ಭಾರತಮಾತೆಯ ಮಕ್ಕಳು ನಾವು

ಭಾರತಮಾತೆಯ ಮಕ್ಕಳು ನಾವು ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ ಮೊಳಗಲಿ ತಾಯಿಯ ಜಯಗಾನ || ಪ || ಒಂದೇ ನಾಡಲಿ ಜನಿಸಿದ ಬಳಿಕ ಮೇಲುಕೀಳು ಅಂತರವೇಕೆ ? ಏಳುಬೀಳುಗಳ ಬಾಳಹಾದಿಯಲಿ ಗುರಿಯನು ಮರೆಯದಿರಿ ಜೋಕೆ || 1 || ರಾಮಕೃಷ್ಣರ ಪಾವನಭೂಮಿ ದಿವ್ಯಶಕ್ತಿಯ ಭಂಡಾರ ಶಂಕರ ಬಸವರ ಬುದ್ಧ ವಿವೇಕರ ತತ್ವಾದರ್ಶದ ಆಧಾರ || 2 || ಜನನ ಮರಣಗಳ ನಡುವಿನ ಜೀವನ ಸಾಗಲಿ ಸನ್ಮಾರ್ಗದಿ ನೇರ ಸ್ವಾರ್ಥವ ದಹಿಸಿ ಕೀರ್ತಿಯ ಗಳಿಸಿ ಗೈಯುವ ನಾಡಿನ […]

Read More

ಧರೆಯಲಿ ಸುಂದರ ಸ್ವರ್ಗವ ಸೃಜಿಸಲು

ಧರೆಯಲಿ ಸುಂದರ ಸ್ವರ್ಗವ ಸೃಜಿಸಲು ಸಮರಸಭರಿತ ಸಮಾಜವ ರಚಿಸಲು ಎಲ್ಲರು ಒಂದಾಗಿ… ಬನ್ನಿ, ಸೇವೆಗೆ ಮುಂದಾಗಿ || ಪ || ತರತಮ ಭೇದಗಳೆಲ್ಲವನಳಿಸಿ ಸರಿಸಮ ಭಾವವನೆಲ್ಲೆಡೆ ಬೆಳೆಸಿ ಹಿರಿಯರು ತೋರಿರುವ ಮೇಲ್ಪಂಕ್ತಿ ಗುರಿಸಾಧನೆಗೆ ಅದುವೇ ಶಕ್ತಿ || 1 || ದೀನದುಃಖಿಗಳ ಕಂಬನಿಯೊರೆಸಿ ಮಾನವೀಯತೆಯ ಕಂಪು ಪಸರಿಸಿ ವಂಚಿತರಿಗೂ ಅವಕಾಶವ ನೀಡಿ ಮೌನಕ್ರಾಂತಿಗೆ ನಾಂದಿಯ ಹಾಡಿ || 2 || ಮನೆಮನೆಯಾಗಲಿ ಕಾರ್ಯಾಗಾರ ಕಣಕಣವೂ ಶಕ್ತಿಯ ಭಂಡಾರ ಜನಮನದಲಿ ಮೂಡಿಸಿ ಜಾಗೃತಿಯ ಕನಸಿಗೆ ನೀಡಿರಿ ಕೃತಿಯಾಕೃತಿಯ || […]

Read More

ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ

ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ | ಸೇವೆಯ ಸತ್ಪಥದಲ್ಲಿ ಹೆಜ್ಜೆಯ ಮುಂದಕೆ ಇಡುವಾ || ಪ || ಬಂದರು ನೂರು ಸವಾಲು ಎದೆಗುಂದದೆ ಸ್ವೀಕರಿಸಿ ಧೈರ್ಯದಿ ಮುನ್ನಡೆಯೋಣ ಧ್ಯೇಯದ ದೀಪವ ಧರಿಸಿ || 1 || ಶತವಿಧ ಭೇದವನಳಿಸಿ ಸಮತೆಯ ಭಾವವ ಬೆಳೆಸಿ ಸಮರಸತೆಯ ಸುಧೆಯುಣಿಸಿ ಸ್ವರ್ಗವನೇ ಧರೆಗಿಳಿಸಿ || 2 || ಸುರವಾಣಿಯ ಸವಿಜೇನು ಸರಿಸಾಟಿಯು ಇಹುದೇನು? ಯೋಗದ ಘನ ಸಹಯೋಗ ಮೈಮನಕೆ ಹಿತ ತಾನು || 3 || ವ್ಯರ್ಥವು ಬರಿ ಉಪದೇಶ ಸಾರ್ಥಕ […]

