ಉಜ್ವಲ ಮಹಿಮೆಯ ಕಣಕಣ ಪಡೆದಿಹ ಮಣ್ಣಿನ ಮಕ್ಕಳೆ ಮೇಲೇಳಿ ಮಾನವ್ಯತೆ ದೇವತ್ವದ ಧರಿಸಿದ ಚರಿತೆಯ ಮೂಡಲಿ ಮೈತಾಳಿ || ಪ || ತಿಮಿರವ ತುಳಿಯುತ ಪರಾನುಕರಣೆಯ ಬೆನ್ನಿಗೆ ಮೂಡಿಸಿ ಪದಚಿಹ್ನೆ ಆರಾಧಿಪ ಬನ್ನಿರಿ ಜ್ಞಾನ ಶೀಲ ಭಾರತದೇಕಾತ್ಮತೆಯನ್ನೆ ತಾಯ್ನೆಲದಭಿಮಾನದ ಶ್ರುತಿ ಹೊಮ್ಮಿಸಿ ಹೃದಯದ ಭೇರಿಯ ನುಡಿಸೇಳಿ || 1 || ಮೈಮನದೊಳಗಾಂತರ್ಯದ ಸ್ಫೂರ್ತಿಯು ಹರಿದವತರಿಸಲಿ ನವಯುಗವು ಜಡತೆಗೆ ಚೇತನ ತುಂಬುತ ಹೊಮ್ಮಲಿ ಭಾರತದತಿ ದಿವ್ಯತೆಯರಿವು ಆತ್ಮದ ಅಮರತ್ವವ ಅನುಭವಿಸುತ ಸ್ವದೇಶಕೊಳಿತನು ತರಲೇಳಿ || 2 || ಹೃದಯದೊಳುದಿಸುವ […]
ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್ ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್ ನನ್ನೀ ದೇಶ ಮಹಾನ್ || ಪ || ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ […]
ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು || ಪ || ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ ಧೈರ್ಯದಿ ಗೋಡೆಯ ಮಧ್ಯದಲಿ || 1 || ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು ಮಾಡಿದ ಜನತೆಯ […]