ಹಿಂದು ಭೂಮಿಯ ಸಿಂಧೂ ಜಲಧಿಯ ಕಣಕಣಗಳ ಚೈತನ್ಯವ ಹೀರಿ ಹಿಂದುವಿನೆದೆ ಎದೆ ಸ್ಪಂದನಗೊಳುತಿದೆ ಬಾಂಧವ್ಯದ ಮಜಲೇರಿ || ಪ || ಸರಿಸುತ ಕಾರ್ಗತ್ತಲ ದೂರ ಪಸರಿಸುತಾ ಜಾಗೃತಿ ಕದಿರ ಹಿಂದೂರವಿಯುದಯಿಸಿದನು ನೋಡ, ಹಿಂದಕೆ ಸರಿಯಿತು ಮೋಡ ಅಂಗಳದಲಿ ಮುಂಜಾವಿಗೆ ಸ್ವಾಗತ, ಭವಿಷ್ಯತ್ತಿಗೆ ಯಶಕೋರಿ || 1 || ಕುಗ್ಗಿದೆ ಸಂಕೋಚದ ಅವಧಿ ಹಿಗ್ಗಿದೆ ಸಂತೋಷದ ಉದಧಿ ಭಾರತಮಾತೆಗೆ ವೈಭವಕಾಲ ಬರುತಿದೆ ಸಂಶಯವಿಲ್ಲ ಗತಗೌರವವಾ ಮತ್ತೆ ಪಡೆಯುವಾ, ದೃಢನಿರ್ಧಾರವ ತೋರಿ || 2 || ಸೋಲಿನ ಕಾರಣಗಳ ಹುಡುಕಿ, […]
ಹಿಮಗಿರಿಯಲ್ಲಿನ ಉನ್ನತ ಶಿಖರ, ಕನ್ಯಾಕುವರಿಯ ಹಿಂದೂಸಾಗರ ನಡುವೆ ಬಾಳುವ ಕೋಟಿ ತರುಣರ ಮಾತೃಭೂಮಿ ಈ ಭೂಮಿ || ಪ || ಶಂಕರ ಮಧ್ವರ ಪವಿತ್ರಭೂಮಿ, ವಿದ್ಯಾರಣ್ಯರ ಕಾರ್ಯಕ್ಷೇತ್ರ ರಾಮದಾಸರ ಸೇವಾಮಂತ್ರ ವಿವೇಕಾನಂದರ ಈ ಭೂಮಿ || 1 || ಪ್ರತಾಪ ರಾಣಾ ತೋರಿದ ನಾಡಿದು, ಶಿವಾಜಿ ಶೂರ ಬೆಳಗಿದ ಬೀಡಿದು ಝಾನ್ಸಿರಾಣಿ ಕಾದಿದ ಜಾಡಿದು, ಕ್ಷಾತ್ರತೇಜದ ಈ ಭೂಮಿ || 2 || ಹೆಡಗೇವಾರರ ಸಂಘದ ದೀವಿಗೆ, ಚೇತನ ತುಂಬಿದೆ ಯುವಕರ ಬಾಳಿಗೆ ರಾಷ್ಟ್ರ ಕಟ್ಟುವ ಪೂಜ್ಯ […]
ಹಾಡುವೆವು ಹೊಸತೊಂದು ಹಾಡು ಕಟ್ಟುವೆವು ಹೊಸತೊಂದು ನಾಡು ಹಿಡಿದಿಹೆವು ಐಕ್ಯತೆಯ ಜಾಡು ನೀಗುವೆವು ತಾಯ್ನಾಡ ಪಾಡು || ಪ || ಮತಜಾತಿಗಳ ಸೀಮೆ ದಾಟಿ ನವಚೇತನದ ತಂತಿ ಮೀಟಿ ಸುತರಿರಲು ನಾವ್ ನೂರು ಕೋಟಿ ಭುವಿಯಲ್ಲಿ ನಮಗಾರು ಸಾಟಿ || 1 || ಪ್ರಾಚೀನ ಇತಿಹಾಸವೆಮದು ಭವಿತವ್ಯವತಿಭವ್ಯ ನಮದು ಬಿತ್ತರಿಸಿ ತಾಯ್ನಾಡ ಹಿರಿಮೆ ಗಳಿಸುವೆವು ಗತಮಾನ ಗರಿಮೆ || 2 || ಶತ್ರುಗಳ ಷಡ್ಯಂತ್ರ ಕುಟಿಲ ಪರಿಹಾರ ಸಂಕೀರ್ಣ ಜಟಿಲ ಎದೆಗುಂದದೆಯೆ ಮುಂದೆ ಸಾಗಿ ಹೋರಾಡಿ ಜಯಶೀಲರಾಗಿ […]
ಹರಸಿ ಧರೆಗವತರಿಸಿದೋ ಸಿಡಿಲಾಳು ಮಾನವ ಕೇಶವ ಆಳು ಶ್ವಾಸವನಾಳು ಹೃದಯವ ಸ್ಪರ್ಶಿಸಿದೊ ಸರ್ವಸ್ವವ || ಪ || ಕಲಿಬಲೋನ್ನತ ನೆಲದ ಯುವಕುಲವಿರಲು ದಾರಿಯೆ ತೋರದೆ ಧ್ಯೇಯದೇಗುಲ ತೆರೆದು ಬಾಗಿಲ ಕರೆದ ಕರದೊಳು ಹರಿದಿದೆ ನಿನ್ನ ಜೀವನದಮರ ಧಾರೆಯ ಅರುಣವಾರಿಯ ಹನಿಹನಿ ಯೋಧಹೃದಯದ ಧರೆಯ ಹರೆಯಕೆ ಪ್ರಖರತರ ಸಂಜೀವಿನಿ || 1 || ಹೋಮಧೂಮದ ತಪೋಧಾಮದ ಯೋಗ ಯಾಗದ ತಪಸಿಗೆ ಸಾರ್ಥಕತೆ ತಂದೀವ ಮಂತ್ರವ ಕಥಿಸಿ ಕೃತಿಸಿದ ಕೀರ್ತಿಗೆ ಶತಕವಿದರೊಳು […]
ಹರಯದ ಗುಡುಗುಗಳು ಸಿಡಿಲ ತೆರೆಗಳು ನಾವು ಗುರಿಯೆಡೆಗೆ ಛಲದ ಅಡಿಯಿಡುವವರು ಎಚ್ಚೆತ್ತ ಮನಬಲದಿ ಸಾಧನೆಗೆ ತನು ಬಳಸಿ ಚೈತನ್ಯ ಪಥದಲಿ ದಿಟ್ಟ ನಡೆಯುವವರು || ಪ || ಬಾಳುವೆಯ ಕಣದಲ್ಲಿ ಗುಂಡಿಗೆಯ ಪಣವಿರಿಸಿ ಪಾಂಚಜನ್ಯವ ಸ್ಮರಿಸಿ ಸೆಣಸುವವರು ಸಿಂಧು ಸಲಿಲದ ಬಯಲು ತರುಣ ಹುರುಪಿನ ಹುಯಿಲು ವೈರಿ ಪೀಳಿಗೆ ಎಣಿಸಿ ಮಣಿಸುವವರು || 1 || ಅಂಜುವೆದೆ ನಮ್ಮದಲ್ಲ ಹಿಂಜರಿಕೆ ಬಯಸಿಲ್ಲ ತೃಣವಾಗಿಸಿ ಅಸುವ ಕಸುವಿರುವವರು ಕಂಡಿಹೆವು ಮರಣವನು ಮಸಣದೆಡೆ ಯಾತ್ರೆಯನು ಅಳಿವಿರದ ಗೆಲುವಲಿ ಮಸಕಾಗದವರು || […]
ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ ನಿಮ್ಮೆದೆಯ ಸತ್ವದುರಿ ಆರದಿರಲಿ ಅಪಮಾನ ಸಹಿಸದಿಹ ಅಭಿಮಾನ ನಿಮಗಿರಲಿ ನಿಮ್ಮೊಡನೆ ನಾವಿರಲಿ ಇಲ್ಲದಿರಲಿ || ಪ || ಭಗ್ನವಾಯಿತು ಕಾಯ ದಗ್ಧವಾಯಿತು ಹೃದಯ ನಗ್ನವಾಯಿತು ನಾಡು ನಮ್ಮೆದುರಿಗೆ ತೀರಿಲ್ಲ ಋಣದ ಹೊರೆ ಮುಂದೆ ನೀವಾದರೂ ಹಿಂದಿರುಗಿಸಿರಿ ಸಾಲ ಇತ್ತವರಿಗೆ || 1 || ನಮ್ಮೆದೆಯ ತುಂಬಿದ್ದ ನಿಮ್ಮುಸುರಿನಾಕಾಂಕ್ಷೆ ನಮ್ಮೊಡಲ ಸಂತಾನ ನಿಮಗೆ ಬರಲಿ ಸೇಡುಗಳ ಪೂರೈಕೆ ಆದರ್ಶದಾರೈಕೆ ಸತ್ಪುತ್ರ ಕರ್ತವ್ಯ ಮರೆಯದಿರಲಿ || 2 || ಸುಖದ ಶಯ್ಯೆಯ ತಂಪು ಮೋಹ […]
ಸ್ಮೃತಿಸಚೇತಕ ಧ್ವಜ ನಮೋ ವ್ರತಿ ಸನಾತನ ಹೇ ವಿಭೋ ಅಗ್ನಿವರ್ಣದ ಜ್ಞಾನಕಿರಣದ ಜೀವಭೃಂಗಾರವೆ ನಮೋ || ಪ || ವಿಂಧ್ಯ ಹಿಮನಗ ನಿನ್ನ ಧರಿಸಲಿ ವಿಶ್ವವಂದ್ಯತೆ ಗಳಿಸಲಿ ನದಿ ಸಮುದ್ರದಿ ರೂಪ ಬಿಂಬಿಸಿ ಜಲವ ಪಾವನಗೊಳಿಸಲಿ ಕೀರ್ತಿವಾರಿಯು ಸ್ಫೂರ್ತಿಧಾರೆಯು ತುಂಬಿದಂಬುಧಿರೂಪ ಓ ಸತ್ವ ಸಂಗೀತವೇ ನಮೋ || 1 || ತ್ಯಾಗ ಶೌರ್ಯದಮೋಘ ಸಂಗಮ ನಾಡ ಸ್ಫೂರ್ತಿವಿಹಂಗಮ ರಾಷ್ಟ್ರದಕ್ಷಯ ಬಾಳ ಲಕ್ಷ್ಯದ ಭವ್ಯ ಸಾಕ್ಷಿ ಸಮಕ್ಷಮ ಧ್ಯೇಯದಾರಾಧನೆಯು ವೇದ್ಯವು ಹೃದಯಭೇರಿಯೆ ವಾದ್ಯವು ಜೀವನವೆ ನೈವೇದ್ಯವು || 2 […]
ಸಂಘದಂಗಳದಲ್ಲಿ ನಡೆದಿದೆ ಧ್ಯೇಯ ಸಾಧನೆ ಅವಿರತ ಹಸಿವು ಕಾಣದು ತೃಷೆಯು ಕಾಡದು ಅಸುವು ರಾಷ್ಟ್ರ ಸಮರ್ಪಿತ || ಪ || ಕಸುವು ಕುಂದುವ ಮೊದಲೆ ಮೋಸದ ಮುಸುಕ ಸರಿಸುವ ಹಂಬಲ ವಸುಧೆಗೊದಗಿದ ನೋವ ನೀಗಲು ನಮಗೆ ದೇವರೆ ಬೆಂಬಲ || 1 || ಶುದ್ಧ ಸಾತ್ವಿಕ ತಪದ ಜತೆಗಿದೆ ಶಸ್ತ್ರ ಶಾಸ್ತ್ರ ಪ್ರಬುದ್ಧತೆ ಯುದ್ಧ ಸಿದ್ಧತೆ ಭರದಿ ನಡೆದಿದೆ ಬುದ್ಧವಚನಕು ಬದ್ಧತೆ || 2 || ಸದ್ದು ಗದ್ದಲವಿರದೆ ಸಭ್ಯತೆ ಹೃದಯ ಗದ್ದುಗೆ ಏರಿದೆ ವಿದ್ಯೆ ಬುದ್ಧಿಗೆ […]
ಸಂಘ ಸೂತ್ರದ್ಹಾಂಗ ಕೇಶವ ಮಾಧವ ನುಡಿದ್ಹಾಂಗ ಕೂಡ್ಯಾಡಿ ನಲಿಯೋಣ ಬಲಾಢ್ಯ ಭಾರತ ಕಟ್ಟೋಣ || ಪ || ಒಂದಕ್ಕೊಂದು ಕೂಡಿ ಪ್ರತಿದಿನ ಶಾಖೆಗೆ ಹೋಗೋಣ ಮಾತೃಭೂಮಿ ಸ್ಮರಿಸಿ ರಾಷ್ಟ್ರದ ಚಿಂತನೆ ಮಾಡೋಣ ಭಗವೆಯ ಅಡಿಯಲ್ಲಿ ಶಿರವನು ಬಾಗಿಸಿ ನಲಿಯೋಣ ಹಿಂದು ಹಿಂದು ಒಂದು ರಾಷ್ಟ್ರದ ಕಲ್ಪನೆ ತರಿಸೋಣ || 1 || ಕಬಡಿ ಕಬಡಿ ಆಡಿ ದೇಹವ ದಣಿಸುತ ನಲಿಯೋಣ ಯೋಗ ದಂಡ ಕಲಿತು ಶಕ್ತಿಯ ಸಂಚಯ ಮಾಡೋಣ ಬಡಬಡನೆ ಲಾಠಿ ತಿರುವಿ ದ್ವಂದ್ವದ ಆಟವ ಆಡೋಣ […]
ಸಂಘ ವಿಚಾರವ ಮನದಲಿ ತುಂಬಿ ಗ್ರಾಮ ಗ್ರಾಮಕೆ ತೆರಳೋಣ || ಪ || ಎಂದಿಗೂ ಮರೆಯದ ಸಂಘ ಕಾರ್ಯವ ಜೀವನ ವ್ರತ ಸ್ವೀಕರಿಸೋಣ ಹೃದಯದಿ ತುಂಬಿದ ಅಹಂಕಾರವ ಮನಸ್ಸಿನಿಂದ ತೆಗೆಯೋಣ || 1 || ದೃಢ ಸಿದ್ಧಾಂತದ ಸಾಧಾರ ಸಂಘ ಬುನಾದಿಯ ಕಟ್ಟೋಣ ವಿಪತ್ತುಗಳನೆದುರಿಸಲು ನಾವು ನಿರ್ಭಯರಾಗಿ ಶ್ರಮಿಸೋಣ || 2 || ಹೃದಯ ಸಾಗರದಂಚನು ದಾಟಿ ಸ್ವರ್ಗಿಯ ಇತಿಹಾಸವ ರಚಿಸೋಣ ತತ್ವ ಸುಧಾರಸ ಕುಂಭವ ಕುಡಿದು ಅಮೃತ ಪುಂಗವರಾಗೋಣ || 3 ||