ಅಮ್ಮನ ಸಮವಲ್ಲವೇ ಮನುಜ

ಅಮ್ಮನ ಸಮವಲ್ಲವೇ ಮನುಜ ನಮ್ಮಯ ಗೋಮಾತೆ ಅಮೃತದಂತಹ ಹಾಲನ್ನುಣಿಸುವ ಪ್ರೀತಿಯ ಜಗನ್ಮಾತೆ || ಪ || ದುಷ್ಟರು ಶಿಷ್ಟರು ಭೇದವ ತೋರದೆ ಕಾಣುವಳಲ್ಲ ಮಗುವಂತೆ ಉಸಿರಿರುವನಕವು ಕೆಡುಕನು ಬಯಸದೆ ಪೊರೆಯುವಳಲ್ಲ ತಾಯಂತೆ || 1 || ಮಾತೆಯ ಸಹನೆಗೆ ಸಾಟಿಯದಾವುದು ತುಂಬಿದ ಒಡಲು ಒಲವಿಂದ ಗೋ ಒಲುಮೆಯನು ಪಡೆದು ಬದುಕಲು ಜೀವನವೇ ಬಲು ಚಂದ || 2 ||

Read More

ಭಾರತೀಯ ಹೃದಯವಿಂದು

ಭಾರತೀಯ ಹೃದಯವಿಂದು ರಾಷ್ಟ್ರ ದೇವನಾಲಯ ಯುವ ಮನಸಿನ ಭಾವದಲೆಗೆ ರಾಷ್ಟ್ರಭಕ್ತಿ ಶ್ರುತಿ ಲಯ ಕಲೆ-ಸಂಸ್ಕೃತಿ, ಕಥೆ-ಕವನದಿ ಗುರುಭಾರತ ಪರಿಚಯ ಮನುಜಕುಲದ ಉನ್ನತಿಯೇ ತರುಣ ಗಣದ ಆಶಯ || ಪ || ಅನ್ವೇಷಣೆ, ಉತ್ಖನನವು ಹೊಸ ಪುರಾವೆ ನೀಡಿದೆ ಭರತ ಭುವಿಯ ಹಿರಿಮೆಯರಿಮೆ ಹೊಸ ದಿಶೆಯನು ತೋರಿದೆ ದಿಟದ ಚರಿತೆಯರಿತು ಜಗವು ನತಮಸ್ತಕವಾಗಿದೆ ವಿದ್ವಜ್ಜನ ಸಂದೋಹದ ಮಣಿ ಮುಕುಟವು ಮಣಿದಿದೆ || 1 || ಪ್ರತಿಯೋಧನ ಎದೆಗುಂಡಿಗೆ ವಿಶ್ವಾಸದ ಆಗರ ಹೊಸ ಸಾಧನ, ನವ ಚೇತನ ಉತ್ಸಾಹದ ಸಾಗರ […]

Read More

ಜಯಜಯ ಗೋಮಾತೆ (ಗೋ ಆರತಿ)

ಜಯಜಯ ಗೋಮಾತೆ, ಅಂಬ ಜಯ ಜಯ ಗೋಮಾತೆ || ಪ || ದಿವಿಜರಿಗಾಶ್ರಯದಾತೇ,ತಾಯೇ ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ || 1 || ಅನುದಿನ ಸೇವೆಯ ಗೈವೆ, ತಾಯೆ ಕರುಣದಿ ನಮ್ಮನು ಪೊರೆಯೇ ವಸು ಕುವರಿಯೆ, ಆದಿತ್ಯ ಸಹೋದರಿ ರುದ್ರರ ಹಡೆದಿಹ ಮಾತೆ ನೀ ತ್ರಿಭುವನಪೋಷಿಣಿ ಮಾತೆ || 2 || ಪಾಪ ವಿನಾಶಿನಿ ತಾಯೇ, ಭವ ತಾಪ ನಿವಾರಿಣಿ ಕಾಯೇ ಕಾರುಣ್ಯದ ಖನಿ ವೈತರಣಿಯ […]

