ಅಸದಳ ಕಾರ್ಯವ ಸಾಧಿಸಿ ತೋರುವ

ಅಸದಳ ಕಾರ್ಯವ ಸಾಧಿಸಿ ತೋರುವ
ಯುವಮನಸುಗಳೇ ಮೇಲೇಳಿ
ಕನಸಲಿ ಅರಳಿಹ ಚಿತ್ತಾರಗಳಿಗೆ
ರಂಗನು ತುಂಬಲು ಎದ್ದೇಳಿ || ಪ ||

ತ್ಯಾಗಸ್ವಭಾವದಿ ಸೇವೆಯ ಗುಣದಲಿ
ನಮಗೆಣೆಯಿಲ್ಲ ಸರಿಮಿಗಿಲು
ಬಲದಾರಾಧನೆ ನಿತ್ಯವು ನಡೆದಿದೆ
ಕೊಡಲಿಗೆ ಮಣಿಯಿತು ಪಡುಗಡಲು || 1 ||

ಶಂಕರ ಮಧ್ವರ ಸಿದ್ಧಾಂತಗಳಿವೆ
ನಾರಾಯಣ ಗುರು ಉಪದೇಶ
ಕನಕನಿಗೊಲಿದ ಮುರುಳಿಯ ನಾದದಿ
ಸಮರಸತೆಯ ಸ್ವರವಿನ್ಯಾಸ || 2 ||

ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ
ಕೇಳದೆ ಸಂತನ ಉದ್ಘೋಷ
ಪಡುವಣ ಕಡಲಿನ ಮೊರೆತಕೆ ಮರುದನಿ
ಭಾರತ ಮಾತೆಯ ಜಯಘೋಷ || 3 ||

Leave a Reply

Your email address will not be published. Required fields are marked *