ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ ಎಲ್ಲ ಭೋಗವ ಬದಿಗೆ ಇಟ್ಟು, ಆರೋಗ್ಯವಂತರಾಗಲು ಇಂದು|| ಪ || ರೋಗ-ರುಜಿನವಾ ದೂರವಿರಿಸಲು, ಪ್ರತಿದಿನ ಹರುಷದಿ ಬದುಕಲು ನೀವು ಋಷಿ ಪುಂಗವರ ನೆನೆಯುತ ನೀವು, ಸಾಧಕರಾಗಿ ಬೆಳೆಯಲು ಎಲ್ಲರು ||ಯೋಗ..|| ಸೂರ್ಯನಮಸ್ಕಾರ ಮಾಡಲು ದಿನವೂ, ಸಂಪೂರ್ಣ ಫಲವ ಪಡೆವಿರಿ ನೀವು| ಪ್ರಾಣಾಯಾಮವ ಮಾಡಲು ನಿಮಗೆ, ನೂರು ವರುಷದ ಆಯುಷ್ಯವಿಹುದು ||ಯೋಗ ..|| ವಜ್ರಕಾಯವ ಗಳಿಸಲು ನೀವು ವಜ್ರಾಸನವ ಮಾಡಿಯೇ ನೋಡಿ ಚುರುಕುತನದ ಬುದ್ಧಿಗಾಗಿ, ಶೀರ್ಷಾಸನವ ಮಾಡಿಯೇ ನೋಡಿ||ಯೋಗ..|| ಅರ್ಧ ತಾಸಿನ […]
ದಕ್ಷತೆಯಿಂದಲಿ ರಕ್ಷೆಯ ಕಟ್ಟುವ ಹಿರಿಮೆಯ ನೆನಪಿಸುತ ಇದರೊಲುಮೆಯ ಗಮನಿಸುತ | ಅಕ್ಷಯವಾಗಲಿ ಲಕ್ಷ್ಮಣ ಪ್ರೀತಿಯು ಸಮರಸ ಮೆರೆಯಲಿದೋ ಜಗವನೆ ಬೆಳಗಲಿದೋ || ಪ || ಮೇಲು-ಕೀಳಿನ ಭೇದವ ಮರೆಯುವ ಬಡವ-ಬಲ್ಲಿದ ಭಾವವ ನೀಗುವ ಪಂಡಿತ-ಪಾಮರ ತರತಮ ತೊರೆಯುವ ಜಾತಿ ಧರ್ಮವ ಮರೆಯುತ ಒಲವಲಿ ಕಟ್ಟುವ ಕೈಗಳಿಗೇ…ತಟ್ಟಲಿ ಮನಗಳಿಗೆ || 1 || ಪುರಾಣದಿಂದಲೂ ರಕ್ಷೆಯ ಮಹಿಮೆ ಚರಿತೆಯಲೂ ಇದೆ ಇದರದೇ ಹಿರಿಮೆ ಸೋದರ ಭಾವವು ಸೋದರಿ ರಕ್ಷಣೆ ಇಂದಿನ ದಿನದೀ ಎಲ್ಲರ ಭದ್ರತೆ ನಮದದು […]
ಆಕಾಶಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ ಕಣ್ಣು ಬೇರೆ, ನೋಟ ಒಂದು ನಾವು ಭಾರತೀಯರು || ಪ || ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ ನಮ್ಮ ಯೋಧರೆತ್ತಿಹಿಡಿದ ನಮ್ಮ ಧ್ವಜದ ನೆರಳಿನಲ್ಲಿ ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ ಭಾಷೆ ಬೇರೆ ಭಾವವೊಂದು ನಾವು ಭಾರತೀಯ || […]
