ಕಡಲತಡಿಯ ಸಿಡಿಲ ಸಂತನ ಮನಸಿನಾಳದ ಕಿಡಿ ನುಡಿ ಎದ್ದುನಿಂತಿಹ ಹಿಂದು ತರುಣನೆ ಮುಂದು ಮುಂದಕೆ ನಡಿ ನಡಿ || ಪ || ತರುಣ ಹೃದಯಕೆ ಮನಕೆ ನಯನಕೆ ಭಾವಬಿಂಬಕೆ ಕನ್ನಡಿ ವಿಶ್ವವಿಜಯದ ಯಶದ ಕಥನಕೆ ಬರೆದ ಸುಂದರ ಮುನ್ನುಡಿ || 1 || ಅಡಿಯ ಮುಂದಿಡೆ ಸ್ವರ್ಗ ಕಾದಿದೆ ಹಿಂದಕುಳಿದಿದೆ ನರಕವು ಮುಂದೆ ಗುರಿ ಇದೆ ಗುರುವು ಜತೆಗಿರೆ ನಿತ್ಯ ಸಾಧನೆ ಮಾರ್ಗವು || 2 ||
ಜಗಳವೇತಕೆ ಯುಗಳ ಭಾಷೆಯು ಮಗಳ ಸಮವಹುದಾಕೆಗೆ ಮುಗುಳು ನಗುತಲೆ ತೊದಲ ತಿದ್ದುವ ದಾತೆ ಸಂಸ್ಕೃತ ಮಾತೆಗೆ || ಪ || ತಮಿಳು ಚಂದನ ಕಂಪು ಕನ್ನಡ ಮುರಳಿನಾದದ ಕೈರಳಿ ಅರಳಿ ನಗುತಿಹ ಸುಮಗಳೆನಿತಿವೆ ಭರತಮಾತೆಯ ಬನದಲಿ || 1 || ಪ್ರತಿಪದವು ಪ್ರತಿ ಪದೆಯದಾಗಲಿ ನವಶಕೆಯ ಶಶಿಯುದಿಸಲಿ ಸೃಜಿಸಿ ಪದಗಳ ಕಾವ್ಯಕವನವ ರಚಿಸಿ ಜನಮನ ನಲಿಯಲಿ || 2 || ವಿಭಜನೆಯ ಕಿಡಿ ಕೆಡುಕಿಗಲ್ಲದೆ ಬದುಕಿಗೆಂದಿಗು ಸಲ್ಲದು ಸಭ್ಯ ಸಜ್ಜನರೆಮ್ಮ ಜನತೆಯು ಒಡಕು ಮಾತನು ಒಲ್ಲದು || […]
ಪಾಂಚಜನ್ಯದ ಕರೆಗೆ ಕರಗಿತು ದ್ವಾಪರದ ಆ ಕುರುಕುಲ ಹರಿಯು ಉರಿಸಿದ ಧ್ಯೇಯ ದೀಪ್ತಿಗೆ ಬೆಳಗಿ ಧರ್ಮದ ದೇಗುಲ || ಪ || ಅವನ ಕೆಲಸಕೆ ಮತ್ತೆ ಹೊರಟಿದೆ ಭರತ ಖಂಡ ಮನುಕುಲ ಮಾತೃ ವ್ಯಾಕುಲ ಕಳೆಯೆ ಕಲೆತಿದೆ ಕಲಿಯ ಕಲಿಗಳ ಸಂಕುಲ || 1 || ಬೆರಳು ನಲಿಯಲು ಉಲಿವ ಕೊಳಲಲು ಸ್ವಾಭಿಮಾನದ ಸರಿಗಮ ಏರು ಇಳಿತದ ಸಪ್ತಸ್ವರದಲಿ ಸಾಮರಸ್ಯದ ಸಂಗಮ || 2 || ಪಣವ ಆನಕ ಶಂಖ ಗೋಮುಖ ರಣದ ಭೇರಿಯ ವಾದನ ಸ್ಫೂರ್ತಿ […]
ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು ತೆರೆಯಿತೆ ಪರಶಿವನ ಹೃದಯದ್ವಾರ ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ || ನವಯುಗದ ದೃಷ್ಟಾರ ಯುವ ಮನದ ನೇತಾರ ವಿವೇಕದಲಿ ಆನಂದ ಕಂಡ ಸಂತ ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 || ಅಂಗನೆಯರಾಹ್ವಾನ ಅಂದಣದ ಬಹುಮಾನ ಒಂದಿನಿತು ಕುಂದಿಸದ ಧವಳ ಶೀಲ ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ ಫಾಲನೇತ್ರನ ಕರದಿ […]
