ಸಂಘ ದೀಪ್ತಿಯ ಪಿಡಿದು ಹೊರಟಿಹ

ಸಂಘ ದೀಪ್ತಿಯ ಪಿಡಿದು ಹೊರಟಿಹ ನಿಮಗಿದೋ ಶುಭ ಕಾಮನೆ ವಿವಿಧ ಮನಗಳು ಒಂದುಗೂಡಿವೆ ಧ್ಯೇಯ ಸಮರಸ ಸಾಧನೆ || ಪ || ಭೀಮ ರಾಯರು ಗಾಂಧಿತಿಲಕರು ಸಂಘ ಸಲಿಲದಿ ಮಿಂದರು ಸುದಾಮ ಶಾಮರ ರಾಮಹನುಮರ ಅಭಂಗ ಏಕತೆ ಕಂಡರು || 1 || ಮಾತನಾಡದೆ ಮಾಡಿತೋರುವ ಸಂಘ ಸೂತ್ರವು ಅನುಪಮ ಬಂಧ ಬೆಳೆಯಿತು ಭಾವ ಬೆಸೆಯಿತು ಕಂಪು ಬಿಸಿತು ವನಸುಮ || 2 || ಭಜನೆ, ಭೋಜನ ವಚನ ಗೀತೆಗೂ ಒಂದು ಮಾಡುವ ಬಲವಿದೆ ಆಟ ಪಾಠವೂ […]

Read More

ಶ್ರೀಗುರು ಭಗವೆಯ ದರುಶನದೀಕ್ಷಣ

ಶ್ರೀಗುರು ಭಗವೆಯ ದರುಶನದೀಕ್ಷಣ ಜಾಗೃತಗೊಂಡಿತು ಕರ್ತೃತ್ವ ಭಾವಪುಟಗಳಲಿ ಭೂಪಟವರಳಿತು ಮಣ್ಣಿನೊಳುದಿಸಿತು ಮಾತೃತ್ವ        || ಪ || ಭಗವೆಯ ಮೌನದ ಭಾಷೆಗೆ ಭಾಷ್ಯವು ಋಷಿಗಳ ಬದುಕಿನ ರೀತಿ ಅಸಿಧಾರಾ ವ್ರತ ಜೀವನ ನಡೆಸಿದ ಮಹೋನ್ನತ ತ್ಯಾಗದ ನೀತಿ             || 1 || ದಿಟದಿತಿಹಾಸದ ಪುಟಪುಟ ತುಂಬಿದೆ ಛಲ-ಬಲ- ವಿಕ್ರಮ ಚರಿತೆ ಶತಶತಮಾನದ ಕಥನವ ಬರೆದಿದೆ ಹಿಂದುತ್ವದ ಜೀವನ ಸರಿತೆ              […]

Read More

ಅಸದಳ ಕಾರ್ಯವ ಸಾಧಿಸಿ ತೋರುವ

ಅಸದಳ ಕಾರ್ಯವ ಸಾಧಿಸಿ ತೋರುವ ಯುವಮನಸುಗಳೇ ಮೇಲೇಳಿ ಕನಸಲಿ ಅರಳಿಹ ಚಿತ್ತಾರಗಳಿಗೆ ರಂಗನು ತುಂಬಲು ಎದ್ದೇಳಿ || ಪ || ತ್ಯಾಗಸ್ವಭಾವದಿ ಸೇವೆಯ ಗುಣದಲಿ ನಮಗೆಣೆಯಿಲ್ಲ ಸರಿಮಿಗಿಲು ಬಲದಾರಾಧನೆ ನಿತ್ಯವು ನಡೆದಿದೆ ಕೊಡಲಿಗೆ ಮಣಿಯಿತು ಪಡುಗಡಲು || 1 || ಶಂಕರ ಮಧ್ವರ ಸಿದ್ಧಾಂತಗಳಿವೆ ನಾರಾಯಣ ಗುರು ಉಪದೇಶ ಕನಕನಿಗೊಲಿದ ಮುರುಳಿಯ ನಾದದಿ ಸಮರಸತೆಯ ಸ್ವರವಿನ್ಯಾಸ || 2 || ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ ಕೇಳದೆ ಸಂತನ ಉದ್ಘೋಷ ಪಡುವಣ ಕಡಲಿನ ಮೊರೆತಕೆ ಮರುದನಿ ಭಾರತ […]

