ಭವ್ಯ ಭಾರತದಲ್ಲಿ ಭವಿತವ್ಯಾ ಮಿನುಗುತಿದೆ ಭರವಸೆಯ ಹೊಂಗಿರಣ ಸೊಗವ ತಂದಿದೆ || ಪ || ನವ್ಯ ಸಾಧನೆ ಬೆಳಕು ಇತಿಹಾಸವ ನಿರ್ಮಿಸಿದೆ ಭುವಿಯ ಭಾಗ್ಯವಿದು ಎಂದು ಜಗವೇ ಮೆಚ್ಚಿದೆ || 1 || ಜಡತೆಯ ಕಿತತೊಗೆದು ಎಚ್ಚರಾಯಿತು ಈ ಜನತೆ ದಾಸ್ಯ ಭಾವವನೆಲ್ಲಾ ಕಿತ್ತು ಒಗೆದಿದೆ ವೀರ ಸಂತನ ಪಥದಿ ನಿಷ್ಠೆಯಲಿ ಸಾಗಿದೆ ತಾರತಮ್ಯವ ತೊರೆದು ಧ್ಯೇಯದಾ ಎಡೆಗೆ || 2 || ಪ್ರಗತಿಯ ಪಥದಲ್ಲಿಂದು ದಾಪುಗಾಲಿನ ಈ ನಡಿಗೆ ಸ್ವಾಭಿಮಾನವೆ ನಮಗೆ ವರವೇ ಆಗಿದೆ ಸ್ವಾರ್ಥಹಿತವ […]
ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ | ಅಸುರೆದೆಗಳು ಬಿರಿಯಲಿ | ಸುರಭಾವಗಳರಳಲಿ | ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ | ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ || ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ? ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ? ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ? ‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ | ಉಜ್ವಲ ಗತಸಿರಿಯಿದೆ | ಶೌರ್ಯದ ಸ್ಮೃತಿಯೆಮಗಿದೆ […]
ಒಳಗಿನ ಕಣ್ಣನು ತೆರೆದು ನೋಡಿದರೆ ತಿಳಿವುದು ಭಾರತ ಮಕ್ಕಳ ಹಿರಿಮೆ || ಪ || ಬುದ್ಧಿಯ ಚೋದಿಸಿ ಜಗವನೆಬ್ಬಿಸುವ ಮಿತ್ರನ ಶ್ರೇಷ್ಠತೆ ಸಾರಿದೆವು ಗಿಡ ಮರ ಮಣ್ಣು ಕಲ್ಲು ನೀರಿನಲ್ಲೂ ಭಗವಂತನ ನಾವ್ ತೋರಿದೆವು || 1 || ಜನಗಳು ಬೇರೆ ಮನವದು ಒಂದೇ ನುಡಿಗಳು ನೂರು ಭಾವನೆಯೊಂದೇ ನಡೆಗಳು ಬೇರೆ ನೀತಿಯದೊಂದೇ ವಿವಿಧತೆಯಲ್ಲಿನ ಏಕತೆಯ || 2 || ಇತರರು ಕಾಣದ ಊಹೆಗೂ ನಿಲುಕದ ಅತಿಶಯ ವಿಷಯವ ದರ್ಶಿಸುತ ಸುತರೆಂದೆಣಿಸುತ ಮತಿಯ ಪ್ರೇರಿಸುತ ಹಿತವನು ಕೋರುವ […]
ಭಾರತ ಮಾ ಕೇ ಚರಣ ಕಮಲ ಮೇ ತನ ಮನ ಧನ ಕರದೇ ನ್ಯೋಛಾವರ ಸಾಧಕ ಆಜ ಪ್ರತಿಜ್ಞಾ ಕರ ಲೇ ಜನನೀ ಕೇ ಇಸ ಸಂಕಟ ಕ್ಷಣ ಪರ || ಪ || ರುದನ ಕರ ರಹಾ ಆಜ ಹಿಮಾಲಯ ಸಿಸಕ ರಹೀ ಗಂಗಾ ಕೀ ಧಾರಾ ಡಗಮಗ ಹೈ ಕೈಲಾಸ ಶಂಭು ಕಾ ವ್ಯಥಿತ ಆಜ ಬದರೀಶ್ವರ ಪ್ಯಾರಾ ಉಧರ ಸುಲಗತೀ ವಹ್ನಿ ಶಿಖಾ ಲಖ ಭಯ ಕಂಪಿತ ನಿಜ ನಂದನವನ ಹೈ ಅಮರನಾಥ […]
ಕಟ್ಟಬನ್ನಿ ತರುಣರೇ ನವಭಾರತ ದೇಶವ ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ || ಪ || ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು ಬಿತ್ತಿ ಬೆಳೆದು ತನ್ನತನದ ಹೊನ್ನಿನಂಥ ಬೆಳಯನು ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ || 1 || ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯವು ನಮಗಿರೆ ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ | ಬೆವರು ಸುರಿಸಿ ಸಾಧಿಸೋಣ […]
ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]
ಭಾರತ ವರಸಂತಾನ ನಾವು, ಭಾರತ ವರಸಂತಾನ || ಪ || ಕೆಚ್ಚೆದೆ ಕಲಿಗಳ ಕೂರಸಿ ಕಡಿತಕೆ ಸಾಸಿರ ಅರಿಶಿರ ಬಿದ್ದವು ನೆಲಕೆ ಜಿತ ಭಗವಾಧ್ವಜ ಏರಿತು ನಭಕೆ, ದುಷ್ಟರ ರಿಪು ಬಲವಾನ ನಾವು || 1 || ರಕ್ಷಿತವಾದವು ದೇಶಗಳೆಲ್ಲ ಸ್ಥಿರಚರ ಹಿರಿಕಿರಿ ಜೀವಿಗಳೆಲ್ಲ ಭಯಕಂಪಿತ ಶತ ಪಾಪಿಗಳೆಲ್ಲ, ಸಭ್ಯ ಪ್ರಭಾವಿ ಮಹಾನ ನಾವು || 2 || ವೇದದ ಗಾನವು ಹರಡಿತು ಭರದಿ, ಮೋಹ ಭ್ರಮೆಗಳು ಅಳಿದವು ಜಗದಿ ಮನುಜತ್ವದ ಸಸಿ ಮೊಳೆಯಿತು ಮನದಿ, ವಿಶ್ವಕೆ […]
ಭಾರತಮಾತೆಯ ವೀರ ಸುಪುತ್ರರು ಜಗವನು ಪಾವನ ಮಾಡುವೆವು ಮಾತೆಯ ಮಂಗಳ ಪದವನು ನಾವು ಬಿಡದರ್ಚಿಸುವೆವು ಸೇವಿಪೆವು || ಪ || ಮಾತೆಯ ಬಂಧನ ಕಡಿದೊಗೆಯುತ ನಾವ್ ಜನ್ಮವ ಸಾರ್ಥಕಗೊಳಿಸುವೆವು ವೀರರೆ ಏಳಿರಿ ಮುಂದಕೆ ಸಾಗಿರಿ ಮಾತೆಯ ರಕ್ಷಣ ಗೈಯುವೆವು || 1 || ರಾಮನು ಜನ್ಮವ ತಾಳುತ ಧರ್ಮವ ನೆಲೆಸಿದ ನಾಡಿದು ಭಾರತವು ಪಾತಿವ್ರತ್ಯದ ಮಹಿಮೆಯ ತೋರಿದ ಜಾನಕಿ ದೇವಿಯ ವರಗೃಹವು || 2 || ಕುರುಕ್ಷೇತ್ರದೊಳು ಸಾರಥಿಯಾಗಿ ಪಾಂಚಜನ್ಯವನ್ನೂದಿದನು ಜಯಭೇರಿಯನು ಹೊಡೆದಿಹ ವೀರನ ಶ್ರೀ ಕೃಷ್ಣನ […]
ನವಭಾರತ ನಿರ್ಮಾಣಕೆ ಎರಗಿದ ಐಕ್ಯ ವಿರೋಧಿ ಸವಾಲುಗಳೇ ಯುವ ಭಾರತ ಹೊರಟಿದೆ ಸ್ವೀಕರಿಸಲು ನಿಮ್ಮನು ನಿಮ್ಮ ಅಖಾಡದಲೆ || ಪ || ಅಪ್ರತಿಹತವಿದು ನಾಡಿಗೆ ಕೂಡಿದ ಧ್ಯೇಯ ಜೀವನದ ಬಲದರಿವು ತನುಮನಗಳ ಅನುಶಾಸನ ನೀಡಿದ ಇತಿಹಾಸ ಪ್ರವಾಹದ ತಿರುವು || 1 || ಸಂಘಟನೆಯ ಗಂಗೋತ್ರಿಯ ಬುಗ್ಗೆ ನಿಜ ಸಮಾಜದಂಚಿನವರೆಗೆ ಅನುಜತ್ವದ ಸ್ನೇಹಾಂಕಿತ ಲಗ್ಗೆ ಮನುಜತ್ವದ ಮೇರೆಯವರೆಗೆ || 2 || ಧ್ರುವ […]
ನದನದಿಗಳ ಗಿರಿವನಗಳ ತಾಯೆ ಭಾರತ ಮಾತೆ ಓಂಕಾರದ ಝೇಂಕಾರದಿ ನಿನಗಿದೊ ಶುಭಗೀತೆ || ಪ || ಹಿಮಚುಂಬಿತ ಶಿಖರದಲ್ಲಿ ತಾಯೆ ನಿನ್ನ ನೆಲಸು ಬಿರುಗಾಳಿಯ ಭಿತ್ತಿಯಿಂದ ನೀನೆಮ್ಮನು ಹರಸು | ಗಂಗೆ ಯಮುನೆ ಸಂಗಮದಲಿ ನಿನ್ನ ವೇದಘೋಷ ದೇವದಾರು ವನಗಳಲ್ಲಿ ನಿನ್ನ ಮಂದಹಾಸ || 1 || ವಿಂಧ್ಯಾಚಲದೀಚೆಗಿಲ್ಲಿ ಸಂಧ್ಯಾರುಣ ಛಾಯೆ ಕಾವೇರಿಯ ತೆರೆಗಳಲ್ಲಿ ಮೀನಾಕ್ಷಿಯ ಮಾಯೇ | ಪರ್ವತಗಳ ಶಿಖರದಿಂದ ಕಡಲಂಚಿನ ತನಕ ತಾಯೆ ನಿನ್ನ ಮುಕುಟದಿಂದ ಹೊಳೆಯಲಿ ಮಣಿಕನಕ || 2 ||