ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ

ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ ಧನ್ಯತೆಯ ಮೂಲವದು ಹಿಂದುಜನಕೆ | ದೈನ್ಯದುಃಖ ಹತಾಶೆ ಸಂಕಟದ ಸಮಯದೊಳು ಧೈರ್ಯವನು ತುಂಬಿಹುದು ನೊಂದಮನಕೆ || ಪ || ಜಗದ ಹೃದಯವ ಗೆದ್ದು ಮೆರೆಯುತಿಹ ಹಿಮರಾಜ ತಲೆಎತ್ತಿ ನಿಂದಿಹನು ಎತ್ತರದಲಿ | ವಜ್ರಮುಕುಟ ಹಿಮಾದ್ರಿ ಪ್ರಲಯರುದ್ರಾಲಯವು ಭದ್ರಸೀಮೆಯು ನಮಗೆ ಉತ್ತರದಲಿ || 1 || ಸಗರಕುಲಜನ ಛಲಕೆ ಒಲಿದ ಸುರನದಿ ಗಂಗೆ ನಾಕದಮೃತವನ್ನು ಉಣಿಸುತಿಹಳು | ಬರದಿ ಬೆಂದಿಹ ನೆಲಕೆ ಜಲಧಾರೆ ಹರಿಸುತಲಿ ಭುವಿಯ ಬಾಯಾರಿಕೆಯ ತಣಿಸುತಿಹಳು || 2 || […]

Read More

ಸರಿಗಮ ಸ್ವರಗಳ ಏರಿಳಿತ

ಸರಿಗಮ ಸ್ವರಗಳ ಏರಿಳಿತ ಅದುವೇ ಸುಮಧುರ ಸಂಗೀತ ಸಮರಸತೆಯ ಸ್ಪಂದನ ಮಿಡಿತ ನಾಡಿನ ಐಕ್ಯದ ಸಂಕೇತ || ಪ || ಅಳಿಸಲೇಬೇಕು ನಾವಿಂದು ಮೇಲುಕೀಳುಗಳ ಅಂತರವ ರಚಿಸಲೇಬೇಕು ಸುಂದರ ಸದೃಢ ಭಾರತಮಾತೆಯ ಮಂದಿರವ || 1 || ಜಾತಿಮತಗಳ ಗೋಡೆಯ ಕೆಡವಿ ರಾಷ್ಟ್ರೀಯತೆಯು ಪ್ರವಹಿಸಲಿ ಹಿಂದುತ್ವದ ಶ್ರೀಗಂಧದ ಪರಿಮಳ ದಶದಿಶೆಗಳಿಗೂ ಪಸರಿಸಲಿ || 2 || ವಿಶ್ವಶಾಂತಿಯ ಗುರಿಸಾಧನೆಗೆ ವಿಶ್ವಾಸವೆ ಮೂಲಾಧಾರ ಭಾರತೀಯರೇ ನೀಡಲು ಬಲ್ಲೆವು ಯುಗಗಳ ಕನಸಿಗೆ ಆಕಾರ || 3 ||

Read More

ಭಾರತಮಾತೆಯ ಮಕ್ಕಳು ನಾವು

ಭಾರತಮಾತೆಯ ಮಕ್ಕಳು ನಾವು ಎಂಬುವುದೆಮಗೆ ಅಭಿಮಾನ ಆಸೇತು ಹಿಮಾಚಲ ಪರ್ಯಂತ ಮೊಳಗಲಿ ತಾಯಿಯ ಜಯಗಾನ || ಪ || ಒಂದೇ ನಾಡಲಿ ಜನಿಸಿದ ಬಳಿಕ ಮೇಲುಕೀಳು ಅಂತರವೇಕೆ ? ಏಳುಬೀಳುಗಳ ಬಾಳಹಾದಿಯಲಿ ಗುರಿಯನು ಮರೆಯದಿರಿ ಜೋಕೆ || 1 || ರಾಮಕೃಷ್ಣರ ಪಾವನಭೂಮಿ ದಿವ್ಯಶಕ್ತಿಯ ಭಂಡಾರ ಶಂಕರ ಬಸವರ ಬುದ್ಧ ವಿವೇಕರ ತತ್ವಾದರ್ಶದ ಆಧಾರ || 2 || ಜನನ ಮರಣಗಳ ನಡುವಿನ ಜೀವನ ಸಾಗಲಿ ಸನ್ಮಾರ್ಗದಿ ನೇರ ಸ್ವಾರ್ಥವ ದಹಿಸಿ ಕೀರ್ತಿಯ ಗಳಿಸಿ ಗೈಯುವ ನಾಡಿನ […]

