ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]
ಶ್ರೀಗುರು ಭಗವೆಯ ದರುಶನದೀಕ್ಷಣ ಜಾಗೃತಗೊಂಡಿತು ಕರ್ತೃತ್ವ ಭಾವಪುಟಗಳಲಿ ಭೂಪಟವರಳಿತು ಮಣ್ಣಿನೊಳುದಿಸಿತು ಮಾತೃತ್ವ || ಪ || ಭಗವೆಯ ಮೌನದ ಭಾಷೆಗೆ ಭಾಷ್ಯವು ಋಷಿಗಳ ಬದುಕಿನ ರೀತಿ ಅಸಿಧಾರಾ ವ್ರತ ಜೀವನ ನಡೆಸಿದ ಮಹೋನ್ನತ ತ್ಯಾಗದ ನೀತಿ || 1 || ದಿಟದಿತಿಹಾಸದ ಪುಟಪುಟ ತುಂಬಿದೆ ಛಲ-ಬಲ- ವಿಕ್ರಮ ಚರಿತೆ ಶತಶತಮಾನದ ಕಥನವ ಬರೆದಿದೆ ಹಿಂದುತ್ವದ ಜೀವನ ಸರಿತೆ […]
ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ, ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ, ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ || ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ, ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ, ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ […]