ಮಥಿಸಿ ಮೈದಳೆಯುತಿದೆ ಹಿಂದುತ್ವದಮೃತ ಗತಿಸಿದೆ ವಿದ್ವೇಷ ಹಾಲಾಹಲ ವಿಷ || ಪ || ವೇದಗಳ ದರುಶನವ ಲೋಕದೆದುರಲಿ ತೆರೆದು ಬದುಕಿನುನ್ನತ ಗತಿಯ ಔದಾರ್ಯ ಮೆರೆದು ನೆಲೆಗೊಳಿಸಿ ನೀತಿಗಳ ನಿರ್ಮಿಸಿದೆ ಧರ್ಮಪಥ ಕಾಲದ ಸವಾಲುಗಳ ಎದುರಿಸಿದೆ ಸತತ || 1 || ಜನಮನವ ಸಂಸ್ಕೃರಿಸಿ ತರತಮದ ಕೆಡುಕಳಿಸಿ ಬಲದುಪಾಸನೆ ಕಲಿಸಿ ಬಲಿದು ಸಂಘಟಿಸಿ ಶ್ರೇಷ್ಠ ಸದ್ಗುಣ ಸುಮಗರಳುತಿವೆ ಅನವರತ ರಾಷ್ಟ್ರ ಸ್ವೀಕರಿಸಿದೆ ಸಂಘ ಸಿದ್ಧಾಂತ || 2 || ಧರ್ಮ ಸಂಸ್ಥಾಪನೆಗೆ ಬನ್ನಿರೆಲ್ಲರೂ ಕೂಡಿ ದುರ್ಮತಿಗೆ ದುರ್ಜನಕೆ ರಣವೀಳ್ಯ […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]
ಬಿಂದುವು ಮೊರೆಯಿತು ಸಾಗರವಾಗಿ ಸಸಿಯು ಬೆಳೆಯಿತು ಹೆಮ್ಮರವಾಗಿ ಹಿಂದುವು ನಿಂದಿಹನು ಮೈಕೊಡವಿ ಅಕ್ಷಯ ಶಕ್ತಿಯ ಆಗರವಾಗಿ ಇದುವೇ ಸಂಘದ ಸಾಧನೆಯು… ನನಸಾಯಿತು ಬರಿ ಕಲ್ಪನೆಯು || ಪ || ಕಳೆಯಿತು ಸೋಲಿನ ಕತ್ತಲ ಕಾಲ ಹರಿಯಿತು ಸಾಸಿರ ಸಂಚಿನ ಜಾಲ ಸಾಗದು ಇನ್ನು ಶತ್ರುಗಳಾಟ ದಿಶೆತಪ್ಪಿದ ಉಗ್ರರ ಚೆಲ್ಲಾಟ… ಇದುವೇ… || 1 || ಭ್ರಮೆ ಕೀಳರಿಮೆಗೆ ಅಂತ್ಯವ ಸಾರಿ ಹಿಂದುತ್ವದ ಹೊಂಗಿರಣವ ಬೀರಿ ಮುನ್ನಡೆದಿದೆ ಯುವವೀರರ ಪಡೆಯು ಬಳಿಸಾರಿದೆ ಘನವಿಜಯದ ಗುರಿಯು… ಇದುವೇ… || 2 […]
ಭಾರತಾಂಬೆ ನಮ್ಮ ತಾಯಿ ನಾವು ಅವಳ ಮಕ್ಕಳು ಒಂದುಗೂಡಿ ಬನ್ನಿರೆಲ್ಲ ಭವ್ಯರಾಷ್ಟ್ರಕಟ್ಟಲು || ಪ || ಒಂದೆ ಮಣ್ಣ ಕಣಗಳಲ್ಲಿ ಇರದು ಎಂದೂ ಭಿನ್ನತೆ ಒಂದೆ ನೀರ ಹನಿಗಳಲ್ಲಿ ಇರುವುದೇ ವಿಭಿನ್ನತೆ? ಭೇದಭಾವ ಬಿಸುಟು ದೂರ ಸಾಧಿಸಿ ಸಮಾನತೆ ಕಾಣಬನ್ನಿ ನಾಡಸೇವೆಯಲ್ಲಿ ಬಾಳಧನ್ಯತೆ || 2 || ನಮ್ಮ ನಾಡ ಚರಿತೆಯ ಪುಟ ಪುಟ ರೋಮಾಂಚಕ ಛತ್ರಪತಿಯ ವೀರಗಾಥೆ ಅಮಿತ ಸ್ಫೂರ್ತಿದಾಯಕ ಕೋಟಿ ಕೋಟಿ ಪುತ್ರರಿರಲು ಮಾತೆಗೇಕೆ ಕಂಬನಿ? ನಾಡರಕ್ಷೆಗಾಗಿ ಮುಡಿಪು ನೆತ್ತರಿನ ಹನಿ ಹನಿ || […]
