ಕಟ್ಟಬನ್ನಿ ತರುಣರೇ ನವಭಾರತ ದೇಶವ

ಕಟ್ಟಬನ್ನಿ ತರುಣರೇ ನವಭಾರತ ದೇಶವ ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ || ಪ || ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು ಬಿತ್ತಿ ಬೆಳೆದು ತನ್ನತನದ ಹೊನ್ನಿನಂಥ ಬೆಳಯನು ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ || 1 || ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯವು ನಮಗಿರೆ ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ | ಬೆವರು ಸುರಿಸಿ ಸಾಧಿಸೋಣ […]

Read More

ದಾಹ ದಾಹ ದಿಗ್ವಿಜಯಕೆ

ದಾಹ ದಾಹ ದಿಗ್ವಿಜಯಕೆ, ಸ್ವಾಭಿಮಾನ ಭರಿತ ಹೃದಯಕೆ ಸ್ವತಂತ್ರ ಜನತೆಯೆದೆಯ ಬೆಂಕಿ ಆರದೆಂದು ಆರದು ಮಾತೃಭೂಮಿಗಳಿವು ದಾಸ್ಯ ಬಾರದೆಂದು ಬಾರದು        || ಪ || ಹಸಿರು ಘಟ್ಟ ಹಿಮದ ಬೆಟ್ಟ ಜಲಧಿ ಗಗನ ನಮ್ಮದು ದುಷ್ಟತನವ ಮೆಟ್ಟಿ ನಿಲುವ ನ್ಯಾಯ ನಿಷ್ಠೆ ನಮ್ಮದು ಪ್ರಿಯ ಸ್ವದೇಶ ರಕ್ಷಣಾರ್ಥ ಹೊರಟೆವಿದೋ ಹೊರಟೆವು ಕಡೆಯ ತನಕ ಗೆಲ್ಲುವನಕ ನಿಲ್ಲೆವೆಲ್ಲು ನಿಲ್ಲೆವು                  || 1 || […]

Read More