ರಾಷ್ಟ್ರೋದ್ಧಾರಕೆ ಶ್ರಮಿಸಿದ ಯೋಗಿ ಸ್ವದೇಶ ಸ್ವಧರ್ಮಗಳನುರಾಗಿ || ಪ || ಸೀತಾಬರ್ಡಿಯ ಕಿಲ್ಲೆಯ ಮೇಲೆ ದಾಸ್ಯದ ಧ್ವಜ ಹಾರಾಡುತಲಿರಲು ಕೊಠಡಿಯ ನೆಲದಿಂ ಕೋಟೆಯ ಒಳಕೆ ಅಗೆದು ಸುರಂಗವ ಅದ ಕಿತ್ತೆಸೆಯುವ ಸಾಹಸ ಸ್ಪುರಿಸಿತು ಹಸುಳೆಯ ಮನದಿ || 1 || ಆಂಗ್ಲ ಗುಲಾಮಿಯ ವೀಕ್ಷಕನೋರ್ವ ಶಾಲೆಯ ದ್ವಾರದಿ ಕಾಲನ್ನಿಡಲು ಸಿಡಿಯಿತದೋs ‘ವಂದೇ ಮಾತರಂ’ ಸಾವಿರ ಕಂಠದ ಸಿಡಿಲಿನ ಘೋಷ […]