ಭಾರತದಾ ನವ ತರುಣರಂಗದಿ ಸತ್ಯ ಅಸತ್ಯದ ಸಮರ ಬೆಳೆದು ಹಿಂದು ಬಲ ಅಳಿದು ವಾಮಛಲ ಕರಗಲಿದೆ ಭ್ರಮೆ ತಿಮಿರ ಕೇಶವನಿರುವೆಡೆ ಧರ್ಮ ಧರ್ಮಕೆ ಜಯ ಯುಗ ನಿಯಮ || ಪ || ಶತಶತಮಾನದ ಮೌಢ್ಯದ ಗೋಡೆ ಒಡೆಯಲಿ ಅಳಿಸುತ ನೋವ ಕನಕ ಭಕ್ತಿಗೆ ಸಂಘ ಶಕ್ತಿಗೆ ಒಲಿಯುವ ಸಮಾಜ ದೇವಾ ಧ್ವನಿಸಲಿ ಹಿಂದೂ ಭಾವ ಪುನರುತ್ಥಾನ ಪುನರುಜ್ಜೀವನ ಗರ್ಭಗುಡಿಯ ಮಡಿಲಿಂದ ನವ ನಿರ್ಮಾಣದ ಪ್ರತಿ ಶಿಲೆಕಲ್ಲಿಗೂ ಸಮರಸ ಸೂತ್ರದ ಬಂಧ ಭೇದ ಬೆದರುವ ಸ್ವಾರ್ಥ ಕುತಂತ್ರ ಬಯಲಾಗುತ […]
ಭಾರತದ ಆಗಸದಿ ನವಸೂರ್ಯೋದಯವಾಗುತಿದೆ ಶತಶತಮಾನದ ದೈನ್ಯವನಳಿಸುತ ನವ ಜೀವನ ಪ್ರಭೆ ಮೂಡುತಿದೆ || ಪ || ರೂಢಿಯ ಜಡತೆಯ ಬಂಧನ ಕಳಚುತ ನವೋತ್ಸಾಹ ನವ ಸ್ಫೂರ್ತಿಯನೆರೆಯುತ ಮಸಣದ ಶೂನ್ಯದಿ ಸಾಸಿರ ಸುಮಗಳ ನವ ನಂದನ ಸಜ್ಜಾಗುತಿದೆ || 1 || ತ್ಯಾಗ ತಪೋಮಯ ಋಷಿ ಮುನಿ ಜೀವನ ಸಾಹಸ ಚೈತ್ರದ ಕ್ಷಾತ್ರೋತ್ಸ್ಫುರಣ ಶೀಲದ ಶೌರ್ಯದ ಆರಾಧನೆಯಲಿ ನಾಡಿದು ತನ್ಮಯವಾಗುತಿದೆ || 2 || ಬಿಂದುವು ಸಿಂಧುತ್ವಕೆ ತಾನೆಳೆಸಲು ಕಳೆಯದೆ ಹಿಂದುತ್ವದ ಬಿರಿಯಳಲು ಬಾನ್ಧರೆ ಬೆಸೆಯುವ ಮಹದಾಕಾಂಕ್ಷೆಯ ಸಂಘ […]
ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ ಸ್ವೀಕರಿಸ ಬನ್ನಿರೋ ತರುಣ ಜನರೆ ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ || ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು ಪರಕೀಯ ತತ್ವಗಳ ಅಂಧಾನುಕರಣೆಯಲಿ ಮೈಮರೆತು ಮಲಗಿದರೆ ಏನು ಫಲವು? || 1 || ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು ಏಕಪುರುಷನ ತೆರದಿ ಎದ್ದು ನಿಂದು ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ ಹೊನ್ನಿನಂತಹ ನಾಡ ಕಟ್ಟಿರಿಂದು || 2 || ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ […]