Read More

ಮತ್ತೆ ಮೂಡುತಿದೆ ಕತ್ತಲೆದೆಯಿಂದ

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ || ಪ || ಮನೆಗೆ ಕವಿದ ಇರುಳನು ತೊಳೆದು ಹಗಲ ಹಚ್ಚಿದುದೆ ಸಾಲದೆ ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು ಊರುಗೋಲಾಗಿ ಬಳ್ಳಿಗೆ || 1 || ಎಂದಿನಿಂದಲೋ ಹರಿದು ಬಂದಿರುವ ಜೀವನ ಧರ್ಮದ ಶ್ರುತಿಗೆ ಇಂದಿನ ಸ್ವರವನ್ನು ಹೊಂದಿಸಿ ಹಾಡುವ ಆಸೆ ಫಲಿಸುತಿದೆ ಬಾಳಿಗೆ || 2 || ಕಂಠ ಕಂಠದಲು ದನಿಗೊಳ್ಳುತ್ತಿದೆ ಶ್ರೀ ಸಾಮಾನ್ಯನ ಜಯಕಾರ ಮೂಲೆ ಮೂಲೆಯಲು ಮೈ […]

Read More

ರಕ್ಷೆಯನು ಕಟ್ಟುತ್ತ ಕರಪಿಡಿದು

ರಕ್ಷೆಯನು ಕಟ್ಟುತ್ತ ಕರಪಿಡಿದು ನಡೆಯೋಣ ಒಂದಾಗಿ ನಿಲ್ಲೋಣ ರಾಷ್ಟ್ರರಕ್ಷಣೆಗಿಂದು || ಪ || ಸ್ನೇಹದ ಕಂಪನ್ನು ಪಸರಿಸುವ ರಕ್ಷೆ ನೋವ ಮರೆಸುತ ಧೈರ್ಯ ತುಂಬುವಾ ರಕ್ಷೆ ಒಡೆದ ಮನಸುಗಳ ಒಂದುಗೂಡಿಸೆ ರಕ್ಷೆ ಸಂಬಂಧಗಳನುಬಂಧ ಬೆಸೆಯುವುದೀ ರಕ್ಷೆ || 1 || ಇತಿಹಾಸ ನೆನಪಿಸಲು ಕಾಲನೇ ರಕ್ಷೆ ಗುರಿಯೆಡೆಗೆ ನಡೆಯಲು ನಕ್ಷೆಯೇ ರಕ್ಷೆ ಮೇಲುಕೀಳುಗಳ ಅಳಿಸೆ ಆಯುಧವು ರಕ್ಷೆ ಎಲ್ಲರೂ ಒಂದೆಂಬ ಭಾವವೀ ರಕ್ಷೆ || 2 || ತಾಯ ರಕ್ಷಣೆಗೆ ಸಿದ್ಧಕಂಕಣವು ರಕ್ಷೆ ರಾಷ್ಟ್ರರಕ್ಷಣೆಯ ಮನವಕೊದುವಿದಿದೋ ರಕ್ಷೆ […]

Read More

ಸಿಂಧು ಸಂಸ್ಕೃತಿಯಲ್ಲಿ

ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]

Read More

ಹಿಂದು ಸಾಗರವೆ ದೆಸೆಯ ಬದಲಿಸಿದೆ

ಹಿಂದು ಸಾಗರವೆ ದೆಸೆಯ ಬದಲಿಸಿದೆ ಏನಿದೆಂಥ ಮೋಡಿ ಉಕ್ಕಿ ಮೊರೆಯುತಿವೆ ಕೋಟಿ ಅಲೆಗಳು ತಾಯಿ ಸ್ತುತಿಯ ಪಾಡಿ ವೀರ ಸಂತತಿಯ ಆವೇಶ ತನುಗಳಲಿ ಪುಡಿ ಪುಡಿಯು ಎಲ್ಲಾ ಬೇಡಿ ಬಿಂದು ಬಿಂದುವೂ ಇಂದು ಒಂದೆನುವ ಒಮ್ಮತವೆ ಜೀವನಾಡಿ || ಪ || ಇರುಳ ಸರಿಸುತಾ ಬಂದ ಬೆಳಗಿಂದು ಒಸಗೆ ತಂದಿಹಳು ಇಳೆಗೆ ವಿಶ್ವ ಮುಕುಟದ ಸರದಿ ಮೀಸಲು ತಾಯಿ ಭಾರತಿಯ ಶಿರಕೆ ಜಡತೆ ಝಾಡಿಸಿ ಛಲದಿಂದ ದುಡಿಯುವ ದಿಟ್ಟ ಹೃದಯಗಳ ಹರಕೆ ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ […]

