ನಿನ್ನ ಜೀವನ ಧ್ಯೇಯ ಜೀವನ ನಿನ್ನ ದರ್ಶನ ಹಿಂದು ದರ್ಶನ.. ನಿನ್ನ ಮಾರ್ಗದಿ ನಡೆಸಿ ನಮ್ಮನು, ಮಾಧವನಾಗಿಸು.. || ಪ || ಕೋಟಿ ಸ್ವಭಾವವ ಒಂದೆಡೆ ಬೆಸೆಯುತ ನಿನ್ನಯ ಚಿಂತನೆ ಅತಿಶಯವು, ತರುಣ ಹೃದಯಗಳು ರಾಷ್ಟ್ರಕೆ ಮಿಡಿಯಲು ಋಷಿತಮ ಜೀವನ ಪ್ರೇರಣೆಯು… || 1 || ಜಾತಿ ಭೇದಗಳ ಮೇಲು ಕೀಳುಗಳ ನಾಡಿನೆಲ್ಲೆಡೆ ಸಂಘರ್ಷ, ಹಿಂದು ಭಾವವ ಜಾಗೃತಗೊಳಿಸಿದೆ ಕೇಶವ ನೀನು ಯುಗ ಪುರುಷ… || 2 || ಭವ್ಯ ಪರಂಪರೆ ಸದ್ಗುಣ ಶೀಲವೇ ರಾಷ್ಟ್ರ ವೈಭವಕೆ […]
ಯುವಕರೆಲ್ಲ ಬನ್ನಿರಿ ವೀರಗಾನ ಮೊಳಗುವಾ ಎಚ್ಚರಾಗಿ ಬನ್ನಿರಿ ಜನ್ಮಭೂಮಿ ಉಳಿಸುವಾ || ಪ || ವೇದಮಂತ್ರ ತುಂಬಿಬಂದ ರಾಷ್ಟ್ರವನ್ನು ಪಡೆಯುವಾ ನಾಡಿನ ಶಾಂತಿಗಾಗಿ ಸೇವೆಗೈದು ಬದುಕುವಾ ಸತ್ಯವಂತ ಹರಿಶ್ಚಂದ್ರ ಜನಿಸಿದ ಭೂಮಿಯಲಿ ಧ್ಯೇಯದಾ ದಾರಿಹಿಡಿದು ರಾಮರಾಜ್ಯ ಕಟ್ಟುವಾ || 1 || ಮರಳಿ ಜ್ಞಾನಪಡೆದು ಮುಂದೆ ವೀರರಾಗಿ ಸಾಗುವಾ ಹರಿದು ರಕ್ತ ತುಂಬಿಬರಲಿ ದೇಶಕಾಗಿ ಬದುಕುವಾ ಬಂಧುಭಾವದಿಂದ ಮೆರೆದು ತಾಯಿನಾಡ ಉಳಿಸುವಾ ಹಿಂದುಕುಲದ ಯುಗಯುಗದ ನೆನಪಿಗಾಗಿ ಬಾಳುವಾ|| 2 || ಹೆಮ್ಮೆಯಿಂದ ಎದೆಯನೆತ್ತಿ ಹಿಂದು ಎಂದು ನಡೆಯುವಾ […]
ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ | ಅಸುರೆದೆಗಳು ಬಿರಿಯಲಿ | ಸುರಭಾವಗಳರಳಲಿ | ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ | ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ || ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ? ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ? ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ? ‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ | ಉಜ್ವಲ ಗತಸಿರಿಯಿದೆ | ಶೌರ್ಯದ ಸ್ಮೃತಿಯೆಮಗಿದೆ […]
ಮೊರೆಯಲಿ ಭೋರ್ಗರೆಯಲಿ ಹಿಂದುಶಕ್ತಿಯ ಸಾಗರ ನಡೆಯಲಿ ಮುನ್ನಡೆಯಲಿ ಯುವಸಮೂಹದ ಆಗರ || ಪ || ಕಡಿದು ಕಳಚುತ ಸುತ್ತ ಬಿಗಿದಿಹ ದುಷ್ಟ ದುರುಳರ ಸೇಡನು ಬಿಡದೆ ಪೊರೆವುತ ಹೊತ್ತು ಸಲಹುವ ಸ್ವರ್ಗದಾ ಸಿರಿಬೀಡನು ಕ್ಷಾತ್ರಭಾವದಿ ವೀರಸುಧೆಯನು ಕುಡಿದು ಜಯಿಸುವ ನಾಡನು || 1 || ಕರುಳಬಳ್ಳಿಯ ತುಳಿವುದೇತಕೆ ತರತಮದ ಪರಿ ಏತಕೆ ಸರಿಸಮಾನರು ಧ್ಯೇಯಪಥದಲಿ ಸುಡಲಿ ಅಂಜಿಕೆ ನಾಚಿಕೆ ಒಂದೆ ತಾಯಿಯ ಮಕ್ಕಳೆಲ್ಲರು ಒಂದುಗೂಡುತ ರಾಷ್ಟ್ರಕೆ || 2 || ವೀರಪುರುಷರ ವಿಜಯಗಾಥೆಯ ಕ್ರಾಂತಿಗೀತೆಯ ಹಾಡುತ ಯುವಸಮಾಜಕೆ […]
ಒಂದುಗೂಡಿ ಬೆರೆತುಕೊಂಡು ಬಂಧುಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ… ತಾಯಿಗೆ ಜಯಘೋಷವ ತಾಯಿ ಭಾರತಿ… ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾಸಲಿಲವು ವಿಶ್ವ ಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆ ಮಾಡಲಿ ಸ್ವಾಭಿಮಾನ ಮಂತ್ರವು ತಾಯಿ ಭಾರತಿ… ನಿನಗೆ ಆರತಿ […]
ಕರುಣಾಳು ದೇವನವ ನರಜನುಮ ಕೊಟ್ಟಿರಲು ಪರಹಿತವ ಬಯಸುತ್ತಾ ಮನುಜರಾಗೋಣ || ಪ || ಪರಮಾತ್ಮ ಸೃಷ್ಟಿಸಿಹ ಎಲ್ಲಾ ಜೀವಿಗಳನ್ನು ಎಲ್ಲೆಲ್ಲೂ ಎಲ್ಲರೊಳು ಆ ದೇವನಿರಲು ದೂರ ಸರಿಯುವ ಕ್ರೌರ್ಯ ಸರಿಯೇನು ಹೇಳಿ ? ತರತಮದ ಭಾವವಿದು ಬಲು ಕೆಟ್ಟ ಚಾಳಿ || 1 || ಬೆರಳತುದಿ ಹೊರಳಿಸಿಯೇ ವಿಶ್ವವನೇ ಕಂಡರೂ ಕೀಳುಭಾವನೆ ಹುಳುಕು ಬಿಡಲಾರವೇಕೆ ? ಅಂತರ್ಜಾಲವನರಿತು ಅಂತರಾಳವೆ ಬರಿದು ನೊಂದ ಮನಗಳ ಅಳಲ ತಿಳಿಯವೇಕೆ ? || 2 || ಕೆಟ್ಟ ಕಟ್ಟಳೆಯೆಲ್ಲಾ ಸುಟ್ಟು ಹೋಗಲಿ […]
ಮಾತೆ ನಿನ್ನಯ ದಿವ್ಯ ಚರಣಕೆ ನಮ್ಮ ಕಾಯವು ಬೀಳಲಿ ಶೌರ್ಯ… ತ್ಯಾಗದ ಸಂಗಮದಲಿ ಜಗದ ಉನ್ನತಿಯಾಗಲಿ ವಿಶ್ವವೇ ತಲೆಬಾಗಲಿ… || ಪ || ದೇಶಭಕ್ತಿಯು ಪ್ರಕಟವಾಗಲಿ ತೊರೆದು ಮನಸಿನ ಆಮಿಷ ತೋಳಶಕ್ತಿ ಬಲಾಢ್ಯವಾಗಲಿ ವ್ಯಕ್ತವಾಗುತ ಪೌರುಷ ವೀರತನವಿದು ದೇಶಕೋಸ್ಕರ, ಹಾರಿ ಮುಟ್ಟಲು ಆಗಸ ವೈರಿ ನಾಶದಿ ಸಂತಸ… || 1 || ನಮ್ಮ ಹಿರಿಯರ ಕನಸಿನಂತೆ ಭಾರತಿಯು ತಲೆಯೆತ್ತಲಿ ಕಡಲ ಅಲೆಗಳ ಓಟದಂತೆ ದೇಶಕಾರ್ಯವು ಸಾಗಲಿ ಹಿಂದು ಕಲಿಗಳ ಶಕ್ತಿಯಿಂದ ಶತ್ರು ಕಾಯವು ಬೀಳಲಿ ಅಂಧಕಾರವು ತೊಲಗಲಿ… […]