Read More

ಸಂಘಶಕ್ತಿಯ ಸೀಮೋಲ್ಲಂಘನ

ಸಂಘಶಕ್ತಿಯ ಸೀಮೋಲ್ಲಂಘನ ಹಿಂದುನವೋದಯ ಸಂಕ್ರಮಣ ಮನ ಮನೆಗಳ ಬಂಧುತ್ವದ ಮಿಲನ ಸಮರಸಗಂಗೆಯ ಅವತರಣ ಸೀಮೋಲ್ಲಂಘನ… ನವಯುಗ ಸಂಕ್ರಮಣ || ಪ || ಸಾಸಿರ ವರುಷದ ಸಂಘರ್ಷದ ಸೆಲೆ ಸ್ವಾತಂತ್ರ್ಯದ ಗಳಿಕೆಯ ಘನ ಹಿನ್ನಲೆ ರಾಷ್ಟ್ರಸಮರ್ಪಿತ ಜೀವನವೇ ಬೆಲೆ ನಾಡನಾಗಿಸಲು ಹಿಂದುತ್ವದ ನೆಲೆ || 1 || ಪತಿತರು ದೀನರು ದೇವಸಮಾನ ನಿರತ ಸೇವೆಯೇ ಪರಮ ಸಾಧನ ಪಂಥ ಪಕ್ಷ ಮತ ಒಡಕಿಗೆ ಕಾರಣ ಬೆರೆತು ನಡೆಸುವಾ ಸಮರಸ ಜೀವನ || 2 || ಬಲ ಎಲ್ಲಿಹುದೋ ಬೆಲೆ […]

Read More

ಭಾರತಿ ನಿನ್ನಯ ವೈಭವಕಾಗಿ

ಭಾರತಿ ನಿನ್ನಯ ವೈಭವಕಾಗಿ ದುಡಿವೆವು ಸಾವಿರ ಹಗಲಿರುಳು… ಕೇಶವ ತೋರಿದ ಗುರಿಯನು ತಲುಪಲು ಅರ್ಪಿತ ಜೀವನ ಕುಸುಮಗಳು… || ಪ || ಗೋಪುರ ಶಿಖರದಿ ಹೊನ್ನಿನ ಕಳಶ ಧನ್ಯವು ಹೊತ್ತಿಹ ಕಂಬಗಳು… ಸಂಘಮಂದಿರಕೆ ತನುಮನ ಅರ್ಪಿಸಿ ಮಣ್ಣಲಿ ಹೂತಿಹ ಕಲ್ಲುಗಳು… || 1 || ದ್ವಂದ್ವಗಳಿಲ್ಲದ ಸಮತೆಯ ಭಾವ ನಮ್ಮೊಳಗಿರುವ ನಿಜಧ್ಯಾನ… ಜಗದೇಕಾತ್ಮತೆಯು ನಮ್ಮೊಳಗಿದ್ದರೆ ಅದುವೇ ಹದವರಿತಾತ್ಮಜ್ಞಾನ… || 2 || ಧ್ಯೇಯಸಾಧನೆಗೆ ಪ್ರತಿಫಲವಿರದು ಅಲ್ಲಿದೆ ಸಂತನ ಆತ್ಮತೃಪ್ತಿ… ಹೆಗಲೇ ಸವೆದರು ಕಾರ್ಯವು ನಿಲ್ಲದು ಅಕ್ಷಯ ಉಜ್ವಲ […]

Read More

ಮೈಕೊಡವಿ ಮೇಲೇಳು

ಮೈಕೊಡವಿ ಮೇಲೇಳು ಸಾಧನೆಯ ಕಲಿಪುರುಷ, ಬಾ ಹಿಂದು ಸೋದರನೆ ರಾಷ್ಟ್ರಕಾಗಿ… ಮೃತ್ಯುಭೃತ್ಯನು ನೀನು ನಿನಗೆಲ್ಲಿ ಅಂಜಿಕೆಯೊ, ಕರೆದಿಹಳು ಭಾರತಿಯು ರಾಷ್ಟ್ರಕಾಗಿ… || ಪ || ಜಗದಗಲ ಹರಡಿಹುದು ಕತ್ತಲೆಯ ಕಾರ್ಮೋಡ, ಬೆಳಕ ಹರಿಸಿ ತಮವ ದೂರ ಸರಿಸು… ರಣಘೋಷ ಮೂಡಿಹುದು ರಣಕಹಳೆ ಮೊಳಗಿಹುದು, ತರುಣ ರಕ್ತದ ಕಣದಿ ಸಿಡಿಲ ತರಿಸು… || 1 || ಏಕತೆಯ ತೊರೆದಿಹರು ಸಂಸ್ಕೃತಿಯ ಮರೆತಿಹರು, ಹಿಂದು ಮಂತ್ರವ ಪಠಿಸು ನಾಡಿಗೆಲ್ಲ… ಮೈಮರೆತು ಮಲಗಿಹರು ಬಲಭೀಮ ಹನುಮರು, ಪಾಂಚಜನ್ಯವ ನುಡಿಸು ವಿಶ್ವಕೆಲ್ಲ… || […]

