ಹೇ ಹಂಸವಾಹಿನಿ, ಜ್ಞಾನದಾಯಿನಿ | ಅಮ್ಮಾ ದಾರಿತೋರು ಅಮ್ಮಾ ಕರುಣೆ ಬೀರು | ವಸುಧೆಯ ಮುಕುಟದಿ ಮೆರೆಯಲು ಭಾರತ | ಬಹುಬಲ ವಿಕ್ರಮ ನೀಡು || ಪ || ಶೀಲ ಶೌರ್ಯಗಳು ಹೃದಯದಿ ಚಿಮ್ಮಲಿ | ಜೀವನ ತ್ಯಾಗ ತಪೋಮಯವಾಗಲಿ | ಸಂಯಮ ಶಿಸ್ತು ಸ್ನೇಹಗಳುದಿಸಲಿ | ಸ್ವಾಭಿಮಾನ ಬರಲಿ || 1 || ಆಗುವ ಲವಕುಶ ಧ್ರುವ ನಚಿಕೇತ | ಜನತೆಯ ಸಂಕಟ ನೀಗುವ ಸತತ | ಸಾವಿತ್ರೀ ಸತಿ ಜಾನಕಿ ದುರ್ಗೆ | ಮನೆ […]
ಆವಿನದು ನೊರೆಹಾಲನೊಲ್ಲೆನು ದೇವಲೋಕದ ಸುಧೆಯನೊಲ್ಲೆನು ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು | ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೇ ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ || 1 || ಬರಲಿ ಸಿರಿವಂತಿಕೆಯ ಜನ್ಮವು ಬರಲಿ ಕಡುಬಡತನದಿ ಇಲ್ಲವೆ ಇರದು ಚಿಂತೆಯು ತಾಯೇ ನಿನ್ನುದರದಲಿ ಜನಿಸುವುದೇ | ಪರಮ ಭಾಗ್ಯವು ಎಂಬುದರಿಯನೆ ಮರೆಯದಲೆ ಪ್ರತಿ ಜನ್ಮದಲಿ ಶ್ರೀ – ಧರನು ದಯೆಯಿಂದೆನಗೆ ನೀಡಲಿ ನಿನ್ನ ಸೇವೆಯನು || 2 || ಇರಲೆನಗೆ ಕರಕನ್ನವುಣ್ಣಲು ಬರಿಯ ನೆಲವಿರಲೆನಗೆ ಮಲಗಲು ಹರಕು […]
ಎನಿತೆನಿತೋ ಪುಣ್ಯದಾ ಭಾಗ್ಯದಾ ಫಲವಾಗಿ ಭಾರತಿಯ ಬಸಿರಿನಾ ಶಿಶುವಾದೆನಾ ದೇವ ದುರ್ಲಭ ನಾಡು ಸಂಸ್ಕೃತಿಯ ನೆಲೆವೀಡು ಭರತ ದೇಶದ ಪುಣ್ಯ ಕಣವಾದೆ ನಾ || ಪ || ಇಲ್ಲಿ ಹರಿಯುವ ನೀರ ಕಣಕಣವೂ ಪಾವನವು ತಾಯಿ ಗಂಗೆಯ ಪುಣ್ಯ ತೀರ್ಥದಂತೆ ಇಲ್ಲಿರುವ ಗಿಡಬಳ್ಳಿ ವೃಕ್ಷಜನ್ಯಗಳೆಲ್ಲ ಒಂದೊಂದು ಔಷಧೀಯ ಲೋಕದಂತೆ || 1 || ಮಣ್ಣ ಒಳಗಿದೆ ಖನಿಜ, ಮೇಲೆ ಧಾನ್ಯದಾ ಕಣಜ ಭೂಮಾತೆ ಗೋಮಾತೆ ಸಾಕ್ಷಿಯಂತೆ ವಲಯ ಮಾರುತಗಾನ ಪುಣ್ಯ ಕ್ಷೇತ್ರದ ತಾಣ ಭಾರತವು ಸಕಲಗುಣ ನಾಕದಂತೆ […]
