ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಮುಂದೊಯ್ವ ನಾವೆಯಲಿ ನಾವಿಕರು ನಾವೆ ಧರ್ಮಾರ್ಥಿಗಳು ನಾವು ಮೋಕ್ಷಕಾಮವು ನಮಗೆ ಸಾರ್ಥವಾಹರು ನಾವು ಸ್ವಾರ್ಥ ಮರೆತವರು || ಪ || ಹಾಯಿ ಹರಿಯದ ತೆರದಿ ನಾವೆ ಬಿರಿಯದ ತೆರದಿ ಯಮ, ನಿಯಮ, ಸಂಯಮದ ಸೂತ್ರಧಾರಿಗಳು ಗುರುವರನ ಹರಕೆಯಿದೆ ಗುರಿ ಸೇರ್ವ ಬಯಕೆ ಇದೆ ಗುರುತರದ ಹೊಣೆಹೊತ್ತ ಧ್ಯೇಯಧಾರಿಗಳು || 1 || ಭೋಗ ಜೀವನ ತ್ಯಜಿಸಿ ತ್ಯಾಗ ಕವನವ ರಚಿಸಿ ನಿಜಸುಖದ ಆನಂದ ಕಂಡುಕೊಂಡವರು ಮನದ ಪ್ರಶಮನದಿಂದ ಭುವನ ಶಾಂತಿಯು ಸಾಧ್ಯ ಸತ್ಯ ಸರಿತೆಯ […]
ಮನಸಿನ ಪ್ರಶಮನ ಸದ್ಗುಣ ವಿಕಸನ ಸೃಷ್ಟಿಯ ಏಳ್ಗೆಯ ಬಯಕೆ ಶತಶತಮಾನದ ಶ್ರುತಿ ಸ್ಮೃತಿ-ಸಂಸ್ಕೃತಿ ಹರಿದಿದೆ ಜ್ಞಾನದ ಸರಿತೆ || ಪ || ಗೆಳೆಯನ ಸಲುಗೆಯು, ಮಡದಿಯ ಅನುನಯ ಪ್ರಭುವಾಜ್ಞೆಯ ಬಲ ಅದಕಿಹುದು ಉಭಯ ತಟಗಳಲು ಮನುಜನ ಬದುಕಿಗೆ ಭದ್ರ ಬುನಾದಿಯ ಬಲಿದಿಹುದು […]
ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ ಜಗದ ಹಿತದಾಕಾಂಕ್ಷೆ ಬೀಜ ಬಿತ್ತಿ ಧನ್ಯಗೊಳಿಸಿದೆ ಬದುಕು ಪುಣ್ಯವಂತನು ನಾನು ಕಣ್ತೆರೆಸಿದ ತಾಯೇ ನಿನಗೆ ನಮನ || ಪ || ಭೋಗಕಿರಲೊಂದು ಮಿತಿ ತ್ಯಾಗದಿಂದಮೃತತ್ವ ಸ್ವಂತ ಸುಖವನು ಮರೆತ ಸಂತವಾಣಿ ಸ್ವಾರ್ಥ ಚಿಂತನೆ ತ್ಯಜಿಸಿ ತನು-ಧನಗಳನರ್ಪಿಸಿದೆ ಮನವೆಲ್ಲಿ ಕಾಣಿಸದು ನಿನ್ನೊಳಗೆ ಲೀನ || 1 || ಘನ ಪರಂಪರೆ ಇಹುದು ಶೌರ್ಯ-ಸಾಹಸಕಿಲ್ಲಿ ಪಾರ್ಥನಿಗೆ ಸಾರ್ಥಕತೆ ರಣದ ಕಣದೀ ಛತ್ರಪತಿಯ ಕಥನ ರಾಣ ನಡೆಸಿದ ಕದನ ವಿಜಯನಗರದ ಸ್ಮರಣ ಹೃದಯ ಸ್ಫುರಣ || 2 […]
ಭರತ ಮಾತೆ ಪುತ್ರರೇ ಒಂದು ಗೂಡುವ ದೇಶಕ್ಕಾಗಿ ಸ್ವಾರ್ಥ ಬಿಟ್ಟು ಸೇವೆಗೈಯುವ || ಪ || ಹಿಂದೂ ಹಿಂದೂ ಕೂಡಿ ನಾವು ರಾಮಲಕ್ಷ್ಮಣರಾಗುವ ವಾಯುಪುತ್ರ ಭೀಮನಂತೆ ಧೈರ್ಯವಾಗಿ ನಿಲ್ಲುವ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ (ಒಂದು ಗೂಡುವ) 2 || 1 || ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವ ದ್ವೇಷ ಬಿಟ್ಟು ಅರಿತು […]
ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ || || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ || || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ || || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]
