ಕೇಳಿರಿದೋ ಬಗೆ ತೆರೆದೇಳಿರಿದೋ ಅರಳಲು ಪೂರ್ಣಾಕಾರ ಬಾಳಿನ ಸಂಕ್ರಾಂತಿಗೆ ಹೊಂಗಿರಣವು ಹರಿದಿದೆ ಧಾರಾಕಾರ || ಪ || ಮನೆ ಮನೆ ಮನಮನದೊಳು ತಾನೇ ಕೆನೆ ಒಮ್ಮತ, ಸಂಸ್ಕೃತಿ, ಸ್ನೇಹ ತಾಯ್ನೆಲದುದರದ ಬಂಗಾರದ ತೆನೆ ಎನಿಸಲು ತರುಣಸಮೂಹ ಹರಡಲು ಕಡಲಾಳಕೆ ಬುವಿಯಗಲಕೆ ಬಾನೆತ್ತರ ಸುವಿಚಾರ || 1 || ಹೊರೆಹೊರೆ ಹೇರಿದ ಹಲಹಲ ಶತಕದ ದಾಸ್ಯದ ಮೂಢಾಚಾರ ಕದಲಿಸಿ ಕೊಚ್ಚುವ ಕಿಡಿಮಳೆ ಚಿಮ್ಮಿದೆ ಅಂತಸ್ಸತ್ವವಿಹಾರ ವೇದೋಪನಿಷತ್ತಿನ ನುಡಿಗೊತ್ತಿನ ದಿವ್ಯಾತ್ಮರ ಹೂಂಕಾರ || 2 || ಮಲಗಿದ ಮನುಜತೆ ಪುನರೆಚ್ಚರಿಸುವ […]
ಒಂದಾಗಲಿ ಗುರಿಯೆಡೆ ಮುಂದಾಗಲಿ ನಾರಿಸಮೂಹದ ಮನಸುಗಳು ನಡೆನುಡಿಯಲಿ ಮೂಡಲಿ ನನಸಾಗಲಿ ಹಿಂದುತ್ವದ ಹೊಂಗನಸುಗಳು || ಪ || ಬಾಳಿಗೆ ಆಸರೆ ಭವ್ಯ ಪರಂಪರೆ ಆದರ್ಶದ ಹಿರಿಸಾಧನೆಗೆ ನಡೆಸುವ ಸಿದ್ಧತೆ ಪಡೆದು ಪ್ರಬುದ್ಧತೆ ಭರತಭೂಮಿಯಾರಾಧನೆಗೆ || 1 || ಗಳಿಸಲು ಏಳಿಗೆ ಅಭಿನವ ಪೀಳಿಗೆ ಶೀಲವೆರೆಯೆ ಹೃದಯದಾಳಕೆ ಬೇಕು ಸಮಸ್ಯೆಯ ಸ್ಥಿರ ಪರಿಹಾರಕೆ ಮಾತೃತ್ವದ ಮಂಗಳ ಹರಕೆ || 2 || ಮನಮನಗಳನೂ ತಿದ್ದಿ ರೂಪಿಸುವ ಮನೆಮನೆ ಬೆಳಗುವ ಕಾರ್ಯವಿದು ಸ್ತ್ರೀಶಕ್ತಿಯ ಅಭಿವ್ಯಕ್ತಿಯಗೊಳಿಸಿ ಘನತೆಗೊಯ್ವ ಕೈಂಕರ್ಯವಿದು || 3 […]
“ಏನೀ ಪೌರುಷ ಅಭಿಮಾನದ ಬಲಿದಾನ ? || ಪ || ದೇಶದ ದೇಹದ ಮುಡಿಗೆದರುವ ಅಪಮಾನ ? ತಾಯ್ನಾಡಿನ ತಲೆಗೂದಲೊಳೇನೀ ಹೇನಿನ ಸೇನೆ ? ದಿನ ಬೆಳಗಾದರೆ ಉಪಟಳದುರಿ ಭೀಕರ ತಲೆಬೇನೆ ! ಗಾಂಡೀವ, ಸುದರ್ಶನ, ಗಂಡೆದೆ ಭೀಮನ ಬೆಂಬಲದಿ ಧರ್ಮಜನಾಳ್ವಿಕೆ ವಿಜೃಂಭಿಸಿದೀ ಭಾರತದಿ ದಿಲ್ಲಿಯ ಪೀಠದಿ ದ್ರೌಪದಿಯನುಜ ನಪುಂಸಕನು ಜನತಾ ಕೋಟಿಯ ರಾಜ್ಯಾಡಳಿತವ ವಹಿಸಿದನೇನು?” ಹಿಮನಗದೊಳು ಯುಗಯುಗಗಳು ಮಲಗಿದ ಶಿಲೆಯೊಂದು ಬಾಯ್ದೆರೆದಾಕಳಿಸುತ ಮೇಲೇಳುತ ಕೇಳುತಿದೆ ! || 1 || “ಕಲ್ಗುಂಡಿಗು ನಿದ್ರಾಭಂಗವೆ ? ನಿಜ, […]