Read More

ಹಿಂದುಶಕ್ತಿಯು ಒಂದುಗೂಡಿದೆ

ಹಿಂದುಶಕ್ತಿಯು ಒಂದುಗೂಡಿದೆ, ಭೇದಭಾವವ ಮರೆಯುತಾ… ಸಾಮರಸ್ಯದಿ ಮುಂದೆ ನಡೆಯಲು, ಶಕ್ತವಾಯಿತು ಭಾರತ… || ಪ || ದಿಕ್ಕು ದಿಕ್ಕಲಿ ಧೂರ್ತನರ್ತನ ರಕ್ತವಾಯಿತು ಈ ಧರೆ… ದಿಟ್ಟ ಉತ್ತರ ನೀಡಿದುದಕೆ ಮತ್ತೆ ಬೆಳಗಿತು ಬಾನ್‍ಧರೆ… || 1 || ಹಿಂದು ಹೃದಯವು ಶೂನ್ಯವಾಗಲು, ಸೂತಕದ ಮನೆ ರಾಷ್ಟ್ರವು… ಸಂಘ ಜನಿಸಿತು ಮೌಢ್ಯ ಅಳಿಯಲು, ಭವ್ಯ ಮಂಗಳ ಪೀಠವು… || 2 || ದಿವ್ಯ ಪುರುಷರು ನಡೆದು ತೋರಿದ, ವೀರವ್ರತದಾ ಸ್ವೀಕೃತಿ… ನಾನು ನನ್ನದು ಎಲ್ಲ ಮೋಹವು, ರಾಷ್ಟ್ರ ಯಜ್ಞಕೆ […]

Read More

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅ ಆ ಇ ಈ, ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ || ಆಟ ಊಟ ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನಿಗೆ ಜೀವನವೇ ರಸದೂಟ || 1 || ಇ ಈ ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 || ಉ, ಊ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ […]

Read More

ನಮ್ಮ ಮನೆ ಇದು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ ನಲಿವಿನ ಅರಿವಿನ ನಮ್ಮ ಮನೆ | ರೀತಿಯ ನೀತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ನಮ್ಮ ಮನೆ || ಪ || ತಾಯಿಯ ಮಮತೆಯ ತಂದೆಯ ಪ್ರೀತಿಯ ಸೆಲೆಯಲಿ ತೆರೆದಿದೆ ನಮ್ಮ ಮನೆ ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ ನಿಲುವಲಿ ನಿಂತಿದೆ ನಮ್ಮ ಮನೆ || 1 || ಹಕ್ಕಿಗಳುಲಿವಿಗೆ ನೇಸರನುದಯಕೆ ಏಳುವರೆಲ್ಲರು ಮುದದಿಂದ ಮೀಯುತ ಮಡಿಯಲಿ ನೆನೆಯುತ ದೇವಗೆ ಭಕುತಿಯ ನಮನ ಕರದಿಂದ || 2 || ಅಕ್ಕತಂಗಿಯರ […]

Read More

ಭರತ ಭೂಮಿ ನನ್ನ ತಾಯಿ (ರಚನೆ – ಕುವೆಂಪು)

ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು || ಪ || ತುಹಿನ ಗಿರಿಯ ಸಿರಿಯ ಮುಡಿಯ ಹಿರಿಯ ಕಡಲು ತೊಳೆಯುವಡಿಯ ಪೈರು ಪಚ್ಚೆ ಪಸುರಿನುಡೆಯ || ಅ.ಪ || ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ ಸಲಿಲ ತೀರ್ಥ ಪುಣ್ಯ ರಂಗೆ || 1 || ಮತದ ಬಿರುಕುಗಳನು ತೊರೆವೆ ನುಡಿಗಳೊಡಕುಗಳನು ಮರೆವೆ ತೊತ್ತ ತೊಡಕುಗಳನು ಬಿರಿವೆ ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು […]

Read More