ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]
ಬಂದಾ ಸ್ವಾಮಿ ಬಂದಾ ಶ್ರೀರಾಮ ಬಂದಾ ಅಜ್ಞಾತವಾಸದಿಂದ ಗುಮ್ಮಟದ ಅಡಿಯಿಂದ ಧರ್ಮ ನ್ಯಾಯ ನೀತಿ ಉಳಿಸೆ ರಾಮನೆದ್ದು ಬಂದಾ ಅಯೇೂಧ್ಯ ನಗರಕೆ ಮತ್ತೆ ಬಂದಾ ನಮ್ಮ ಸ್ವಾಮಿ ಬಂದಾ ಶ್ರೀರಾಮಚಂದ್ರ ಪ್ರಭು ಬಂದಾ || ಪ || ಕಷ್ಟಕಾರ್ಪಣ್ಯವನು ಕೊನೆಗಾಣಿಸೆ ಬಂದಾ ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಲು ಶ್ರೀರಾಮ ಬಂದಾ ಕುಣಿಕುಣಿಯುತ ಬಂದಾ ನಲಿನಲಿಯುತ ಬಂದಾ ದೇವರದೇವ ಶ್ರೀರಾಮ ಬಂದಾ || 1 || ಢಮ ಢಮರು ನಾದದಲಿ ಘಂಟೆಯ ನಿನಾದಲಿ ಝೇಂಕರಿಸಿಹ ವೀಣೆಯಲಿ ಮೇೂಳಗುತಿಹ ಶಂಖದಲಿ […]
ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]
ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ, ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ, ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ || ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ, ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ, ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ […]