ಧ್ಯೇಯ ಧರೆಗೆ ಇಳಿದಿದೆ

ಧ್ಯೇಯ ಧರೆಗೆ ಇಳಿದಿದೆ ವೀರ ತರುಣರ ಕರುಳಿಗೆ ಧ್ವಂಸ ಮಾಡಲು ಇರುಳನು ಧರೆಗೆ ಹರಡಲು ಬೆಳಕನು || ಪ || ಶಪಥವೆಂದು ಬಿಡುವೆವು ಧರೆಯ ಶಾಂತಿಗೆ ದುಡಿವೆವು ವೀರಹನುಮನೆ ಸ್ಫೂರ್ತಿಯು ಭಕ್ತಿ ತುಂಬಿದ ಧಾತ್ರಿಯು || 1 || ಧರ್ಮ ಸಾಧನೆ ಪಥವಿದು ಸತ್ಯ ವಾಕ್ಯದ ನಾಡಿದು ಜಯದ ದುಂಧುಬಿ ಮೊಳಗಿದೆ ರಾಮ ಮಂದಿರ ಕಟ್ಟಲು || 2 || ವೀರ ತರುಣರೆ ಬನ್ನಿರಿ ಧರ್ಮ ಕಾರ್ಯಕೆ ದುಡಿಯಿರಿ ವೀರ ಕಂಡ ಕನಸನು ಮಾಡ ಬನ್ನಿ ನನಸನು […]

Read More

ಗಾಢ ನೀರವದಲೊಂದು

ಗಾಢ ನೀರವದಲೊಂದು ಸಣ್ಣ ಕದಲಿಕೆ ಸದ್ದು ತನ್ನ ಸುತ್ತಲು ತಾನೇ ತಿರುಗಿ ಅಲೆ ಅಲೆಯಾಗಿ ವಿಶ್ವ ಕಂಪಿಸಿದ ಹೊತ್ತು ವಿಶ್ವವೇ ಕಂಪಿಸಿದ ಹೊತ್ತು ಸಂಘ ಸಂಭವಿಸಿದ ಹೊತ್ತು || ಪ || ಮೈಮರೆವೊ? ಮರಣವೊ? ತನ್ನುಸಿರ ಬಲವಿಹುದೆ? ಆತ್ಮಹೀನತೆ ವಿಷವ ಕಿತ್ತೊಗೆದು ಬದುಕೀತೆ? ಅನುಮಾನ ತುಂಬಿದ ಹೊತ್ತು ಸಂಘ ಸಂಭವಿಸಿದ ಹೊತ್ತು || 1 || ಉಡುಗಿ ಹೋಗಿದ್ದ ಸ್ವರ ಮರಳಿ ಮೊಳಗಿದ ಸದ್ದು ಮರಗಟ್ಟಿ ಮಲಗಿದ ದೇಶ ಬಲಕೆ ಹೊರಳಿದ ಸದ್ದು ಆತ್ಮದರಿವನು ಪಡೆದ ಹೊತ್ತು […]

Read More

ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು

ಜನುಮ ನೀಡಿದ ಜನ್ಮ ಭೂಮಿಯು ಬಸವಳಿದು ದುರುಳರ ಕಿರುಕುಳ ನಲುಗಿ ನಿಂತಿಹುದು ಸರಿಸಿ ಕತ್ತಲು ದೂರ ಕರೆಯೊ ಕಲಿಪುರುಷ ಕರ್ಮಯೋಗವು ನಿನ್ನ ಬಳಿಗೆ ಬಂದಿಹುದು || ಪ || ಸಾಮ ಬೇಧ ಶತ್ತು ಮಣಿಯದಿರಿ ಭಯವೇನು ? ಪರಶುರಾಮನ ಶಾಪ ಶರವಿಲ್ಲವೇನು? ಧೀಮಂತಿಕೆ ರವಿಯು ಮುಳುಗಿ ಹೋಗುವಾಗ ಧ್ಯೇಯದನುಶಾಸನದಿಂದ ಮರಳಿ ಬರದಿರನೇನು ? || 1 || ಪರಕೀಯರಪಹಾಸ್ಯದಾ ಚಿಂತೆ ನಿನಗೇಕೆ ? ಏಳು ಸಂಸ್ಕೃತಿ ಸೊಬಗ ತೋರುತಲಿ ಜಗಕೆ ಕೂಡಿಬಾಳುವ ಕವಚ ಒಡೆದು ಕುಸಿದಿರುವಾಗ ನಡೆಮುಂದೆ […]

