ಉಜ್ವಲ ಸಂಸ್ಕೃತಿ ಮೈಮರೆತಿಹುದು

ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್
ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್
ನನ್ನೀ ದೇಶ ಮಹಾನ್                                      || ಪ ||

ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು
ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು
ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ                         || 1 ||

ತರುಣ ಶಕ್ತಿಯು ಏಳುವುದೆಂದು? ರಾಷ್ಟ್ರದುನ್ನತಿಗೆ ಶ್ರಮಿಸುವುದೆಂದು?
ವೈಭವ ದೀಪ್ತಿ ಬೆಳಗುವುದೆಂದು? ತ್ಯಾಗ ಸಾಹಸ ಮೊಳಗುವುದೆಂದು?
ಎಂದಿಗೆ ಪುನರುತ್ಥಾನ? ನಾಡಿನ ನವ ಕಲ್ಯಾಣ?                || 2 ||

ಉನ್ನತ ಜನತೆ ಮೈ ಕೊಡವೇಳಲಿ, ಭಾರತ ಮಾತೆಯ ಸೇವೆಗೆ ನಿಲ್ಲಲಿ
ಚೇತನ ತುಂಬಿ ಮೈ ನವಿರೇಳಲಿ, ಮಹಾತ್ಮರು ತೋರಿದ ದಾರಿಯ ತುಳಿಯಲಿ
ಅಂದಿಗೆ ಹೊಸ ಬೆಳಕು, ನೂತನ ಚಿರ ಬದುಕು                || 3 ||

Leave a Reply

Your email address will not be published. Required fields are marked *