ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ ನಿನ್ನ ಪಾದಾರ್ಚನೆಗೆ ಸವೆಯುತಿದ್ದೆ ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ ಪಾದ ಪೂಜೆಯ ಸಮಯ ಬಳಿ ಸೇರುತಿದ್ದೆ || ಪ || ನಿನ್ನ ಭಜಿಸುವ ದುಂಬಿ ನಾನಾಗಿ ಜನಿಸಿದರೆ ಪದಕಮಲ ಮಕರಂದ ಹೀರುತಿದ್ದೆ ನೀ ನಡೆವ ಮಾರ್ಗದಲಿ ನಾನು ಜನಿಸಿದರಾಗ ನಿನ್ನ ಪದ ಧೂಳಿಯಲಿ ಹೊರಳಾಡುತಿದ್ದೆ || 1 || ಯಾವೊಂದು ನದಿಯಲ್ಲಿ ನೀರಾಗಿ ಜನಿಸಿದರೆ ನಿನ್ನ ಪದ ತೊಳೆವಲ್ಲಿ ನಾನೊದಗುತಿದ್ದೆ ನಿನ್ನ ನಿಜ ಭಕ್ತನು ನಾನಾಗಿ ಜನಿಸಿದರೆ ನಿನ್ನ ಪದಕಮಲದಲಿ ಮೈಮರೆಯುತಿದ್ದೆ […]
ರಾಮ ದಂಡು ನಡೆಯಿತು ರಾಮ ದಂಡು ಗಂಡೆದೆ ಎಂಟೆದೆ ಕೆಚ್ಚೆದೆ ತುಂಬಿರುವ ವೀರ ದಂಡು ಶೂರ ದಂಡು ಸೋಮ ದಂಡು ರಾಮ ದ್ರೋಹಿ ಹಿಂದೂ ದ್ರೋಹಿ ಬಂಟರನ್ನು ಸದೆಬಡಿಯುವ ಹನುಮ ದಂಡು ಸಿಡಿಗುಂಡು ಶೂರ ದಂಡು ರಾಮ ದಂಡು ಭೀಮ ದಂಡು ಹಿಂದೂ ದಂಡು|| ಪ || ಸಾಧು ಸಂತ ಋಷಿಗಳು ದಾರಿ ತೋರಲು ವಿಶ್ವಹಿಂದೂ ಪ್ರೇಮಿಗಳು ಮುಂದೆ ನಡೆದರು ಧರ್ಮದ ಪಂಜನು ಹಿಡಿಯುತ sss ಶಾಂತಿಯ ಮಂತ್ರವ ಸಾರುತ ss ಜಯ ರಾಮ ಶ್ರೀ ರಾಮ […]
ಶಿಶಿರ ಋತು ಸರಿದಂತೆ ಮುಂಜಾವು ಹರಿದಂತೆ ಹಿಂದುತ್ವದಭಿಮಾನ ಮೈ ಕೊಡವಿದೆ ತೊರೆದು ಶತಕದ ನಿದ್ದೆ, ನಾಡು ಮೇಲೆದ್ದಂತೆ ಯುವ ಮನದಿ ಚೈತನ್ಯ ನವಿರೆದ್ದಿದೆ ನವಯುಗದ ನವಗಾನ ಶುಭ ನುಡಿದಿದೆ || ಪ || ಕೇಶವ ಭಗೀರಥನ ಹರಿಸಿ ಸಂಘದ ಗಂಗೆ ವಿಮಲ ಸಂಸ್ಕೃತಿ ಮೈದುಂಬಿದೆ ರಾಷ್ಟ್ರಜೀವನದಂಗ ಪ್ರತ್ಯಂಗ ನಳನಳಿಸಿ ಸಮರಸದ ಸೂತ್ರದಲ್ಲಿ ಸಂಭ್ರಮಿಸಿವೆ ಹಿಂದು ಶಕ್ತಿ ಪ್ರವಾಹ ಸಂಘಮಿಸಿವೆ || 1 || ಅಂದು ಕೇಶವನುರಿಸಿದೊಂದು ನಂದಾದೀಪ ಜಗಕ್ಕೆಲ್ಲ ತೇಜವನು ಬಿತ್ತರಿಸಿದೆ ಪುರುಷಾರ್ಥ ಪೀಠಿಯಲಿ ವಿಜಗೀಶು ಭಾವದಲಿ […]
ವಿಶ್ವದ ಹಣೆಬರಹ ಬರೆವ ಓ ವಿಧಿಯೇ ಬರೆಯಲಿಬಿಡು ಭಾರತವು ವಿಶ್ವದ ಭವಿತವ್ಯವ ಶರಣಾಗಿ ಬರುವವರು ಬರಲಿಬಿಡು ಭಾರತಕೆ ಆಸ್ಥೆಯಲಿ ಪೋಷಿಪಳು ತಾಯಿ ಭಾರತಿಯು || ಪ || ಚಿತ್ರಿಸಿಡು ಭಾರತದ ರಮಣೀಯ ಸೌಂದರ್ಯ ಮುದವ ನೀಡುವ ಚಿತ್ರ ಓ ಚಿತ್ರಕಾರ ಅಳಿಸಿಹೋಗದ ಶಾಯಿ ಇರಲಿ ನಿನ ಚಿತ್ರದಲಿ ಮೈಮನದಿ ನೆಲೆನಿಲಲಿ ವಿಶ್ವ ಭಿತ್ತಿಯಲಿ || 1 || ಗಾಯಕನೆ ನೀ ಹಾಡು ಭಾರತದ ಚರಿತ್ರೆಯನೆ ಭಾವ ರಾಗಗಳೊಡನೆ ತಾಳ ಕೂಡಿರಲಿ ಮನದಿ ನೆಲೆಗೊಳ್ಳಲಿ ಭಾರತಿಯ ಇತಿಹಾಸ ತಲೆದೂಗಲಿ […]
ಯುಗ ಸಂಧಿಯ ದಿನ ಸನಿಹಕೆ ಬರುತಿದೆ ಸುಸ್ಥಿರಗೊಳುತಿದೆ ಬಂಧುತ್ವ ನಗುಮೊಗದೊಂದಿಗೆ ಜಗದೆಲ್ಲೆಡೆಯಲು ವಿಸ್ತರಗೊಳುತಿದೆ ಹಿಂದುತ್ವ || ಪ || ಸಂದಿಹ ದಿನಗಳ ಜಯ ಅಪಜಯಗಳ ಹೊಂದಿದಬಗೆಯನು ಪರಿಕಿಸುತ ಸುಂದರ ನಾಳೆಗೆ ಚೆಂದದ ಯೋಜನೆ ಧುಮುಕಿದೆ ಯುವಪಡೆ ಶ್ರಮಸಹಿತ || 1 || ಮತ ಉನ್ಮತ್ತರು ವಿಕೃತ ಮತಿಗಳು ಬಾಧಿಸುತಿರುವರು ಬಗೆನೂರು ಎದುರಿಸಿ ಚದುರಿಸಿ ನಿವಾರಿಸ ಬಲ್ಲೆವು ಹಿಂದುವಿನೆದೆ ಸ್ಥೈರ್ಯದ ಮೇರು || 2 || ವಿಘಟಿತ ವಿಭಜಿತ ಜನಮನವೆಲ್ಲವು ಸಮರಸ ಗೊಳುತಿದೆ ಕಾರ್ಯದಲಿ ಏಕತೆಯೊಂದಿಗೆ ಧ್ಯೇಯದ ಸಾಧನೆ […]