ಜಗದಗಲ ಪಸರಿಸಲಿ ಹಿಂದುತ್ವದಾ ಘೋಷ ತಾಯಿ ಭಾರತಿಗಿಂದು ವಿಜಯ ಸಂಘೋಷ ಚಿಮ್ಮಲೀ ಸ್ಫೂರ್ತಿ ಉದ್ಘೋಷ || ಪ || ಸಾವಿಗಂಜದ ವೀರ ಸಂತತಿಯು ನಾವು ತರುಣ ಪಡೆ ಮೇಳವಿಸೆ ತಾಯಿಗೇತರ ನೋವು ನೊಂದವರ ಬಿಗಿದಪ್ಪಿ, ಬಿದ್ದವರ ಮೇಲೆತ್ತಿ ಸಮರಸದಿ ವಿಜಯಶಿಖರಹತ್ತಿ || 1 || ಸ್ವಾರ್ಥ ಮೋಹವ ಮುರಿದು ರಾಷ್ಟ್ರ ಚಿಂತನೆಗೈದು ಸ್ವಾಭಿಮಾನವ ಮೆರೆದು ದೀನಸೇವೆಯಗೈದು ಜಾತಿ ಭೇದವನಳಿಸಿ ಒಂದೇ ಭಾವವ ಬೆರೆಸಿ ನಾಡರಕ್ಷಿಪ ತ್ಯಾಗಭಾವಹರಿಸಿ || 2 || ಸಮರ ಕಾದಿದೆ ಇಂದು ಕಾಯ ಸವೆಸಲು […]
ಭಾವಮಂದಿರದಲ್ಲಿ ತಾಯ ಮೂರ್ತಿಯನಿರಿಸಿ ಧ್ಯೇಯ ಜಲದಭಿಷೇಕ ಎರೆಯ ಬನ್ನಿ ನೋವು ನಲಿವಲಿ ಬೆರೆತು ನಾಡ ವೈಭವ ಚರಿತೆ ಬರೆಯ ಬನ್ನಿ || ಪ || ಪಸರಿಸುತ ಜಗದಗಲ ಧರ್ಮಸೂತ್ರದ ಬೆಳಕ ಜ್ಞಾನ ವಿಜ್ಞಾನಗಳ ಧಾರೆಯೆರೆದು ಯೋಗದಮೃತ ಹರಿಸಿ ಆಧ್ಯಾತ್ಮ ಸುಧೆಯನುಣಿಸಿ ವಿಶ್ವವನೆ ಪೊರೆದಂತ ಹಿರಿಮೆ ನಮದು || 1 || ತರತಮವ ಬದಿಗಿಟ್ಟು ಜನಹಿತವ ಎದುರಿಟ್ಟು ಸಾಮರಸ್ಯದ ಸೂತ್ರ ಹೆಣೆದು ಹೆಣೆದು ಜಾಡ್ಯ ಬಡಿದೋಡಿಸುತ ಮೌಢ್ಯಗಳ ಮರ್ದಿಸುತ ಯುವ ಮನಕೆ ಜಾಗೃತಿಯ ಭಾವ ಬೆಸೆದು || 2 […]
ವಿಶ್ವಕೆ ಹೊಸತನ ನೀಡಿದ ಮಣ್ಣಲಿ ಜನಿಸಿದ ನಾವೇ ಧನ್ಯ ಉಳಿಯಲಿ ಬೆಳೆಯಲಿ ಅನುದಿನ ನಲಿಯಲಿ ನವ ಉನ್ಮೇಷದ ತಾರುಣ್ಯ || ಪ || ಹದಿಹರೆಯದ ಬಿಸಿನೆತ್ತರ ಹರಿವಲಿ ಪುಟಿದೇಳಲಿ ಯುವ ಚೈತನ್ಯ ಮೈಮನಗಳ ಕೊಳೆ ಕೊಡವುತ ಕೊಡವುತ ಹೊರಹೊಮ್ಮಲಿ ಚಿರ ಜಾಗರಣ ಮುಗಿಲೆತ್ತರ ಬಾನೆತ್ತರ ಏರಲಿ ಭಾವೋನ್ಮೇಷದ ಸ್ಪುರಣಾ……|| 1 || ಉಕ್ಕುತ ಹರಿಯುವ ಜ್ಞಾನದ ತೊರೆಯಲಿ ಈಜಾಡುವ ಹುರುಪಿನಲಿ ರೋಷದಿ ಕ್ಲೇಶದಿ ಸಾಧನೆಯಿರದು ಧ್ಯೇಯದ ಕಡೆ ಗುರಿಯಿರಲಿ ಸೃಜನಾತ್ಮಕ ರಚನಾತ್ಮಕ ಕಾರ್ಯಕೆ ಮನದಲಿ ಶತ ಶ್ರಮವಿರಲಿ […]
ಮನಮನ ಬೆಸೆಯುತ ಅಸಮತೆ ನೀಗುತ ಚಲಿಸಲಿ ಸಮರಸತೆಯ ಯಾನ ಅಳಿಸುತ ವಿಷಮತೆ ಗೊಳಿಸುತ ಐಕ್ಯತೆ ಗುಣಿಗುಣಿಸುತ ಮಾತೆಯ ಗಾನ ಜಯಹೇ ಜಯಹೇ ಜಯ ಭಾರತ ಮಾತಾ ಜಯಹೇ || ಪ || ಪ್ರತಿ ಎದೆಯಾಳದ ಕಣಕಣದಲ್ಲಿಯೂ ಸ್ವಾಭಿಮಾನ ಸುಧೆ ಹರಿಸೋಣ ಸ್ತುತಿಸುತ ಮಾತೆಯ ವಿಜಯದ ಮಂತ್ರವ ಬಾಂದಳದೆತ್ತರ ಹಬ್ಬೋಣ ಒಂದೇ ರಕ್ತವ ಹಂಚುತ ನಾವು ಒಂದಾಗುತ ಸಂಚರಿಸೋಣ || 1 || ಧ್ಯೇಯ ಸಮರ್ಪಿತ ಕಾರ್ಯದ ಪಥದಲಿ ಕಲುಷಗಳೆಲ್ಲವ ತ್ಯಜಿಸೋಣ ಸೇವೆಯ ಮಂತ್ರವ ಎಲ್ಲೆಡೆ ಬೆಳಗುತ ನಾಡಿಗೆ […]