ಭಾರತಿ ನನ್ನಯ ಭಾವಕೆ ಸಿಲುಕಿದ ಪದಗಳ ನೀಪರಿ ಪೋಣಿಸಿಹೆ ರಾಗಕೆ ಬರುವುದೋ ತಾಳಕೆ ಸಿಗುವುದೋ ಭಾವಕೆ ಅರ್ಥವ ನಾನರಿಯೆ || ಪ || ನಿನ್ನಯ ಸಿರಿಮುಡಿಗೆರಗುವ ಅರ್ಹತೆ ನನ್ನೀ ಹಾರಕೆ ಇಲ್ಲ ನಿಜ ನಿನ್ನೆಯ ಮೊಗ್ಗಿದು ನಾಳೆಗು ಅರಳದೆ ನಿನ್ನಯ ಪಾದದ ಪ್ರಭೆಯಿಂದ || 1 || ನಾನಿದ ಹಾಡೆನು ಹಾಡಿಸಲಾರೆನು ಹಾಡುಗಾರನ ಹಂಗು ನನಗೇಕೆ ಕಾಡಿನ ಗಿಡದೊಳಗರಳುವ ಕುಸುಮಕೆ ಒಡೆಯನ ಗೊಡವೆಯು ಏತಕೆ ? || 2 || ಹೂವಲಿ ಚೆಲುವಿರೆ ಸವಿಮಧು ತುಂಬಿರೆ ದುಂಬಿಯು […]
ಉತ್ತರದುನ್ನತ ಹಿಮವತ್ಪರ್ವತ ದೆತ್ತರ ಬೆಳೆದಿಹ ಹೇ ಸಂತ ಸಂತಮಹಂತರ ಏಕತೆ ಸಾಧಿಸಿ ವಿಷಮತೆ ನೀಗಿದ ಧೀಮಂತ || ಪ || ಸಂತತ ಚಿಂತನ ಮಂಥನದಿಂದ ಉದಿಸಿತು ವಿಚಾರ ನವನೀತ ಸಂಘದ ಗಂಗೆಯ ಸುಂದರ ತಟದಲಿ ಸಮರಸತೆಯ ಸುರ ಸಂಗೀತ || 1 || ಬ್ರಹ್ಮಬಲದ ಜೊತೆ ಕ್ಷಾತ್ರ ಕಠೋರತೆ ಅನುದಿನ ಶಕ್ತಿಯ ಸಂಚಯನ ನಿರ್ಮೋಹತ್ವವು ನಿರಹಂಕಾರವು ಅಗಣಿತ ಗುಣಗಳ ಸಮ್ಮಿಲನ || 2 || ರಾಘವನಂದದಿ ಮಾರ್ಗವ ತೋರಿದೆ ಮೌಲ್ಯಾದರ್ಶಗಳಾಚರಿಸಿ ಮಾಧವ ತವ ಪದ ವಿರಚಿತ ಪಥದಲಿ […]
ಕೇಶವ ಸಾರಿದ ಸೂತ್ರವಿದೊಂದಕೆ ಮಾಧವ ಬರೆದನು ಭಾಷ್ಯವನು ಜ್ಞಾನ ಮಧುವ ಸವಿಸುಧೆಯನು ಉಣಿಸುತ ಕಳೆದನು ಜನಮನ ಕ್ಲೈಬ್ಯವನು || ಪ || ನಿರ್ಮಮ ಮನದಲಿ ಕರ್ಮವಗೈಯುವ ಧರ್ಮದ ಮರ್ಮವ ಬೋಧಿಸಿದ ಗುರುತರ ಹೊಣೆಯನು ಹೊರುತಲಿ ಗುರುವರ ಭಾರತದೇಕತೆ ಸಾಧಿಸಿದ || 1 || ಭಾಷೆ ಪ್ರದೇಶದ ಜಾತಿಯ ದ್ವೇಷದ ವಿಷಮ ವಿಷವು ಇದೋ ನಶಿಸುತಿದೆ ಸಮರಸ ಭಾವವು ವಿಕಸನ ಗೊಳುತಿದೆ ಗೀತ ಸಂದೇಶವು ನೆನಪಲಿದೆ || 2 || ಅಗಣಿತ ಮತ ಪಥದೊಳಗಿಹ ಸಂತರ ಮನಸಿನ ಅಂತರ […]