ಓಂಕಾರದ ಮಂತ್ರದನುರಣನ ಎಲ್ಲಡೆಯು ಹಿಂದುತ್ವ ಹಿರಿದೆನಿಸುತಿಹುದ ನೋಡಿ ಕಿರಿದಾದ ಮಂತ್ರದಲಿ ಹಿರಿದಾದ ತಂತ್ರವಿದೆ ಒಂದುಗೂಡಿಸುತಿಹುದು ಎಂಥ ಮೋಡಿ || ಪ || ಭಾರತದ ಭಾಗ್ಯ ರವಿ ಬಾನಿನಲ್ಲಿ ಜಗಜಗಿಸಿ ಭರವಸೆಯ ಬೆಳಕೆಂದು ಮೂಡುತಿಹುದು ವಿಸ್ಮೃತಿಯ ನಶೆ ಇಳಿದು ಸ್ಪುಟಗೊಂಡ ದಿಶೆಯುಳಿದು ತರುಣರೆದೆ ವಿಶ್ವಾಸ ಮೂಡುತಿಹುದು || 1 || ಸ್ವರ್ಣಿಮದಕ್ಷಣ ಒಂದು ಸನಿಹಕ್ಕೆ ತರುತಿಹುದು ವರ್ಣ ವೈಷಮ್ಯದುರಿ ಆರುತಿಹುದು ಜನ್ಮದಿಂದಲಿ ಜಂತು ಕರ್ಮದಿಂ ಬ್ರಹ್ಮತ್ವ ಧರ್ಮಸೂಕ್ಷದ ಸತ್ಯ ಬೆಳಗುತಿಹುದು || 2 || ಕೇಶವನ ಕನಸುಗಳು ನನಸಾಗುತಿವೆ […]
ಬನ್ನಿರೈ ಭಾರತದ ಬಾಗಿಲಿದೋ ತೆರೆದಿಹುದು ಸನ್ಮತಿಯ ಉನ್ನತಿಯ ಪಥವ ತೋರಿಹುದು || ಪ || ಹರನೊಡನೆ ಧುರವಿತ್ತು ಶರವ ಪಡೆದ ನರ ಮರಣಿಸಿದ ಪ್ರಿಯಪತಿಯ ಮರಳಿ ತಂದವಳ ಯಮನಾಲಯವ ಹೊಕ್ಕು ವರವಗಳಿಸಿದ ಕುವರ ವೀರಚರಿತೆಯ ಕೇಳಿ ಯಶವ ಪಡೆದವರ || 1 || ರವಿಸೋಮ ವಂಶಗಳ ಕೀರ್ತಿಗಾಥೆಯ ಕಥನ ವೇದಾಂತ ಉಪನಿಷದ ಗೀತಸಾರದ ಮನನ ಅಣು ಗಣಕದಧ್ಯಯನ ಕ್ಷಿಪಣಿಗಳ ಉಡ್ಡಯನ ಪರ ಅಪರವೆರಡರಲೂ ಊರ್ಧ್ವಮುಖಪಯಣ || 2 || ಸಂಸ್ಕೃತವು ಸಂಸ್ಕೃತಿಯು ಸಂಸ್ಕಾರ ಸನ್ನಡತೆ ಸಂಗೀತ ಸಾಹಿತ್ಯ […]
ಪಾಂಚಜನ್ಯದ ಕರೆಗೆ ಕರಗಿತು ದ್ವಾಪರದ ಆ ಕುರುಕುಲ ಹರಿಯು ಉರಿಸಿದ ಧೈರ್ಯ ದೀಪ್ತಿಗೆ ಬೆಳಗಿ ಧರ್ಮದ ದೇಗುಲ || ಪ || ಅವನ ಕೆಲಸಕೆ ಮತ್ತೆ ಹೊರಟಿದೆ. ಭರತ ಖಂಡ ಮನುಕುಲ ಮಾತೃ ವ್ಯಾಕುಲ ಕಳೆಯೆ ಕಲೆತಿದೆ ಕಲಿಯ ಕಲಿಗಳ ಸಂಕುಲ || 1 || ಬೆರಳು ನಲಿಯಲು ಉಲಿವ ಕೊಳಲಲು ಸ್ವಾಭಿಮಾನದ ಸರಿಗಮ ಏರುಇಳಿತದ ಸಪ್ತ ಸ್ವರದಲಿ ಸಾಮರಸ್ಯದ ಸಂಗಮ || 2 || ಪಣವ ಆನಕ ಶಂಖ ಗೋಮುಖ ರಣದ ಭೇರಿಯ ವಾದನ ಸ್ಫೂರ್ತಿ […]
ಭರತಭೂಮಿಯ ಭಾಗ್ಯ ಉದಿಸಿದೆ ಏಳು ಮೇಲಕೆ ತರುಣನೆ ಭರದಿ ಸೇರಲಿ ಕೋಟಿ ಕರಗಳು ತರಲು ಶುಭಪರಿವರ್ತನೆ || ಪ || ಗರ್ಜಿಸುವುದನು ಮರೆತು ಸಿಂಹವದೇಕೆ ನರಿಗಳ ನೆಚ್ಚಿದೆ? ಸಜ್ಜನರ ನಿಷ್ಕ್ರಿಯತೆ ಕಾರಣ ದುರ್ಜನರ ಬಲ ಹೆಚ್ಚಿದೆ! ಆವ ದೈವವು ಕಾವುದೆನ್ನುತ ಬಾಗಿ ಕಂಗಳ ಮುಚ್ಚಿದೆ? ದೇವದುರ್ಲಭ ಸಂಘಟನೆಯಿದೆ ಸಾಗು ಬೆದರದೆ ಬೆಚ್ಚದೆ! || 1 || ಸೌಮ್ಯ ಸಂಸ್ಕೃತಿ ಸುಧೆಗೆ ಪೂತನಿ ವಿಷವನಿಕ್ಕುವ ಸಂಚಿದೆ ಸಾಮ್ಯವಾದದ ಮಾಯೆ ಜಿಂಕೆಯು ನಾಡನೊಡೆಯಲು ಹೊಂಚಿದೆ ಶಸ್ತ್ರಶಾಸ್ತ್ರದೊಳಾರು ನಿನಗೆಣೆ ನುಗ್ಗು ಸ್ಫೂರ್ತಿಯ […]
ಮಾರ್ಗದರ್ಶಕ ಎಮಗೆ ಮಾಧವನೆ ನೀನಾದೆ ಸಂಘವೇ ಅನಿವಾರ್ಯ ಎಂಬುದನೇ ಸಾರಿದೆ || ಪ || ನಿನದೊಂದು ಉಲಿಯಿಂದ ಭಾರತವ ರಕ್ಷಿಸಿದೆ ಧರ್ಮ ಸ್ಥಾಪನೆಯಂದು ಸಂಚರಿಸಿ ನೀಗೈದೆ ಮಾಧವನೆ ನೀನಾದೆ ರಾಷ್ಟ್ರಯುಗ ದ್ರಷ್ಟಾರ ಮಂತ್ರ ನೀಡಿದೆಯೆಂದು ರಾಷ್ಟ್ರಾಯ ಸ್ವಾಹಾ || 1 || ಹಗಲಿರುಳು ಚಿಂತಿಸಿದೆ ರಾಷ್ಟ್ರದ ಉನ್ನತಿಯ ಎಡೆಬಿಡದೆ ನೀಗೈದೆ ಜನಮನದ ಜಾಗೃತಿಯ ರಾಷ್ಟ್ರಕೆ ಅರ್ಪಿಸಿದೆ ನೀನಂದೆ ಸರ್ವಸ್ವ ಕರೆ ನೀಡಿ ನೀನಂದು ರಾಷ್ಟ್ರಾಯ ಇದಂ ನ ಮಮ || 2 || ಸಾರಥಿಯು ನೀನಾದೆ ಸಂಘರಥ […]