ಭವ್ಯರಾಷ್ಟ್ರದ ಧನ್ಯಜನನಿಯೆ ನಿನಗೆ ನೂರು ನಮನ ಮಾತೃಸಂಸ್ಕೃತಿಯ ಮೂರ್ತರೂಪಿಣೆಯೆ ನಿನಗೆ ಯಾರು ಸಮಾನ || ಪ || ನೆಲವಾದವಳೆ ಜಲವಾದವಳೆ ಜ್ವಾಲಾ ರೂಪದಿ ಬಂದವಳ ಉಸಿರಾದವಳೆ ಹಸಿರಾದವಳೆ ಪಂಚತತ್ವದಲು ನಿಂದವಳೆ ಹಿಂದು ಪರಂಪರೆ ದರುಶನ ಮಾಡಿದ ಆದಿಶಕ್ತಿ ರೂಪಿಣಿಯೆ ಮಾನವ್ಯಕೆ ಹಾಲುಣಿಸಿದ ಮಾತೆಯೆ ಆರ್ಯಕುಲದ ಮಾನಿನಿಯೆ || 1 || ಸಾವಿರ ವರ್ಷದ ರಣಸಂಘರ್ಷದ ಸಂಸಾರದಿ ವಿಷವುಂಡವಳೆ ಸಂಕಟಬರಲಿ ಸಂತಸವಿರಲಿ ಏಕೋಭಾವದಿ ಕಂಡವಳೆ ಸದ್ಗುಣ ಸೆಲೆ ಸಂಸ್ಕಾರದ ನೆಲೆಯಲಿ ಮನೆಕಟ್ಟಿದ ಮಹಿಮಾನ್ವಿತೆಯೆ ಸಂಸ್ಕೃತಿಯುಳುಹಿ ಸಮಾಜವ ಬೆಳಗಿದ ಹಿಂದು […]
ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ || ಪ || ಪರಮ ಪುರುಷನ ರಾಮಚಂದ್ರನ ಸೂರ್ಯಕುಲ ಸಂತಾನರೆ ಶುದ್ಧರಕ್ತದ ಕ್ಷಾತ್ರತೇಜದ ಧೀರ ಪೌರುಷವಂತರೆ ಶೂರವೀರನು ಪೌರವಾರ್ಯನು ಶಕ್ತಿಬಿತ್ತಿಹ ನೆಲವಿದು ಪುರುಷಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು || 1 || ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು ಮಾತಿಗಾಗಿಯೆ ಬಲಿಯ ನೀಡಿದ ನೀತಿವಂತರ ನೆಲೆಯಿದು ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು ಮಣ್ಣಿಗಾಗಿಯೆ ಮಣ್ಣುಗೂಡಿದ ತ್ಯಾಗಿ […]
ಭರತ ದೇಶ ಭಾಗ್ಯ ಕೋಶ ನಮ್ಮ ಜನರ ಸಂಪದ ಕೋಟಿ ಕೋಟಿ ಹೃದಯ ತೀರ್ಥ ಬೃಂದಾರಕ ಶಿವಪಥ || ಪ || ಹೈಮಾಚಲದುನ್ನತಿಯಲಿ ಆಧ್ಯಾತ್ಮದ ತೇಜದಲ್ಲಿ ಸಗ್ಗಸಿರಿಯ ಸುರಿವಳಿಲ್ಲಿ ಆತ್ಮರತೀ ವನಮಾಲಿ || 1 || ಸಹಾಧ್ಯಯನ ಸಹಭೋಜನ ಸಹ ಪೌರುಷ ಸಹ ತೋಷ ವಿಶ್ವಮೈತ್ರಿ ಗಾಯತ್ರಿಯ ಪಠಿಸಿದಂಥ ಧೀರಯುತ || 2 || ಭವ್ಯಭೂಮಿ ಭಾರತ ಮಿಗಿಲೆನಗಿದು ಜಗಕಿಂತ ಈ ಮಣ್ಣಿನ ಕಣಕಣವೂ ನನ್ನ ದೇಹ ನಿಶ್ಚಿತ || 3 || ಜನ್ಮ ಭೂಮಿ, ಜನನಿ […]