ಬಾಳ ನೌಕೆ ಏರಿ ನಮ್ಮ

ಬಾಳ ನೌಕೆ ಏರಿ ನಮ್ಮ ಬಾಳ ಪಯಣ ಸಾಗಿದೆ ಶೀಲ ವಸನ ಹಾಯಿ ಬಿಗಿದು ಧೈರ್ಯ ಪಥಿಕನಾಗಿದೆ || ಪ || ವೀರ ವ್ರತದ ಸ್ತಂಭವೇರಿ ಧ್ಯೇಯ ಧ್ವಜವು ಹಾರಿದೆ ಜ್ಞಾನ ಶೌರ್ಯ ತ್ಯಾಗ ಐಕ್ಯ ಸಂದೇಶವ ಸಾರಿದೆ || 1 || ಮರುತನೊದೆತ ಕಡಲ ಮೊರೆತ ಸೆಳೆತ, ಸುಳಿಗಳಗಣಿತ ಚಪಲ ಮನವ ಶಮನಗೊಳಿಪ ಚತುರಮತಿಯೇ ನಾವಿಕ || 2 || ಚಿತ್ತ ವೃತ್ತಿ ತಡೆವ ಭಿತ್ತಿ ಉತ್ತರಮುಖಿ ಹಿರಿಯರು ಸತ್ಪಥವನು ತೋರಿ ಗತಿಯ ಸುಸ್ಥಿತಿಯಲಿ ಇಡುವರು […]

Read More

ಚಂದದ ಮನೆ ಆನಂದದರಮನೆ

ಚಂದದ ಮನೆ ಆನಂದದರಮನೆ ಆ ನಂದಕಂದನುದಿಸಿ ಬಂದಿಹ ಮನೆ || ಪ || ಸದ್ದನಕೆ ಅಧಿಪತಿ ಗುಣಸುಂದರಿ ಸತಿ ಕುಂದುಕೊರತೆಯೊಂದು ಇರದ ಹಿಂದು ಸಂಸ್ಕೃತಿ || 1 || ಧರ್ಮದ ನಡೆ ನಿತ್ಯ ಸತ್ಯದ ನುಡಿ ನೇಮ-ನಿಷ್ಠೆ, ಪ್ರೇಮ-ಸ್ನೇಹ ನಮ್ಮ ಕೈಪಿಡಿ || 2 || ಭಜನ ಕೀರ್ತನ ನಿತ್ಯ ದೇವ ಪೂಜನ ಅತಿಧಿ ಅಭ್ಯಾಗತರೊಡಗೂಡಿ ಭೋಜನ || 3 || ಮೋಕ್ಷ ಕಾಮನೆ ಲೋಕಹಿತದ ಸಾಧನೆ ಸಾಧು ಸಂತ ಸಜ್ಜನರಿಗೆ ತೆರೆದಿಹ ಮನೆ || 4 […]

Read More

ಮಾಧವನುದಿಸಿದ ಮನೆಮನೆಯಲ್ಲಿಯು

ಮಾಧವನುದಿಸಿದ ಮನೆಮನೆಯಲ್ಲಿಯು ಬಾಲಿಕೆಯಾದಳು ರಾಧೆ ನಿರ್ಮಲ ಪ್ರೇಮದ ವಾತ್ಸಲ್ಯದ ಸುಧೆ ಆದಳು ತಾಯಿ ಯಶೋಧೆ || ಪ || ಗೋವಳನೂದಿದ ಸಂಗಮ ಸ್ವರದಲಿ ಹೊಮ್ಮಿತು ಸಮರಸವೇದ ಕುರುಕುಲದಳಿವಿಗೆ ಮುನ್ನುಡಿ ಬರೆಯಿತು ಮುರಾರಿಯ ಶಂಖದ ನಾದ || 1 || ವೀರ ನರನ ರಥ ಸಾರಥಿಯಾದನು, ಕಾರ್ಯದಿ ಮೇಲ್ಕೀಳಿಲ್ಲ ನಿರ್ಮಮ ಮನದಲಿ ಕರ್ಮದ ಬೋಧನೆ ಫಲದಾಸೆಯು ಎಂದಿಗೂ ಇಲ್ಲ || 2 || ಗೀತೆಯ ಬೋಧನೆ ಪಾರ್ಥ ನಿಮಿತ್ತದಿ ಸಾರ್ಥಕ ಬದುಕಿನ ಪಾಠ ಪಾಂಡವರೈವರೇ ಕೈಯ್ಯಾಯುಧಗಳು ಇಳುಹಿದೆ ಭೂಮಿಯ […]

Read More

ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ

ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]

Read More

ಸೇವೆಯೇ ಜೀವನದ ಪರಮಧರ್ಮ

ಸೇವೆಯೇ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದೂ ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 2 || ನೀಗುವೆವು ಲೋಕಗಳ ಶ್ಲೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]

Read More

ಅಳಿಸಿ ದೋಷವನುಳಿಸಿ ದೇಶವ

ಅಳಿಸಿ ದೋಷವನುಳಿಸಿ ದೇಶವ ಗಳಿಸಿ ಪೌರುಷ ತೇಜವ ಬೆಳೆಸುವೆವು ಹಿಂದುತ್ವದೋಜವ ಕಳಚಿಕೊಳ್ಳುತ ಜಾಡ್ಯವ… ಕಳಚಿಕೊಳ್ಳುತ ಜಾಡ್ಯವ || ಪ || ಒತ್ತಿಬರುತಿಹ ದಾಸ್ಯತೆಯ ಕಾರ್ ಗತ್ತಲನು ಶಿವಭೂಪರು ಸುತ್ತಮುತ್ತಿಹ ಮೊಗಲ ಛಾಯೆಯ ಕತ್ತರಿಸುತಲಿ ರಾಣರು ಹೆತ್ತಸುತರಾತ್ಮಾರ್ಪಣೆಗೆ ತಾ ನಿತ್ತ ಗುರುಗೋವಿಂದರು ಎತ್ತರಿಸಿ ಗರ್ಜಿಸುತಲಿರುವರು ಕಿತ್ತುಬಿಸುಡಿರಿ ಜಾಡ್ಯವ ಕಿತ್ತು ಬಿಸುಡಿರಿ ಜಾಡ್ಯವ ….|| 1 || ವ್ಯಾಸಭಾಸರ ಕಾಳಿದಾಸರ ನಾಸೆಯಿಂದಲಿಓದುತ.. ವಾಸುದೇವರ ತಿಲಕ ಲಾಲರ ಬೋಸದಾಸರನರಿಯುತ ಏಸು ಜನಮವನೆತ್ತಿ ಬಂದರು ಮಾಸದಿರುವೆಮಚರಿತೆಯ ಮೋಸದಿಂದಲಿ ತಿರುಚಿ ರಚಿಸಿಹ ದೋಷಿಗಳ ನೀ […]

Read More

ಕರುಳಿನ ಕರೆ ಕೇಳಿಸದೆ

ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]

Read More

ವರವ ಬೇಡುವೆ ಹರಸು ನಮ್ಮ

ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||

Read More

ಮನೆಯ ಹೊರಗಡೆ ಅಲ್ಲ

ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]

Read More

ಮಣಿದುದೀ ಜಗ ಹಿಂದು ತೇಜಕೆ

ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ      || ಪ || ಪಾರಿವಾಳದ ಪ್ರಾಣ ಉಳಿಸಲು  ತೊಡೆಯ ಮಾಂಸವ  ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ             || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]

Read More