ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ

ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ ತೊರೆದು ಮೇಲೇಳ್ ಸೋದರ | ಪ್ರೀತಿ ಗೌರವ ತ್ಯಾಗದಿಂ ಕ – ಟ್ಟೋಣ ಭಾರತ ಮಂದಿರ || ಪ || ಗಾಳಿ ನೀರು ಮಣ್ಣು ಮರಕೆ ನಮ್ಮ ಬೆಳೆಸಿದ ಪ್ರಕೃತಿಗೆ | ಏನ ಕೊಟ್ಟೆವು ತಿರುಗಿ ನಾವು ತ್ಯಾಜ್ಯ ಮಲಿನತೆ ವಿಕೃತಿಯ || 1 || ಸತ್ಯ ಧರ್ಮ ನ್ಯಾಯ ನೀತಿ ತ್ಯಾಗ ನಿಷ್ಠೆಯ ಕಲಿಯದೆ | ಶೌರ್ಯ ಸಾಹಸ ಧ್ಯೇಯ ಮೆರೆಯದ ಬದುಕು ತರವೇ ಬಾಳದೇ || 2 || […]

Read More

ಒಳಗಿನ ಕಣ್ಣನು ತೆರೆದು

ಒಳಗಿನ ಕಣ್ಣನು ತೆರೆದು ನೋಡಿದರೆ ತಿಳಿವುದು ಭಾರತ ಮಕ್ಕಳ ಹಿರಿಮೆ || ಪ || ಬುದ್ಧಿಯ ಚೋದಿಸಿ ಜಗವನೆಬ್ಬಿಸುವ ಮಿತ್ರನ ಶ್ರೇಷ್ಠತೆ ಸಾರಿದೆವು ಗಿಡ ಮರ ಮಣ್ಣು ಕಲ್ಲು ನೀರಿನಲ್ಲೂ ಭಗವಂತನ ನಾವ್ ತೋರಿದೆವು || 1 || ಜನಗಳು ಬೇರೆ ಮನವದು ಒಂದೇ ನುಡಿಗಳು ನೂರು ಭಾವನೆಯೊಂದೇ ನಡೆಗಳು ಬೇರೆ ನೀತಿಯದೊಂದೇ ವಿವಿಧತೆಯಲ್ಲಿನ ಏಕತೆಯ || 2 || ಇತರರು ಕಾಣದ ಊಹೆಗೂ ನಿಲುಕದ ಅತಿಶಯ ವಿಷಯವ ದರ್ಶಿಸುತ ಸುತರೆಂದೆಣಿಸುತ ಮತಿಯ ಪ್ರೇರಿಸುತ ಹಿತವನು ಕೋರುವ […]

Read More

ಯಾವ ತಾಯ ನೆನೆಯಬೇಕು

ಯಾವ ತಾಯ ನೆನೆಯಬೇಕು ನಾವು ಅನುದಿನ ನೋವ ಮರೆಸಿ ನಲಿವು ನೀಡೋ ದಿವ್ಯ ಚೇತನ || ಪ || ಜನಮ ನೀಡಿ ತನ್ನ ಎದೆಯ ಅಮೃತವಿತ್ತಳು ನಡೆಯ ನುಡಿಯ ಕಲಿಸಿ ಜಗದಿ ಬಾಳಲಿಟ್ಟಳು ಮೊದಲ ಗುರುವು ತಾನೇ ಆಗಿ ಬೆಳಕು ತೋರುತ ಮನಸುತುಂಬಿ ಹರಸುತಿರುವ ಜನನಿ ಮಾನ್ಯಳು || 1 || ಕಸವ ತಿಂದು ರಸವ ಮಾಡಿ ನಮಗೆ ಉಣಿಸುವ ಹಸುವು ಕಾಮಧೇನು ಸದಾ ನಮ್ಮ ತಾಯಿಯು ಸಕಲ ಜೀವರಾಶಿಗಳಿಗೆ ಮೂಲಭೂತಳು ಪುಣ್ಯವಂತೆ ಜೀವಗಂಗೆ ಶ್ರೇಷ್ಠ ತಾಯಿಯು […]

