ಭಾರತಿಯು ಇರಬೇಕು ಅನುದಿನ ಸಸ್ಯಸ್ಯಾಮಲೆಯಾಗುತ ಹಸಿರು ಹೊನ್ನಿನ ಬೆಲೆಯನರಿಯಲಿ ಜನತೆಯಾಗಲಿ ಜಾಗೃತ || ಪ || ತುಂಬಿ ನಿಲ್ಲಲಿ ತುಂಬ ಗಿಡಮರ ಬಿಂಬಿಸಲಿ ವನಸಿರಿಯನು ಕಂಪನೊಯ್ಯಲು ಪವನ, ಮಳೆಹನಿ ತಂಪುಗೈಯಲಿ ನೆಲವನು || 1 || ಬೆಳೆಯು ಬೆಳೆಯಲಿ ಇಳೆಯು ಬೆಳಗಲಿ ಕಳೆಯ ನಗುಮೊಗ ತೋರಲಿ ಒಸರು ಹೊರಡಲಿ ಹಸಿರು ಹರಡಲಿ ಹೊಸತು ಉಸಿರಲಿ ಹಾಡಲಿ || 2 || ಮರುಳು ಮಾಡುತ ವನವ ಕೆಡವುತ ಮರಳುಗಾಡನು ತರುವರೇ? ಮರಳಿಬಾರದು ಭೂಮಿ, ಅರಳದು ತಿರುಳು ತೀರಲು, ತಿಳಿಯರೇ? […]
ಒಂದ ದಿನ ಸಂಜೆಯ ಹೊತ್ತಿನಲಿ ಹೊರಬಿದ್ದೆನು ನಮ್ಮೂರ ಹಾದಿಯಲಿ ನಮ್ಮೂರ ಶಾಲೆಯ ಅಂಗಳದಲ್ಲಿ ಕಂಡರು ಕೆಲ ಬಾಲಕರು ಕಾವಿಧ್ವಜದಡಿ || ಪ || ಬಾಲಕರು ಆಡುತ್ತಿದ್ದ ಆಟದ ಮೋಡಿ ನಿಲ್ಲಿಸಿತು ನನ್ನ ಅಲ್ಲೇ ಗೆಳೆಯರ ಕೂಡಿ ಹಾಡುತ್ತಿದ್ದ ದೇಶಭಕ್ತಿ ಹಾಡಿನ ಹೊನಲು ಕೇಳುತಲಿ ನಿಂತೆ ಕಡೆಗೆ ಪ್ರಾರ್ಥನೆ ಸಾಲು || 1 || ಹೊರಬಿದ್ದ ಹುಡುಗರ ಆ ಗುಂಪಿನ ಗೆಳೆಯ ನನ್ನ ಬಳಿ ಬಂದು ಕೇಳಲೆನ್ನ ಪರಿಚಯ ಎನಗವರ ಅವರಿಗೆನ್ನ ಪರಿಚಯವಾಗೆ ದಿನನಿತ್ಯ ಹೋಗುತ್ತಿದ್ದೆ ಶಾಖೆಯ ಕಡೆಗೆ […]
ಶಾರದೆಯ ಸದನವಿದು ರಾಷ್ಟ್ರದೀಕ್ಷೆಯ ಭವನ ಪೂರ್ಣತೆಯ ಪಥಿಕನಿಗೆ ದೀಪಗಂಬ ತನ್ನರಿವ ತಾ ಗಳಿಸಿ ರಾಷ್ಟ್ರದುನ್ನತಿ ಬಯಸಿ ಮುನ್ನಡೆವ ಸಾಧಕನ ಸ್ಫೂರ್ತಿ ಬಿಂಬ || ಪ || ಲೋಕ ಹಿತದಾಶಯದ ಋಷಿತುಲ್ಯ ಸಾಧಕರ ಕಲ್ಪನೆಯ ಕುಸುಮಗಳು ಅರಳಿಹವು ಇಲ್ಲಿ. ಕಾಯಿಗಳು ಮಾಗಿಹವು, ಸಫಲತೆಯ ಪಡೆದಿಹವು ದಶದಿಶೆಗೆ ಏಕತೆಯ ಬೀಜ ಚೆಲ್ಲಿ || 1 || ಶೈಶವದ ತೊದಲ್ನುಡಿಗೆ, ಬಾಲ್ಯದಾಟದ ಮನಕೆ ಹೊಸ ಶೋಧ ಕೆಳಸುತಿಹ ಯುವ ಮನಸಿಗೆ ದೇಶವೇ ಮೊದಲೆಂಬ ಸಂಸ್ಕಾರ ಕ್ಷಣಕ್ಷಣವು ಹೊಸ ದೃಷ್ಟಿ, ಹೊಸ ದಿಕ್ಕು […]
ಮೇರುಸದೃಶ ಜ್ಞಾನಿ ರಾಷ್ಟ್ರಯುಗ ದ್ರಷ್ಟಾರ ಯುಗಪುರುಷ ನೀನಾದೆ ಹೇ ಮಾಧವ || ಪ || ಅಡಿಗಡಿಗೆ ಭಾರತದ ಕೀರ್ತಿಯನು ಪಸರಿಸುವ ಯೋಜನೆಯ ರೂಪಿಸಿದ ಓ ಯೋಜಕ ಪರಮವೈಭವ ಪದಕೆ ಭಾರತಿಯನೆತ್ತರಿಪ ಮಾರ್ಗದರ್ಶಕನಾದೆ ನೀ ಮಾಧವ || 1 || ಜನಮನವನೆಚ್ಚರಿಸಿ ರಾಷ್ಟ್ರವೇ ಮೊದಲೆಂದೆ ನಾನಲ್ಲ ನೀನೆಂಬ ಕರೆ ನೀಡಿದೆ ಸ್ವಾರ್ಥವಿಲ್ಲದ ತ್ಯಾಗ ಸಾರ್ಥಕವು ಎಂದೆಂಬ ಮೌಲ್ಯವನು ಜೀವನದಿ ನೀ ತೋರಿದೆ || 2 || ಮಾತೃಋಣ ತೀರಿಸುವ ಋಣಭಾರ ಎಮಗಿಹುದು ನಿತ್ಯಸಾಧನೆಯೊಂದೆ ಸನ್ಮಾರ್ಗವೆಂದೆ ಏಕಾತ್ಮಭಾವದಲೆ ಭಾರತವ ನಿರ್ಮಿಸುವ […]
ಬಾs ಬಾರೊ ಬಾರೊ ಬಾರೊ ಬಾರೊs ಸಂಘದ ಶಾಖೆಗೆ ತಾಯಿ ಭಾರತಿಯ ಸೇವೆಗೆ || ಪ || ಸಿದ್ಧನಾಗು ದೇಶಿ ಆಟಕೆ ಉಸಿರು ಹಿಡಿದುಕೊ ಕಬ್ಬಡ್ಡಿಗೆ ಗೆಲ್ಲು ಛಲದಿ ಯೋಧನಂತೆ ಗಟ್ಟಿಯಾಗಲಿ ಶರೀರಕೆ ಆಟಗಳದಿ ಉಲ್ಲಾಸವೆದ್ದಿದೆ ಹೊಸ ಚೈತನ್ಯವು ಮೂಡಿದೆ || 1 || ಆತ್ಮರಕ್ಷಣೆಯ ಪ್ರಹಾರವು ದಿನಕರನಿಗೆ ಆಸನ ನಮನವು ಹೆಜ್ಜೆ ಹೆಜ್ಜೆ ಕೂಡಿ ನಡೆವೆವು ಶಿಸ್ತಿನ ಕ್ರಿಯೆ ಮೈತಾಳೆವು ಅಂಕತಾಳ ನಡೆಯು ಒಂದೇ ಗುರಿಯು ಒಂದೇ ನಮಗಿದೆ || 2 ||| ಹತ್ತು ಹಲವು […]