Read More

ಎನ್ನ ದೇಹಾತ್ಮ ರಾಷ್ಟ್ರಕೆ ಅರ್ಪಿತವು

ಎನ್ನ ದೇಹಾತ್ಮ ರಾಷ್ಟ್ರಕೆ ಅರ್ಪಿತವು ರಾಷ್ಟ್ರಕ್ಕೆ ನಾನಿಂದು ಋಣಿಯಾಗಿ ಇಹೆನು ಪಾರಮಾರ್ಥಿಕ ಸತ್ಯ ರಾಷ್ಟ್ರವೇ ಶಾಶ್ವತವು ಧರ್ಮದ ಕಾಯಕ ಮಾಡ ಹೊರಟಿಹೆ ನಾನು || ಪ || ರಕ್ತದ ಕಣಕಣ ಕುದಿದು ಕೇಳುತಲಿಹವು ಹಿಂದು ಹಿಂದು ಎನಲು ಹಿಂಜರಿಕೆಯೇಕೆಂದು ಸೆಟೆದಿಹವು ನರನಾಡಿ ಮಾಂಸ ಮಜ್ಜೆಯು ಇಂದು ರಾಷ್ಟ್ರದ ಸೇವೆಗೆ ಸಿದ್ದ ನಾವ್ ಎಂದೆಂದೂ || 1 || ಛೇದಿಸೇ ದೇಹವ ರಾಷ್ಟ್ರವೇ ಕಾದು ರಾಷ್ಟ್ರವೇ ಹೋದರೆ ನಾಶವೇ ಶಾಶ್ವತವು ದೇಹದೇಹವು ಸೇರಿ ರಾಷ್ಟ್ರವೇ ಆಗುವುದು ರಾಷ್ಟ್ರ ಸೇವೆಗೆ […]

Read More

ದೇಶ ಪ್ರೇಮದ ವೀರಘೋಷಣೆ ಮೊಳಗಲಿ

ದೇಶ ಪ್ರೇಮದ ವೀರಘೋಷಣೆ ಮೊಳಗಲಿ ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ ಹೊಮ್ಮಲಿ ಹೊರಹೊಮ್ಮತಾ ಚಿಮ್ಮಲು ಬಾನೆತ್ತರ ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ || ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ ರುಧಿರವೆಲ್ಲ ಯಜ್ಞದಲ್ಲಿ ಉರಿದು ಉರಿದು ಹೋಗಲು ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 || ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ ಸರ್ವರರ್ಪಣೆಯಾಗಲು ಸಂಘೋದ್ಘೋಷ ಹೃದಯದಿ […]

Read More

ಅವತರಿಸು ಶ್ರೀರಾಮ ಈ ಭರತ ಭುವಿಗೆ

ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]

Read More

ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ

ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]

