ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ || ಪ || ಪಾರಿವಾಳದ ಪ್ರಾಣ ಉಳಿಸಲು ತೊಡೆಯ ಮಾಂಸವ ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]