ಹಿಂದೂ ವೀರನೆ ನಿನ್ನೊಳು ಅಡಗಿಹ

ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]

Read More