ಅಡಿಯಿಡು ಮುಂದೆ ಗುರಿಯೆಡೆಗಿಂದೇ

ಅಡಿಯಿಡು ಮುಂದೆ ಗುರಿಯೆಡೆಗಿಂದೇ ನಿರ್ಧಾರದ ಕಾಲ ಬಂದಿದೆ ಹಿಂದುರಾಷ್ಟ್ರದುತ್ಥಾನದ ಕಾಲ ಬಂದಿದೆ || ಪ || ಸಂಕಲ್ಪದ ಸಂತೋಷದಿ ತನುಮನ ಪುಳಕ ಸಂಕ್ರಾಂತಿಯ ಸಂಧಾನವು ತರಲಿದೆ ಬೆಳಕ ಧ್ಯೇಯದೃಷ್ಟಿಗೋಚರ, ಜಾರದಿರು ಇದೆಚ್ಚರ ನಿರ್ಧಾರದ ಕಾಲ ಬಂದಿದೆ || 1 || ಕಜ್ಜಕಾಗಿ ಉಜ್ಜಗಿಸಲಿ ವಜ್ರಶರೀರ ದುರ್ದೆಸೆಯನು ದೂರಗೊಳಿಸು ಉದ್ಯಮವೀರ ಆಲಸ್ಯವನೋಡಿಸು, ಆದರ್ಶವ ಪಾಲಿಸು ನಿರ್ಧಾರದ ಕಾಲ ಬಂದಿದೆ || 2 || ಜನರೆದೆಯಲಿ ಅನುರಣಿಸಿದೆ ಹಿಂದು ಸುಸ್ವರ ತಮಹರಿಯಿತು ಜಗವರಿಯಿತು ಬಂದ ಭಾಸ್ಕರ ತೊಲಗಲಿನ್ನು ವ್ಯಾಕುಲ, ಬೆಳಗು […]

Read More

ಅನುಪಮ ಆದರ್ಶದ ನುಡಿಯೊಂದಕೆ

ಅನುಪಮ ಆದರ್ಶದ ನುಡಿಯೊಂದಕೆ ದೊರೆತಿದೆ ಇಲ್ಲಿ ಉದಾಹರಣೆ ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ || ಪ || ಹಣವಿಲ್ಲ, ಹಣ ಬೆಂಬಲವಿಲ್ಲ ಅಧಿಕಾರದ ಅಂದಣವಿಲ್ಲ ಬಣವಿಲ್ಲ ಜನ ಬೆಂಬಲವಿಲ್ಲ ಅನುಕೂಲತೆಗಳ ಸುಳಿವಿಲ್ಲ ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ || 1 || ರಾಷ್ಟ್ರಭಕ್ತಿ ಸದ್ಗುಣಗಳನುಳಿಸದರೆ ಬಡತನವೇ ಮೈ ಮನೆಯೆಲ್ಲಾ ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ || 2 || […]

Read More

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ

ಧ್ಯೇಯದ ಹಾದಿಗೆ ಬಾಳ ನಡಿಗೆ ಸಾಗಿದೆ ಭಾವ ಹಣತೆ ಉರಿದಿದೆ ತಾಯ ಗುಡಿಯ ಬೆಳಗಿದೆ  || ಪ || ಕರದಿ ಸಂಘ ಸೂತ್ರ ಹಿಡಿದು ಭರದಿ ಹಿಂದು ತೇರನೆಳೆದು ತರತಮ ವಿಷ ಕಳೆಯ ಕೀಳಿ ಪರಕೀಯತೆ ಪದರ ಸೀಳಿ ಸಂಘ ಮಂತ್ರ ಜಪಿಸುತ ಬಂಧು ಭಾವ ಬೆಳೆಸುತ  ||  1 ||   ಸ್ವಾರ್ಥ ಭಾವ ದೂರಗೊಳಿಸಿ ಕೀರ್ತಿ ಮೋಹ ಬದಿಗೆ ಸರಿಸಿ ಅರಳಿಸುತಲಿ ಶುದ್ಧ ಶೀಲ ಅರ್ಪಿಸುತಲಿ ಬದ್ಧ ಬಾಳ ಬನ್ನಿ ತಾಯ ಸೇವೆಗೆ ಉರಿಸಿ ಕಾಯ ದೀವಿಗೆ  […]

Read More

ಯುಗದ ನಿರೀಕ್ಷೆಯ ಬಸಿರಿಂದ

ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ    || ಪ || ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ ದರಿದ್ರನಾರಾಯಣೋಭವ ! ಇದೆ ಆಧ್ಯಾತ್ಮದ ತಿರುಳೆಂದ – ಯುಗಪುರುಷ ವಿವೇಕಾನಂದ        || 1 || ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು ಮರಳಿ […]

Read More

ಮಧುಮಾರ್ಗವಿರಲಿ

ಮಧುಮಾರ್ಗವಿರಲಿ, ಈ ಸಾಧನೆಯ ಪರ್ವದಲಿ ತನುವಾಗಿ ಮನವಾಗಿ ಅವ ತುಂಬಿ ಬರಲಿ || ಪ || ಸೀಳೊಡೆದ ಬಿರುಸ್ವರವು ಮೊರೆದು ಕೇಳಿಹ ಕಾಲ ತಾಯೊಡಲ ಮುಡಿಗಳಲಿ ಪರದುರುಳ ಜಾಲ ಅಂಜುವೆದೆ ನಮದಲ್ಲ ಅವನೆಂದ ನುಡಿಗಳ ನಿಜವಿಂದು ಮಾಡುವೆವು ಎದುರಿಸಿ ಸವಾಲುಗಳ || 1 || ಪರಜಾತಿ ಕಿರಿಜಾತಿ ಮನದಿ ಕುಣಿದಿಹ ಗಳಿಗೆ ತರತಮವು ದೇವರಿಗೂ ಬಿಡರು ಗುಡಿಯೊಳಗೆ ಹಿಂದು ಪತಿತನು ಅಲ್ಲ ಎಂಬವನ ನಂಬಿಕೆ ಒಂದಾಗಿ ಸಾಕಾರಗೊಳಿಸುವೆವು ಇಂದಿಗೆ || 2 || ಜಾಗರಣ ಮನೆ-ಮನೆಗೆ ಮೂಡಿಸುವ […]

Read More