ತಾಯ ಕರೆಗೆ ಓಗೊಡುತ ಬನ್ನಿ ಸಂಘಕಾರ್ಯಕೆ ತಡವರಿಸದೆ, ಮರುನುಡಿಯದೆ ಸವೆಸಿ ಬಾಳ ರಾಷ್ಟ್ರಕೆ || ಪ || ವಿಕೃತಿಯಾ ಇತಿಹಾಸ ಬಿಸುಟು ದೂರದೂರಕೆ ಗೆಲುವ ಛಲವ ಮನದೊಳಿರಿಸಿ ಸಾಗಿ ಮುಂದೆ ಮುಂದಕೆ ಕೆಡುಕನಳಿಸಿ ಒಳಿತನುಳಿಸಿ ಸ್ವಾರ್ಥ ದೂರಗೈಯುವಾ ಧ್ಯೇಯವೊಂದೇ ಕಣ್ಣಮುಂದೆ ರಾಷ್ಟ್ರದ ಉತ್ಥಾನಕೆ || 1 || ಗೀತೆಯಾ ಸಾರವಿಹುದು ನಮ್ಮ ಬಾಳ ಹಾದಿಗೆ ಅಧ್ಯಾತ್ಮದ ಮೇರುಶಕ್ತಿ ಸ್ಫೂರ್ತಿ ನಮ್ಮ ನಾಳೆಗೆ ರಾಷ್ಟ್ರರಥವ ಮುಂದಕ್ಕೆಳೆವ ಧ್ಯೇಯ ಕಣ್ಣ ಮುಂದಿರೆ ಆಕರ್ಷಣೆ ಮೋಹ ಮಾಯೆ ಕ್ಷಣಿಕ ನಮ್ಮ ಬಾಳಿಗೆ […]
ಜಯತು ಜಯತು ಭಾರತ…… ಜಯತು ಜಯತು ಭಾರತ ಈ ತಾಯ್ನಾಡಿನಾ ಮಕ್ಕಳು ನಾವು ಈ ಮಣ್ಣಿನಾ ಮಡಿಲಿನಾ ಕುಡಿಗಳು ನಾವು ಭರತಭೂಮಿಯ ಕೀರ್ತಿ ಪಥವನು ನಭದತ್ತ ಒಯ್ಯುವ ಕುವರರು ನಾವು || ಪ || ಗಂಗೆ ತುಂಗೆ ಹರಿಯುವ ಪುಣ್ಯನಾಡಿದು ಕಂಗು ತೆಂಗು ಬೆಳೆಯುವ ಹಸುರುಹೊನ್ನಿದು ಶಿಲ್ಪಕಲೆಯ ಬೆಡಗಲ್ಲಿ ಬೆಳೆದ ಬೀಡಿದು ಹಿಮಾದ್ರಿಯ ಶಿಖರದಿಂದ ಕಂಗೊಳಿಪನಾಡಿದು || 1 || ವಿವಿಧ ಜಾತಿ ವಿವಿಧ ಪಂಥ ವಿವಿಧ ಭಾಷೆಯು ವಿವಿಧ ಕಲೆ ವಿವಿಧ ಬೆಳೆ ವಿವಿಧ ವೇಷವು […]
ಭರತ ಮಾತೆಯ ಚರಣ ಸೇವೆಗೆ ಬನ್ನಿ ಕುಸುಮಗಳಾಗುತ ಧನ್ಯಭಾವದಿ ನಿತ್ಯ ನಮಿಸಲು ಗೊಳಿಸಿ ಜನಮನ ಜಾಗೃತ ಸವೆಸಿ ತನುಮನ ಅವಿರತ || ಪ || ಮೇರು ಶಿಖರವ ಏರಬಯಸಿರಿ ಬಾಳ ಬವಣೆಯ ಮರೆಯುತ ವಿಜಯದುಂದುಭಿ ಘೋಷ ಮೊಳಗಿಸಿ ಕೀಳರಿಮೆ ಬದಿಗೊತ್ತುತ ಗೊಳಿಸಿ ಜನಮನ ಜಾಗೃತ ಸವೆಸಿ ತನುಮನ ಅವಿರತ || 1 || ಒಂದೆ ಅನ್ನವ ಉಣುವ ನಮ್ಮಲಿ ತುಳಿತ ತರತಮವೇತಕೆ ಎಲ್ಲ ಭಿನ್ನತೆ ಮರೆತು ಬೆರೆಯಲಿ ಹಿಂದು ಭಾವದ ಐಕ್ಯತೆ ಗೊಳಿಸಿ ಜನಮನ ಜಾಗೃತ ಸವೆಸಿ […]