ಸಮಾಜ ವೀಣೆಯ ಮೀಟಿದ ಮಾಧವ ಮೊಳಗಿತು ಸುಮಧುರ ಝೇಂಕಾರ ಪ್ರತಿಧ್ವನಿಸಿ ಅನುರಣಿಸಿತು ಎಲ್ಲೆಡೆ ಸಮಸರತೆಯ ಸ್ವರ ಸಂಚಾರ || ಪ || ಜಾತಿಯ ದ್ವೇಷವು ಭೀತಿಯ ಅಳಿದಿದೆ ಪ್ರೀತಿಯ ಪ್ರೇಮದ ಸಂಚಲನ ಕಳೆಯನು ಕಳೆದು ಬೆಳೆಯನು ಬೆಳೆದು ಸ್ನೆಹದ ಧರ್ಮದ ಸಂಕಲನ || 1 || ವಿರಸವು ಅಳಿಯಿತು ಸರಸವು ಬೆಳೆಯಿತು ಸಮರಸ ಜೀವನ ರಸಪಾಕ ಸುಮಧುರ ಗಾನದ ಪಂಚಾಮೃತದಲಿ ಮಾತೆಯ ಮಾರುತಿಗಭಿಷೇಕ || 2 || ಜಾತಿಪ್ರದೇಶದ ಭಾಷೆಯ ಸ್ವರಗಳು ರಾಷ್ಟ್ರದ ಶ್ರುತಿಗೆ ಸಮೀಕರಣ ನಾಡಿನ […]
ನಾನೇರಿದೆತ್ತರಕ್ಕೆ ನೀನೇರ ಬಲ್ಲೆಯಾ? ಕೇಳಿತೆ ಉತ್ತರದ ಮೇರು ನನ್ನೊಡಲ ಗಾಂಭೀರ್ಯ ನಿನ್ನೊಳಗೆ ಇಹುದೇನು ಕೇಳಿತೆ ಕಡಲ ನೀರು ಮೇರುವಿನ ಸ್ಥೈರ್ಯ ಶರಧಿ ಗಾಂಭೀರ್ಯ ಗಳಿಸಿರುವ ಪರಿ ಎನಗೆ ಹೇಳು || ಮಾಧವನೆ || ಆ ತಾಯ ಮಮತೆ ಈ ಸ್ನೇಹ ಕವಿತೆ ಕಲಿಸಿದಳೆ ತಾಯಿ ತುಂಗೆ ಜೊತೆಗೊಯ್ವ ಪ್ರೀತಿ ವಾಗ್ಝರಿಯ ರೀತಿ ನೀಡಿದಳೆ ಸ್ಫೂರ್ತಿ ಗಂಗೆ ಗಂಗೆಯ ಸ್ನಾನ ತುಂಗೆಯ ಪಾನ ಸರಿಸಮವು ನೀನಿರಲು ನಮಗೆ || ಮಾಧವನೆ || ಆ ಬಾನು ಅವನು ಬೆಳಗುವನು ಬಾನು […]
ಹದಿಹರೆಯದ ಕುದಿ ಹೃದಯದ ಯುವಜನ ಪರಿವರ್ತನೆಯನು ಬಯಸುತಿದೆ ಅವರ ಎದೆಬಡಿತದ ಗತಿ ಮನ ಮಿಡಿತದ ಶ್ರುತಿ ರಾಷ್ಟ್ರದ ಜತೆ ಮೇಳೈಸುತಿದೆ ಕಸವನು ಕಳೆಯುತ ಮೇಲ್ಕೀಳರಿಮೆಯ ಕಸವನು ಕಳೆಯುತ ಹಿಂದುತ್ವದ ಹೊಸ ಸಂಕ್ರಮಣ ಹಳೆಹೊನ್ನಿಗೆ ಮರು ಮೆರುಗನು ನೀಡುತ ವಸುಮತಿಯೊಡತಿಗೆ ಆಭರಣ ಸಂಘದ ತರುವಿನ ಸಾಸಿರ ಶಾಖೆಗೆ ಸಮರಸ ಸುಮಲತೆ ತಬ್ಬಿಹುದು ವಿಕಸಿತ ಸುಮಗಳು ಚೆಲ್ಲಿಹ ಪರಿಮಳ ದೇಶವಿದೆಶಕು ಹಬ್ಬಿಹುದು ಕವನವೊ ಕಥನವೊ ಕಣದಲಿ ಕದನವೋ ರಾಷ್ಟ್ರೋನ್ನತಿಯದೆ ಉದ್ದೇಶ ಧರ್ಮದ ಕರೆಯಿದೆ ಕ್ಷಾತ್ರದ ನೆರವಿದೆ ಮೊಳಗಿದೆ ಭಾರತ ಜಯಘೋಷ