ಗರಿಗೆದರಿದೆ ಹಿಂದುತ್ವವು ಇಂದು ಭೋರ್ಗರೆದಿದೆ ಯುವಶಕ್ತಿಯ ಸಿಂಧು ಯುಗದ ಸವಾಲಿಗೆ ಉತ್ತರ ನೀಡಿ ಜಗದ ವಿಕಾಸಕೆ ನಾಂದಿಯ ಹಾಡಿ ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ || ಪ || ಶೃತಿ-ವೇದಂಗಳ ಅಂಗಳದಲ್ಲಿ, ಗಂಗೆಯ ಮಂಜುಳ ಲಹರಿಗಳಲ್ಲಿ ತುಂಗ ಹಿಮಾಚಲ ಶೃಂಗಗಳಲ್ಲಿ, ಮೂಡಿಹುದು ನವವಿಶ್ವಾಸ ಜಾಗೃತಿಯಾ ಜಯ ಜಯ ಘೋಷ || 1 || ಶತಶತಮಾನದ ಜಡತೆಯ ಸರಿಸಿ, ಗತ ಚರಿತೆಯ ಅಪಮಾನವನೊರೆಸಿ ದೃಢಸಂಕಲ್ಪದ ಹೆಜ್ಜೆಯನಿರಿಸಿ, ಭೇದವನಳಿಸಿದೆ ಬಂಧುತ್ವ ಮೇಲೆದ್ದಿಹುದು ಹಿಂದುತ್ವ || 2 || ಭಾರತ ತೋರಿದ […]