Read More

ಖಿನ್ನತೆಯ ಕಳೆದಳಿಸಿ

ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]

Read More

ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ

ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ ಬನ್ನಿ ಬನ್ನಿ ಭಗಿನಿಯರೇ ಸೇವೆಗೆ ಮುಂದಾಗಿ ನಾಡಿನ ಸೇವೆಗೆ ಮುಂದಾಗಿ || ಪ || ನಾಡಿನ ಹಿತಸಾಧನೆಗಾಗಿ ಮುಡಿಪಾಗಿರಲಿ ಈ ಬದುಕು ನೋವು ನಿರಾಶೆಯ ಕೂಪದಲಿ ಮೂಡಿಸಿ ಸೇವೆಯ ಹೊಂಬೆಳಕು || 1 || ಭೇದಗಳನು ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ಭಾವೈಕ್ಯದ ಘನಶಕ್ತಿಯಲಿ ಬಲಾಢ್ಯರಾಗಿ ಬೆಳೆಯೋಣ || 2 || ಸ್ವಾರ್ಥದುರಾಶೆಯ ಬದಿಗಿರಿಸಿ ಕೀರ್ತಿಯ ಬಯಕೆಯ ಸುಟ್ಟುರಿಸಿ ವ್ಯಕ್ತಿವ್ಯಕ್ತಿಗಳ ಜೋಡಿಸುತ ಸೇವೆಯ ಸೇನೆಯ ಬಲಪಡಿಸಿ || 3 ||

Read More

ಕಾಯಾವಾಚಾ ಮನಸಾ

ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು | ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು | ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ || ಇಲ್ಲಿದೆ ಬಾಳಿನ ನೂತನ ಅರ್ಥ ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ ಕಾರ್ಯಕ್ಷೇತ್ರಕೆ ಧುಮುಕುವೆವು ಬಿಡುವಿಲ್ಲದೆ ಪರಿಶ್ರಮಿಸುವೆವು || 1 || ನಮ್ಮಯ ಹಿರಿಯರು ತೋರಿದ ಹಾದಿ ಸಾಧನೆಗದುವೇ ಭದ್ರಬುನಾದಿ ವಿಘ್ನ ವಿರೋಧವ ಮೆಟ್ಟುವೆವು ಭವ್ಯ ಸಮಾಜವ ಕಟ್ಟುವೆವು || 2 || ಗ್ರಾಮ ನಗರ ಗಿರಿಕಾನನಗಳಲಿ ಸೇವಾವ್ರತಿಗಳ ಪಡೆಯು ಚಲಿಸಲಿ ಸ್ನೇಹದೊಳೆಲ್ಲರ […]

Read More

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ ದಮನಗೈದು ದುರುಳರ ಧರೆಯ ಉಳಿಸುವ || ಪ || ನಾವು ನಾವೆ ಎಂದಿಗು ಮೃಗರಾಜನ ತೆರದಿ ಗತಕಾಲದ ಇತಿಹಾಸದ ಹಿರಿಯರ ಹಾದಿ ಮುನ್ನಡೆಸುವ ಬಡಿದೆಬ್ಬಿಸಿ ನಮ್ಮ ಅನುಜರ ನಿದ್ರಿಸಲು ಬಿಡೆವಿನ್ನು ರಣಮಹತ್ತರ || 1 || ಶಿವನ ಖಡ್ಗದ ಹೊಳಪು ಕಣ್ಣ ಮುಂದಿದೆ ರಾಣನಶ್ವದ ಖರಪುಟ ಕಿವಿಯ ತುಂಬಿದೆ ಅಝಾದ ಭಗತರ ನೆನಪು ಮನದಿ ನಿಂತಿದೆ ಸಾಗುವೀರ ಎದೆಯನೆತ್ತಿ ಭಯವದೆಲ್ಲಿದೆ || 2 || ಅದೋ ಕೇಳಿ ಮೊಳಗುತಿದೆ ವಿವೇಕವಾಣಿಯು ಎದ್ದು […]