Read More

ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ

ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ ಜ್ಞಾನ ಭಿಕ್ಷೆಯ ಜಗಕೆ ನೀಡುತ ನಗುತಲಿರಲಿ ಸಂತತ || ಪ || ಎಡರು ತೊಡರು ಗಳಿಹುದು ಬಹಳ ಸುಲಭವಲ್ಲವು ಆತ್ಮನಿರ್ಭರ ದಿಟ್ಟ ಆತ್ಮ ಬಲದಿ ನಡೆಯುತ ಸಾರುವ ನವ ಕ್ರಾಂತಿ ಸಮರ ಬನ್ನಿರೆಲ್ಲರು ಒಂದಾಗುವ ಗೆಲ್ಲುವ ಈ ಶಾಂತ ಸಮರವ ಸ್ವಾರ್ಥ ಮರೆತು ರಾಷ್ಟ್ರಕಾಗಿಯೆ ದಿಟದಿ ಜೀವನ ಸವೆಸುವ || 1 || ನಮ್ಮ ಏಳ್ಗೆಗೆ ನಾವೇ ಶಿಲ್ಪಿಯು ಎಂದು ತಿಳಿದು ನಡೆಯುವ ಸತ್ವ ಶಕ್ತಿ ಯುಕ್ತಿಯಿಂದಲಿ ರಾಷ್ಟ್ರದ ಸೇವೆಯ ಮಾಡುವ […]

Read More

ಓ…ಓ… ಚೆಲುವಿನ ಮುದ್ದಿನ ಮಕ್ಕಳೇ

ಓ…ಓ… ಚೆಲುವಿನ ಮುದ್ದಿನ ಮಕ್ಕಳೇ ಮನೆ ಮನೆಯ ಅಂಗಳದಿ ಅರಳಿರುವ ಹೂವುಗಳೇ ನಾಳೆದಿನ ನಾಡಿದನು ನಡೆಸುವರು ನೀವುಗಳೇ ಓ… ಚೆಲುವಿನ ಆ…. ಮುದ್ದಿನ || ಚೆಲುವಿನ || ತಂದೆ ತಾಯಿ ಹೇಳಿದ ರೀತಿ ನಡೆಯಲು ಬೇಕು ಶಾಲೆಯ ಗುರುಗಳು ಕಲಿಸಿದ ಪಾಠ ಕಲಿಯಲು ಬೇಕು ದೊಡ್ಡವರಲ್ಲಿ ಭಕ್ತಿ ಗೌರವ ತೋರಲು ಬೇಕು ನಡೆನುಡಿಯಲ್ಲಿ ಸತ್ಯವ ಎಂದು ಪಾಲಿಸಬೇಕು ಸತ್ಯವ ಎಂದು ಪಾಲಿಸಬೇಕು || 1 || ಸ್ನೇಹಿತರಲ್ಲಿ ಪ್ರೀತಿಯ ತೋರಿ ಸೋದರ ಭಾವದಿ ನೋಡಿ ಸೋಮಾರಿಯಾಗದೆ ಕೊಟ್ಟಿಹ […]

Read More

ಗ್ರಾಮದ ಕಡೆಗೆ ಸಾಗೋಣ

ಗ್ರಾಮದ ಕಡೆಗೆ ಸಾಗೋಣ ಗ್ರಾಮ ವಿಕಾಸ ಗೈಯೋಣ ರಾಮ ರಾಜ್ಯವ ರಚಿಸೋಣ ಸಮರಸ ಭಾರತ ಕಟ್ಟೋಣ || ಪ || ಉಣ್ಣುವುದಕ್ಕೆ ಅನ್ನವನ್ನಿತ್ತ ಮಣ್ಣ ಸೇವೆ ದಿನ ದಿನ ಗೈಯುತ್ತ ನೊರೆ ನೊರೆ ಹಾಲಿನ ಅಮೃತ ವಿತ್ತ ನಲ್ಮೆಯ ಆಕಳ ಮೈದಡವುತ್ತಾ ಅಂಬಾ ಎನ್ನುವ ಆ ಧ್ವನಿಗೆ……… ದೇವರು ಬರುವನು ಈ ಭೂಮಿಗೆ || 1 || ಮನ ಮನೆ ಮುಂದಿನ ಅಂಗಳದಿಂದ ಮೂಡುತಿದೆ ರಂಗೋಲಿ ಚಂದ ಊರೆಜಮಾನರ ಹಿರಿನುಡಿಯಿಂದ ಕೂಡುತಿದೆ ಜನಮನ ಸಂಬಂಧ ಕಾಯಕದಲ್ಲಿ ಆನಂದ………. […]

Read More