ಬಂದಿಹುದು ಶುಭ ಗಳಿಗೆ, ಪರಿವರ್ತನೆಯ ಕಡೆಗೆ ಕೃತಿರೂಪದಾರತಿಯ ಬೆಳಗ ಬನ್ನಿ || ಪ || ಸ್ವಾರ್ಥಲಾಲಸೆ ದಿಗಿಲು, ತ್ಯಾಗಸೇವೆಯೆ ಮಿಗಿಲು ಕೊರತೆ ಕಲುಷವ ನೀಗಿ, ಸಾಮರಸ್ಯದಿ ಸಾಗಿ ನೆಮ್ಮದಿಯ ಬಾಳ ಬಗೆ ಬರಲಿ ಇಳೆಗೆ ಕೃತಿರೂಪದಾರತಿಯ ನಾವು ಬೆಳಗೆ || 1 || ವಿಕೃತಿಯು ವಿಭ್ರಮಿಸಿ, ಸಂಸ್ಕೃತಿಯ ಹದಗೆಡಿಸಿ ಮನೆಮನೆಯ ಮನಮನವ, ಬೆಸೆವ ಬಂಧುರ ಭಾವ ಪರಿವಾರದಾಧಾರ ದೇಶಕಾಧಾರ ಕೃತಿರೂಪದಾರತಿಯ ನೈಜ ಸಾಕಾರ || 2 || ಸುಖದಾಹ ಮಿತಿಮೀರಿ, ಭೂರಮೆಗೆ ಒಡಲ ಉರಿ ಜಲ ವಾಯು […]
ಸುರಿಯಲಿ ತಂಪೆರೆಯಲಿ ಜೀವನಪ್ರೀತಿಯ ಮಳೆ ಹರಿಯಲಿ ಭೋರ್ಗರೆಯಲಿ ಬತ್ತಿದೆಡೆಗಳಲೀ ಹೊಳೆ ಕೊಚ್ಚಿಹೋಗಲಿ ಸ್ವಾರ್ಥ ದುರಾಸೆ ಸ್ವಚ್ಛವಾಗಲಿ ಇಳೆ || ಪ || ಚಿಮ್ಮಲಿ ಹಚ್ಚನೆ ಹಸಿರು ನಿರ್ಮಲವಾಗಲಿ ಉಸಿರು ಮತ್ತೆ ಆಗಲಿ ವಸುಂಧರೆ ಸಕಲ ಜೀವಿಗಳಿಗಾಸರೆ …ಕೊಚ್ಚಿಹೋಗಲಿ || 1 || ಧುಮ್ಮಿಕ್ಕಿ ಧುಮುಕಿ ಜಲಪಾತ ನೀಡಿ ಜಡತೆಗೆ ಆಘಾತ ಹೊಮ್ಮಿಸಲಿ ಹೊಸಚೇತನ ಕ್ರಿಯಾಶೀಲತೆಗೆ ಇಂಧನ …ಕೊಚ್ಚಿಹೋಗಲಿ || 2 || ತೊನೆಯಲಿ ತೆನೆ ಹೊಂದೇರು ಅಡಗಲಿ ಹಸಿವಿನ ಚೀರು ಅರಳಲಿ ಎಲ್ಲೆಡೆ ಹೂನಗೆ ಹಾಯ್ ಎನಿಸಲಿ […]
ಬೆಚ್ಚನೆಯ ಗೂಡು ಇದು ನೆಚ್ಚಿ ನಾವಿರಲು ಹಚ್ಚ ಹಸಿರಿನ ನೆಳಲು ಬಿಚ್ಚು ಮನವಿರಲು || ಪ || ತುರು ಕರೆವ ತಿಳಿಹಾಲು ಹೊಳೆಹರಿದುನಿಂದು ತರುತಂಪು ತಿಳಿಗಾಳಿ ಒಳಸಾರಿ ಬಳಿಬಂದು ತಮವಡಗಿ ಇಳೆಬೆಳಗಿ ಕಳೆಕಟ್ಟಿತಿಲ್ಲಿಂದು ತರವಿಲ್ಲ ಗೃಹಗೇಹದೊಳಗಿಂತ ಮತ್ತೊಂದು || 1 || ಪಡುವಣದ ರವಿಕಿರಣ ಪೂರ್ವದಿಂದಲೆ ಪಯಣ ಅಡಿಮೊದಲು ಮನೆಯಲ್ಲಿ ಆತನೊಂದಿಗೆ ಗಮನ ಮಡಿಯಾಗಿ ಮನಕಾಯ ಹೊಸಿಲುಗೋವಿಗೆ ನಮನ ಅಡಿಗೆರಗಿ ಶ್ರೀತುಳಸಿ ತೀರ್ಥ ಅಮೃತಪಾನ || 2 || ಬಗೆಬಗೆಯ ರಸಭಾವ ಶುಚಿರುಚಿಯ ಸಾರ ಹಗೆಹೊಗೆಯ ಜಾಡಿಲ್ಲ […]