Read More

ಯುವಶಕ್ತಿಯು ಮೈಕೊಡುವುತ

ಯುವಶಕ್ತಿಯು ಮೈಕೊಡುವುತ ಮೇಲೆದ್ದರೆ ಇನಿಸು | ನವರಾಷ್ಟ್ರದ ನಿರ್ಮಾಣದ ಕನಸಾಗದೆ ನನಸು || || ಪ || ಹದಿಹರೆಯದ ಭಾವನೆಗಳು ಕೋಮಲತೆಯ ಕಂತೆ ಬಿಸಿಲಾದರೂ ತಂಪಾದರೂ ಅರಳದ ಮೊಗ್ಗಂತೆ | ಸರಿದಾರಿಯ ಮೇಲ್ಪಂಕ್ತಿಯ ತೋರಿಸದಿಹ ಕೊರತೆ ಬರಿದಾಗಿಸಿ ಬಾಳುದ್ದಕೂ ಸೊರಗಿಸುವುದೇ ಚಿಂತೆ || || 1 || ಧನ್ಯತೆಯಲಿ ಬಾಳಿದ ಹಿರಿಜೀವದ ಸಂಯೋಗ ಶೂನ್ಯತೆಯನು ಕಳೆಯುತ ಗುರಿ ಮುಟ್ಟುವ ಸನ್ಮಾರ್ಗ ಸಾಧನೆಯನು ಗೈಯುತ ಮನ ತುಂಬಲಿ ಉತ್ಸಾಹ ಈ ಧರೆಯನು ಸಾರ್ಥಕದೆಡೆ ಒಯ್ಯಲಿ ಈ ದೇಹ || […]

Read More

ದೇಶದುನ್ನತಿ ಅಲ್ಲಿ ನೆಲೆಸುವ

ದೇಶದುನ್ನತಿ ಅಲ್ಲಿ ನೆಲೆಸುವ ಜನರ ಶ್ರದ್ಧೆಯ ಬಯಸಿದೆ ದೇಶಸೇವೆಯೆ ಈಶ ಸೇವೆಯು ಎನುವ ಮನಗಳ ಕರೆದಿದೆ || ಪ || ಹುಲ್ಲು ಬೇರದು ನೀರು ನಿಲುಕಿದ- ರಲ್ಲೆ ಭುವಿಯಲಿ ಬೆಳೆವುದು ಹಸಿರ ಸೂಸುತ ತನ್ನಲಡಗಿಹ ಕಸುವ ಕಾಣಿರೋ ಎನುವುದು || 1 || ಬದುಕು ಸಾಗಿಸಲೊಂದು ದಾರಿಯು ದೊರೆವುದತಿ ಅನಿವಾರ್ಯವು ಕೆದುಕೆ ಬೂದಿಯ ಬುದ್ಧಿ ಅಗ್ನಿಯು ಉರಿದು ಬೆಳಗಲಿ ಧ್ಯೇಯವು || 2 || ಯುಕ್ತರಲಿ ಉಂಟೆಂದು ಬುದ್ಧಿಯು ಬುದ್ಧಿಯಿಂದಲೆ ಭಾವನೆ ಸೂಕ್ತ ರೀತಿಯ ಬಾಳ ಹಾದಿಯು […]

Read More

ಭಗವೆಯು ಹಾರಾಡುತಿದೆ

ಭಗವೆಯು ಹಾರಾಡುತಿದೆ ಆಹಹ್ಹಹಾ ಜಗವೇ ತಲೆಬಾಗುತಿದೆ ಓಹೊಹ್ಹೊಹೋ ಎಂಥ ಸಡಗರ……. ಎಂಥ ಸಂಭ್ರಮ ಅಂತಿಮ ಜಯ ಸಾಧನೆಯ ಕ್ಷಣವು ಬಂದಿದೆ || ಪ || ಕಾಶ್ಮೀರ ನಮ್ಮದು ವರ ಹಿಮಾದ್ರಿ ನಮ್ಮದು ಶ್ರೀರಾಮಕೃಷ್ಣರ ಜನ್ಮಭೂಮಿ ನಮ್ಮದು ಶತ್ರುಗಳ ಹೊಂಚನು, ದ್ರೋಹಿಗಳ ಸಂಚನು ಮಿಂಚಿನಂತೆ ಎರಗಿ ವಿಫಲಗೊಳಿಸಬನ್ನಿರಿ || 1 || ಮೆಟ್ಟಿಬನ್ನಿ ಭೇದಭಾವ ಒಂದೇ ಎಲ್ಲರೂ ದೇವರ ಈ ನಾಡಿನಲ್ಲಿ ಸರಿಸಮಾನರು ಸಂಘಟನೆಯ ಶಕ್ತಿಯು, ಇರಲು ರಾಷ್ಟ್ರಭಕ್ತಿಯು ಸಕಲ ಸಂಕಷ್ಟನೀಗಿ ಬಂಧ ಮುಕ್ತಿಯು || 2 || […]

Read More

ವಿಶ್ವಕೆ ಭಾರತವಿತ್ತ ಕೊಡುಗೆಯು

ವಿಶ್ವಕೆ ಭಾರತವಿತ್ತ ಕೊಡುಗೆಯು ಮಾನವ ಮಾಧವನಾಗುವ ಬಗೆಯು ಅನುಪಮ ಯೋಗ ಪ್ರಯೋಗ ಅಮರತ್ವದ ಸಹಯೋಗ || ಪ || ಚಿತ್ತದ ಚಂಚಲತೆಗೆ ಕಡಿವಾಣ ಸಾರ್ಥಕ ಬದುಕಿಗೆ ಇದು ಸೋಪಾನ ಹೊಮ್ಮಿಸಿ ನವಚೈತನ್ಯದ ಹೊನಲು ಅಕ್ಷಯ ಆತ್ಮಾನಂದದ ಮಜಲು || 1 || ಹೊರನೋಟಕೆ ಇದು ಬರಿ ವ್ಯಾಯಾಮ ಆಳದಿ ಅದ್ಭುತಶಕ್ತಿಯ ಧಾಮ ತನುಮನಗಳ ಸ್ವಾಸ್ಥ್ಯಕೆ ಸಹಕಾರಿ ಆಧ್ಯಾತ್ಮದ ಸಿದ್ಧಿಯ ರಹದಾರಿ || 2 || ಅಷ್ಟಾಂಗದ ಅಲುಗದ ಅಡಿಪಾಯ ಉತ್ತುಂಗದ ಸಾಧನೆಯ ಉಪಾಯ ಯೋಗದ ಪ್ರಭೆ ಚಿರಕಾಲ […]

Read More

ವಿಜಯ ದುಂದುಭಿ

ವಿಜಯ ದುಂದುಭಿ ಮೊಳಗಲಿ ಹೃದಯದಂಬುಧಿ ಮೊರೆಯಲಿ ಧ್ಯೇಯ ಸೂರ್ಯನ ದಿವ್ಯ ಕಿರಣವು ಭರತ ಭೂಮಿಯ ಬೆಳಗಲಿ ವಿಶ್ವವೇ ತಲೆಬಾಗಲಿ || ಪ || ಜಡತೆ ನೀಗುತ ಸತತ ಸಾಗುವ ರಣೋತ್ಸಾಹವ ಮೂಡಿಸಿ ನಾಡನೊಡೆಯುವ ಸಂಚು ಹೂಡಿಹ ಶತ್ರುಗಳ ಬಡಿದೋಡಿಸಿ || 1 || ಸೋಲನೊಲ್ಲದೆ ನಡಿಗೆ ನಿಲ್ಲದೆ ಗೆಲುವಿನ ಗುರಿ ಸೇರುತ ಹಿಂದು ಭೂಮಿಯ ಕ್ಷಾತ್ರ ತೇಜವ ದಿಗ್ದಿಗಂತಕೆ ಬೀರುತ || 2 || ತರುಣ ಶಕ್ತಿಯದಮ್ಯ ಸ್ಫೂರ್ತಿಗೆ ಸಾಟಿ ಎಲ್ಲಿದೆ ಧರೆಯಲಿ ? ಭಾರತಾಂಬೆಯ ಜಯಪತಾಕೆಯು […]

Read More

ಎಚ್ಚೆತ್ತ ಭಾವದೊಳು ರಾಷ್ಟ್ರಸೇವೆಯಗೈಯೆ

ಎಚ್ಚೆತ್ತ ಭಾವದೊಳು ರಾಷ್ಟ್ರಸೇವೆಯಗೈಯೆ ದನಿಯಾಗು ಓ ಮನವೆ ನಾಡು ನುಡಿಗೆ ಎಲ್ಲರೊಳಗೊಂದಾಗು, ಎಲ್ಲರೊಳು ಹಿತವಾಗು ಕರವಿಡಿದು ಮುನ್ನಡೆಸು ತಾಯಗುಡಿಗೆ || ಪ || ಹುಟ್ಟು ಸಾವಿನ ನಡುವೆ ಬಡತನವು ಸಿರಿತನವು ಎನಿತೆನಿತೋ ವಿವಿಧತೆಯು ಬಾಳ ರಥಕೆ ಕಷ್ಟವೇನೇ ಬರಲಿ ಸುಖವು ಕಾದಿದೆ ಮುಂದೆ, ಧರ್ಮಸೂತ್ರವೆ ದಿಟವು ಧ್ಯೇಯ ಪಥಕೆ || 1 || ರಾಷ್ಟ್ರದೇಕತೆಯಲ್ಲಿ ಹಲವು ಭಾಷೆಗಳಿರಲು ಸಾಹಿತ್ಯ ಸಂಪದದ ಭಾವವೊಂದೇ ವಿಧ ವಿಧ ಪ್ರಕಾರಗಳ ಕೃತಿರೂಪಿ ಕಾಯಕಕೆ ಸಾಮರಸ್ಯವ ಬೆಸೆವ ಕನಸು ಒಂದೇ || 2 […]

Read More

ಒಂದುಗೂಡಿ ಬೆರೆತುಕೊಂಡು (ತಾಯಿ ಭಾರತಿ ನಿನಗೆ ಆರತಿ)

ಒಂದುಗೂಡಿ ಬೆರೆತುಕೊಂಡು ಬಂಧು ಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ ತಾಯಿಗೆ ಜಯಘೋಷವ ತಾಯಿ ಭಾರತಿ ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾ ಸಲಿಲವು ವಿಶ್ವಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆಮಾಡಲು ಸ್ವಾಭಿಮಾನ ಮಂತ್ರವು || 2 || ತರುಣಶಕ್ತಿಯೇಳಲಿ […]

Read More