ಭಾರತಿ ನಿನ್ನಯ ವೈಭವಕಾಗಿ

ಭಾರತಿ ನಿನ್ನಯ ವೈಭವಕಾಗಿ ದುಡಿವೆವು ಸಾವಿರ ಹಗಲಿರುಳು… ಕೇಶವ ತೋರಿದ ಗುರಿಯನು ತಲುಪಲು ಅರ್ಪಿತ ಜೀವನ ಕುಸುಮಗಳು… || ಪ || ಗೋಪುರ ಶಿಖರದಿ ಹೊನ್ನಿನ ಕಳಶ ಧನ್ಯವು ಹೊತ್ತಿಹ ಕಂಬಗಳು… ಸಂಘಮಂದಿರಕೆ ತನುಮನ ಅರ್ಪಿಸಿ ಮಣ್ಣಲಿ ಹೂತಿಹ ಕಲ್ಲುಗಳು… || 1 || ದ್ವಂದ್ವಗಳಿಲ್ಲದ ಸಮತೆಯ ಭಾವ ನಮ್ಮೊಳಗಿರುವ ನಿಜಧ್ಯಾನ… ಜಗದೇಕಾತ್ಮತೆಯು ನಮ್ಮೊಳಗಿದ್ದರೆ ಅದುವೇ ಹದವರಿತಾತ್ಮಜ್ಞಾನ… || 2 || ಧ್ಯೇಯಸಾಧನೆಗೆ ಪ್ರತಿಫಲವಿರದು ಅಲ್ಲಿದೆ ಸಂತನ ಆತ್ಮತೃಪ್ತಿ… ಹೆಗಲೇ ಸವೆದರು ಕಾರ್ಯವು ನಿಲ್ಲದು ಅಕ್ಷಯ ಉಜ್ವಲ […]

Read More

ಮೈಕೊಡವಿ ಮೇಲೇಳು

ಮೈಕೊಡವಿ ಮೇಲೇಳು ಸಾಧನೆಯ ಕಲಿಪುರುಷ, ಬಾ ಹಿಂದು ಸೋದರನೆ ರಾಷ್ಟ್ರಕಾಗಿ… ಮೃತ್ಯುಭೃತ್ಯನು ನೀನು ನಿನಗೆಲ್ಲಿ ಅಂಜಿಕೆಯೊ, ಕರೆದಿಹಳು ಭಾರತಿಯು ರಾಷ್ಟ್ರಕಾಗಿ… || ಪ || ಜಗದಗಲ ಹರಡಿಹುದು ಕತ್ತಲೆಯ ಕಾರ್ಮೋಡ, ಬೆಳಕ ಹರಿಸಿ ತಮವ ದೂರ ಸರಿಸು… ರಣಘೋಷ ಮೂಡಿಹುದು ರಣಕಹಳೆ ಮೊಳಗಿಹುದು, ತರುಣ ರಕ್ತದ ಕಣದಿ ಸಿಡಿಲ ತರಿಸು… || 1 || ಏಕತೆಯ ತೊರೆದಿಹರು ಸಂಸ್ಕೃತಿಯ ಮರೆತಿಹರು, ಹಿಂದು ಮಂತ್ರವ ಪಠಿಸು ನಾಡಿಗೆಲ್ಲ… ಮೈಮರೆತು ಮಲಗಿಹರು ಬಲಭೀಮ ಹನುಮರು, ಪಾಂಚಜನ್ಯವ ನುಡಿಸು ವಿಶ್ವಕೆಲ್ಲ… || […]

Read More

ಹಿಂದುಶಕ್ತಿಯು ಒಂದುಗೂಡಿದೆ

ಹಿಂದುಶಕ್ತಿಯು ಒಂದುಗೂಡಿದೆ, ಭೇದಭಾವವ ಮರೆಯುತಾ… ಸಾಮರಸ್ಯದಿ ಮುಂದೆ ನಡೆಯಲು, ಶಕ್ತವಾಯಿತು ಭಾರತ… || ಪ || ದಿಕ್ಕು ದಿಕ್ಕಲಿ ಧೂರ್ತನರ್ತನ ರಕ್ತವಾಯಿತು ಈ ಧರೆ… ದಿಟ್ಟ ಉತ್ತರ ನೀಡಿದುದಕೆ ಮತ್ತೆ ಬೆಳಗಿತು ಬಾನ್‍ಧರೆ… || 1 || ಹಿಂದು ಹೃದಯವು ಶೂನ್ಯವಾಗಲು, ಸೂತಕದ ಮನೆ ರಾಷ್ಟ್ರವು… ಸಂಘ ಜನಿಸಿತು ಮೌಢ್ಯ ಅಳಿಯಲು, ಭವ್ಯ ಮಂಗಳ ಪೀಠವು… || 2 || ದಿವ್ಯ ಪುರುಷರು ನಡೆದು ತೋರಿದ, ವೀರವ್ರತದಾ ಸ್ವೀಕೃತಿ… ನಾನು ನನ್ನದು ಎಲ್ಲ ಮೋಹವು, ರಾಷ್ಟ್ರ ಯಜ್ಞಕೆ […]

Read More

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅ ಆ ಇ ಈ, ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ || ಆಟ ಊಟ ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನಿಗೆ ಜೀವನವೇ ರಸದೂಟ || 1 || ಇ ಈ ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 || ಉ, ಊ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ […]

