ತರುಣರೆಲ್ಲ ಒಂದು ಗೂಡಿ ತಂಡ ಕಟ್ಟೋಣ ಗ್ರಾಮದಲ್ಲಿ ರಾಮರಾಜ್ಯ ಕನಸು ಬಿತ್ತೋಣ ತಂಡ ಕಟ್ಟೋಣ ನಾವು ಕನಸು ಬಿತ್ತೋಣ ಸ್ವಾಭಿಮಾನ ಪೂರ್ಣ ಭವ್ಯ ರಾಷ್ಟ್ರ ಕಟ್ಟೋಣ || ಪ || ಜಲಮೂಲವ ನದಿಕೆರೆಗಳ ಕಲುಷಗೊಳಿಸದೆ ನೆಲದೊಡತಿಗೆ ಹಸಿರು ಬಣ್ಣ ದುಡುಗೆ ನೀಡೋಣ ರಸಗೊಬ್ಬರ ಹೆಸರಿನಲ್ಲಿ ವಿಷವನುಣಿಸದೆ ಸಾವಯವದ ಸ್ವಾವಲಂಬಿ ಕೃಷಿಯ ಮಾಡೋಣ || 1 || ಎಳೆಮನದಲಿ ನೆಲದೊಲವಿನ ಬೀಜಬಿತ್ತೋಣ ಯುವಜನರಲಿ ಛಲತುಂಬುತ ಗೆಲುವ ಗಳಿಸೋಣ ಜಾತಿ ದ್ವೇಷ ಭೇದಭಾವ ದೂರ ಗೊಳಿಸುತ ಬಂಧುತ್ವದ ಸವಿ ಅಮೃತ […]