ಉಷೆ ಯಶವ ಗಳಿಸಿಹಳು ನಿಶೆ ಕುಸಿದು ಕುಳಿತಿಹಳು ಮೂಡಣದ ಆಗಸದಿ ಕೆಂಪೇರಿದೆ ಹೊಸ ಕುಸುಮವರಳುತಿರೆ ನಸು ನಗುವ ಬೀರುತಿರೆ ನಸುಕಿನಲೆ ಅಂಗಳದಿ ಕಂಪೇರಿದೆ || ಪ || ಅರಳಿರುವ ಸುಮದಲಿಹ ಅಂದ ಮಕರಂದಗಳು ಸ್ನೇಹದೊಸಗೆಯನಿತ್ತು ಬಳಿ ಕರೆದಿವೆ ಚಿಗುರೆಲೆಯ ಮರೆಯಿಂದ ಕೇಳುತಿಹ ಕೂಜನದಿ ಲೋಕಹಿತದಾಶಯವು ಮರುದನಿಸಿದೆ || 1 || ಚರಿತೆಯೊಡಲಿಗೆ ಸರಿದ ಇರುಳ ಕಗ್ಗತ್ತಲೆಯ ಕಹಿಗನಸು ನೋವುಗಳ ಕೊನೆಯಾಗಿವೆ ಮೇಲೆದ್ದು ಕೊಳೆ ತೊಳೆದು ಮಡಿಯಾದ ಯುವಜನತೆ ಧ್ಯೇಯ ತಿಲಕವ ಧರಿಸಿ ಅಣಿಯಾಗಿದೆ || 2 || […]
ಶಿವ ಸುಂದರ ಭಾರತದ ಪುಣ್ಯನೆಲ ಸಂಜೀವಿನಿ ತೀರ್ಥಗಳೇ ಎಲ್ಲ ಜಲ || ಪ || ಧರ್ಮಘೋಷ ಉಸಿರಾಡುವ ಗಾಳಿಯಾಗಿದೆ ಸಹನೆಮಂತ್ರ ಬಾಳಿನಲ್ಲಿ ಬೆರೆತುಹೋಗಿದೆ ಬೆಟ್ಟ ಬೆಟ್ಟದಲ್ಲೂ ಕರೆವ ಗುಡಿಯ ಗೋಪುರ ಹತ್ತಿ ಇಳಿವ ಭಕ್ತಜನಕೆ ಸಹಜ ಸುಂದರ || 1 || ಉತ್ತರದಲಿ ಹಿಮಾಲಯದ ಗಿರಿಯ ಉನ್ನತಿ ದಕ್ಷಿಣದಲಿ ಅಲೆ ಅಲೆಗಳ ಕಡಲಿನಾಕೃತಿ ನಡುವೆ ಸಾವಿರಾರು ವರುಷ ಬೆಳೆದ ಸಂಸ್ಕೃತಿ ಇದೇ ನಮ್ಮ ಭಾರತಾಂಬೆ ಚೆಲುವಿನಾಕೃತಿ || 2 || ದಿವ್ಯಪುರುಷರಿತ್ತ ಜ್ಞಾನಜ್ಯೋತಿ ಬೆಳಗಿದೆ ಶಾಂತಿ ಸ್ನೇಹ […]
ಭಾವನೆಗೆ ಬಲವೇರಿ ಕಲ್ಪನೆಯು ಗರಿಗೆದರಿ ಮಾತೃದರ್ಶನವಾಯ್ತು ಮಣ್ಣಿನಲ್ಲಿ ನಿನ್ನ ಚರಣದೊಳೆನ್ನ ಹರಣವರ್ಪಣವೆಂಬ ಭಾವದಂಕುರವಾಯ್ತು ಹೃದಯದಲ್ಲಿ || ಪ || ಕಾಯ ಬತ್ತಿಯು ಉರಿದು ಧ್ಯೇಯದಾರತಿ ಬೆಳಗೆ ಲೇಖನಿಯ ಮಸಿಯದಕೆ ತೈಲವಾಯ್ತು ಹಾಳೆಗಳ ಮೇಲುದಿಸಿದೊಂದೊಂದು ಅಕ್ಷರವೂ ಸ್ಥೈರ್ಯದುಪಮೆಯನೀವ ಶೈಲವಾಯ್ತು || 1 || ಕವಿವಾಣಿಯೊಡನಿಂತು