ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು ಅಸ್ತಮಿಸಿದೆ ನೀನು ಜನಮನದ ಸೂರ್ಯ| ಸ್ವರ್ಣಯುಗ ಸನ್ನಿಹಿತವಾಗಿರುವ ಸಮಯದಲಿ ಭಾರವಾಗಿಹುದಿಂದು ಭಾರತದ ಹೃದಯ || 1 || ಅಸ್ತಮಿಸಿದೆ ನೀನು……. ಅನುದಿನವು ಅನುಕ್ಷಣವು ಆತಂಕವೆದುರಿಸಿರೆ ಸಮ್ಮಿಶ್ರ ಸರ್ಕಾರದಾ ಪ್ರಯೋಗ| ನಿನ್ನ ಕೌಶಲದಿಂದ ಸಮರಸದ ಬಲದಿಂದ ಸಾಧಿಸಿದೆ ಅಭ್ಯುದಯದತುಲ ವೇಗ || 2 || ಅಸ್ತಮಿಸಿದೆ ನೀನು…… ರಾಷ್ಟ್ರವಾಣಿಯ ವಿಶ್ವಸಂಸ್ಥೆಯಲಿ ಮೊಳಗಿಸಿದೆ ಮಾನ್ಯತೆಯ ತಂದಿತ್ತೆ ಭಾರತಕೆ ನೀನು| ನಮ್ಮೇಳ್ಗೆ ಸಹಿಸದಿಹ ಅಗ್ರರಾಷ್ಟ್ರಗಳಿಂಗೆ ಅಣ್ವಸ್ತ್ರದೆಚ್ಚರಿಕೆ ನೀಡಿರುವೆ ನೀನು || 3 || ಅಸ್ತಮಿಸಿದೆ ನೀನು…….. […]
ಮಾತು ಮಾಗಲಿ ಭಾಷೆ ಬೆಳೆಯಲಿ ಹೃದಯ ಪಕ್ವತೆ ಪಡೆಯಲಿ ಭಾರತಾಂಬೆಯ ಕೀರ್ತಿ ಬೆಳಗಲಿ ಸೂರ್ಯ ಕಿರಣದ ತೆರದಲಿ || ಪ || ಧ್ವಜವು ಹಾರಲಿ ಮೇಲಕೇರಲಿ ನಾಡಹಿರಿಮೆಯ ಸಾರಲಿ ಜನರು ಸಮರಸ ಗೀತೆ ಹಾಡಲಿ ಐಕ್ಯ ಭಾವವು ಮೂಡಲಿ || 1 || ಮಕ್ಕಳೆಲ್ಲರು ಒಂದುಗೂಡಲಿ ಭಾರತಾಂಬೆಯ ಭಜಿಸಲಿ ಪ್ರೀತಿ ಪ್ರೇಮದ ಒರತೆ ಹರಿಯಲಿ ಬಂಧು ಭಾವವ ಬೆಸೆಯಲಿ || 2 || ಧರ್ಮರಕ್ಷಣೆಯಾಗಿ ಭಾರತ ವಿಶ್ವಗುರು ತಾನಾಗಲಿ ರಾಷ್ಟ್ರಭಕ್ತಿಯ ದಿವ್ಯ ಶಕ್ತಿಯು ಜಗಕೆ ಮಾರ್ಗವ ತೋರಲಿ […]
ಕೇಶವನ ಜೀವನವು ಎಮಗೆಲ್ಲ ದೀವಿಗೆಯು ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು ಪಥದರ್ಶಕನು ಆದ ಗುರಿಯ ಸಾಧನೆಗವನು || ಪ || ಹುರಿದು ಮುಕ್ಕುವ ಬಡತನವ ಬದಿಗೊತ್ತಿ ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 || ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || […]
ಅದ್ಭುತ ಆರಂಭ.. ಆರಂಭವೇ ಉಗ್ರ, ಹೇಳು ರುಂಡಗಳ ಈ ದಂಡಿಗೆ, ರಣದ ಸಮಯ ಬಂದಿತೆಂದು ಸಾರು ನೀ ಗರ್ವ, ಘನತೆ, ಹಿರಿಮೆಯನ್ನೊ, ಇಲ್ಲ ನಿನ್ನ ಜೀವವನ್ನೇ ಇಂದು ಬಿಲ್ಲು ಬಾಣದಿಂ ಸಮರ್ಪಿಸು ಭೀಕರ ಆರಂಭ… ಇಚ್ಛೆಯಂತೆ ಪ್ರಾಣ ತೆಗೆವ ಇಚ್ಛೆಯಂತೆ ಪ್ರಾಣ ಬಿಡುವ ವ್ಯಕ್ತಿ ಮಾತ್ರ ಸರ್ವಶಕ್ತಿವಂತನು ಕೃಷ್ಣ ಕೂಗಿ ಹೇಳುತಿಹುದು ಭಾಗವತದ ಸಾರವಿಹುದು ಯುದ್ಧವೇ ವೀರರಿಗೆ ಪ್ರಮಾಣವು ಕೌರವರ ಗುಂಪೆ ಇರಲಿ ಪಾಂಡವರ ಗೂಡು ಇರಲಿ ಹೋರುವವನೇ ಇಲ್ಲಿನ ಮಹಾತ್ಮನು ಗೆಲುವು ಬೇಕು ಎನಿಸದಿರುವ ಯಾರನ್ನೂ […]
ಸಂಕಟದಾ ಕರಿಮೋಡದ ಛಾಯೆಯು ವ್ಯಾಪಿಸಿದೆ ನಮ್ಮೆಲ್ಲರನೂ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || ಪ || ಈ ಸಂಘವು ಎಲ್ಲಿಯವರೆಗೋ ತಿಳಿಯದಾಗಿದೆ ನಮಗಿಂದು ಏನೇ ಇರಲಿ ಹೇಗೇ ಇರಲಿ ನಮ್ಮಯ ಗುರಿಯು ದಿಟವಿಂದು ಸಕ್ರಿಯರಾಗಿ ಶ್ರಮಿಸುವ ವ್ರತವನು ಸ್ವೀಕರಿಸುತ ಮುನ್ನಡೆಯೋಣ ಪೂರ್ಣಶಕ್ತಿಯಲಿ ದುಃಖವನಳಿಸುವ ದೃಢಸಂಕಲ್ಪವ ಮಾಡೋಣ || 1 || ಭೇಟಿಯು ಇಲ್ಲ ಕೂಟವು ಇಲ್ಲ, ಆದರೂ ಸ್ನೇಹವನರಳಿಸುವಾ ಧೈರ್ಯವ ತುಂಬುತ ಪ್ರೀತಿಯ ತೋರಿ ದೈನ್ಯ ನಿರಾಸೆಯ ನೀಗಿಸುವಾ ದುಃಖಿತ ಪೀಡಿತ ಬಂಧುಬಾಂಧವರ ಸೇವೆಯ ನಾವು ಗೈಯೋಣ […]
ಸ್ವಾತಂತ್ರ ಗೀತೆ ರಾಗ : ಹಿಂದೋಳ ಚತುರಶ್ರ ಏಕ ತಾಳ ಶ್ರಾವಣದ ಸಂಭ್ರಮದಲಿ ಸ್ವಾತಂತ್ರದ ಹೊಸ್ತಿಲಲಿ ನೆನೆಯೋಣ ಸೇನಾನಿಗಳ ಅಮರ ತ್ಯಾಗ ಸಾಹಸದ ಕಥನಗಳ ಸಾರುತ್ತಾ ಸ್ಮರಿಸೋಣ ಬಲಿದಾನಿಗಳ || ಶ್ರಾವಣದ ಸಂಭ್ರಮದಲಿ || ಧರ್ಮ ಭೂಮಿ ಭಾರತವ ಒಡೆದಾಳಲು ಬಂದಿದ್ದ ಬಿಳಿಯರಿಗೆ ಅಸ್ತ್ರ ಹಿಡಿದು ಮಾರಕನಾದೆ ಪ್ರಥಮ ಸಂಗ್ರಾಮದಲಿ ಅಗ್ನಿಜ್ವಾಲೆ ಸಿಡಿಸುತ್ತಾ ಕರ್ಮ ಭೂಮಿ ಭಾರತಕ್ಕೆ ಮಂಗಳನಾದೆ ಮಂಗಳನಾದೆ..! || ಶ್ರಾವಣದ ಸಂಭ್ರಮದಲಿ || ಶೂರವೀರ ಪರಂಪರೆಯ ಸಾಮ್ರಾಜ್ಯವ ಕಸಿಯುತ್ತಾ ಮೆರೆಯುತ್ತಿದ್ದ ದುರುಳ ದೊರೆಯ ಎದುರಿಸಿ […]
ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ ಭಾಗವಾದ ಭಾರತದ ಭೂಮಿಯೆಲ್ಲವೂ ಅದರೊಳಗೆ ಹುದುಗಿರುವ ಪ್ರಾಣವೆಲ್ಲವು ನಮ್ಮದೆ ಎಂದಿಗೂ ಎಂದೆಂದಿಗೂ ನಮ್ಮದೆ || ಪ || ದಶಮಿಯಂದು ಪೂಜಿಸಿಟ್ಟ ಖಡ್ಗ ಕರದಿ ಧರಿಸಿ ಅರಿಯ ರುಂಡಮುಂಡವೆಲ್ಲ ಕಾಳಿಪಾದ ಸೇರಿಸಿ ಸಮಾಜಕಡಲ ಸದ್ಭಾವವ ಜಾಗೃತಗೊಳಿಸಿ ಕ್ಷಾತ್ರ ಬಲದ ಇರುವಿಕೆಯ ಸತ್ಯ ಅರುಹಿಸಿ || 1 || ಶಿವಪ್ರತಾಪ ಧೀರಪಂಥ ಸೈನ್ಯವೇ ನಮದು ರಾಣಿ ಝಾನ್ಸಿ, ಚೆನ್ನಮ್ಮರ ಕುವರರು ನಾವು ತಾಯಮಮತೆ ಋಣಕೆ ಬಾಳ ಮುಡಿಪನಿಡುವೆವು ಧರ್ಮಕಾಗಿ ಸ್ವಾರ್ಥವನ್ನು ತೊರೆದುಬಿಡುವವು || 2 […]
ವನವಾಸ ಕಳೆದದ್ದಾಯಿತು ಬಾರೋ ರಾಮ ಒಳಗೆ ಬಯಲಲ್ಲಿ ಕಾದದ್ದಾಯಿತು ಬಾರೋ ನಿನ್ನ ಅರಮನೆಗೆ || ಪ || ಸುಖಮಯ ಭವಿಷ್ಯ ಪಣವಿಟ್ಟು ಕರಸೇವಕರು ನೂರಾರು ಯುಗಸಂಕಲ್ಪವೀಡೇರಲು ಭೀಮ ಸಾಹಸ ತೋರಿದರು ತ್ಯಾಗ ಶೌರ್ಯ ಮೆರೆಯುತಲಿ ಪೀಳಿಗೆಯಿಂದ ಪೀಳಿಗೆಗೆ ಸೃಜಿಸುತಲಿ ನವ ಇತಿಹಾಸ, ಬಾರೋ ನಿನ್ನ ಅರಮನೆಗೆ || 1 || ರಾಮನ ವಚನವು ಎಂದೆಂದೂ ಸುಳ್ಳಾದದ್ದೇ ಕಂಡಿಲ್ಲ ರಾಮನ ಬಾಣವು ಎಂದಿಗೂ ಗುರಿ ತಪ್ಪಿದ್ದೇ ನೋಡಿಲ್ಲ ನಿನ್ನಯ ಭಕ್ತರ ಸಂಕಲ್ಪ ಅಮಿತ ಭಕ್ತಿಯ ಶಕ್ತಿಗೆ ಎಂದೂ ಕೂಡ […]
ಜಯ ಜಯವೆನ್ನಿರಿ ಭಾರತಿಗೆ ಜನಹೃನ್ಮಂದಿರ ದೇವತೆಗೆ || ಪ || ಜ್ವಾಲಾಮುಖಿಯೊಳು ಉರಿಗಣ್ ತೆರೆದಿವೆ ಸುಪ್ತ ಹಿಮಾಚಲ ಶೃಂಗಗಳು ಕನ್ಯಾಕುಮಾರಿಯ ತಟದಿಂ ಹೊರಟಿವೆ ಎತ್ತರದೆಡೆಗೆ ರಥಾಂಗಗಳು ಡಮ ಡಮ ಡಮರು – ನಾದ ಶುಭಂಕರ ಮಾರ್ದನಿಗೊಳುತಿದೆ ದೆಸೆದೆಸೆಗೆ || 1 || ಸಾಗರ ಸಂಗಮ ದಾಟಿದ ಜಂಗಮ ವಿವೇಕ ಬೋಧಿಸೆ ಜಗದಗಲ ಕಾಲಡಿ ಶಂಕರ ಗೌರಿಶಂಕರ ಪೂಜೆಗೆ ಒಯ್ದನು ಹೃತ್ಕಮಲ ಹಿಂದುತ್ವದ ಹೂಂಕಾರ ಶಿವಂಕರ ಪೌರುಷ ತುಂಬುತೆ ಎದೆಎದೆಗೆ || 2 || ರಾಷ್ಟ್ರಚಿರಂತನ ಕೇಶವ ಚಿಂತನ […]
ನವ ಭಾರತ ಶಿಲ್ಪಿಗಳಾಗೋಣ ಹೊಸ ಬಾಳಿನ ಭಾಗ್ಯವ ಬರೆಯೋಣ || ಪ || ಗಂಗೆಯ ತಂದ ಭಗೀರಥನಂತೆ ವಿಷವನು ಉಂಡ ನಂಜುಂಡನಂತೆ ತಪವನು ಗೈದು ವಿಷವನ್ನು ಕುಡಿದು ಸಮಾಜ ದೇವಗೆ ಪ್ರಾಣವ ಎರೆದು || 1 || ಕಾಣುವ ಅರಿಗಳ ಅಟ್ಟುತ ಯೋಧರು ಕಾಣದ ವೈರಿಯ ಮೆಟ್ಟುತ ವೈದ್ಯರು ಕಾಯಕ ಯೋಗಿಯ ತರದಲಿ ರೈತರು ತಾಯಿಯ ಕಷ್ಟವ ತೊಳೆಯುತಲಿಹರು. || 2 || ನವ ಚೈತನ್ಯದ ನವ ಕುಸುಮಗಳು ಕಾಣುತ ಹೊರಟಿವೆ ನವ ಕನಸುಗಳು ಭಾರತ ಮಾತೆಯು […]