ಶ್ರೀಗಂಧಾ ಈ ನೆಲದ ಮಣ್ಣಿದು ತಪೋವನವು ಪ್ರತಿ ಗ್ರಾಮವು ಪ್ರತಿ ಮಗಳೂ ಆ ದೇವಿಯ ರೂಪ ಪ್ರತಿ ಮಗನೂ ಶ್ರೀರಾಮನು || ಪ || ಪ್ರತಿ ಶರೀರ ಮಂದಿರದೊಲು ಪಾವನ ಪ್ರತಿ ಮಾನವ ಉಪಕಾರಿಯು ಸಿಂಹವೇ ಇಲ್ಲಿ ಮಕ್ಕಳ ಆಟಿಕೆ ಹಸುವೇ ಇಲ್ಲಿದೋ ತಾಯಿಯು ಬೆಳಗಿನ ಸಮಯದಿ ಶಂಖದ ಧ್ವನಿಯು ಸಂಜೆಗೆ ತಪ್ಪದೆ ಜೋಗುಳವು ||ಪ್ರತಿ ಮಗಳೂ|| ಕರ್ಮದ ಮೇಲೆ ಭಾಗ್ಯವು ಬದಲು ಶ್ರಮನಿಷ್ಠೆಗಳೇ ಕಲ್ಯಾಣವು ತ್ಯಾಗ ತಪದ ಪಾರಾಯಣ ಗೈವ ಕವಿ ಮನಸಿನ ಸಿಹಿವಾಣಿಯು ಜ್ಞಾನವು […]
ಓ… ಗುರುವೇ ವಂದನೆ ಓ… ಗುರುವೇ ಶಿರವಂದನೆ || ಪ || ನಿಮ್ಮ ಪೂಜಿಪ ಕೋಟಿ ತರುಣರ ಹೃದಯ ಚೇತನ ನೂತನ ರಾಷ್ಟ್ರ ಪಟದಲಿ ದಿಟ್ಟ ಧೀರರ ಕ್ಷಾತ್ರ ತೇಜದ ಪ್ರಸರಣ || 1 || ಯಜ್ಞ ಜ್ವಾಲೆಯು ನಭದಿ ಚಿಮ್ಮುತ ಧರ್ಮ ದಾರಿಯ ಬೆಳಗುತಾ ಹಿಂದು ಕನಕದ ಹೊಳಪು ಹೆಚ್ಚಿಸಿ ಘನತೆ ಮೆರೆಸಿದೆ ಅನುದಿನ || 2 || ಅರಿಗಳೆದೆಯಲಿ ಒಲವು ಪಸರಿಸಿ ರಾಷ್ಟ್ರವಾಗಿಸೋ ಸಾಧನಾ ಗತಇತಿಹಾಸದ ಡಮರುಗ ಬಾರಿಸಿ ಸತ್ಯಸಾರುವ ಶಿವನರ್ತನ || 3 […]
ರಾಷ್ಟ್ರ ಚೇತನ ಸಂಘ ಮಂಥನ ಅನುಭವ ಸಿಹಿ ಸಿಂಚನ || ಪ || ದೇಶದೆಲ್ಲೆಡೆ ದಾಸ್ಯ ಭಾವನೆ ಕಿತ್ತು ಎಸೆಯುವ ಚಿಂತನ ಎಲ್ಲರೊಂದೇ ಎಂದು ಸಾರುವ ಮಮತೆ ಕಡಲಿನ ಜೀವನ || 1 || ಈ ನಾಡಿನೊಳಗಿರುವವರು ಎಲ್ಲರೂ ಹಿಂದೂ ಎನ್ನುವ ದೀಪವ ಎಲ್ಲರ ಎದೆಯೊಳಗೆ ಬೆಳಗಿಸಿ ಸತ್ಯ ಸಾರುವ ಸಾಧನ || 2 || ಎಲ್ಲ ಜೀವಕು ದೈವ ಸ್ಥಾನವ ನೀಡೋ ನಾಡಿದು ಭಾರತ ವಿಶ್ವವೇ ಒಂದೆಂದು ಸಾರುವ ಪರಮ ವೈಭವದಾ ರಥ || 3 […]
ಸುರಕ್ಷೆಯ ರಕ್ಷೆಯ ಕಟ್ಟುತ ನಾವು ಮುಂದಡಿಯಿಟ್ಟು ಸಾಗೋಣ ವೇದದ ನಾಡಲಿ ಭೇದವ ತೋರದೆ ಭ್ರಾತೃತ್ವದ ಸೆಲೆ ಬೆಳೆಸೋಣ || ಪ || ದಿವ್ಯ ಪರಂಪರೆ ಗತವೈಭವವನು ನೆನಪಿಸೊ ಪುಷ್ಪವ ಧರಿಸೋಣ ಮೇಲುಕೀಳುಗಳ ಕಳೆಯನು ಕೀಳುತ ಮಾನವತೆಯ ಮಧು ಸವಿಯೋಣ || 1 || ಭಾಷಾಪ್ರಾಂತದ ನಡುವಿನ ಮುನಿಸಿಗೆ ಇಂದಿಗೆ ಮಂಗಳ ಹಾಡೋಣ ಸೋದರತ್ವದ ಕಂಪನು ಬೀರುತ ನಾಡಿನ ಏಳ್ಗೆಗೆ ಶ್ರಮಿಸೋಣ || 2 || ಹೆಜ್ಜೆಹೆಜ್ಜೆಗೂ ಹೃದಯವ ಬೆಸೆಯುತ ರಾಷ್ಟ್ರದ ತೇರನ್ನೆಳೆಯೋಣ ಮಾತೃಮಂದಿರದ ರಕ್ಷಣೆ ಕಾರ್ಯಕೆ ಎಲ್ಲೆ […]
ಸಾವಿಗಂಜದ, ಸೋಲಿಗಳುಕದ ಸಿಡಿಲಿನಬ್ಬರ ಹೃದಯಕೆ ರಾಷ್ಟ್ರಭಕ್ತಿಯ ಗಂಗೆ ಹರಿಯಲಿ ಸ್ವಾರ್ಥವಿಲ್ಲದ ಜೀವಕೆ || ಪ || ಎದುರು ನಿಲ್ಲಲಿ ಕೋಟಿ ಶಕ್ತಿಯು ಹೊಸಕಿಹಾಕುವ ಬಲವಿದೆ ತಾಯಿ ಭಾರತಿ ಚರಣಕೆಮ್ಮಯ ರುಧಿರಗೈಯುವ ಛಲವಿದೆ || 1 || ರಾಷ್ಟ್ರನಿಷ್ಠರ ದಿವ್ಯ ಜೀವನ ಎಮ್ಮ ನಡಿಗೆಯ ಮುಂದಿದೆ ಹಿಂದೆ ಸರಿಯುವ ಮನಸೇ ಇಲ್ಲ ನಾಡ ಮೆರೆಸುವ ಕಾರ್ಯಕೆ || 2 || ತಿರುಚಿದಿತಿಹಾಸವನು ಬದಲಿಸಿ ಸತ್ಯ ಹಣತೆಯ ಬೆಳಗಿರಿ ಕ್ರಾಂತಿವೀರ ವಿವೇಕರೆದೆಯ ಕನಸು ನನಸುಗೊಳಿಸಿರಿ || 3 ||
ಆ ಶಿವನ ದೇಶಿಕನ ಧ್ಯೇಯಕೆ ನಮನಾ…. ರಾಷ್ಟ್ರಪಾಲ ಧೀರತೇಜ ವೀರಧೀರ ನೀನೆಮ ಶಿವ ರಾಷ್ಟ್ರಪಾಲ ಧೀರತೇಜ ವೀರಧೀರನೇ…… ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲಿಹ ನಷ್ಟದಲಿಹ ಜನರಿಗಿವ ಶಿವಸದೃಶ ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲು ನಷ್ಟದಲು ತಂದನು ಹರುಷ ತ್ಯಾ….ಗಿಯಿವಾ, ಯೋಗದಿ ರತನೂ… ಭೋ…ಗಪರಾ…ಪುರಜನರ ಸರಿಪಡಿಸುವ ತ್ಯಾ….ಗಿಯಿವಾ, ಯೋಗದಿ ರತನೂ…. ಭೋ…ಗಪರಾ…ಜಡಮತಿಯ ಹರಾ… ಭಾರತಭಕುತ ವಿಜಯಕೆ ತುಡಿತ ಕಾರ್ಯದಿ ನಿರತ ಶಿವನನವರತಾ ಭಾರತ ಭಕುತ ವಿಜಯಕೆ ತುಡಿತ ಅನವರತ ನಮತುಡಿತ ಜಡತೆಗೆ ಥಳಿತಾ……
ಜಡತೆಯನು ಕೊಡಹುತಲಿ ಮೇಲೆದ್ದೇಳು ಹಿಂದುಕೇಸರಿ ದೃಢತೆಯನು ತಳೆ ಧ್ಯೇಯಮಾರ್ಗದಿ ಚಿರಪುರಾತನ ರಣಕಲಿ || ಪ || ಮರೆಯದಿರು ನೀನಿಂದ್ರಪ್ರಸ್ಥದ ಪಾಂಡವರ ಕುಡಿಯೆಂಬುದ ಅರಿಯುತಿರು ಚಾಣಕ್ಯ ಮೌರ್ಯರ ವಾರಸಿಗ ನೀನೆಂಬುದ ಬರವದೇತಕೆ ಬಂತು ನಿನ್ನಲಿ ಛತ್ರಪತಿ ಶಿವ ಶೌರ್ಯದ ಕರದೊಳೇತಕೆ ಮಾಯವಾಯಿತು ರಣಪ್ರತಾಪನ ಆಯುಧ || 1 || ಭಾರತದ ಅವನತಿಗೆ ಕಾರಣ ಮಾಯವಾಗಿಹ ಕ್ಷಾತ್ರತೆ ಮೇರುಸದೃಶ ಪರಾಕ್ರಮವು ಪಾತಾಳಕಿಳಿದಿಹ ದೈನ್ಯತೆ ಏರು ಮೇಲೇರೇರು ತೋರುತ ನಿನ್ನ ಕ್ಷಾತ್ರಪರಂಪರೆ ಸಾರು ಭಾರತ ಬ್ರಹ್ಮಕ್ಷಾತ್ರದ ಸಾಮರಸ್ಯ ಮಹಾಧರೆ || 2 […]