Read More

ಕಲೆಯು ರಂಜನೆಗಲ್ಲ ಭಗವದಾರಾಧನೆಗೆ

ಕಲೆಯು ರಂಜನೆಗಲ್ಲ ಭಗವದಾರಾಧನೆಗೆ ಶಿವನಾಗಿ ಶಿವಪೂಜೆ ಬಾಳಬಯಕೆ ಉನ್ಮತ್ತಚಿತ್ತಕ್ಕೆ ಪಥವೇನು ಗತಿಯೇನು ಸ್ಥಿರಚಿತ್ತ ಉತ್ಕರ್ಷ ಕಲೆಯ ಹರಕೆ || ಪ || ಭಾವಪ್ರವಾಹಕ್ಕೆ ತಾಳಲಯಗಳ ತೀರ ಶಾಂತ ಸುಖಸಾಗರದ ದಿಶೆಗೆ ಯಾನ ರುದ್ರತಾಂಡವದೊಡನೆ ಉಮೆಯಲಾಸ್ಯದ ಮಿಲನ (ಧೀಂತಕಿಟ ಧಿರಗಿಟತಕಿಟ ಧೀಂತಕಿಟ ಧೀಂತಾ) ಭದ್ರವನೆ ಉಲಿಯಿತು ರುದ್ರವೀಣಾ || 1 || ಸೃಷ್ಟಿಮೂಲವೆ ನಾದ ಪ್ರಣವಮಂತ್ರ ನಿನಾದ ಪ್ರಸ್ತರಣ ವಿಸ್ತರಣ ಶಾಸ್ತ್ರವೇದ ಒಂದು ಹಲವಾಗುವುದು ಹಲವರಲು ತಾನಿಹುದು ಪಠಣ ಗಾಯನದಿಂದ ತತ್ವ ಬೋಧ || 2 || ಮರುಳು […]

Read More

ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ

ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ ನಿನ್ನ ಪಾದಾರ್ಚನೆಗೆ ಸವೆಯುತಿದ್ದೆ ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ ಪಾದ ಪೂಜೆಯ ಸಮಯ ಬಳಿ ಸೇರುತಿದ್ದೆ || ಪ || ನಿನ್ನ ಭಜಿಸುವ ದುಂಬಿ ನಾನಾಗಿ ಜನಿಸಿದರೆ ಪದಕಮಲ ಮಕರಂದ ಹೀರುತಿದ್ದೆ ನೀ ನಡೆವ ಮಾರ್ಗದಲಿ ನಾನು ಜನಿಸಿದರಾಗ ನಿನ್ನ ಪದ ಧೂಳಿಯಲಿ ಹೊರಳಾಡುತಿದ್ದೆ || 1 || ಯಾವೊಂದು ನದಿಯಲ್ಲಿ ನೀರಾಗಿ ಜನಿಸಿದರೆ ನಿನ್ನ ಪದ ತೊಳೆವಲ್ಲಿ ನಾನೊದಗುತಿದ್ದೆ ನಿನ್ನ ನಿಜ ಭಕ್ತನು ನಾನಾಗಿ ಜನಿಸಿದರೆ ನಿನ್ನ ಪದಕಮಲದಲಿ ಮೈಮರೆಯುತಿದ್ದೆ […]

Read More

ರಾಮ ದಂಡು ನಡೆಯಿತು ರಾಮ ದಂಡು

ರಾಮ ದಂಡು ನಡೆಯಿತು ರಾಮ ದಂಡು ಗಂಡೆದೆ ಎಂಟೆದೆ ಕೆಚ್ಚೆದೆ ತುಂಬಿರುವ ವೀರ ದಂಡು ಶೂರ ದಂಡು ಸೋಮ ದಂಡು ರಾಮ ದ್ರೋಹಿ ಹಿಂದೂ ದ್ರೋಹಿ ಬಂಟರನ್ನು ಸದೆಬಡಿಯುವ ಹನುಮ ದಂಡು ಸಿಡಿಗುಂಡು ಶೂರ ದಂಡು ರಾಮ ದಂಡು ಭೀಮ ದಂಡು ಹಿಂದೂ ದಂಡು|| ಪ || ಸಾಧು ಸಂತ ಋಷಿಗಳು ದಾರಿ ತೋರಲು ವಿಶ್ವಹಿಂದೂ ಪ್ರೇಮಿಗಳು ಮುಂದೆ ನಡೆದರು ಧರ್ಮದ ಪಂಜನು ಹಿಡಿಯುತ sss ಶಾಂತಿಯ ಮಂತ್ರವ ಸಾರುತ ss ಜಯ ರಾಮ ಶ್ರೀ ರಾಮ […]

Read More