Read More

ಬಡತನದ ಬೇಗೆಯಲಿ

ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ ಬಾಳಿನಲಿ ಬೆಳದಿಂಗಳೆನಿಸಬೇಕು ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ ಬಂಧು ಭಾವದೊಳವರ ಬೆಸೆಯಬೇಕು || ಪ || ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ ಬಧಿರತನದುರುಳಿಂದ ಬೇರ್ಪಡಿಸಬೇಕು ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 || ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ ಭರವಸೆಯ ಬೀಜವನು ಬಿತ್ತಬೇಕು ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ ಭಾರತದ ಬೇರುಗಳ ಬೆಳೆಸಬೇಕು || 2 || ಬವರದಲಿ ಬಲಿದಾನವಾಂತವರ ಬಯಕೆಯೊಲು ಭವ್ಯ ಭಾರತವನ್ನು ಬಲಿಯಬೇಕು ಭೂಮಾತೆಯಣುಗರಲಿ ಭೂಮಿ […]

Read More

ಉರಿಸೋ ಧ್ಯೇಯದೀಪ

ಉರಿಸೋ ಧ್ಯೇಯದೀಪ, ಜನಮನದ ಆಳದಲ್ಲಿ ಹರಿಸೋ ಅಮೃತಧಾರಾ, ವಿಷಮಯ ಪಾತಾಳದಲ್ಲಿ || ಪ || ದೀನ ದಲಿತ ಜನರ ಜೊತೆಗೂಡಿ ಸಾಗು ಮುಂದೆ ಒಂದೇ ತಾಯಿ ನೆಲವು ನಮ್ಮೆಲ್ಲ ಗುರಿಯು ಒಂದೆ ತೆರೆಸೋ ಹೃದಯದ್ವಾರ ವಿಭ್ರಾಂತ ಜನಗಳಲ್ಲಿ ಹರಿಸೋ ಸ್ನೇಹಪೂರ ಭ್ರಮೆಯಾಂತ ಮನಗಳಲ್ಲಿ || 1 || ಶಿಲೆಯು ಕಲೆಯಧರಿಸಿ ಇತಿಹಾಸ ಒರೆಯುತಿಹುದು ಹಿಂದೂ ಜನತೆಯಿಂದು ನಾಡನ್ನೆ ಮರೆಯುತಿಹುದು ಮೆರೆಸೋ ರಾಷ್ಟ್ರಧ್ವಜವ ಉನ್ನತಿಯ ಬಾನಿನಲ್ಲಿ ಸ್ಮರಿಸೋ ನಾಡ ಹಿರಿಮೆ ಅನುದಿನವೂ ಬಾಳಿನಲ್ಲಿ || 2 || ಬಲವ […]

Read More

ಸೇವಾ ಗಂಗೆಯಲಿ ಮಿಂದೆದ್ದು

ಸೇವಾ ಗಂಗೆಯಲಿ ಮಿಂದೆದ್ದು ಸೇವಾ ತುಂಗಾ ಪಾನವ ಗೈದು ಸೇವಾವ್ರತವನು ಪಿಡಿಯೋಣ ಸೇವಾಕಾರ್ಯದಿ ಧುಮುಕೋಣ ಸೇವಾ ಹಿ ಪರಮೋಧರ್ಮಃ || ಪ || ವಿಶ್ವವನಾವರಿಸಿಹ ಕಗ್ಗತ್ತಲ ಒಮ್ಮನದಲಿ ಬದಿಗೊತ್ತೋಣ ಧೈರ್ಯವ ತುಂಬುತ ಪ್ರತಿ ಮನದಲ್ಲೂ ಆತ್ಮವಿಶ್ವಾಸವ ಭರಿಸೋಣ ಧೈರ್ಯಂ ಸರ್ವತ್ರ ಸಾಧನಂ || 1 || ವೈದ್ಯರಂತೆ ಕಾಯಕ ಮಾಡಿ ಕಾಯಕ ಕೈಲಾಸವೆನ್ನೋಣ ದಾದಿಯರಂತೆ ಸೇವಾಕಾರ್ಯದಿ ಅನುದಿನ ಅನುಕ್ಷಣ ತೊಡಗೋಣ ವೈದ್ಯೋ ನಾರಾಯಣೋ ಹರಿಃ || 2 || ತೋರಿಕೆ ಬೇಡ ಸಮರ್ಪಣೆ ಇರಲಿ ಅಂತ:ಚಕ್ಷುವು ತೆರೆದಿರಲಿ […]

Read More