Read More

ಧರೆಯಲಿ ಸುಂದರ ಸ್ವರ್ಗವ ಸೃಜಿಸಲು

ಧರೆಯಲಿ ಸುಂದರ ಸ್ವರ್ಗವ ಸೃಜಿಸಲು ಸಮರಸಭರಿತ ಸಮಾಜವ ರಚಿಸಲು ಎಲ್ಲರು ಒಂದಾಗಿ… ಬನ್ನಿ, ಸೇವೆಗೆ ಮುಂದಾಗಿ || ಪ || ತರತಮ ಭೇದಗಳೆಲ್ಲವನಳಿಸಿ ಸರಿಸಮ ಭಾವವನೆಲ್ಲೆಡೆ ಬೆಳೆಸಿ ಹಿರಿಯರು ತೋರಿರುವ ಮೇಲ್ಪಂಕ್ತಿ ಗುರಿಸಾಧನೆಗೆ ಅದುವೇ ಶಕ್ತಿ || 1 || ದೀನದುಃಖಿಗಳ ಕಂಬನಿಯೊರೆಸಿ ಮಾನವೀಯತೆಯ ಕಂಪು ಪಸರಿಸಿ ವಂಚಿತರಿಗೂ ಅವಕಾಶವ ನೀಡಿ ಮೌನಕ್ರಾಂತಿಗೆ ನಾಂದಿಯ ಹಾಡಿ || 2 || ಮನೆಮನೆಯಾಗಲಿ ಕಾರ್ಯಾಗಾರ ಕಣಕಣವೂ ಶಕ್ತಿಯ ಭಂಡಾರ ಜನಮನದಲಿ ಮೂಡಿಸಿ ಜಾಗೃತಿಯ ಕನಸಿಗೆ ನೀಡಿರಿ ಕೃತಿಯಾಕೃತಿಯ || […]

Read More

ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ

ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ | ಸೇವೆಯ ಸತ್ಪಥದಲ್ಲಿ ಹೆಜ್ಜೆಯ ಮುಂದಕೆ ಇಡುವಾ || ಪ || ಬಂದರು ನೂರು ಸವಾಲು ಎದೆಗುಂದದೆ ಸ್ವೀಕರಿಸಿ ಧೈರ್ಯದಿ ಮುನ್ನಡೆಯೋಣ ಧ್ಯೇಯದ ದೀಪವ ಧರಿಸಿ || 1 || ಶತವಿಧ ಭೇದವನಳಿಸಿ ಸಮತೆಯ ಭಾವವ ಬೆಳೆಸಿ ಸಮರಸತೆಯ ಸುಧೆಯುಣಿಸಿ ಸ್ವರ್ಗವನೇ ಧರೆಗಿಳಿಸಿ || 2 || ಸುರವಾಣಿಯ ಸವಿಜೇನು ಸರಿಸಾಟಿಯು ಇಹುದೇನು? ಯೋಗದ ಘನ ಸಹಯೋಗ ಮೈಮನಕೆ ಹಿತ ತಾನು || 3 || ವ್ಯರ್ಥವು ಬರಿ ಉಪದೇಶ ಸಾರ್ಥಕ […]

Read More

ಖಿನ್ನತೆಯ ಕಳೆದಳಿಸಿ

ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]

Read More

ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ

ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ ಬನ್ನಿ ಬನ್ನಿ ಭಗಿನಿಯರೇ ಸೇವೆಗೆ ಮುಂದಾಗಿ ನಾಡಿನ ಸೇವೆಗೆ ಮುಂದಾಗಿ || ಪ || ನಾಡಿನ ಹಿತಸಾಧನೆಗಾಗಿ ಮುಡಿಪಾಗಿರಲಿ ಈ ಬದುಕು ನೋವು ನಿರಾಶೆಯ ಕೂಪದಲಿ ಮೂಡಿಸಿ ಸೇವೆಯ ಹೊಂಬೆಳಕು || 1 || ಭೇದಗಳನು ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ಭಾವೈಕ್ಯದ ಘನಶಕ್ತಿಯಲಿ ಬಲಾಢ್ಯರಾಗಿ ಬೆಳೆಯೋಣ || 2 || ಸ್ವಾರ್ಥದುರಾಶೆಯ ಬದಿಗಿರಿಸಿ ಕೀರ್ತಿಯ ಬಯಕೆಯ ಸುಟ್ಟುರಿಸಿ ವ್ಯಕ್ತಿವ್ಯಕ್ತಿಗಳ ಜೋಡಿಸುತ ಸೇವೆಯ ಸೇನೆಯ ಬಲಪಡಿಸಿ || 3 ||

