಸ್ಕೃತಿ ಚಿರಚೈತನ್ಯದ ಭಂಡಾರ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 1 || ಭಾರತಮಾತೆಯ ಗೌರವಘನತೆಯ ಭಾವೈಕ್ಯದ ಸಂರಕ್ಷಣೆಗೆ ಪೂರ್ಣ ಸಮರ್ಪಿತವೆಮ್ಮಯ ಜೀವನ ನಾಡಿನ ಬಲ ಸಂವರ್ಧನೆಗೆ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 2 || ಹಿಮಗಿರಿ […]

Read More

ತುಂಗ ಹಿಮಾಲಯ ಶೃಂಗ ವಿಲಾಸಿನಿ

ತುಂಗ ಹಿಮಾಲಯ ಶೃಂಗವಿಲಾಸಿನಿ ಮಂಜುಳವಾಹಿನಿ ಗಂಗಾ ಪುಂಗವಪೂಜಿತ ಮಂಗಲದಾಯಿನಿ ನಿನ್ನಯ ಕೀರ್ತಿ ಅಭಂಗ | ಬಾ ನಲಿದಾಡುತ ಬಾ || || ಪ || ಪರಮೇಶ್ವರ ಹರನರಗಿಣಿ ನೀನು ಕಲಕಲನಾದ ತರಂಗಿಣಿ ನೀನು ಭಾರತ ಹೃದಯ ವಿಹಾರಿಣಿ ನೀನು ಅಗಣಿತ ಭಾಗ್ಯಪ್ರದಾಯಿನಿ ನೀನು ಬಾ ನಲಿದಾಡುತ ಬಾ || 1 || ಸಾಧಕರಿಗೆ ಭವತಾರಿಣಿಯಾಗಿ ಪೂಜಕರಿಗೆ ಅಘನಾಶಿನಿಯಾಗಿ ನಾಡಿನ ತಾಪ ನಿವಾರಿಣಿಯಾಗಿ ಕಶ್ಮಲ ಕಲಿ ಸಂಹಾರಿಣಿಯಾಗಿ ಬಾ ನಲಿದಾಡುತ ಬಾ || 2 || ಹಿಂದು ಸಮಾಜದ […]

Read More

ತಾಯಿ ಭಾರತಿಯ ಪಾದಪದ್ಮಗಳ

ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ | ಹಿಂದು ಸಾಗರದ ಬಿಂದುಬಿಂದುಗಳೆ ಒಂದುಗೂಡಿ ಬನ್ನಿ || || ಪ || ಧ್ಯೇಯಭಾಸ್ಕರನ ದಿವ್ಯಕಿರಣಗಳ ನವ್ಯರಮ್ಯಲಾಸ್ಯ ತರುಣರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ ಬಾಹುಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ || || 1 || ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯದೀಪ್ತಿಯನ್ನು ತ್ಯಾಗ ಸಾಹಸದ ಪುಷ್ಪಮಾಲೆಯನು ತಾಯ್‍ಗೆ ತೊಡಿಸಬನ್ನಿ || || 2 || ಮಾತೃಭುವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು […]

Read More

ತರುಣ ಬಲದ ಜಲಧಿ ಭರದಿ

ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ ಭರತ ಭುವಿಯ ಭಾಗ್ಯದ್ವಾರವಿಂದು ತೆರೆದಿದೆ ಬಿಂದು ಬಿಂದು ಸಿಂಧುವಾಗಿ ಉಕ್ಕಿ ಮೊರೆದಿದೆ ಹಿಂದು ಹಿಂದು ಎಂಬ ಘೋಷ ಮುಗಿಲಮುಟ್ಟಿದೆ ಜೈ ಭಾರತಿ ಜೈ ಭಾರತಿ ಜೈ ಭಾರತಿ ಅಮರ ನಿನ್ನ ಕೀರುತಿ || ಪ || ಕಷ್ಟನಷ್ಟವೇನೆ ಬರಲಿ ನಿಷ್ಠೆ ಎಮದು ರಾಷ್ಟ್ರಕೆ ಭ್ರಷ್ಟರನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ ಧೂರ್ತ ಶತ್ರುಗಳನು ಮೆಟ್ಟಿ ಚೆಂಡಾಡುತ ರುಂಡವ ಗೈವೆವಿಂದು ಸಮರ ಭೂಮಿಯಲ್ಲಿ ರುದ್ರತಾಂಡವ ಜೈ ಭಾರತಿ ಜೈ ಭಾರತಿ ಜೈ […]

Read More

ಜ್ಞಾನದಾತನೆ ಚಿರಪುನೀತನೆ

ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]

Read More