Read More

ನಮ್ಮ ಮನೆ ಇದು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ ನಲಿವಿನ ಅರಿವಿನ ನಮ್ಮ ಮನೆ | ರೀತಿಯ ನೀತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ನಮ್ಮ ಮನೆ || ಪ || ತಾಯಿಯ ಮಮತೆಯ ತಂದೆಯ ಪ್ರೀತಿಯ ಸೆಲೆಯಲಿ ತೆರೆದಿದೆ ನಮ್ಮ ಮನೆ ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ ನಿಲುವಲಿ ನಿಂತಿದೆ ನಮ್ಮ ಮನೆ || 1 || ಹಕ್ಕಿಗಳುಲಿವಿಗೆ ನೇಸರನುದಯಕೆ ಏಳುವರೆಲ್ಲರು ಮುದದಿಂದ ಮೀಯುತ ಮಡಿಯಲಿ ನೆನೆಯುತ ದೇವಗೆ ಭಕುತಿಯ ನಮನ ಕರದಿಂದ || 2 || ಅಕ್ಕತಂಗಿಯರ […]

Read More

ಭರತ ಭೂಮಿ ನನ್ನ ತಾಯಿ (ರಚನೆ – ಕುವೆಂಪು)

ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು || ಪ || ತುಹಿನ ಗಿರಿಯ ಸಿರಿಯ ಮುಡಿಯ ಹಿರಿಯ ಕಡಲು ತೊಳೆಯುವಡಿಯ ಪೈರು ಪಚ್ಚೆ ಪಸುರಿನುಡೆಯ || ಅ.ಪ || ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ ಸಲಿಲ ತೀರ್ಥ ಪುಣ್ಯ ರಂಗೆ || 1 || ಮತದ ಬಿರುಕುಗಳನು ತೊರೆವೆ ನುಡಿಗಳೊಡಕುಗಳನು ಮರೆವೆ ತೊತ್ತ ತೊಡಕುಗಳನು ಬಿರಿವೆ ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು […]

Read More

ಎಲೆಗಳು ನೂರಾರು (ರಚನೆ – ಹೆಚ್.ಎಸ್. ವೆಂಕಟೇಶಮೂರ್ತಿ)

ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಒಂದೇ ಒಲವು ಸಾಗೋಣ ಒಟ್ಟಿಗೆ ಸಾಗೋಣ ನಾವು ನೀವು ಸೇರಿ ಒಂದಾಗಿ ನೀಗೋಣ ಭಿನ್ನತೆ ನೀಗೋಣ ಸಾವಿರ ಹೆಜ್ಜೆ ಒಂದೇ ಗುರಿಗಾಗಿ || 1 || ಕಿಡಿಗಳು ನೂರಾರು ಬೆಳಕಿನ ಕಿಡಿಗಳು ನೂರಾರು ಬೆಳಕಿನ ಪರಿಗೆ ಒಂದೇ ಹೆಸರು ಸೂರ್ಯ ಚಂದ್ರ ಲಾಂದ್ರ ಹಣತೆ ಅವುಗಳ ಹಿಂದೆ ಒಂದೇ ಘನತೆ ತೆರೆಯೋಣ ಹೃದಯ ತೆರೆಯೋಣ ನಾವು […]

Read More

ಹೊಸ ಹರೆಯದ ಛಲ ಉತ್ಸಾಹ

ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || ಪ || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀ ಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 1 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ ಸಾಧನೆಗೆ ಜೀವನವನು ಮುಡಿಪಾಗಿರಿಸಿ || 2 ||

Read More

ಧರ್ಮದೇವತೆ ವಿಶ್ವವಂದಿತೆ

ಧರ್ಮದೇವತೆ ವಿಶ್ವವಂದಿತೆ ಮಾತೆ ಹೇ ಮಹಿಮಾನ್ವಿತೆ ಚರಣತಲದಲಿ ಜಲಧಿಸೇವಿತೆ ಓ ಹಿಮಾಲಯ ಶೋಭಿತೆ || ಪ || ಸಸ್ಯ ಶ್ಯಾಮಲ ಸುಜಲಕೋಮಲ ರೂಪು ತ್ಯಜಿಸುತೆ ಕೆರಳುತೆ ಏಳು ಭಾರತಿ ಸ್ವೀಕರಿಸಿದೋ ವೈರಿಪ್ರಾಣಗಳಾಹುತಿ ಪೂರ್ವ ಪಶ್ಚಿಮ ದಕ್ಷಿಣೋತ್ತರದತಿ ಪುನೀತ ರಜಾಂಕಿತೆ ದಿವಿಜ ಪೂಜಿತೆ ದುರುಳ ದಮನಕೆ ಏಳು ದುರ್ಗಾದೇವತೆ || 1 || ದಿಗ್ವಿಜಯಾನಂದ ಕಾರ್ಯಕೆ ಸ್ಥೈರ್ಯ ಸ್ಫೂರ್ತಿಯ ಕರುಣಿಸಿ ಧೈರ್ಯ ಸಾಹಸವೆರೆದು ಹೃದಯದಿ ದಿವ್ಯ ಭಾವವನರಳಿಸಿ ಸಂಸ್ಕೃತಿಯ ಸೌರಭದ ಮೃದುಸುಮಕಗ್ನಿಕಾಂತಿಯ ಲೇಪಿಸಿ ಏಳು ಓ ಸಿಡಿದೇಳು ನಮ್ಮೊಳು […]

Read More

ಈ ನಮ್ಮ ತಾಯಿನಾಡು

ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು || ಪ || ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ || 1 || ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ ಹರಿಯುವುವು ಈ ಸುಂದರ ನಂದನಕೆ ಆ ಸ್ವರ್ಗವೆ ಕರುಬುವುದು || 2 || ಈ ನೆಲವ ಧರ್ಮವೊಂದೂ ಕಲಿಸದು ದ್ವೇಷವನೆಂದೂ ಭಾರತೀಯರು ನಾವು-ನಮ್ಮೀ ದೇಶ ಭರತನಾಡು || 3 ||

Read More