ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]
ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ || ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ || ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು […]
ನಿನ್ನರುಣ ಕಿರಣಗಳು ನಿನ್ನ ಶುಭಕರ ಬೆಳಕು ನನ್ನ ಧೀಯನು ಬಳಸಿ ಬೆಳಗೆ ಬರಲಿ || ಪ || ನಿನ್ನ ಸರ್ವಾತ್ಮದಲಿ ನನ್ನನರಿವಂದದಲಿ ನನ್ನ ಹೃದಯವ ಹಿರಿದು ಮಾಡೆಬರಲಿ || 1 || ಭೇದವೇ ನಿನಗಿಲ್ಲ ಶತ್ರು ಮಿತ್ರರು ಮಿಲ್ಲ ಒಳಿತು ಕೆಡುಕನು ದಾಟಿದಿರವು ನಿನದು || 2 || ನಾನು ನಿನ್ನಂತಾಗಿ ನಿನ್ನೊಳೈಕ್ಯನೇ ಆಗಿ ನಿನ್ನಿರವಲೇ ಜಗವನರಿವುದೆಂದು || 3 ||
ಉತ್ಸಾಹ ಚಿಮ್ಮುವ ಹರೆಯದಲಿ ಗುರಿಗಾಗಿ ಕಾತುರ ಛಲವಿರಲಿ ಥಳುಕಿನ ಚಂಚಲ ಹರಿವಿನಲಿ ದೃಢ ನಿರ್ಧಾರದ ನೆಲೆಯಿರಲಿ ||ಪ|| ಯೌವನ ಹೊಮ್ಮುವ ತನುವಿರಲಿ ಅಂಜಿಕೆ ಅಳುಕು ಕಾಡದಿರಲಿ ಪ್ರವಾಹದೆದುರು ಸೆಣಸಿನಲಿ ಅದಮ್ಯ ವಿಶ್ವಾಸ ಹುದುಗಿರಲಿ || 1 || ತಾರುಣ್ಯ ತೋರುವ ಕನಸಿನಲಿ ಹೊಸ ವಸಂತದ ಚಿಗುರಿರಲಿ ಹೊನ್ನ ಕಿರಣದ ಚೆಲುವಿನಲಿ ಭೂಮಿಯ ಬಳುವಳಿ ನೆನಪಿರಲಿ || 2 || ತುಡಿಯುವ ತೋಳಿನ ಬೀಸಿನಲಿ ಸಿರಿಯನು ಸೃಜಿಸುವ ಕಸುವಿರಲಿ ಮಿಡಿಯುವ ಹೃದಯದ ಹಾಸಿನಲಿ ಸೇವೆಯ ಆದರ್ಶ […]
ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು ನನ್ನಿಯಾ ತಿಳಿಗೊಳದಿ ನಾನೀಸಬೇಕು ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1|| ಸ್ವಾಂತರಂಜನೆಯೊಂದೇ ಏಕಾಂತದನುಭೂತಿ ಪರ ಹಿತ ಪಥವಹುದು ಪರಮಪದಕೆ ಸಮರಸದ ಸಂಹಿತೆಯು ಸಮನಿಸುವ ಸುಮ ಮನವು ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2|| ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು ಪೂರ್ವ ನಿಗದಿತ ಕಾರ್ಯ; ಕರಣ ನಾನು ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ ಸಿದ್ದಿಸಿದ ಜೀವನವು ಮಧುರ ಜೇನು ||3|| ದೃಶ್ಯದನುಭವಕಿಹುದು ಪರಿಮಿತಿಯ […]
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || ಪ || ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 1 || ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ? ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ || 2 || ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ? ಚಿನ್ನದಿಂದ […]
ಪುಣ್ಯಭೂಮಿಯಲಿ ಧ್ಯೇಯದ ಗುಡಿಯು ಗುಡಿಯಲಿ ಅರಳಿವೆ ಅಸಂಖ್ಯ ಸುಮವು ನಡೆದಿದೆ ರಾಷ್ಟ್ರದ ಅರ್ಚನೆಯು || ಪ || ಈಶನ ಕಾರ್ಯಕೆ ಜನಿಸಿದ ಕಾಯ ತುಂಬಿದೆ ಸೋಲರಿಯದ ಬಲ ಧೈರ್ಯ ಧಮನಿ ಧಮನಿಯಲಿ ಹರಿದಿದೆ ಶೌರ್ಯ ನಾಡ ರಕ್ಷಣೆಗೆ ಅನುದಿನವು || 1 || ಜಗ ತಲೆಬಾಗುವ ಶೀಲದ ನಡತೆ ಜನಮನ ಬೆಳಗುವ ಜ್ಞಾನದ ಹಣತೆ ಸಂಚಯ ನವನೇತೃತ್ವದ ಕ್ಷಮತೆ ಅಮಿತೋತ್ಸಾಹದಿ ಕ್ಷಣಕ್ಷಣವು || 2 || ಅಂಜದೆ ಸವಾಲುಗಳ ಸ್ವೀಕರಿಸಿ ಗೆಲ್ಲುವ ಛಲ […]
ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು || ಪ || ಗಣಪತಿಯ ಪದತಲಕೆ ಶರಣು ಶರಣೆಂದು ನವದುರ್ಗೆ ಜಗಕೆಲ್ಲ ಶುಭವ ತರಲೆಂದು ಈಶ ನಿಮಗತ್ಯಧಿಕ ಫಲವ ಕೊಡಲೆಂದು ವಿಜಯ ದಶಮಿಯು ನಮಗೆ ಜಯವ ತರಲೆಂದು || 1 || ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು (ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು) ಧನಕನಕ ಗೋಭಾಗ್ಯ ನಿಮಗೊದಗಲೆಂದು ಸಾವಯವದಿಂದನ್ನ ನಮಗೊದಗಲೆಂದು ಹೂ ಕೋಲ ದರುಶನದಿ ಶುಭವು ನಿಮಗೆಂದು || 2 || […]
ಸ್ಫೂರ್ತಿಯ ಚಿಲುಮೆಯಿದು ಎಂದಿಗೂ ಸಾಧಕ ಜನರಿಗೆ ಪ್ರೇರಣೆ ನೀಡುವ || ಪ || ಸಾವಿಗೆ ಅಂಜದೆ ಸೋಲಿಗೆ ಬೆದರದೆ ಚಿರಸ್ಥಿರ ಚಿತ್ತದಿ ಸ್ಫೂರ್ತಿಯ ನೀಡಿದ ಧರ್ಮೋನ್ನತಿಯಾ ಮುಕ್ತಿಯ ಪಥವನು ನಿಜಜೀವನದೊಳು ಸಾಧಿಸಿ ಬೆಳಗಿದ || 1 || ದೇಹದ ಕಣಕಣ ಜೀವನ ಕ್ಷಣಕ್ಷಣ ಬತ್ತಿಯ ತೆರದಲಿ ಉರಿಸುತ ಜ್ವಲಿಸಿದ ಧ್ಯೇಯದ ದೀಪ್ತಿಯ ಅಗಣಿತ ಮನದಲಿ ಬೆಳಗಿಸಿ ಬದುಕನು ಸಾರ್ಥಕಗೊಳಿಸಿದ || 2 || ಗುರುಕುಲ ಸಂಸ್ಕೃತ ಭಾರತ ದರ್ಶನ ಕೃಷಿ ಪರಿವಾರದ ಕಲ್ಪನೆಯನು […]
ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು ಹೇ ವತ್ಸಲೇ ಹೇ ದುರ್ಗಾಮಾತೆ ಮಂಗಲದಾತೆ ಪರಮಪುನೀತೆ ಪುಣ್ಯವಂತೆ ಕರ್ತವ್ಯನಿರತೆ ಓಂ ನಮಸ್ತೇ ಶ್ರೀ ನಮಸ್ತೇ || ಪ || ಹಿಂದೂರಾಷ್ಟ್ರದ ಅವಯವಗಳು ನಾವು ಆದರದಿಂದಲಿ ಪೂಜಿಸುವ ನಾವು ನಿನ್ನಯ ಸೇವೆಗೆ ಬದ್ಧರು ನಾವು ಆಶೀರ್ವಾದವ ಕೋರುವ ನಾವು || 1 || ವಿಶ್ವವೇ ಜಯಿಸದ ಶಕ್ತಿಯ ನೀಡೆ ಜ್ಞಾನದ ನೆರಳ ವಿವೇಕವ ನೀಡೆ || ಜಗವೇ ನಮಿಸುವ ಶೀಲವ ನೀಡೆ ಕಂಟಕ ಅಳಿಸುವ ಜ್ಞಾನವ ನೀಡೆ || […]