ಉತ್ತರದೊಳು ಹರಿದಿಹ ಅನುಜರ ನೆತ್ತರಿಗೆ ಸೇಡಿನ ಕಿಡಿ ಆಹುತಿಯನು ಬಯಸುತಿದೆ || ಪ || ಗರ್ಜಿಸುತಿದೆ ಶತಶತಮಾನದ ನಮ್ಮಿತಿಹಾಸ ಏನಿಂತಾಯಿತೆ ಮೈಮರೆಯಿತೆ ಭಾರತದೇಶ ? ಸದ್ದುಡುಗಿತೆ ಸತ್ತಡಗಿತೆ ಪೌರುಷದಾದೇಶ ? ಅಳಿಯಿತೆ ಮಾನವ ಮಾರದ ಮಾನವರಾವೇಶ ? || 1 || ಸ್ವಾರ್ಥವು ಕುಳಿತಿತೆ ಶ್ರೀ ಹರ್ಷನ ಸಿಂಹಾಸನದಿ ? ಷಂಡತ್ವದ ನೆಲೆಯಾಯಿತೆ ನವದಿಲ್ಲಿಯ ಗಾದಿ ? ಧೃತಿಮತಿ ಇಲ್ಲದವರಿಗಾಗಲಿ ಬೀಳ್ಕೊಡುಗೆ ಮೇಲೇರಲಿ ಸತ್ಪುತ್ರರು ನಾಡಿನ ಮುನ್ನಡೆಗೆ ನವಯುವಕರೆ ಸ್ವೀಕರಿಸಿರಿ ಬನ್ನಿರಿ ಆಹ್ವಾನ ಸಂರಕ್ಷಿಸಿ ನಿಮ್ಮನು ಬೆಳೆಸಿದ […]
ಅನುಜತ್ವಕೆ ಮನುಜತ್ವಕೆ ಘನತತ್ವದ ಸ್ವೀಕಾರಕೆ ಕಿವಿಗೊಟ್ಟೆವು ಓಗೊಟ್ಟೆವು ಒಕ್ಕೊರಲಿನಲಿ ಜನದುಃಖದ ಪರಿಹಾರಕೆ ದನುಜತ್ವದ ಸಂಹಾರಕೆ ಪಣತೊಟ್ಟೆವು ಅಡಿಯಿಟ್ಟೆವು ಒಗ್ಗಟ್ಟಿನಲಿ || ಪ || ಸುಜ್ಞಾನದ ವಿಜ್ಞಾನದ ಪೂಜೆಗೆ ಬೆಳಗಲಿ ಉಜ್ವಲ ಪ್ರಾಣದ ಪ್ರಣತಿ ಆಕ್ರಮಕರ ಕಂಡೊಡನೆಯೆ ಕೆರಳುತ ಕಾಳ್ಗಿಚ್ಚಾಗುತ ಕಾಲಸ್ವರೂಪದಿ ಧಗಧಗಿಸಲಿ ಈ ಜ್ಯೋತಿ || 1 || ಅಮೃತ ಮಂತ್ರವ ಸಾರುತ ಉದಿಸುತಲಿದೆ ನವ ಭಾರತ ಇತಿಹಾಸ ಪುರಾಣಗಳಾಳದ ಉಸಿರಿಂದ ಭಾಗ್ಯೋದಯ ಕಣ್ತುಂಬಿದೆ ಪ್ರಭೆ ಚಿಮ್ಮಿದೆ ಬಲ ಹೊಮ್ಮಿದೆ ಪ್ರೇರಣೆ ಪುಟಿದಿದೆ ಬುವಿಯಾಳದ ಬಸಿರಿಂದ || […]
ಹೊಮ್ಮುತಿದೆ ಹೊಸಬೆಳಕು ಹಿಂದು ಬಾಂದಳದಲ್ಲಿ ಚಿಮ್ಮಿಸುತ ನವಸ್ಫೂರ್ತಿ ಹಿಂದು ಬಾಂಧವರಲ್ಲಿ || ಪ || ಧ್ಯೇಯ ರವಿಕಿರಣಗಳು ತುಂಬಿಸಿವೆ ತರುಣರೊಳು ಕುಂದದಿಹ ಉತ್ಸಾಹ ಸಾಧನೆಯ ವ್ಯಾಮೋಹ ಕಾಯವನು ಶ್ರೇಯಯುತ ಕಾಯಕಕೆ ಕಾದಿರಿಸಿ ಅರಳುತಿದೆ ಯುವಶಕ್ತಿ ನೋಡಿರಿಲ್ಲಿ || 1 || ಸತ್ತು ಮಲಗಿಹ ಛಲವು ಮತ್ತೆ ತಲೆ ಎತ್ತಿಹುದುs ಸುತ್ತಲಿನ ಶತ್ರುಗಳ ಪಡೆಯ ಧರೆಗೊತ್ತಿಹುದು ಹತ್ತು ದಿಕ್ಕುಗಳಲ್ಲೂ ಬಿತ್ತರಿಸಿ ರಣಘೋಷ ದೃಢತೆಯಿಂ ಮುನ್ನುಗ್ಗಿ ಜಗವ ಗೆಲ್ಲಿ || 2 || ಕುರುಡು ರೂಢಿಯ ರಾಡಿ ನಾಡಿನಿಂ ಹೊರದೂಡಿ […]