ಭರತ ಮಾತೆಯ ಮಮತೆಯುಡುಗೊರೆ ಯೋಗವೆಂಬ ವಿಸ್ಮಯ ಅರಿತು ಜಗವು ಅಪ್ಪಿಕೊಂಡಿದೆ ಫಲವು ಅಮಿತವು ಅಕ್ಷಯ ಇರದು ಇತಿಮಿತಿ ಗುರುಪತಂಜಲಿ ತೋರಿಕೊಟ್ಟರು ಹಾದಿಯ ನೂರು ಜಂಜಡ ಭರದಿ ಕಳೆಯಲು ಮಾಡಬೇಕಿದೆ ಯೋಗವ || ಪ || ಯೋಗ ಕೊಟ್ಟಿಹ ಸ್ವಸ್ಥ ಬದುಕನು ನುಂಗದಿರಲಿ ಮಲಿನತೆ ನಾಗರೀಕತೆ ಮೆರಗು ತರಲಿ ನಗರದಲ್ಲಿನ ಶುಭ್ರತೆ ಬಡವ ಬಲ್ಲಿದ ಭೇದ ತೊಡೆದಿಹ ಯೋಗದಿಂದಲೇ ಧನ್ಯತೇ ಬೆಂಗಳೂರಿಗೆ ಭಂಗತಾರದೇ ಕೂಡಿ ಮಾಡುವ ಸ್ವಚ್ಛತೆ || 1 || ಸಾಮರಸ್ಯವು ಸ್ನೇಹ ಪ್ರೀತಿಯು […]
ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದುಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ || ಪ || ನನ್ನ ದೇಹದ ಬೂದಿ ಹೊಳೆಯಲ್ಲಿ ಹರಿಯಬಿಡಿ ತೇಲಿ ಬೀಳಲಿ ಮೀನ ಬಾಯಿಯಲ್ಲಿ ಮುಷ್ಠಿ ಬೂದಿಯ ತಿಂದು ಪುಷ್ಪವಾಗಲು ಮೀನು ಧನ್ಯವಾಯಿತು ಹುಟ್ಟು ಸಾವಿನಲ್ಲಿ || 1 || ನನ್ನ ದೇಹದ ಬೂದಿ ಕೊಳದಲ್ಲಿ ಬೀರಿಬಿಡಿ ತಾವರೆಯು ದಿನದಿನವು ಅರಳುವಲ್ಲಿ ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ ಧನ್ಯವಾಯಿತು ಹುಟ್ಟು […]
ನಮನ ನಿನಗೆ ಕನ್ನಡ ತಾಯೆ | ಅರ್ಪಿಸುವೆ ಮೊದಲ ತೊದಲ ನುಡಿಗಳ ಮಾಲೆ || ಲೋಕ ಲೋಕ ವಿನುತ ಕವಿ ಕುಲ ಸಂಪ್ರೀತೆ | ಹೃದಯ ತುಂಬಿ ನಾ ಪೊಡಮಡುವೆ ತಾಯೆ ನಿನಗೆ || ಪ || ಪಂಪನ ನೃಪತುಂಗನ ನುಡಿ ಕನ್ನಡ | ರನ್ನಪೊನ್ನ ಜನ್ನರ ಸವಿಗನ್ನಡss || ಮುದ್ದಣ ಕುಮಾರವ್ಯಾಸ ಕನ್ನಡ | ಮುಗ್ಧ ಜನರ ಮುದ್ದು ಭಾಷೆ ಕನ್ನಡ || ಭಾವದ ಅಂಗಳಕೆ | ಭಾಷೆಯ ಹೊಂಬೆಳಕೆ || ಕರ್ನಾಟಕ ಜನಮನದೊಲವೇ || 1 || […]
ಓ ತಾಯಿ ಭಾರತಿ ನಿನಗೆ ಜೀವದಾರತಿ ಚಿರಂತನವು ಬೆಳಗುತಿರಲಿ ನಿನ್ನ ನಾಡ ಕೀರುತಿ ನಿನ್ನ ಮಾನ ರಕ್ಷಣ ನಮ್ಮ ಪ್ರಾಣ ಅರ್ಪಣ ನಿನ್ನ ನಾಡ ಗುಡಿಗೆ ನಮ್ಮ ಬೆವರು ರಕ್ತ ತರ್ಪಣ ನಮಗೆ ನೀನೆ ಪ್ರೇರಣ ಜೀವಶಕ್ತಿ ಧಾರಣ ನಮ್ಮ ಮಾನ ಕೀರ್ತಿಗೆಲ್ಲ ತಾಯೆ ನೀವೆ ಕಿರಣ ಕಡಿದೆವೆಲ್ಲ ಬಂಧನ ನಾಡು ಇಂದು ನಂದನ ನಿನ್ನ ಚರಣ ಕಮಲದಲ್ಲಿ ತಾಯೆ ನಮ್ಮ ವಂದನ ಪಡೆಯಲೆಂದು ಬಿಡುಗಡೆ ತೆತ್ತೆವಂದು ತನುಮನ, ಪಡೆದುದನ್ನು ಕಾಯಲೆಂದು […]
ದಶಮಾನದ ಸಂಭ್ರಮ ದಶಮಾನದ ಸಂಭ್ರಮ ಕೇಶವನಾ ಹರಕೆಯಿಂದ ಲೋಕಹಿತದ ಬಯಕೆಯಿಂದ ರೂಪುಗೊಂಡ ಕುಂಜಕೆ ಪ್ರೇರಣೆಯ ಪುಂಜಕೆ ದಶಮಾನದ ಸಂಭ್ರಮ ದಶಮಾನದ ಸಂಭ್ರಮ || ಪ || ಬೆಳಗು ಸಂಜೆ ಭಗವೆರಶ್ಮಿ ಮಂಗಲಮಯ ಪರಿಸರ ತೆರೆದ ಬಯಲು ಸೆಳೆವ ನಿಲುವು ನೋಟವಿದು ಮನೋಹರ ವರವಿಶಾಲ ಕುಂಜಕೆ ಬೆಳಕಿನೊಂದು ಪುಂಜಕೆ || 1 || ಬಾಲಮನಕೆ ಮೋದವೆರೆದು ತರುಣರೆದೆಗೆ ಸ್ಫೂರ್ತಿಯ ಹಿರಿಯರೊಲಿದು ಹರಸುವಂತೆ ಬರೆದು ಮೇಲುಪಂಕ್ತಿಯ ಗರಿಮೆ ಪಡೆದ ಕುಂಜಕೆ ಚೈತನ್ಯದ ಪುಂಜಕೆ || 2 || ಹಸಿರು ಹೊತ್ತ ಹೂಗಿಡ ಮರ, ಮಾತೃಕೇಂದ್ರ […]