Read More

ಕಾಯಾವಾಚಾ ಮನಸಾ

ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು | ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು | ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ || ಇಲ್ಲಿದೆ ಬಾಳಿನ ನೂತನ ಅರ್ಥ ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ ಕಾರ್ಯಕ್ಷೇತ್ರಕೆ ಧುಮುಕುವೆವು ಬಿಡುವಿಲ್ಲದೆ ಪರಿಶ್ರಮಿಸುವೆವು || 1 || ನಮ್ಮಯ ಹಿರಿಯರು ತೋರಿದ ಹಾದಿ ಸಾಧನೆಗದುವೇ ಭದ್ರಬುನಾದಿ ವಿಘ್ನ ವಿರೋಧವ ಮೆಟ್ಟುವೆವು ಭವ್ಯ ಸಮಾಜವ ಕಟ್ಟುವೆವು || 2 || ಗ್ರಾಮ ನಗರ ಗಿರಿಕಾನನಗಳಲಿ ಸೇವಾವ್ರತಿಗಳ ಪಡೆಯು ಚಲಿಸಲಿ ಸ್ನೇಹದೊಳೆಲ್ಲರ […]

Read More

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ

ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ ದಮನಗೈದು ದುರುಳರ ಧರೆಯ ಉಳಿಸುವ || ಪ || ನಾವು ನಾವೆ ಎಂದಿಗು ಮೃಗರಾಜನ ತೆರದಿ ಗತಕಾಲದ ಇತಿಹಾಸದ ಹಿರಿಯರ ಹಾದಿ ಮುನ್ನಡೆಸುವ ಬಡಿದೆಬ್ಬಿಸಿ ನಮ್ಮ ಅನುಜರ ನಿದ್ರಿಸಲು ಬಿಡೆವಿನ್ನು ರಣಮಹತ್ತರ || 1 || ಶಿವನ ಖಡ್ಗದ ಹೊಳಪು ಕಣ್ಣ ಮುಂದಿದೆ ರಾಣನಶ್ವದ ಖರಪುಟ ಕಿವಿಯ ತುಂಬಿದೆ ಅಝಾದ ಭಗತರ ನೆನಪು ಮನದಿ ನಿಂತಿದೆ ಸಾಗುವೀರ ಎದೆಯನೆತ್ತಿ ಭಯವದೆಲ್ಲಿದೆ || 2 || ಅದೋ ಕೇಳಿ ಮೊಳಗುತಿದೆ ವಿವೇಕವಾಣಿಯು ಎದ್ದು […]

Read More

ಕಲೆಯು ರಂಜನೆಗಲ್ಲ ಭಗವದಾರಾಧನೆಗೆ

ಕಲೆಯು ರಂಜನೆಗಲ್ಲ ಭಗವದಾರಾಧನೆಗೆ ಶಿವನಾಗಿ ಶಿವಪೂಜೆ ಬಾಳಬಯಕೆ ಉನ್ಮತ್ತಚಿತ್ತಕ್ಕೆ ಪಥವೇನು ಗತಿಯೇನು ಸ್ಥಿರಚಿತ್ತ ಉತ್ಕರ್ಷ ಕಲೆಯ ಹರಕೆ || ಪ || ಭಾವಪ್ರವಾಹಕ್ಕೆ ತಾಳಲಯಗಳ ತೀರ ಶಾಂತ ಸುಖಸಾಗರದ ದಿಶೆಗೆ ಯಾನ ರುದ್ರತಾಂಡವದೊಡನೆ ಉಮೆಯಲಾಸ್ಯದ ಮಿಲನ (ಧೀಂತಕಿಟ ಧಿರಗಿಟತಕಿಟ ಧೀಂತಕಿಟ ಧೀಂತಾ) ಭದ್ರವನೆ ಉಲಿಯಿತು ರುದ್ರವೀಣಾ || 1 || ಸೃಷ್ಟಿಮೂಲವೆ ನಾದ ಪ್ರಣವಮಂತ್ರ ನಿನಾದ ಪ್ರಸ್ತರಣ ವಿಸ್ತರಣ ಶಾಸ್ತ್ರವೇದ ಒಂದು ಹಲವಾಗುವುದು ಹಲವರಲು ತಾನಿಹುದು ಪಠಣ ಗಾಯನದಿಂದ ತತ್ವ ಬೋಧ || 2 || ಮರುಳು […]

Read More