ಹೃದಯಂಗಮ ಹಿಂದು ಸಂಗಮ ಬಲು ಸಂಭ್ರಮ ಬಂಧು ಸಮಾಗಮ || ಪ || ನಾನಾ ವಿಧದಾಮಿಷಕೊಳಗಾಗಿ ಧರ್ಮಾಂಧರ ದೌಷ್ಟ್ಯಕೆ ತಲೆಬಾಗಿ ಮತಬಾಹಿರ ಹತಭಾಗ್ಯರು ನರಳಿರೆ ಮಾತೆಯ ಮಮತೆಯ ಕರೆಯು ಹೃದಯಂಗಮ || 1 || ಮಡಿಲಡಿಯಲಿ ಹುಡಿಯಾಗಿಹ ಜನರು ಒಲುಮೆಯ ಸ್ಪರ್ಶಕೆ ಹಾತೊರೆದವರು ಅರಿವಿನ ಅರುಣೋದಯದೊಡಗೂಡಿ ನಲಿಯುತ ಬರುತಿಹ ನೋಟ ಹೃದಯಂಗಮ || 2 || ಬೇಕಿಲ್ಲೆಮಗೆ ಒಣ ವೇದಾಂತ ಬೇಕಿದೆ ಐಕ್ಯದ ಘನಸಿದ್ಧಾಂತ ತರುಣ ಜನಾಂಗಕೆ ಸ್ಫೂರ್ತಿಯ ನೀಡುವ ಅರುಣಪತಾಕೆಯ ಲಾಸ್ಯ ಹೃದಯಂಗಮ || 3 […]
ಹಿಮಗಿರಿಯಾಶೃಂಗ ದೇವನದೀ ಗಂಗಾ ಮನದಲಿ ಮೂಡಿಪ ಭಾವವಿನೂತನ ಅನುಪಮ ಉತ್ತುಂಗಾsss ಅನುಪಮ ಉತ್ತುಂಗ || ಪ || ದಿವ್ಯ ಸನಾತನ ಸಂಸ್ಕೃತಿಗೆ ವೇದಪುರಾಣವೇ ಸಾಕ್ಷಿಗಳು ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು || 1 || ಆ ಸುರಲೋಕವ ಮೀರಿಸುವಾ ನಾಡಿಗೆ ಧುಮುಕಿದ ಭಾಗೀರಥೀ ಭಾರತಮಾತೆಯ ಸಂಗದಲಿ ಧನ್ಯತೆಯಾಂತಿಹ ಭಾಗ್ಯವತೀ ಹಿಂದೂ ದೇಶದ ಕಣಕಣ ಜನಮನ ಪಾವನಗೊಳಿಸಿಹ ಪುಣ್ಯವತೀ || 2 || ಸೋಲೇ ಗೆಲುವಿನ ಸೋಪಾನ […]
ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]
ಹನಿಯು ವಾಹಿನಿಯಾಯ್ತು ವಾಹಿನಿಯು ಜಲಧಿ ಕೇಶವನ ಛಲಧಾರಿ ಯುವಜನರ ಬಲದಿ ಸತತ ಸಾಧನೆಗೈದ ಭಾರತದ ನೆಲದಿ || ಪ || ವಿಘ್ನಕೋಟಿಯ ಗೆದ್ದು ದಾಟಿಹುದು ಸಂಘ ಅಗ್ನಿಯೊಳು ಮಿಂದು ಮೇಲೆತ್ತಿಹುದು ಶೃಂಗ ಗೈದಿಹುದು ವೈರಿಗಳ ಬಹುವ್ಯೂಹ ಭಂಗ ಪಸರಿಸಿದೆ ಸಾಹಸದ ಸಾಸಿರ ತರಂಗ || 1 || ರೂಢಿಯೊಳಗೂಡಿರುವ ಮೌಢ್ಯವನು ತೊರೆದು ಕಾಡಿರುವ ಕೇಡುಗಳ ಬೆನ್ನೆಲುಬು ಮುರಿದು ಮೂಡಿಹನು ನೋಡಲ್ಲಿ ಜಾಗೃತಿಯ ಸೂರ್ಯ ನೀಡಿಹನು ನಾಡಿದಕೆ ಕುಂದದಿಹ ಧೈರ್ಯ || 2 || ಆಂತರಿಕ ಭೇದಗಳ ಅಂತರವನಳಿಸಿ […]