ಗಾಯಕನ ದನಿಗೂಡಿ ರಣ ಕಹಳೆ ಎಲ್ಲೆಡೆಯು ಮರುದನಿಸಿತು ಕಲಿತನವು ಎಚ್ಚೆತ್ತು ಯುವಜನತೆ ಘರ್ಜಿಸುತ ಸಮರದುತ್ಸಾಹದಲಿ ಮುನ್ನುಗ್ಗಿತು || 2 || ಯುವ ಜನತೆ ನಿರ್ಮಿಸಿದ ಸ್ವಾತಂತ್ರ್ಯ ಸೌಧಕ್ಕೆ ಅಕ್ಷರದ ಪುಂಜಗಳ ಕುಸುರಿ ಕಂಭ […]
ಚಪಲ ಮನವನು ತಣಿಸಿ ಇಂದ್ರಿಯಂಗಳ ಮಣಿಸಿ ಸಂಯಮದ ಸಾಧನೆಯ ಪ್ರಗತಿ ಮಾರ್ಗ ಆತ್ಮ ಸುಖವನು ಬಯಸಿ ಸಂತಸದ ಸೆಲೆಯರಸಿ ಅಂತರಂಗದ ಯಾತ್ರೆಯದುವೆ ಯೋಗ || ಪ || ಸತ್ವಯುತ ಆಹಾರ, ಹಿತ-ವಿಹಿತ ವ್ಯವಹಾರ ಮಿತವಾದ ಉಪಭೋಗ, ವಿಷಯದಾಸಕ್ತಿ ತಿದ್ದಿರುವ ತನುಮನವು ಶುದ್ಧಗೊಳಿಸಿದ ಬುದ್ಧಿ ಆತ್ಮಾನುಸಂಧಾನ ಭಗವದನುರಕ್ತಿ || 1 || ನನ್ನರಿವ ನಾ ಗಳಿಸಿ ಚಿನ್ಮಯನ ಬೆಸಗೊಳುವ ಜನ್ಮ ಸಫಲತೆಯೆಂಬ ದಿವ್ಯ ಯೋಗ ಫಲದ ಬಯಕೆಯು ಇರದ ಕರ್ಮದಲೇ ಸಾರ್ಥಕ್ಯ ಕರ್ಮದಲಿ ಕುಶಲತೆಯ ಕಲೆಯು ಯೋಗ || […]
ಭಗವೆ ನಿನ್ನಯ ಭಾಷೆ ಜಗಕೊಂದು ವಿಸ್ಮಯವು ನಿನ್ನ ಸನ್ನಿಧಿಯಲ್ಲೇ ನನ್ನ ಅಧ್ಯಯನ ತೆಗೆದಷ್ಟು ಮೊಗೆದಷ್ಟು ಹೊಚ್ಚ ಹೊಸ ಹೊಳಹುಗಳು ಬರಹ, ಬಳಪಗಳಿಲ್ಲ ಮೌನ ಸಂವಹನ || ಪ || ಕದನ ಕಲಿಗಳ ಶಕ್ತಿ , ತ್ಯಾಗಗುಣದಭಿವ್ಯಕ್ತಿ ಜ್ಞಾನಗಳಿಕೆಗೆ ಸ್ಫೂರ್ತಿ, ಸಂಘ ಶಕ್ತಿ ಧ್ಯೇಯಯಾತ್ರಿಯ ದೀಪ್ತಿ, ಭಾರತಾಂಬೆಯ ಕೀರ್ತಿ ಏಕತೆಯ ಅನುಭೂತಿ, ರಾಷ್ಟ್ರ ಭಕ್ತಿ || 1 || ಜನನದಿನದರಿವಿಲ್ಲ, ಭಗವೆ ನಿನಗಳಿವಿಲ್ಲ ಮನದಳಲ ಪರಿಹರಿಪ ಆತ್ಮಬಲನೀನು ದೇಶ,ಧರ್ಮದ ಒಲವು, ಸ್ವತ್ವ- ಸತ್ಯದ ಗೆಲುವು ಭಾರತದಿ ಕುಡಿಯೊಡೆದ ಛಲವು […]