ಏಳಿ ತರುಣ ಸೋದರರೇ ತೊಡೆದು ಜಡತೆ ಗೀಳನು ಎಳೆವ ಬನ್ನಿ ಭರತ ಮಾತೆ ಕುಳಿತ ರಾಷ್ಟ್ರ ತೇರನು || ಪ || ಆಧುನಿಕತೆ ಆಡಂಬರ ಉಸಿರ ಕಸಿವ ಆವರ್ತನ ಸಿಲುಕಿ ಸೋತು ನರಳದಿರಲಿ, ಬಡಿದೆಬ್ಬಿಸಿ ಚೇತನ ಬಳಲಿಬೆಂದ ಬಂಧುಗಳಿಗೆ ನೀಡಿ ಹೃದಯ ಸ್ಪಂದನ ಏಕತೆಯಲಿ ಬಾಳಲದುವೆ ಹಿಂದು ಸುಧೆಯ ಮಂಥನ || 1 || ನೋಡಿ ನಿಮ್ಮ ನಗುವರಿರಲಿ ದೂರ ಸರಿಸಿ ಅಂಜಿಕೆ ಸಂಸಾರದ ಗ್ರಂಥಕವರ ಬಿಡದೆ ಮಾಡಿ ಸಂಚಿಕೆ ಕಾರ್ಯವಿದು ವ್ಯರ್ಥವಲ್ಲ ವಿಜಯಕದುವೆ ಕಂಟಿಕೆ ಮನುಜ […]
ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ || ಪ || ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ || 1 || ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ […]
ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ ಸ್ವೀಕರಿಸ ಬನ್ನಿರೋ ತರುಣ ಜನರೆ ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ || ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು ಪರಕೀಯ ತತ್ವಗಳ ಅಂಧಾನುಕರಣೆಯಲಿ ಮೈಮರೆತು ಮಲಗಿದರೆ ಏನು ಫಲವು? || 1 || ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು ಏಕಪುರುಷನ ತೆರದಿ ಎದ್ದು ನಿಂದು ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ ಹೊನ್ನಿನಂತಹ ನಾಡ ಕಟ್ಟಿರಿಂದು || 2 || ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ […]